ಸುಮ್ಮನೊಮ್ಮೆ ಯೋಚಿಸಿ ನೋಡಿ; ಕಾಸೆಂಬುದು ನಮ್ಮ ಬದುಕಿನಲ್ಲಿ ನಮಗೇ ಗೊತ್ತಿಲ್ಲದಂತೆ ನಾನಾ ಬೆರಗುಗಳನ್ನು ಸೃಷ್ಟಿಸಿರುತ್ತೆ. ಸರಿಯಾಗಿ ದಿಟ್ಟಿಸಿದರೆ ಆ ಮಾಯೆಯ ಅಲಗಿನಿಂದಾದ ಗಾಯಗಳೇ ಹೆಚ್ಚು ಸಿಗುತ್ತವೆ. ಕೆಲ ಮಂದಿಯಂತೂ ಹೇಗಾದರೂ ಕಾಸು ಪೇರಿಸಿಕೊಳ್ಳಬೇಕೆಂಬ ಭರದಲ್ಲಿ ನಾನಾ ಥರದಲ್ಲಿ ಲಗಾಟಿ ಹೊಡೆಯುತ್ತಾರೆ. ಜೀವದಷ್ಟೇ ನಂಬಿಕೆಯಿಟ್ಟುಕೊಂಡಿದ್ದವರ ನೆತ್ತಿಗೆ ದೋಖಾ, ದಗಲ್ಬಾಜಿಗಳ ಮೂಲಕ ಘಾಸಿಯುಂಟು ಮಾಡುತ್ತಾರೆ. ಯಾರದ್ದೋ ಶ್ರಮಕ್ಕೆ ಅಪ್ಪನಾಗಿ ಮೆರೆಯುತ್ತಾರೆ. ಅದನ್ನು ದಕ್ಕಿಸಿಕೊಳ್ಳಲು ನಾನಾ ಥರದ ಆಟ ಕಟ್ಟುತ್ತಾರೆ. ಅಂಥಾ ನೌಟಂಕಿ ಆಟದ ಪಾರಂಗತರಿಗೂ ಕೂಡಾ, ಕಾಸಿಗಿಂತ ಬೆಚ್ಚನೆಯದ್ದೊಂದು ಸ್ನೇಹ, ಉಗುರುಬೆಚ್ಚಗಿನ ಹಿತವಾದ ಪ್ರೀತಿ ಮತ್ತು ಎದೆಯೊಳಗೆ ಸದಾ ಪ್ರವಹಿಸುವ ಮನುಷ್ಯತ್ವವೊಂದೇ ಶಾಶ್ವತವೆಂಬ ಅಂತಿಮ ಸತ್ಯದ ಅರಿವಾಗುತ್ತೆ. ಅಷ್ಟರಲ್ಲಿ ಕಾಲ ಮಿಂಚಿ ಹೋಗಿ ಕೈ ಚಾಚಿದರೂ ಹತ್ತಿರದ ಜೀವಗಳು ಸಿಗದೇ ಹೋಗೋ ನರಕ ಮಾತ್ರವೇ ಜೊತೆಗಿರುತ್ತೆ. ಇಂಥಾ ಕಾಂಚಾಣವೆಂಬ ಮಾಯೆಯ ಸುತ್ತ ಹಬ್ಬಿಕೊಂಡಿರೋ ರೋಚಕ ಕಥನದ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿ ನಿಂತಿದೆ! ಅಂದಹಾಗೆ, ಶೀರ್ಷಿಕೆ ಕೇಳಿದಾಕ್ಷಣವೇ ಇಷ್ಟೆಲ್ಲ ಲಹರಿಗೆ ಬೀಳಿಸುವಂತಿರೋ ಆ ಚಿತ್ರ `ರುಪಾಯಿ’.…
Author: Santhosh Bagilagadde
ಕರಾವಳಿಯ ದಿಕ್ಕಿನಿಂದ ಕನ್ನಡ ಚಿತ್ರರಂಗದತ್ತ ಗೆಲುವಿನ ಕುಳಿರ್ಗಾಳಿ ಬೀಸಿ ಬರಲಾರಂಭಿಸಿದೆ. ಆ ಭಾಗದ ಕಥಾನಕವನ್ನೊಳಗೊಂಡಿದ್ದ ಕಾಂತಾರ ಚಿತ್ರವಂತೂ ವಿಶ್ವಾದ್ಯಂತ ಅದೆಂಥಾ ಕ್ರೇಜ್ನ ಕಿಡಿ ಹೊತ್ತಿಸಿ ಗೆದ್ದಿತೆಂಬುದು ಕಣ್ಣ ಮುಂದಿನ ಸತ್ಯ. ಹಾಗೆ ನೋಡಿದರೆ, ಕರಾವಳಿ ಸೀಮೆ ರೋಚಕ ಕಥನಗಳ ಅಕ್ಷಯ ಪಾತ್ರೆಯಿದ್ದಂತೆ. ಈ ಕಾರಣದಿಂದಲೇ ಆ ನೇಟಿವಿಟಿಯ ಕಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ದೃಷ್ಯರೂಪ ಧರಿಸುತ್ತಾ, ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾವೆ. ಸದ್ಯಕ್ಕೆ ಆ ಸಾಲಿನಲ್ಲಿ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ, ಕುತೂಹಲ ಹುಟ್ಟು ಹಾಕಿರುವ ಚಿತ್ರ `ಕುದ್ರು’! ಹಾಗಾದರೆ, ಕುದ್ರು ಅಂದರೇನು? ಅಂತೊಂದು ಪ್ರಶ್ನೆ ಕರ್ನಾಟಕದ ಬೇರೆ ಭಾಗಗಳ ಮಂದಿಯನ್ನು ಕಾಡೋದು ಸಹಜ. ಆದರೆ, ಕರಾವಳಿಗರ ಪಾಲಿಗದು ಪರಿಚಿತ, ಬದುಕಿನ ಭಾಗ. ನದಿ ಸಮುದ್ರವನ್ನ ಕೂಡುವಲ್ಲಿ, ನೀರಿನಿಂದಾವೃತವಾದ ಮಧ್ಯ ಭಾಗದಲ್ಲಿ ಹುಟ್ಟಿಕೊಳ್ಳುವ ನಡುಗಡ್ಡೆಯನ್ನು ಕರಾವಳಿ ಸೀಮೆಯಲ್ಲಿ ಕುದ್ರು ಅಂತ ಕರೆಯಲಾಗುತ್ತೆ. ಅಂಥಾದ್ದೊಂದು ಪ್ರದೇಶದಲ್ಲಿ ನಡೆಯೋ ರೋಚಕ ಕಥೆಯೊಂದನ್ನು ಈ ಮೂಲಕ ದೃಷ್ಯೀಕರಿಸಲಾಗಿದೆ. ವಿಶೇಷವೆಂದರೆ, ಈ ಸಿನಿಮಾದ ನಿರ್ಮಾಪಕರಾದ ಭಾಸ್ಕರ್ ನಾಯಕ್ ಅವರೇ ಈ ಕಥೆಯನ್ನು…
ಅತ್ತ ದರ್ಶನ್ ನಿಂತರೂ, ಕುಂತರೂ ವಿವಾದವೇಳುತ್ತಿದೆ. ಹಾಗೆ ನೋಡಿದರೆ, ಕ್ರಾಂತಿ ಚಿತ್ರದ ಶುರುವಾತಿನಿಂದ ಹಿಡಿದು ಇಲ್ಲಿಯವರೆಗೂ ವಿವಾದಗಳ ಮೆರವಣಿಗೆಯೇ ಮೂಡಿಕೊಂಡಿದೆ. ಇದೀಗ ಇಂಥಾ ವಿವಾದವೆಂಬುದು ಕ್ರಾಂತಿಯ ನಾಯಕಿ ರಚಿತಾ ರಾಮ್ ಹೆಗಲೇರಿಕೊಂಡಿದೆ. ಒಂದು ವಿನಮ್ರವಾದ ತಪ್ಪೊಪ್ಪಿಗೆಯ ಮೂಲಕ ರಚಿತಾ ಇದೊಂದು ವಿವಾದದ ಸ್ವರೂಪ ಪಡೆಯೋದನ್ನು ತಡೆಯೋ ದಾರಿಗಳಿದ್ದವು. ಆದರಾಕೆ, ಹೆಗಲೇರಿದ್ದ ವಿವಾದವನ್ನು ಮೊಂಡು ಮಾತುಗಳ ಮೂಲಕ ಕೊಡವಿಕೊಳ್ಳಲು ನೋಡಿದಳು. ಅದರ ಫಲವಾಗಿಯೇ ಅದೀಗ ರಚಿತಾಳ ನೆತ್ತಿಗೇರಿ ಕೂರುವಂತಾಗಿದೆ! ಸಾಮಾನ್ಯವಾಗಿ, ಸೆಲೆಬ್ರಿಟಿ ಅಂದುಕೊಂಡವರಿಗೆ ಸಾಮಾನ್ಯ ಜ್ಞಾನವಿರುವುದು ಕಡಿಮೆ. ಆದರೆ, ಪ್ರಸ್ತುತ ವಿದ್ಯಮಾನಗಳನ್ನು ಅರಿತುಕೊಂಡು, ಇತಿಹಾಸ, ದೇಶ, ಸಂವಿಧಾನ, ಕಾನೂನುಗಳ ಬಗ್ಗೆ ತೆಳುವಾಗಿಯಾದರೂ ಒಂದಷ್ಟು ತಿಳುವಳಿಕೆ ಹೊಂದಿರೋದು ಅವಶ್ಯಕ. ಅದರಲ್ಲಿಯೂ ಸಾರ್ವಜನಿಕವಾಗಿ ಮಾತಾಡುವಾಗ ಮೈ ತುಂಬಾ ಕಣ್ಣಾಗಿರುವ ಎಚ್ಚರ ಸಾಮಾಜಿಕ ಬದುಕಿನಲ್ಲಿ ಅತಿ ಮುಖ್ಯ. ಗ್ಲಾಮರ್ನತ್ತ ಮಾತ್ರವೇ ಗಮನ ಹರಿಸುವ ರಚಿತಾ ರಾಮ್ಗೆ ಅಂಥಾದ್ದರ ಗಂಧ ಗಾಳಿ ಇರುವಂತಿಲ್ಲ. ಇದ್ದಿದ್ದರೆ ಗಣರಾಜ್ಯೋತ್ಸವವನ್ನು ಮರೆತುಬಿಡಿ, ಕ್ರಾಂತಿ ನೋಡಿ ಎಂಬಂಥಾ ದಡ್ಡ ಹೇಳಿಕೆ ಆಕೆಯ ಕಡೆಯಿಂದ ತೂರಿ…
ವಿಕ್ರಾಂತ್ ರೋಣ ಚಿತ್ರದಲ್ಲಿ ರಾರಾ ರಕ್ಕಮ್ಮ ಸಾಂಗಿಗೆ ಮೈ ಬಳುಕಿಸುತ್ತಾ, ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಾಕೆ ಜಾಕ್ವೆಲಿನ್ ಫನಾರ್ಂಡಿಸ್. ಬಾಲಿವುಡ್ಡಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಈಕೆಗೆ ಅಂದುಕೊಂಡಂತೆ ನೆಲೆಗಾಣಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಈಕೆ ಸುದ್ದಿಯಲ್ಲಿದ್ದದ್ದೆಲ್ಲ ನಟ ಸಲ್ಮಾನ್ ಖಾನ್ ಜೊತೆಗಿಒನ ಅಫೇರಿನ ವಿಚಾರದಲ್ಲಿಯೇ. ಇಂಥಾ ಜಾಕ್ವೆಲಿನ್ ಇದೀಗ ಇನ್ನೂರು ಕೋಟಿ ಕಿಮ್ಮತ್ತಿನ ಮಹಾ ಮೋಸವೊಂದರಲ್ಲಿ ತಗುಲಿಕೊಂಡಿದ್ದಾಳೆ. ಈ ಇನ್ನೂರು ಕೋಟಿ ವಂಟನೆಯ ಇಕ್ಕಳದಿಂದ ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿದ್ದಾಳೆ. ಸದ್ಯಕ್ಕೆ ಈ ಕೇಸಿನ ಸುತ್ತ ಇಡಿ ಅಧಿಕಾರಿಗಳು ಗಸ್ತು ಹೊಡೆಯುತ್ತಿರೋದನ್ನು ಗಮನಿಸಿದರೆ ರಾರಾ ರಕ್ಕಮ್ಮ ಅಂದವಳಿಗೆ ಜೈಲುವಾಸ ಫಿಕ್ಸಾದಂತಿದೆ. ಹಣದ ಮೋಹಕ್ಕೀಡಾಗಿದ್ದ ಜಾಕ್ವೆಲಿನ್ ಇದೀಗ ರೋದನೆ ಶುರುವಿಟ್ಟುಕೊಂಡಿದ್ದಾಳೆ. ವಂಚಕ ಸುಕೇಶ್ ಚಂದ್ರಶೇಖರ್ ತನ್ನ ಬದುಕನ್ನೇ ಬರ್ಬಾದು ಮಾಡಿದ ಅಂತೆಲ್ಲ ಗೋಳಾಡುತ್ತಿದ್ದಾಳೆ. ರಾಷ್ಟ್ರೀಯ ಮಟ್ಟದಲ್ಲಿ ಹೈ ಪ್ರೊಫೈಲ್ ವಂಚಕನಾಗಿ ಕುಖ್ಯಾತಿ ಪಡೆದಿರುವವನು ಸುಕೇಶ್ ಚಂದ್ರಶೇಖರ್. ಹೈಫೈ ಜನರನ್ನು ಪರಿಚಯ ಮಾಡಿಕೊಂಡು, ನಾನಾ ರೂಪದಲ್ಲಿ ಯಾಮಾರಿಸಿ ಕಾಸು ಪೀಕುವುದು ಸುಕೇಶನ ವಂಚನೆಯ ವರಸೆ. ಇಂಥಾ ಸುಕೇಶ ಇತ್ತೀಚೆಗೆ…
ಇಡೀ ಜಗತ್ತಿನ ತುಂಬೆಲ್ಲ ವಯೋಮಾನದ ಹಂಗಿಲ್ಲದೆ ಕೊರೋನಾ ವೈರಸ್ ಜೀವ ಭಯ ಹುಟ್ಟಿಸಿದೆ. ಅದರಲ್ಲಿಯೂ ವಯೋವೃದ್ಧರ ದೇಹಕ್ಕೆ ಈ ವೈರಸ್ ಹೊಕ್ಕರೆ ಬಚಾವಾಗೋದು ಕಷ್ಟ ಎಂಬ ಭೀತಿಯಂತೂ ವ್ಯಾಪಕವಾಗಿದೆ. ದೇಹದೊಳಗೆ ರೋಗ ನಿರೋಧಕ ಶಕ್ತಿಯಿರೋ ವಯಸ್ಸಿನವರೇ ಈ ವೈರಸ್ ಮುಂದೆ ಮಂಡಿಯೂರಿದ ಉದಾಹರಣೆಗಳಿದ್ದಾವೆ. ಹಾಗಿರುವಾಗ ಇಳಿ ಸಂಜೆಯಲ್ಲಿರುವ, ವಯೋಸಹಜ ಖಾಯಿಲೆ ಕಸಾಲೆಗಳಿಂದ ಹೈರಾಣುಗೊಂಡಿರುವ ವೃದ್ಧರು ಈ ವೈರಸ್ಸನ್ನು ಜಯಿಸಿಕೊಳ್ಳೋದು ಕಿಷ್ಟ ಅಂತ ವೈದ್ಯಕೀಯ ಲೋಕವೇ ಷರಾ ಬರೆದಿತ್ತು. ಆದರೆ ಆತ್ಮಸ್ಥೈರ್ಯವೊಂದಿದ್ದರೆ ಯಾವ ವಯೋಮಾನದಲ್ಲಿಯೂ ಇಂಥಾ ವೈರಸ್ಸುಗಳ ಬಾಧೆಯನ್ನು ಬಗ್ಗು ಬಡಿಯಬಹುದೆಂಬುದನ್ನು ಸ್ಪೇನ್ ದೇಶದ ವೃದ್ಧೆಯೊಬ್ಬರು ತೋರಿಸಿಕೊಟ್ಟಿದ್ದಾರೆ. ಹಾಗೆ ಕೊರೋನಾದಿಂದ ಬಚಾವಾಗಿದ್ದ ಆಕೆಗೀಗ ವಿಶ್ವದ ಅತ್ಯಂತ ಹಿರಿಯ ನಾಗರಿಕಳೆಂಬ ಗೌರವವೂ ಸಿಕ್ಕಿದೆ. ಈಕೆ ಕೊರೋನಾ ವಿರುದ್ಧ ಹೋರಾಡಿ ಗೆಲುವಿನ ನಗೆ ಬೀರಿದ ಕಥೆ ನಿಜಕ್ಕೂ ರೋಚಕವಾಗಿದೆ. ಅಂದಹಾಗೆ, ಇಡೀ ಜಗತ್ತೇ ಅಚ್ಚರಿಗೊಳ್ಳುವಂತೆ ಕೋವಿಡ್ 19ನಿಂದ ಬಚಾವಾದ ಈ ವೃದ್ಧೆ ಮರಿಯಾ ಬನ್ಯಾಸ್. ಆಕೆಯ ವಯಸ್ಸು ಭರ್ತಿ ನೂರಾ ಹದಿಮೂರು ವರ್ಷವಾಗಿತ್ತು. ಈ ಕಾರಣದಿಂದಲೇ…
ನಾವೆಲ್ಲ ಪುಟ್ಟ ಮಕ್ಕಳು ಅಳದಂತೆ ನೋಡಿಕೊಳ್ಳಲು ಹರಸಾಹಸ ಪಡ್ತೀವಿ. ಚಿಕ್ಕ ಮಕ್ಕಳು ತುಸು ಅತ್ತರೂ ಅದನ್ನು ಸಮಾಧಾನಿಸಲು ಮನೆ ಮಂದಿಯೆಲ್ಲ ಹರಸಾಹಸ ಪಡ್ತಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಎಲ್ಲ ದೇಶಗಳಲ್ಲಿಯೂ ಅಂಥಾದ್ದೇ ಮನಸ್ಥಿತಿ ಇದೆ. ಯಾರಾದ್ರೂ ಪುಟ್ಟ ಮಕ್ಕಳು ಅಳೋದನ್ನ, ಅಬೋಧ ಕಣ್ಣುಗಳಲ್ಲಿ ನೀರು ತುಂಬಿಕೊಂಡು ದೈನ್ಯದಿಂದ ನೋಡೋದನ್ನ ಬಯಸ್ತಾರಾ? ಬಯಸೋದಿಲ್ಲ ಅಂತಲೇ ನಾವೆಲ್ಲ ಅಂದ್ಕೊಂಡಿರ್ತೀವಿ. ಆದ್ರೆ ಅದು ಶುದ್ಧ ಸುಳ್ಳು. ಜಪಾನ್ ದೇಶದಲ್ಲಿ ಅಖಂಡ ನಾನೂರು ವರ್ಷಗಳಿಂದ ರೂಢಿಯಲ್ಲಿರೋ ಸಂಪ್ರದಾಯದ ಕಥೆ ಕೇಳಿದ್ರೆ ನಿಮಗೂ ಹಾಗನ್ನಿಸದಿರೋದಿಲ್ಲ. ನಾವು ಮಗು ಅಳದಂತೆ ನೋಡಿಕೊಳ್ಳಲು ಹಣಗಾಡ್ತೀವಲ್ಲ? ಜಪಾನಿಗರು ಮಕ್ಕಳನ್ನು ಭೋರಿಟ್ಟು ಅಳುವಂತೆ ಮಾಡಲು ಅಷ್ಟೇ ಹರಸಾಹಸ ಪಡ್ತಾರಂತೆ. ಇದು ವಿಚಿತ್ರ ಅನ್ನಿಸಿದ್ರೂ ನಂಬಲೇ ಬೇಕಾದ ಸತ್ಯ. ಅದು ಗಂಡು ಮಗುವಾಗಿದ್ರೂ ಹೆಣ್ಣು ಮಗುವಾಗಿದ್ರೂ ಎಷ್ಟು ಅತ್ತರೂ ಜಪಾನ್ ಮಂದಿಗೆ ಸಮಾಧಾನವಿರೋದಿಲ್ಲ. ಯಾಕಂದ್ರೆ ಹೆಚ್ಚು ಅತ್ತಷ್ಟೂ ಅವು ಮುಂದಿನ ಜೀವನದಲ್ಲಿ ಹೆಚ್ಚು ಖುಷಿಯಾಗಿರತ್ತವೆಂಬ ನಂಬಿಕೆ ಅವರಲ್ಲಿದೆ. ಆ ನಂಬಿಕೆಗೆ ಸರಿಸುಮಾರು ನಾಲಕ್ಕುನೂರು ವರ್ಷಗಳಾಗಿವೆ. ಆದ್ದರಿಂದಲೇ…
ಇದು ಎಲ್ಲ ಭಾವಗಳೂ ಬೆರಳಂಚಿಗೆ ಬಂದು ನಿಂತಿರುವ ಕಾಲ. ಅದರ ಫಲವಾಗಿಯೇ ಇಲ್ಲಿ ಯಾವುದೂ ಬೆರಗಾಗಿ ಉಳಿದುಕೊಂಡಿಲ್ಲ. ಫೇಸ್ಬುಕ್ಕಿನ ಇನ್ಬಾಕ್ಸಿನಲ್ಲಿ ಮೊಳೆಯ ಪ್ರೀತಿ, ಕ್ಷಣಾರ್ಧದಲ್ಲಿ ವಾಟ್ಸಪ್ಪಿಗೆ ರವಾನೆಯಾಗುತ್ತೆ. ಅಲ್ಲಿ ಹಬ್ಬಿಕೊಳ್ಳುವ ದಂಡಿ ದಂಡಿ ಮಾತಿಗಳಿಗೆ ಪಿಸುಮಾತುಗಳ ಮಾಧುರ್ಯವಿರುವುದಿಲ್ಲ. ಕಾಯುವಿಕೆಯ ಸಂಭ್ರಮ ಇಮೋಜಿಗಳಲ್ಲಿ ಕಳೆದು ಹೋಗಿ, ಮೌನವೆಂಬುದು ಗುರುತಿರದ ಸರಕಿನಂತಾಗಿ, ಬರೀದೇ ಮಾತುಗಳ ಸಂತೆಯಲ್ಲಿ ಎಲ್ಲವೂ ಪರ್ಯಾವಸಾನವಾಗುತ್ತಿದೆ. ಇಂಥಾ ಜಗತ್ತಿನಲ್ಲಿ ಪ್ರೀತಿ ಎಂಬುದು ಏಕಾಏಕಿ ಘಟಿಸಿಬಿಡುವ ಜಾತ್ರೆಯಂಥಾದ್ದು. ಅದು ಅಷ್ಟೇ ವೇಗವಾಗಿ ಮುಗಿದ ಮೇಲೆ, ಅಲ್ಲೇಲ್ಲೋ ಮೂಲೆಯಲ್ಲಿ ಭಾವಗಳ ತೇರು ಕೂಡ ನಿಲ್ಲುವುದಿಲ್ಲ. ಇಂಥಾ ಶುಷ್ಕ ಕಾಲಮಾನದಲ್ಲಿ ಕಾಗದದಲ್ಲಿ ಹರಡಿಕೊಂಡಿದ್ದ ಭಾವುಕ ಕಾಲಮಾನವನ್ನು ಧ್ಯಾನಿಸೋದೊಂದು ಪುಳಕ. ಇಂಥಾ ಸೂಕ್ಷ ಭಾವಗಳಿಗೆ ದೃಷ್ಯ ರೂಪ ಸಿಕ್ಕತಿರುವ ಅಪರೂಪದ ಚಿತ್ರ `ಕಾಗದ’ವೀಗ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲು ಸಜ್ಜಾಗಿ ನಿಂತಿದೆ! ಕಾಗದ ಎಂಬ ಶೀರ್ಷಿಕೆ ಕೇಳಿದಾಕ್ಷಣವೇ ಎಂಥವರ ಮನಸಲ್ಲಾದರೂ ನೂರು ಭಾವಗಳ ವೀಣೆ ನುಡಿದಂತಾಗುತ್ತದೆ. ಅಂಥಾದ್ದೊಂದು ಶೀರ್ಷಿಕೆಯನ್ನು ಪ್ರೇಮ ಕಥಾನಕವೊಂದಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ರಂಜಿತ್ ಕುಮಾರ್…
ಪ್ರೇಮ ಕಥಾನಕವೆಂಬುದು ಅದಾಗ ತಾನೇ ಅಚಾನಕ್ಕಾಗಿ ಎದೆಯ ಮಿದುವಿಗೆ ತಾಕಿದ ಪರಾಗವಿದ್ದಂತೆ. ಅದೆಷ್ಟು ಸಲ ಅದರಿಂದ ಸೋಕಿಸಿಕೊಂಡರೂ ಆ ಅನುಭೂತಿ ತಾಜಾ ತಾಜಾ. ಸಿನಿಮಾ ವಿಚಾರದಲ್ಲಂತೂ ಈ ಮಾತು ಸಾರ್ವಕಾಲಿಕ ಸತ್ಯ. ಪ್ರೀತಿ ಎಂಬುದು ಅಂಥಾದ್ದೊಂದು ಮಾಯೆ ಅಲ್ಲದೇ ಹೋಗಿದ್ದರೆ, ಬಹುಶಃ ಅದನ್ನು ಕೇಂದ್ರೀಕರಿಸುವಂಥಾ ಕಥಾನಕಗಳು ಅದ್ಯಾವತ್ತೋ ಬ್ರೇಕ್ ತೆಗೆದುಕೊಳ್ಳುತ್ತಿದ್ದವು. ಆ ಮಾಯೆಯ ಮುಂದುವರೆದ ಭಾಗವೆಂಬಂತೆ ಒಂದು ಸಿನಿಮಾ ತಯಾರಾಗಿ ನಿಂತಿದೆ. `ಅಮರ ಪ್ರೇಮಿ ಅರುಣ್’ ಎಂಬ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ಟರ ನೆರಳೂ ಬಿದ್ದಿದೆ. ಯಾಕೆಂದರೆ, ಅವರ ಗರಡಿಯಲ್ಲಿ ಪಳಗಿಕೊಂಡಿರುವ ಪ್ರವೀಣ್ ಕುಮಾರ್ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಶೀರ್ಷಿಕೆ ಕೇಳಿದರೇನೇ ಇದೊಂದು ಪ್ರೇಮ ಕಥೆಯನ್ನೊಳಗೊಂಡಿರೋ ಚಿತ್ರವೆಂಬುದು ಖಾತರಿಯಾಗುತ್ತೆ. ಒಂದಷ್ಟು ದಿಕ್ಕಿನಲ್ಲಿ ಆಲೋಚಿಸಿದರೆ, ಸಿದ್ಧಸೂತ್ರದ ಒಂದಷ್ಟು ಕಲ್ಪನೆಗಳೂ ಮೂಡಿಕೊಳ್ಳುತ್ತವೆ. ಹಾಗಂತ, ಈ ಸಿನಿಮಾವನ್ನು ಅಂಥಾ ಚೌಕಟ್ಟಿನಲ್ಲಿ ಕಟ್ಟಿ ಹಾಕುವಂತಿಲ್ಲ. ಯಾಕೆಂದರೆ, ಒಂದಿಡೀ ಕಥೆಯನ್ನು ಹೊಸತನದೊಂದಿಗೆ, ಹಳ್ಳಿಯ ಬ್ಯಾಕ್ಡ್ರಾಪಿನಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆಯಂತೆ. ಬಿಸಿಲಿನ ಜಳಕ ಮಾಡಿಕೊಂಡಂತಿರೋ ಬಳ್ಳಾರಿಯಲ್ಲಿ ನಡೆಯೋ…
ಜಗತ್ತು ಅದೇನೇ ಮುಂದುವರೆದಿದೆ ಅಂದ್ರೂ ಹಲವಾರು ವಿಷಯಗಳಲ್ಲದು ಹಿಂದೆಯೇ ನಿಂತು ಬಿಟ್ಟಿದೆ. ಕೆಲ ಪಿಡುಗುಗಳಿಂದ ಅದೆಷ್ಟೇ ವಿಮೋಚನೆಗೊಳ್ಳಲು ಹವಣಿಸಿದ್ರೂ ಆಚರಣೆಗಳ ಹಣೆಪಟ್ಟಿಯಡಿಯಲ್ಲಿ ಅವು ಜೀವಂತವಾಗಿವೆ. ಇಡೀ ಜಗತ್ತಿನ ತುಂಬಾ ಹೆಣ್ಣನ್ನು ಭೋಗದ ವಸ್ತುವಾಗಿಯಷ್ಟೇ ಕಾಣೋ ಮನಸ್ಥಿತಿ ಕೂಡಾ ಆ ಲಿಸ್ಟಿಗೆ ಖಂಡಿತಾ ಸೇರಿಕೊಳ್ಳುತ್ತೆ. ಈವತ್ತಿಗೆ ಹೆಣ್ಣು ಯಾವುದರಲ್ಲಿಯೂ ಪುರುಷರಿಗೆ ಕಡಿಮೆಯಲ್ಲ ಅನ್ನೋದು ಸಾಬೀತಾಗಿದೆ. ಆದರೂ ಹೆಣ್ಣನ್ನು ಅಡಿಯಾಳಾಗಿಸಿಕೊಳ್ಳೋ ಹುನ್ನಾರಗಳು ಮಾತ್ರ ಹಲವು ಮುಖವಾಡ ಧರಿಸಿ ಜೀವಂತವಾಗಿವೆ. ಪ್ರಸ್ತುತ ಪ್ರತೀ ದೇಶಗಳಲ್ಲಿಯೂ ಹೆಣ್ಣು ಮಕ್ಕಳ ಮೇಲಾಗೋ ದೌರ್ಜನ್ಯ ತಡೆಗೆ ಬಿಗುವಾದ ಕಾನೂನು ಕಟ್ಟಳೆಗಳಿವೆ. ಭಾರತವೂ ಅದಕ್ಕೆ ಹೊರತಾಗಿಲ್ಲ. ಮಹಿಳೆಯರನ್ನು ಕಿಡ್ನಾಪ್ನಂಥಾ ಹಿಂಸೆಗೊಳಪಡಿಸಿದರಂತೂ ಕಾನೂನು ನರಕ ತೋರಿಸುತ್ತೆ. ಈವತ್ತಿಗೆ ಮಹಿಳಾ ಸಂಕುಲ ಒಂದಷ್ಟು ನಿರಾಳವಾಗಿರೋದು ಇಂಥಾದ್ದರಿಂದಲೇ. ಹೀಗೆ ಜಗತ್ತೆಲ್ಲ ಹೆಣ್ಣಿನ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವಾಗ ಅದೇ ಜಗತ್ತಿನ ಭಾಗವಾಗಿರೋ ಒಂದು ದೇಶದಲ್ಲಿ ಹುಡುಗೀರನ್ನ ಕಿಡ್ನಾಪ್ ಮಾಡೋದು ಲೀಗಲ್ ಆಗಿದೆ ಅಂದ್ರೆ ಅಚ್ಚರಿಯಾಗದಿರೋದಿಲ್ಲ. ಇಂಥಾದ್ದೊಂದು ಅನಿಷ್ಟದ ರಿವಾಜು ಜಾರಿಯಲ್ಲಿರೋದು ಕಿರ್ಗಿಸ್ತಾನ್ ದೇಶದಲ್ಲಿ. ಸಾಮಾನ್ಯವಾಗಿ ಹೆಣ್ಣೊಬ್ಬಳನ್ನು…
ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಕ್ರೌರ್ಯದ ಅಧ್ಯಾಯಗಳನ್ನು ಉಳಿಸಿ ಹೋದವನು ಅಡಾಲ್ಫ್ ಹಿಟ್ಲರ್. ಕ್ರೂರತನದ ಉತ್ತುಂಗದಂತಿದ್ದ ಹಿಟ್ಲರ್ ವಿಶ್ವ ಕಂಡ ಅಪಾಯಕಾರಿ ಸರ್ವಾಧಿಕಾರಿಗಳಲ್ಲೊಬ್ಬ. ವಿರೋಧಿಗಳನ್ನು ಇರುವೆಗಳಿಗಿಂತ ಕಡೆಯಾಗಿ ಹೊಸಕಿದ ಹಿಟ್ಲರನದ್ದು ರಕ್ತಸಿಕ್ತ ವ್ಯಕ್ತಿತ್ವ. ಕರುಣೆಯ ಪರಿಚಯವೇ ಇಲ್ಲದಂತಿದ್ದ ಈತ ಕೊಲ್ಲಲು ಬಳಸುತ್ತಿದ್ದ ವಿಧಾನಗಳೇ ನಡುಕ ಹುಟ್ಟಿಸುವಂತಿವೆ. ಆತ ವಿಷಾನಿಲ ಬಿಟ್ಟು ಜನರನ್ನು ಕೊಂದ ಕಥೆ ಜನಜನಿತ. ಆದ್ರೆ ಆತ ಚಪ್ಪರಿಸಿ ತಿನ್ನೋ ಚಾಕೋಲೇಟ್ ಅನ್ನೂ ಕೂಡಾ ಕೊಲ್ಲಲು ಬಳಸಿದ್ದ ಮಹಾ ಕಿರಾತಕ. ಇಡೀ ಜಗತ್ತನ್ನೇ ತನ್ನ ಕೈ ವಶ ಮಾಡಿಕೊಳ್ಳಬೇಕೆಂಬ ರಣ ಹಸಿವಿಂದ ತೊನೆದಾಡಿದ್ದವನು ಹಿಟ್ಲರ್. ಆರಂಭದಲ್ಲಿ ಭಾವನೆ ಕೆರಳಿಸಿ ಜನರನ್ನ ಮರುಳು ಮಾಡಿದ್ದ ಆತ ಅದನ್ನೇ ಅಸ್ತ್ರವಾಗಿಸಿಕೊಂಡಿದ್ದ. ಆದರೂ ಅವನ ಹಿಕಮತ್ತಿನ ವಿರುದ್ಧ ಅನೇಕರು ಬಂಡೆದ್ದಿದ್ದರು. ಅಂಥವರನ್ನೆಲ್ಲ ಕ್ರೂರ ಹಾದಿಯಲ್ಲಿ ಕೊಂದ ಹಿಟ್ಲರ್ಗೆ ಎಥಿಕ್ಸ್ ಅನ್ನೋದರ ಪರಿಚಯವೇ ಇರಲಿಲ್ಲ. ಅದಿದ್ದಿದ್ದರೆ ಚಾಕೋಲೇಟ್ ಬಾಂಬು ತಯಾರಿಸಿ ಮೋಸದಿಂದ ಕೊಲ್ಲೋ ಮಾರ್ಗವನ್ನಾತ ಅನುಸರಿಸುತ್ತಿರ್ಲಿಲ್ಲ. ಹಿಟ್ಲರ್ ಮಾರ್ಗದರ್ಶನದಲ್ಲಿಯೇ ಚಾಕೋಲೇಟ್ ಕೋಟೆಡ್ ಬಾಂಬು ತಯಾರಾಗಿತ್ತು. ಸ್ಫೋಟಕ ಸಾಧನಗಳನ್ನ…