ನೀವೇನಾದ್ರೂ ಸರಿರಾತ್ರಿಯವರೆಗೂ ಕೆಲಸ ಮಾಡೋ ರೂಢಿಯಿಟ್ಟುಕೊಂಡಿದ್ರೆ ನಿಮ್ಮನ್ನ ಥರ ಥರದ ಗೊಂದಲಗಳು ಮುತ್ತಿಕೊಂಡಿರುತ್ವೆ. ಯಾಕಂದ್ರೆ ಬೆಳಗ್ಗೆ ಬೇಗನೆ ಏಳಲಾರದ ಸ್ಥಿತಿ ಒಟಾರೆ ಬದುಕಿನ ಟೈಂ ಟೇಬಲ್ಲನ್ನೇ ಅದಲು ಬದಲು ಮಾಡಿರತ್ತೆ. ಯಾಕಂದ್ರೆ ನಮ್ಮಲ್ಲಿ ಬೆಳಗ್ಗೆ ಬೇಗನೆದ್ದು ದಿನಚರಿ ಆರಂಭಿಸೋದು ಜೀವನ ಕ್ರಮವಾಗಿ ಬಿಟ್ಟಿದೆ. ದಿನಾ ಬೆಳಗ್ಗೆ ಸೂರ್ಯೋದಯಕ್ಕಿಂತಲೂ ಮುಂಚೆ ಏಳೋದು ಸಾತ್ವಿಕ ವಿದ್ಯಮಾನ ಅಂತಲೂ ಬಿಂಬಿತವಾಗಿದೆ. ಇನ್ನುಳಿದಂತೆ ಅಧ್ಯಾತ್ಮಿಕವಾಗಿಯೂ ಬೆಳಗ್ಗೆ ಬೇಗನೆ ಏಳೋದರ ಮಹತ್ವದ ಬಗ್ಗೆ ಮಣಗಟ್ಟಲೆ ವಿವರಣೆಗಳಿದ್ದಾವೆ. ಆದ್ರೆ ರಾತ್ರಿ ಕೆಲಸದ ಗುಂಗು ಹತ್ತಿಸಿಕೊಂಡವರಿಗೆ ಬದುಕಲ್ಲೇನೋ ಅಮೂಲ್ಯ ಕ್ಷಣಗಳು ಮಿಸ್ ಆದಂತೆ ಭಾಸವಾಗುತ್ತಿರುತ್ತೆ. ಬೆಳಗಿನ ಆ ಸ್ಫಟಿಕದಂಥಾ ವಾತಾವರಣಕ್ಕೆ ಕಣ್ತೆರೆಯುವ ಮುದ, ಎಳೇಯ ಸೂರ್ಯ ರಶ್ಮಿಗಳ ಹಿಮ್ಮೇಳದ ಆಹ್ಲಾದಗಳನ್ನೆಲ್ಲ ಮಿಸ್ ಮಾಡ್ಕೋತಿದ್ದೀವೇನೋ ಅನ್ನೋ ಭಾವ ಬಿಡದೇ ಕಾಡುತ್ತಿರುತ್ತೆ. ಇದು ಮಾನಸಿಕ ತೊಳಲಾಟವಾದ್ರೆ, ಮನೆಮಂದಿಯಿಂದ ದಿನಾ ಲೇಟಾಗಿ ಏಳ್ತಾರೆನ್ನೋ ಕಂಪ್ಲೇಟಂತೂ ಇದ್ದೇ ಇರುತ್ತೆ. ಇಂಥಾ ಸಂದರ್ಭದಲ್ಲಿ ಬದುಕು ಗೂಬೆಗಿಂತಲೂ ಕಡೆಯಾಗ್ತೇನೋ ಅಂತ ಕೊರಗ್ತಿರೋರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಬೆಳಗ್ಗೆ ಬೇಗನೆದ್ದು ಮೈ…
Author: Santhosh Bagilagadde
ಆಧುನಿಕ ಜಗತ್ತು ಪ್ರತಿಯೊಬ್ಬರಿಗೂ ಒತ್ತಡದ (tress) ಬಳುವಳಿ ಕೊಟ್ಟಿದೆ. ಕೆಲಸ, ಕಾರ್ಯ , ಕಷ್ಟ ಕಾರ್ಪಣ್ಯಗಳು ಸೇರಿದಂತೆ ಇಲ್ಲಿ ಎಲ್ಲವೂ ಉಸಿರುಗಟ್ಟಿಸೋ ಸರಕುಗಳೇ. ರೇಸಿಗಿಳಿದಂತೆ ಪ್ರತೀ ದಿನ ಕಳೆಯೋ ಮಂದಿಯ ಪಾಲಿಗೆ ಕೊಂಚ ಏಕಾಂತ, ತಟುಕು ಸಮಾಧಾನವೂ ಮರೀಚಿಕೆಯಾಗಿ ಬಿಟ್ಟಿದೆ. ಇಂಥಾ ಜಂಜಾಟಗಳಲ್ಲಿ ಸಿಕ್ಕಿಕೊಂಡಿರೋ ಪ್ರತಿಯೊಬ್ಬರೂ ಸಣ್ಣದೊಂದು ಏಕಾಂತದಲ್ಲಿ ಮಿಂದೆದ್ದು ನಿರಾಳವಾಗಲು ಸದಾ ಹಪಾಹಪಿಸ್ತಾರೆ. ಆದ್ರೆ ಅದೇನೇ ಪ್ರಯತ್ನ ಪಟ್ಟರೂ ಅದು ಬಹುತೇಕರಿಗೆ ಸಿಗೋದೇ ಇಲ್ಲ. ಆ ನಿರಾಸೆಯ ಮುಂದೆ ಹೆಚ್ಚಿನವರಿಗೆ ಕಂತೆ ಕಂತೆ ಕಾಸೂ ಕಸದಂತೆ ಕಾಣಿಸಲಾರಂಭಿಸುತ್ತೆ. ಹಾಗಾದ್ರೆ ಈ ಏಕಾಂತ, ಬ್ಯುಸಿ ಲೈಫಿನ ಬಾನಿನಲ್ಲಿ ಮೂಡೋ ಕಾಮನಬಿಲ್ಲಿನಂಥಾ ಒಚಿಟಿ ವಾತಾವರಣ ಅಷ್ಟೊಂದು ಪಾಸಿಟಿವ್ ಎನರ್ಜಿ ತುಂಬುತ್ತಾ ಅನ್ನೋ ಪ್ರಶ್ನೆ ಮೂಡುತ್ತೆ. ಇದಕ್ಕೆ ನಮ್ಮ ನಡುವೆ ಬಿಲ್ಡಪ್ಪುಗಳ ಒಂದಷ್ಟು ಉತ್ತರಗಳು ಸಿದ್ಧವಿರಬಹುದು. ಆದರೆ ವಿಜ್ನಾನ, ಸೈಕಾಲಜಿ ಮತ್ತು ಅದರ ತಳಹದಿಯಲ್ಲಿ ನಡೆದಿರೋ ಒಂದಷ್ಟು ಸಂಶೋಧನೆಗಳು ಮಾತ್ರ ಮತ್ತೊಂದು ಭಯಾನಕ ಸಂಗತಿಯನ್ನ ಜಾಹೀರು ಮಾಡುತ್ತವೆ. ಅಂಥಾ ಸಂಶೋಧನೆಗಳು ಏಕಾಂತದ ಡೇಂಜರಸ್ ಮುಖವನ್ನು…
ನಮ್ಮಲ್ಲಿ ಹೊಟ್ಟೆಗೆ ಹೆಚ್ಚಾಗಿ ನವರಂಧ್ರಗಳಲ್ಲಿಯೂ ಚಿಮ್ಮುವ ರೇಂಜಿಗೆ ಎಣ್ಣೆ (drinkers) ಹೊಡೆಯುವವರಿದ್ದಾರೆ. ಹಾಗೆ ಭರ್ಜರಿ ಕಿಕ್ಕೇರಿಸಿಕೊಂಡು ಫುಟ್ಪಾತು ಸರ್ವೆ ಮಾಡುವವರು, ಅಲ್ಲೇ ಬೋರಲಾಗಿ ಬಿದ್ದುಕೊಳ್ಳುವವರು, ಗಲ್ಲಿ ಗಟಾರ ಕೊಚ್ಚೆ ಕೊಳಕೆನ್ನದೆ ಉಳ್ಳಾಡುವವರೆಲ್ಲ ನಮಗೆ ಪರಿಚಿತರಾಗಿರ್ತಾರೆ. ಅಂಥಾ ಕುಡುಕರಿಗೆಲ್ಲ ಕಾಸಿಲ್ಲದ ಟೈಮಲ್ಲಿ ಎಣ್ಣೆಯೆಂಬುದು ಮಾಯೆಯಂತೆ ಕಾಡಿರುತ್ತೆ. ಬರಿದಾದ ಜೇಬಲ್ಲಿ ಬಾಯಾರಿ ಕುಂತ ಪ್ರತೀ ಕುಡುಕರಿಗೂ ಹಗಲು ಹೊತ್ತಲ್ಲೇ ಪುಗಸಟ್ಟೆ ಎಣ್ಣೆಯ ಕನಸು ಬಿದ್ದಿರುತ್ತೆ. ಕಾಸಿಲ್ಲದಿದ್ದರೂ ಮೊಗೆ ಮೊಗೆದು ಮನಸಾರೆ ಕುಡಿಯುವಂಥಾ ವ್ಯವಸ್ಥೆ ಇರಬೇಕಿತ್ತೆಂದು ಹಲುಬಾಡುತ್ತಾರೆ. ನಮ್ಮ ದೇಶದ ಸಮಸ್ತ ಕುಡುಕರಿಗೆ ಬೀಳೋ ಆ ಕನಸು ಇಟಲಿ ದೇಶದಲ್ಲಿ ವಾಸ್ತವದ ಅವತಾರವೆತ್ತಿದೆ. ಇಟಲಿಯ ಕ್ಯಾಲ್ಟಾರಿ ಡಿ ಒರ್ಟೋನಾ ಎಂಬಲ್ಲಿ ಕುಡುಕರ ಪಾಲಿನ ಸ್ವರ್ಗದಂಥಾ ತೀರ್ಥಕ್ಷೇತ್ರವೊಂದಿದೆ. ಅಲ್ಲಿ ರೆಡ್ ವೈನ್ ಕಾರಂಜಿಯಾಗಿ ಸದಾ ಚಿಮ್ಮುತ್ತಿರುತ್ತೆ. ದಿನದ ಇಪ್ಪತ್ನಾಲಕ್ಕು ಗಂಟೆ ನಿರಂತರವಾಗಿ ಚಿಮ್ಮೋ ಈ ವೈನನ್ನು ಜನ ಫ್ರೀಯಾಗಿಯೇ ಮೊಗೆದು ಕುಡಿಯುತ್ತಾರೆ. ಅಂದ ಹಾಗೆ ಈ ರೆಡ್ ವೈನಿನ ಪುಗಸಟ್ಟೆ ಕಾರಂಜಿ ದ್ರಾಕ್ಷಿ ತೋಟದ ನಡುವಲ್ಲಿದೆ. ನಮ್ಮ…
ಎಲ್ಲಿ ಮಡಿವಂತಿಕೆ ಅಧಿಕವಾಗಿರುತ್ತೋ ಅಲ್ಲಿಯೇ ನಾನಾ ಬಯಕೆಗಳು ಥರ ಥರದ ಮುಖವಾಡ ತೊಟ್ಟು ಕೂತಿರುತ್ವೆ. ಭಾರತದಲ್ಲಿಯಂತೂ (india) ನಾನಾ ವಿಚಾರಗಳಲ್ಲಿ ಇಂಥಾ ಮಡಿವಂತಿಕೆ ತೀವ್ರವಾಗಿದೆ. ಹಾಗಿರುವಾಗ ಕಾಮದ (sex) ಬಗ್ಗೆ ಇಲ್ಲಿ ಬಿಡು ಬೀಸಾಗಿ ಮಾತಾಡೋದು ಕೊಂಚ ಕಷ್ಟ. ಆದ್ರೆ ಜನಸಂಖ್ಯೆ ಮಾತ್ರ ಇಡೀ ವಿಶ್ವಕ್ಕೇ ಸೆಡ್ಡು ಹೊಡೆಯುವಂತೆ ಬೆಳೆಯುತ್ತಲೇ ಇದೆ. ಇದರಾಚೆಗೆ ಮೈಥುನದ ಬಗ್ಗೆ ಅತೀವ ಆಸಕ್ತಿ ಹೊಂದಿರೋ ಮಂದಿಯ ಪಾಲಿಗೆ ಇತ್ತೀಚಿನ ದಿನಗಳಲ್ಲಿ ನೀಲಿ ಚಿತ್ರಗಳು ವರದಾನವಾಗಿವೆ. ಇಂಥಾ ನೀಲಿ ಚಿತ್ರಗಳನ್ನ (porn sites) ಹುಡುಕಾಡಿ ನೋಡೋ ದೇಶಗಳ ಲಿಸ್ಟಿನಲ್ಲಿ ನಮಗೂ ಅಗ್ರ ಸ್ಥಾನವಿದೆ. ಅದರಲ್ಲಿ ಲಿಂಗಾಧಾರಿತ ಸರ್ವೆಗಳು ನಡೆದಾಗ ಹೆಂಗಳೆಯ ಪಾಲೂ ಮಹತ್ತರವಾಗಿರೋ ವಿಚಾರ ಬಯಲಾಗಿದೆ. ಅದರರ್ಥ ನೀಲಿ ಚಿತ್ರಗಳತ್ತ ವಯೋಮಾನದ ಹಂಗಿಲ್ಲದೆ ಜನ ವಾಲಿಕೊಂಡಿದ್ದಾರನ್ನೋದು. ಹೀಗೆ ನೀಲಿ ಚಿತ್ರಗಳನ್ನ ನೋಡೋದನ್ನೇ ಚಟವಾಗಿಸಿಕೊಂಡರೆ ಅದರಿಂದ ಮನೋ ದೈಹಿಕವಾಗಿ ಒಂದಷ್ಟು ಅಡ್ಡಪರಿಣಾಮಗಳಾಗುತ್ತವೆ. ಹಾಗಂತ ನೀಲಿ ಚಿತ್ರಗಳಿಂದ ಮನಸಿಗೆ, ದೇಹಕ್ಕೆ ಮಾತ್ರವೇ ಪರಿಣಾಮವಾಗುತ್ತೆ ಅಂದುಕೊಳ್ಳುವಂತಿಲ್ಲ. ಅದರಿಂದ ನಿಮ್ಮ ಮೊಬೈಲು, ಕಂಪ್ಯೂಟರ್,…
ಕೊರೋನಾ (corona) ಕರಾಳ ಪರ್ವವೊಂದನ್ನು ಪ್ರಯಾಸ ಪಟ್ಟು ದಾಟಿಕೊಂಡ ಖುಷಿ ದೇಶವಾಸಿಗಳನ್ನು ಆವರಿಸಕೊಂಡಿದೆ. ಬಹುತೇಕ ಎಲ್ಲರೂ ಕೂಡಾ ಈ ಮಹಾಮಾರಿ ಶಾಶ್ವತವಾಗಿ ತೊಲಗಿತೆಂಬಂತೆ ನಿರಾಳವಾಗಿದ್ದಾರೆ. ಆದರೆ, ಆಗಾಗ ಕೊರೋನಾ ಮಾರಿ (pendamic) ನಾನಾ ಸ್ವರೂಪಗಳಲ್ಲಿ ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಿದೆ. ಈ ಮೂಲಕ ಮತ್ತೆ ಭಯದ ನಗಾರಿ ಹೊಡೆದುಕೊಳ್ಳುವಂತೆ ಮಾಡುತ್ತಿದೆ. ಕೆಲವೊಮ್ಮೆ ಬೇರ್ಯಾವ ಸುದ್ದಿಗಳಿಗೂ ದಿಕ್ಕಿಲ್ಲದಿದ್ದಾಗ ಮಾಧ್ಯಮ (media) ಮಂದಿ ಕೊರೋನಾ ಹುಳ ಬಿಡುತ್ತಾರೆಂಬ ಆರೋಪವೂ ಸಾರ್ವಜನಿಕ ವಲಯದಲ್ಲಿದೆ. ಆದರೀಗ ದೆಹಲಿಯಲ್ಲಿ ಕೊರೋನಾ (corona virus) ಪೀಡಿತರ ಸಂಖ್ಯೆ ಏರುಗತಿ ಕಾಣುತ್ತಿರೋದು ಇಡೀ ದೇಶವನ್ನೇ ದಿಗಿಲಾಗಿಸಿಬಿಟ್ಟಿದೆ. ಇದೀಗ ದೆಹಲಿಯಲ್ಲಿ (delhi) ಸಾವಿನ ಸಂಖ್ಯೆಯಲ್ಲಿಯೂ ತೀವ್ರಗತಿಯಲ್ಲಿ ಏರಿಕೆ ಕಂಡಿದೆ! ದೆಹಲಿಯಲ್ಲಿ ಆಗಾಗ ಕೊರೋನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಾ ಬಂದಿದ್ದಾವೆ. ಆದರೆ ಈಗ ಕಂಡು ಬಂದಿರುವಷ್ಟು ಪ್ರಮಾಣದ ಪೀಡಿತರ ಸಂಖ್ಯೆ ಲಾಕ್ಡೌನ್ ಮುಗಿದ ನಂತಗರದಲ್ಲಿ ಹಿಂದ್ಯಾವತ್ತೂ ಕಾಣಿಸಿರಲಿಲ್ಲ. ಈಗ್ಗೆ ತಿಂಗಳಿಂದೀಚೆಗೆ ಕೊರೋನಾ ಕಾಣಿಸಿಕೊಂಡಿತ್ತಾದರೂ, ಇತ್ತೀಚೆಗೆ ಒಂದೇ ದಿನದಲ್ಲಿ ದೆಹಲಿ ನಗರದಲ್ಲಿ ಸಾವಿದರ ಆರುನೂರಕ್ಕೂ ಹೆಚ್ಚು ಪ್ರಕರಣಗಳು…
honeybee: ಜೇನು ತುಪ್ಪ (honey ಅಂದಾಕ್ಷಣ ಬಾಯಲ್ಲಿ ನೀರೂರಿಸದಿರೋರ ಸಂಖ್ಯೆ ವಿರಳ. ರುಚಿಯಲ್ಲಿ, ಔಷಧೀಯ ಗುಣಗಳಲ್ಲಿ ಜೇನುತುಪ್ಪವನ್ನ ಮೀರಿಸುವ ಮತ್ತೊಂದು ಮದ್ದಿರಲಿಕ್ಕಿಲ್ಲ. ಈ ಕಾರಣದಿಂದಲೇ ಜೇನು ತುಪ್ಪ ತೆಗೆಯೋ ಕೆಲಸ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಆದ್ರೆ, ಹಾಗೆ ಜೇನು ತೆಗೆಯೋ ಕೆಲಸ ಜೇನು ತುಪ್ಪದಷ್ಟು ಸ್ವೀಟಾಗಿರೋ ಮ್ಯಾಟರ್ ಖಂಡಿತಾ ಅಲ್ಲ. ಅದು ಅಕ್ಷರಶಃ ಯುದ್ಧವಿದ್ದಂತೆ. ಯಾಕಂದ್ರೆ, ನೋಡಲು ಪುಟ್ಟ ಗಾತ್ರಕ್ಕಿರೋ ಜೇನು ನೊಣಗಳ ಸಿಟ್ಟಿನ ಮೊನೆ ಅಷ್ಟೊಂದು ಚೂಪಾಗಿದೆ! ನಿಖರವಾಗಿ ಹೇಳ ಬೇಕಂದ್ರೆ ಈ ಪುಟ್ಟ ಜೇನ್ನೊಣಗಳಿಗೆ ಮೈ ತುಂಬಾ ಸಿಟ್ಟಿರುತ್ತೆ. ಸಾಮಾನ್ಯವಾಗಿ ಜೇನ್ನೊಣಗಳು ಕಚ್ಚುತ್ತವೆಂಬ ತಪ್ಪು ಕಲ್ಪನೆಯಿದೆ. ಅಸಲಿಗೆ ಅವು ಕಚ್ಚೋದಿಲ್ಲ. ಬದಲಾಗಿ ಚೂಪಾದ ಈಟಿಯಂಥಾ ಪಂಜಿನಿಂದ ಚುಚ್ಚುತ್ತವೆ. ಹೆಜ್ಜೇನಿನಂಥಾ ಜೇನು ನೊಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದ್ರೆ ಅದೆಂಥಾ ಗಟ್ಟಿ ಆಸಾಮಿಗಳೇ ಆದ್ರೂ ಬದುಕೋದು ಕಷ್ಟವಿದೆ. ಸಿಹಿಯಾದ ಜೇನು ಕೊಡೋ ಈ ಜೇನ್ನೊಣಗಳು ಯಾಮಾರಿದ್ರೆ ಅಷ್ಟೊಂದು ಡೇಂಜರಸ್ ಈಗಿ ಬಿಡುತ್ವೆ. ಈವತ್ತಿಗೂ ನಮ್ಮ ನಡುವೆ ಜೇನು ಹುಳುಗಳ ಬಗ್ಗೆ ಅಗಾಧ…
ನಮ್ಮೆಲ್ಲರ ದುರಾಸೆಯ ದೆಸೆಯಿಂದಾಗಿ ಒಂದು ಕಡೆಯಿಂದ ಕಾಡುಗಳೆಲ್ಲ (forrest) ನಾಶವಾಗುತ್ತಿವೆ. ಅದೆಷ್ಟೋ ಶತಮಾನಗಳಿಂದ ತಂತಾನೇ ಧ್ಯಾನಸ್ಥವಾಗಿ ಬೆಳೆದಿದ್ದ ಕಾಡು, ಅದರೊಳಗಿರುವ ಅಂದಾಜಿಗೆ ನಿಲುಕದ ಅಸಂಖ್ಯ ಜೀವ ಸಂಕುಲಗಳೆಲ್ಲವೂ ಅವಸಾನ ಹೊಂದಿವೆ. ದುರಂತವೆಂದರೆ, ಒಂದು ಕಡೆಯಿಂದ ಹೊಸ ಹೊಸಾ ಜೀವಿಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಚಿರಪರಿಚಿತ ಜೀವಿಗಳೇ ಶಾಶ್ವತವಾಗಿ ಇನ್ನಿಲ್ಲವಾಗುತ್ತಿವೆ. ಹಾಗೆ ಮರೆಯಾದ, ಅದರ ಅಂಚಿನಲ್ಲಿರುವ ಜೀವಿಗಳಿಗೆ ಸಾವಿರ ಉದಾಹರಣೆಗಳನ್ನು ಕೊಡಬಹುದು. ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳೋದು (rafael voltur) ರಾಫೆಪ್ ಗ್ರಿಫನ್! ಇದು ಭಯಾನಕವಾದ ರಣಹದ್ದುಗಳ ಸಂಕುಲಕ್ಕೆ ಸೇರಿದ್ದೊಂದು ವಿಶಿಷ್ಟ ಪ್ರಬೇಧ. ಯಾವುದೇ ಭೂಭಾಗಗಳಲ್ಲಾದರೂ ಆಹಾರ ಸರಪಳಿಯ ಮತೋಲನ ಕಾಯ್ದುಕೊಳ್ಳುವ ಕ್ರಿಯೆಯಲ್ಲಿ ಹದ್ದುಗಳ ಪಾತ್ರ ಮಹತ್ವದ್ದು. ಆದರೆ, ನಮ್ಮ ದೇಶವೂ ಸೇರಿದಂತೆ ವಿಶ್ವಾದ್ಯಂತ ನಾನಾ ಪ್ರಬೇಧಗಳ ರಣ ಹದ್ದುಗಳು ಅವಸಾನಗೊಂಡಿವೆ. ಆ ಹಂತದ ಅಂಚಿನಲ್ಲಿರುವ ರಾಫೆಲ್ ಗ್ರಿಫನ್ ರಣಹದ್ದುಗಳು ಲಂಡನ್ನಲ್ಲಿವೆ. ಈ ಬಗೆಯ ರಣ ಹದ್ದಿನ ಸಂತತಿ ಬೆರಳೆಣಿಕೆಯಷ್ಟಿತ್ತು. ಆದ್ದರಿಂದಲೇ ಅದೆಷ್ಟೋ ವರ್ಷಗಳ ಹಿಂದೆಯೇ ಈ ರಣಹದ್ದುಗಳನ್ನು ಲಂಡನ್ನಿನ…
shodha news desk: ಕರ್ನಾಟಕದಲ್ಲಿ ಆಗಾಗ, ಅಲ್ಲಲ್ಲಿ ಸಣ್ಣಗೆ ಮಳೆ (rain) ಹನಿದರೂ ರಣ ಬೇಸಗೆಯ (summer) ರೌದ್ರಾವತಾರ ಯಥಾ ಪ್ರಕಾರ ಮುಂದುವರೆದಿದೆ. ಮತ್ತೊಂದು ಕಡೆಯಿಂದ ಈ ಬಾರಿ ಮುಂಗಾರು, ಹಿಂಗಾರುಗಳೆಲ್ಲವೂ ಕ್ಷೀಣಿಸಿ ದೇಶದಲ್ಲಿ ಬರಗಾಲ ತಾಂಡವವಾಡುತ್ತದೆಂಬಂಥಾ ಹವಾಮಾನ ವರದಿಗಳೂ ಹಬ್ಬಿಕೊಳ್ಳುತ್ತಿವೆ. ಆದರೆ, ಇದೆಲ್ಲದರ ನಡುವಲ್ಲಿಯೇ ನಮ್ಮದೇ ದೇಶದ (assam) ಅಸ್ಸಾಂನಲ್ಲಿ ಮಳೆ ಮತ್ತು ಭೀಕರ ಚಂಡಮಾರುತದ ಜುಗಲ್ಬಂಧಿಯಿಂದ ದೊಡ್ಡ ಮಟ್ಟದಲ್ಲಿ ದುರಂತಗಳು ಸಂಭವಿಸುತ್ತಿವೆ. ಪ್ರಾಕೃತಿಕ ವಿಪತ್ತುಗಳಿಂದ ಸದಾ ಜರ್ಝರಿತಗೊಳ್ಳುತ್ತಿರುವ ಅಸ್ಸಾಂ, ಸದ್ಯ ಶುರುವಾಗಿರೋ ಚಂಡಮಾರುತದಿಂದ (thunderstorm) ಅಕ್ಷರಶಃ ತತ್ತರಿಸಿದೆ! ಹಲವಾರು ಬಾರಿ ನಮ್ಮಲ್ಲಿ ಹವಾಮಾನ ವರದಿಗಳು ತಲೆ ಕೆಳಗಾಗೋದಿದೆ. ಈ ಬಗ್ಗೆ ದೇಶಾದ್ಯಂತ ನಾನಾ ನಮೂನೆಯ ಜೋಕುಗಳೂ ಹಬ್ಬಿಕೊಂಡಿವೆ. ಅದೆಷ್ಟೋ ಸಾರಿ ಹವಾಮಾನ ಇಲಾಖೆಯ ಮುನ್ಸೂಚನೆಗಳು ಇಂಥಾ ಜೋಕುಗಳ ನಡುವೆ ಕಳೆದು ಹೋಗುತ್ತವೆ. ಮತ್ತೆ ಕೆಲ ಬಾರಿ ಇಂಥಾ ಮನ್ಸೂಚನೆಗಳೂ ಕೂಡಾ ನಿಸ್ಸಹಾಯಕ ಸ್ಥಿತಿಗಳ ಎದುರು ಗೌಣವಾಗುತ್ತವೆ. ಅಸ್ಸಾಂ ಎಂಬ ಪ್ರಾಕೃತಿಕ ಶ್ರೀಮಂತಿಕೆಯ, ಬಡತನದಲ್ಲಿ ಬೇಯುವ ರಾಜ್ಯದಲ್ಲಿ ಅದೆಲ್ಲದರ ದಾರುಣು…
live bridges: ನಮ್ಮ ಕಣ್ಣು, ಕೈಯಳತೆಯಲ್ಲಿರೋದರ ಬಗ್ಗೆ ನಮ್ಮಲ್ಲೊಂದು ಸದರವಾದ ಭಾವನೆ ಇರುತ್ತೆ. ಅದು ಮನುಷ್ಯ ಸಹಜವಾದ ಗುಣ ಇದ್ದಿರಬಹುದೇನೋ. ಏನಾದರೂ ಸುಂದರವಾದ ಸ್ಥಳಗಳು, ಕುತೂಹಲ ಕರವಾದ ಅಂಶಗಳೆದುರಾದರೆ ಅವೆಲ್ಲ ಯಾವುದೋ ಬೇರೆ ದೇಶದ್ದಿರಬಹುದೆಂದೇ ಅಂದುಕೊಳ್ಳುತ್ತೇವೆ. ಆದರೆ ನಾವು ಸಾಮಾಜಿಕ ಜಾಲತಾಣಗಳಲ್ಲಿಯೋ, ಇತರೇ ಮೂಲಗಳಿಂದಲೇ ಕಣ್ತುಂಬಿಕೊಳ್ಳುವ ಅದೆಷ್ಟೋ ವೈಶಿಷ್ಟ್ಯಗಳು ನಮ್ಮ ಸುತ್ತಲಿನದ್ದೇ ಆಗಿರುತ್ತದೆ ಅನ್ನೋದು ನಿಜವಾದ ಮಜದ ಸಂಗತಿ. ಜೀವಂತ ಮರದ ಬೇರುಗಳಿಂದಲೇ ರಚನೆಯಾದ ಮೋಹಕ ಸೇತುವೆಗಳನ್ನು ಆಗಾಗ ನೋಡುತ್ತಿರುತ್ತೇವೆ. ಅವುಗಳ ರಚನೆ ಎಂಥವರನ್ನೂ ಅರೆಕ್ಷಣ ಸೆಳೆದುಕೊಂಡು ಅದರ ಸುತ್ತಲೇ ಆಲೋಚನೆಗೆ ಹಚ್ಚುವಂತಿರುತ್ತವೆ. ನಿಖರವಾಗಿ ಹೇಳಬೇಕಂದ್ರೆ ಅಂಥಾ ಸಜೀವ ಪ್ರಾಕೃತಿಕ ಸೇತುವೆಗಳಿರೋದು ನಮ್ಮದೇ ನೆಲವಾದ ಚಿರಾಪುಂಜಿಯಲ್ಲಿ! ಚಿರಾಪುಂಜಿ ಸದಾ ಮಳೆಯಿಂದಲೇ ಮಾಘಸ್ನಾನ ಮಾಡಿಸಿಕೊಳ್ಳುವ ಪ್ರದೇಶ. ಅದಕ್ಕೆ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವೆಂಬ ಹೆಗ್ಗಳಿಕೆಯೂ ಇದೆ. ಹೀಗೆ ಮಳೆ ಬೀಳೋದರಿಂದಲೇ ಈ ಪ್ರದೇಶದಲ್ಲಿ ಅಗಾಧವಾದ ಸಸ್ಯರಾಶಿಗಳಿ, ಯಾವ ಕಾಲಕ್ಕೂ ಬತ್ತದ ಜೀವತೊರೆಗಳಿವೆ. ಅಂಥಾ ತೊರೆಗಳ ಸಮೀಪ ಎರಡು ಪ್ರದೇಶಗಳನ್ನು ಎರಡೂ ಬಸಿಯ…
ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ದುನಿಯಾ ಸೂರಿ. ರಾ ಸನ್ನಿವೇಶಗಳ ಮೂಲಕವೇ ನೋಡುಗರ ಮನಸನ್ನು ಆದ್ರ್ರಗೊಳಿಸಬಲ್ಲ ಛಾತಿಯಿಂದಲೇ ಸೂರಿ ಇದುವರೆಗೂ ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಇದೀಗ ಅವರು ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿರೋ ಬ್ಯಾ ಮ್ಯಾನರ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಆರಂಭಿಸಿದರೆ, ಅದನ್ನೊಂದು ಧ್ಯಾನದಂತೆ ಪರಿಭಾವಿಸುವವರು ಸೂರಿ. ಅದರ ನಡುವಲ್ಲಿಯೇ ಮತ್ತೊಂದು ಚಿತ್ರದತ್ತ ಅವರು ಹೊರಳಿಕೊಳ್ಳೋದಿಲ್ಲ. ಆದರೆ, ಸಣ್ಣದೊಂದು ಗ್ಯಾಪು ಸಿಕ್ಕರೂ ಹೊಸಾ ದೃಷಯ ಕಾವ್ಯವೊಂದಕ್ಕೆ ಅಣಿಗೊಂಡು ಬಿಡೋದು ಸೂರಿ ಸ್ಪೆಷಾಲಿಟಿ. ಇದೀಗ ಅವರು ಅದಕ್ಕೆ ತಕ್ಕುದಾಗಿಯೇ ಹೊಸಾ ಚಿತ್ರಕ್ಕೆ ತಯಾರಾಗಿದ್ದಾರೆ! ಸೂರಿ ಬ್ಯಾಡ್ ಮ್ಯಾನರ್ಸ್ ನಂತರದಲ್ಲಿ ನಿರ್ದೇಶನ ಮಾಡಲಿರೋ ಈ ಚಿತ್ರವನ್ನು ಜಯಣ್ಣ ನಿರ್ಮಾಣ ಮಾಡೋದು ಪಕ್ಕಾ ಆದಂತಿದೆ. ಬ್ಯಾಡ್ ಮ್ಯಾನರ್ಸ್ ಬ್ಯುಸಿಯ ನಡುವೆಯೇ ಸೂರಿ ಜಯಣ್ಣನೊಂದಿಗೆ ಮಾತುಕತೆ ನಡೆಸಿದ್ದಾರೆ. ಅದಕ್ಕೀಗ ಅಧಿಕೃತವಾಗಿಯೇ ಚಾಲನೆಯೂ ಸಿಕ್ಕಂತಾಗಿದೆ. ಅಂದಹಾಗೆ, ಈ ಹೊಸಾ ಸಿನಿಮಾದಲ್ಲಿ ವಿರಾಟ್ ನಾಯಕನಾಗಿ ನಟಿಸಲಿದ್ದಾನಂತೆ. ಮೊದಲ ಚಿತ್ರದಲ್ಲಿಯೇ ಭರವಸೆ ಮೂಡಿಸಿದ್ದ ಹುಡುಗ ವಿರಾಟ್. ಅಪ್ಪಟ…