ಐಟಿ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ ದಂಧೇ, ದೋಖಾಬಾಜಿಗಳು ಪೊಲೀಸ್ ಇಲಾಖೆಯ ಅಂಕೆಗೆ ಸಿಗದಂತೆ ಹಬ್ಬಿಕೊಂಡಿವೆ. ದೇಶ ವಿದೇಶಗಳಿಂದ ಅನ್ನ, ವಿದ್ಯೆ ಅರಸಿ ಬರುವವರ ಪಾಲಿಗೆ ಬೆಂಗಳೂರು ಸದಾ ಪೊರೆಯುವ ಬಂಧುವಿದ್ದಂತೆ. ಆದರೆ, ಕೆಲ ಮಂದಿ ಮಾತ್ರ ಇಂಥಾ ನಾನಾ ವೇಷ ಧರಿಸಿ ಬಂದು ಇಲ್ಲಿಯೇ ಠಿಕಾಣಿ ಹೂಡುತ್ತಿದ್ದಾರೆ. ಕೆಲ ವಿದೇಶಿ ಪ್ರಜೆಗಳಂತೂ ವಿದ್ಯಾರ್ಥಿಗಳ ಸೋಗಿನಲ್ಲಿ ಬಂದು ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಡ್ರಗ್ಸ್ ಸೇರಿದಂತೆ ನಾನಾ ದಂಧೆಗಳ ಭಾಗವಾಗಿದ್ದಾರೆ. ಇದುವರೆಗೂ ತಾಂಜೇನಿಯಾ ಮೂಲದ ಅಕ್ರಮ ಬೆಂಗಳೂರು ನಿವಾಸಿಗಳ ಮೇಲೆ ಡ್ರಗ್ಸ್ ಮಾಫಿಯಾದ ಆರೋಪಗಳಿದ್ದವು. ಅವರಲ್ಲಿ ಕೆಲ ಮಂದಿಯೀಗ ಬೆಂಗಳೂರಿನಲ್ಲಿ ವೇಶ್ಯಾ ದಂಧೆಗಿಳಿದಿರೋ ಗುಮಾನಿಗಳಿದ್ದಾವೆ!
ಹೆಸರಘಟ್ಟ ಮುಖ್ಯ ರಸ್ತೆಯ ಗಣಪತಿ ನಗರದ ಆಜೂಬಾಜು ಸೇರಿದಂತೆ, ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಅಟಾಟೋಪ ಇಂದು ನಿನ್ನೆಯದ್ದಲ್ಲ. ಈ ಭಾಗದಲ್ಲಿ ಹೈಟೆಕ್ ಕಾಲೇಜುಗಳು ತಲೆ ಎತ್ತಿರೋದರಿಂದ ಈ ಭಾಗದಲ್ಲಿ ದಕ್ಷಿಣಾಫ್ರಿüಕಾ ಕಡೆಯ ವಿದ್ಯಾರ್ಥಿಗಳು ಬಂದು ಗುಡ್ಡೆ ಬೀಳುತ್ತಿದ್ದಾರೆ. ಹೀಗೆ ಬಂದ ಆಸಾಮಿಗಳು ಅದುಮಿಕೊಂಡು ಓದು ಬರಹ ಅಂತಿದ್ದಿದ್ದರೆ ಈ ಭಾಗದ ಜನ ಅವರನ್ನೂ ತಮ್ಮವರೇ ಅಂದುಕೊಳ್ಳುತ್ತಿದ್ದರೇನೋ. ಆದರೆ ಇಲ್ಲಾಗಿರೋದೇ ಬೇರೆ. ಈ ವಿದ್ಯಾರ್ಥಿಗಳ ಶೋಕಿ ಮತ್ತು ನಾನಾ ಖಯಾಲಿಗಳ ಮುಂದೆÉ ಈ ಭಾಗದ ಮೂಲ ನಿವಾಸಿಗಳೇ ಪರಕೀಯರಂತಾಗಿದ್ದಾರೆ. ಹುಡುಗೀರು ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ಪೆರೇಡು ನಡೆಸಿದರೆ ಹುಡುಗರು ಯಮ ವೇಗದಲ್ಲಿ ವಾಹನ ಚಲಾಯಿಸುತ್ತಾ ಸಿಕ್ಕ ಸಿಕ್ಕ ಏರಿಯಾಗಳನ್ನೇ ಗಾಂಜಾ ಅಡ್ಡಾ ಮಾಡಿಕೊಂಡು ನಶೆಯಲ್ಲಿ ತೂರಾಡಲಾರಂಭಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಹೇಳಿದರೂ ಏನೂ ಉಪಯೋಗ ವಾಗದೇ ಇದ್ದಾಗ ಈ ಭಾಗದ ಮಂದಿ ಇದು ಅನಿವಾರ್ಯವಾಗಿ ಅನುಭವಿಸಲೇ ಬೇಕಾದ ಕರ್ಮ ಅಂದುಕೊಂಡು ಸುಮ್ಮನಾಗಿದ್ದರು. ಆದರೆ ಇಂಥಾ ವಿದೇಶಿ ವಿದ್ಯಾರ್ಥಿಗಳ ಕಡೆಯಿಂದ ವರ್ಷಗಳ ಹಿಂದೆÀ ನಡೆದ ಅನಾಹುತ ಕಂಡು ಇಲ್ಲಿನ ಜನರ ಆಕ್ರೋಶ ಕಟ್ಟೆಯೊಡೆದಂತಾಗಿತ್ತು.
ಈ ಭಾಗದ ಜನ ವಿದೇಶಿ ವಿದ್ಯಾರ್ಥಿಗಳ ವಿರುದ್ಧ ಹೀಗೆ ಆಕ್ರೋಶ ಹೊಂದಲು ಬಲವಾದ ಕಾರಣಗಳಿವೆ. ಓದುವ ನೆಪದಲ್ಲಿ ಇಲ್ಲಿ ಬೀಡು ಬಿಟ್ಟಿರುವ ವಿದೇಶಿ ವಿದ್ಯಾರ್ಥಿಗಳು ಶುದ್ಧಾನುಶುದ್ಧ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಕತ್ತಲಾವರಿಸುತ್ತಲೇ ಅಡ್ಡಾ ಹಾಕಿ ಹೊಟ್ಟೆತುಂಬಾ ಕುಡಿದು, ಗಾಂಜಾ ಸೇದಿ ತಾರಾಡುತ್ತಾ ಈ ಲಫಂಗರು ನಡೆಸುತ್ತಿರುವ ಅನಾಹುತಗಳು ಒಂದೆರಡಲ್ಲ. ಆದರೆ ಸೋಲದೇವನಹಳ್ಳಿಗೆ ಖಡಕ್ ಅಧಿಕಾರಿ ಪ್ರವೀಣ್ಬಾಬು ಇನ್ಸ್ಪೆಕ್ಟರ್ ಆಗಿ ಬಂದ ನಂತರ ವಿದೇಶಿ ಹುಡುಗ ಹುಡುಗಿಯರ ಪುಂಡಾಟಗಳಿಗೆ ಬ್ರೇಕ್ ಹಾಕಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಈ ಮೂಲಕ ಈ ಭಾಗದ ಸ್ಥಳೀಯರಿಗೆ ಮಹದುಪಕಾರ ಮಾಡಿದ ಪ್ರವೀಣ್ ಬಾಬು ಮೊನ್ನೆ ದಿನ ಯದ್ವಾತದ್ವ ವಾಹನ ಚಾಲನೆ ಮಾಡಿ ಮಹಿಳೆಯನ್ನು ಬಲಿ ತೆಗೆದುಕೊಂಡ ಸೂಡಾನ್ ವಿದ್ಯಾರ್ಥಿ ಅಹದ್ಗೂ ಸರಿಯಾಗಿಯೇ ಲಾಠಿ ರುಚಿ ತೋರಿಸಿದ್ದರು.
ದಕ್ಷಿಣಾಫ್ರಿಕಾ ಮೂಲದ ಮಂದಿ ಬೆಂಗಳೂರಲ್ಲಿ ನಡೆಸುತ್ತಿರುವ ಅಕ್ರಮ ದಂಧೆಗಳನ್ನು ಮರೆಮಾಚಲು ಸಾಧ್ಯವಿಲ್ಲ. ಈ ಘಟನೆಯನ್ನಿಟಟುಕೊಂಡು ಬೆಂಗಳೂರಲ್ಲಿ ವಾಸ ಮಾಡುತ್ತಿರುವ ದಕ್ಷಿಣಾಫ್ರಿಕಾ ಖಂಡದ ಮಂದಿ ವಿಶ್ವದ ಮಾಧ್ಯಮಗಳ ಮುಂದೆ ನಿಂತು ಅಮಾಯಕರಂತೆ ಪೋಜು ಕೊಡುತ್ತಿದ್ದಾರೆ. ಒಂದು ಮಗ್ಗುಲನ್ನೇ ಮುಂದಿಟ್ಟುಕೊಂಡು ಚರ್ಚೆ ನಡೆಸುತ್ತಿರುವ ಭಾರತೀಯ ಮಾಧ್ಯಮಗಳೇ ಬೆಂಗಳೂರಿಗರ ಅಖಂಡ ಸೈರಣೆಗೆ ಮಹಾ ಅವಮಾನ ಎಸಗುತ್ತಿದ್ದಾರೆ. ಆದರೆ ದಕ್ಷಿಣಾಫ್ರಿಕಾ ಮೂಲದ ಆಸಾಮಿಗಳು ಇಲ್ಲಿ ಎಂತೆಂಥಾ ದಂಧೆ ನಡೆಸುತ್ತಿದ್ದಾರೆ, ಅವರು ತಮ್ಮ ಖಂಡದಿಂದ ಇಲ್ಲಿಗೆ ಓದಲು ಬಂದ ವಿದ್ಯಾರ್ಥಿಗಳನ್ನೂ ಹೇಗೆಲ್ಲಾ ಅದಕ್ಕೆ ಬಳಸಿಕೊಳ್ಳುತ್ತಿದ್ದಾರೆಂಬ ಬಗ್ಗೆ ತಲಾಶ್ ನಡೆಸಿದರೆ ಆಘಾತಕಾರಿ ಮಾಹಿತಿಗಳೇ ಹೊರ ಬೀಳುತ್ತವೆ.
ವ್ಯಾಪಾರ ವಹಿವಾಟು ಸೇರಿದಂತೆ ನಾನಾ ನೆಪದಿಂದ ಇಲ್ಲಿಗೆ ಬರುವ ತಾಂಜೇನಿಯಾ ಮೂಲದವರು ವಿಸಾ ಅವಧಿ ಮುಗಿದ ಮೇಲೂ ಇಲ್ಲಿಯೇ ಝಾಂಡಾ ಊರುತ್ತಾರೆ. ಮೊದಲಿಗೆ ಬೆಂಗಳೂರಿಗೆ ಬಂದು ವಿಸಾ ಅವಧಿ ಮುಗಿದ ಮೇಲೆ ಕಾನೂನಿನ ಕಣ್ಣಿಂದ ತಪ್ಪಿಸಿಕೊಳ್ಳಲು ರಾಜ್ಯದ ನಾನಾ ಮೂಲೆಗಳಲ್ಲಿ ಚದುರಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಮಾಹಿತಿ ಕಲೆರ ಹಾಕಿದರೆ ರಾಜ್ಯಾದ್ಯಂತ ಆಫ್ರಿಕಾದ ಹದಿನೈದು ದೇಶಗಳ ಮೂವತೈದು ಸಾವಿರಕ್ಕೂ ಹೆಚ್ಚು ಮಂದಿ ವಾಸಿಸುತ್ತಿರುವ ಸಂಗತಿ ಸಾಬೀತಾಗುತ್ತದೆ. ಇದರಲ್ಲಿ ಬಹುತೇಕರು ಅಕ್ರಮ ನಿವಾಸಿಗಳು. ಇಂಥವರೆಲ್ಲ ನಾನಾ ದಂಧೆಗಳಲ್ಲಿ ತೊಡಗಿಕೊಂಡು ಪೊಲೀಸರಿಗೇ ಸವಾಲಾಗಿದ್ದಾರೆ. ಹೀಗೆ ಅಕ್ರಮವಾಗಿ ಇಲ್ಲಿ ವಾಸವಿರುವ ಅರ್ಧದಷ್ಟು ಮಂದಿ ಥರ ಥರದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರೋದನ್ನು ಪೊಲೀಸ್ ಇಲಾಖೆಯ ಫೈಲ್ಗಳೇ ಸಾಕ್ಷೀಕರಿಸುತ್ತವೆ. ಕೆಲ ಖಡಕ್ ಪಿಒಲೀಸ್ ಅಧಿಕಾರಿಗಳು ಇವರ ದಂಧೆಗಳನ್ನು ಮಟ್ಟಹಾಕಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ ಈ ಸರ್ಕಾರ ಮಾತ್ರ ಇದೀಗ ವಿದೇಶಿಗರನ್ನು ಓಲೈಸಿಕೊಳ್ಳಲು ಅಂಥಾ ದಕ್ಷ ಅಧಿಕಾರಿಗಳನ್ನೇ ಅಮಾನತುಗೊಳಿಸಿ ಜನವಿರೋಧಿಯಾಗಿ ನಡೆದುಕೊಂಡಿದೆ.
ಬೆಂಗಳೂರೆಂಬುದು ಈವತ್ತು ಬೇರೆ ಬೇರೆ ರಾಜ್ಯಗಳ ಪಾತಕಿಗಳು ಮತ್ತು ವಿಶ್ವದ ಅನೇಕ ದೇಶಗಳ ಅಕ್ರಮ ನಿವಾಸಿಗಳ ಗುಡಾಣದಂತಾಗಿದೆ. ತಾಂಜೇನಿಯಾ, ಉಗಾಂಡ, ನೈಜೀರಿಯಾ, ಕೀನ್ಯಾ, ಘಾನಾ, ಸುಡಾನ್, ಲಿಬಿಯಾ, ಇಥಿಯೋಫಿಯಾ, ಕಾಂಗೋ, ಅಲ್ಜೀರಿಯಾ, ಜಾಂಬಿಯಾ ನಮೀಬಿಯಾ ಸೇರಿದಂತೆ ಹದಿನೈದಕ್ಕೂಕ್ಕೂ ಹೆಚ್ಚು ಆಫ್ರಿಕನ್ ದೇಶಗಳ ಮೂವತ್ತೆರಡು ಸಾವಿರ ಪ್ರಜೆಗಳ ವೀಸಾ ಅವಧಿ ಮುಗಿದು ಭರ್ತಿ ಮೂರು ವರ್ಷವೇ ಕಳೆದು ಹೋಗಿವೆ. ಅವರೆಲ್ಲರೂ ರಾಜ್ಯದ ವಿವಿಧ ನಗರಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಇಂಥಾ ಅಕ್ರಮ ನಿವಾಸಿಗಳಲ್ಲಿ ಅರ್ಧದಷ್ಟು ಆಫ್ರಿಕನ್ ಪ್ರಜೆಗಳು ನಾನಾ ಸಮಾಜ ಬಾಹಿರ ದಂಧೆಗಳಲ್ಲಿ ಭಾಗಿಗಳಾಗಿದ್ದಾರೆ. ಮಾದಕ ವಸ್ತು ಕಳ್ಳ ಸಾಗಣೆ, ವೇಶ್ಯಾವಾಟಿಕೆ, ಆನ್ಲೈನ್ ವಂಚನೆ, ದರೋಡೆ, ಸುಲಿಗೆ, ನಕಲಿ ಪದವಿಗಳ ಮಾರಾಟ ದಂಧೆಯಲ್ಲಿ ಆಫ್ರಿಕನ್ ಪ್ರಜೆಗಳು ವ್ಯಾಪಕವಾಗಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು, ಮಂಗಳೂರು ಹಾಗೂ ಬೆಳಗಾವಿಯಲ್ಲೂ ಮಾದಕ ವಸ್ತು ಮಾರಾಟ ಭರ್ಜರಿಯಾಗಿಯೇ ನಡೆಯುತ್ತಿದೆ. ವಿದೇಶಕ್ಕೆ ಕಳ್ಳಸಾಗಣೆ ಮಾಡುವುದನ್ನು ಹೊರತುಪಡಿಸಿ ಒಟ್ಟಾರೆಯಾಗಿ ರಾಜ್ಯದಲ್ಲಿ ಕೋಟಿ ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಪಬ್, ಬಾರ್, ರೆಸಾರ್ಟ್ ಗಳ ಜತೆಗೆ ಶಾಲಾ-ಕಾಲೇಜುಗಳು ಡ್ರಗ್ಸ್ ಮಾಫಿಯಾದ ಟಾರ್ಗೆಟ್ ಆಗಿರುವುದರಿಂದ ಇಲ್ಲಿನ ವಹಿವಾಟು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ.
ಇದುವರೆಗೆ ರಾಜ್ಯದಲ್ಲಿ ಒಂದಷ್ಟು ಮಂದಿಯ ಮೇಲೆ ಮಾತ್ರ ದೂರು ದಾಖಲಾಗಿದೆ. ಅಂದಹಾಗೆ ತಾಂಜೇನಿಯನ್ ಖದೀಮರು ನಡೆಸುತ್ತಿರುವ ಮುಖ್ಯ ದಂಧೆ ಡ್ರಗ್ಸ್ ಡೀಲಿಂಗ್. ಇದಕ್ಕೆ ಈ ಹಲಾಲುಕೋರರು ಬಳಸಿಕೊಳ್ಳುತ್ತಿರುವುದು ಆಫ್ರಿಕಾ ಖಂಡದಿಂದ ಬಂದು ಇಲ್ಲಿನ ನಾನಾ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನೇ. ಇಂಥಾ ವಿದ್ಯಾರ್ಥಿಗಳ ಮೂಲಕ ಕಾಲೇಜುಗಳಲ್ಲಿ ಡ್ರಗ್ಸ್ ಸರಬರಾಜಾಗುವಂತೆ ನೋಡಿಕೊಳ್ಳುವ ಮಾಫಿಯಾ ಮಂದಿ ಕೈತುಂಬಾ ಕಾಸು ಕೊಡುತ್ತಾರೆ. ಈವತ್ತು ಹೆಸರಘಟ್ಟ ಸೇರಿದಂತೆ ನಾನಾ ಭಾಗಗಳಲ್ಲಿ ಆಫ್ರಿಕನ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರಲ್ಲಿ ಓಡಾಡುತ್ತಾ, ಬಾರು ಪಬ್ಬುಗಳಲ್ಲಿ ತೂರಾಡುತ್ತಾ ಹೈಫೈ ಜೀವನ ನಡೆಸುತ್ತಿರುವುದರ ಹಿಂದೆ ಇರುವುದು ಡ್ರಗ್ಸ್ ಮಾಫಿಯಾದ ಹಡಬೇ ಕಾಸೇ ಹೊರತು ಬೇರೇನಲ್ಲ!
ಬೊಮ್ಮಾಯಿ ಸರ್ಕಾರಕ್ಕೆ ಜನರ ಬಗ್ಗೆ ತುಸುವೇ ಕಾಳಜಿ ಇದ್ದಿದ್ದರೂ ಕೂಡಾ ಬೆಂಗಳೂರಲ್ಲಿ ಆಫ್ರಿಕಾ ಮೂಲದ ಜನ ಹಾಗೂ ವಿದ್ಯಾರ್ಥಿಗಳ ಕಡೆಯಿಂದ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವ ಪ್ರಯತ್ನಗಳಾಗುತ್ತಿದ್ದವು. ವಿಸಾ ಅವಧಿ ಮುಗಿದರೂ ಇಲ್ಲೇ ಮಾಡ ಬಾರದ್ದು ಮಾಡುತ್ತಿರುವವರ ಬುಡಕ್ಕೊದ್ದು ಓಡಿಸುವ ಕೆಲಸಗಳೂ ಆಗುತ್ತಿದ್ದವು. ಆದರೆ ವಿಶವಮಟ್ಟದಲ್ಲಿ ಜನಾಂಗೀಯ ದ್ವೇಷದ ಆಪಾದನೆಗೆ ಗುರಿಯಾಗಬೇಕಾದೀತೆಂಬ ಹೆದರಿಕೆಯಲ್ಲಿ ರಾಜ್ಯ ಸರ್ಕಾರ ಅಕ್ರಮ ವಾಸಿಗಳ ದಂಧೆಗಳಿಗೆ ಮತ್ತಷ್ಟು ಬಲ ತುಂಬುವ ದುಷ್ಟ ಕೆಲಸ ಮಾಡುತ್ತಾ ಬಂದಿವೆ. ಅದರ ಫಲವಾಗಿಯೇ ತಾಂಜೇನಿಯ ಮಂದಿ ಇದೀಗ ಬೆಂಗಳೂರು ಕೇಂದ್ರಿತವಾಗಿ ನಾನಾ ದಂಧೆಗಳನ್ನು ನಡೆಸುತ್ತಿದ್ದಾರೆ. ಅದೀಗ ವೇಶ್ಯಾ ದಂಧೆಯತ್ತ ಹೊರಳಿಕೊಂಡಿದೆ. ಈ ಕೂಡಲೇ ಪೊಲೀಸರು ಇಂಥಾ ಅಕ್ರಮ ಬೇರುಗಳನ್ನು ಕಿತ್ತೆಸೆಯದಿದ್ದರೆ ಬೆಂಗಳೂರಿಗೆ ಉಳಿಗಾಲವಿಲ್ಲ!