ಲೋಕಸಭಾ ಚುನಾವಣೆಯ (mp election) ಅಖಾಡ ರಂಗೇರಿಕೊಂಡಿದೆ. ಬಹುತೇಕ ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್ ಲಾಬಿ, ಆಂತರಿಕ ಜಟಾಪಟಿಗಳು ಮೇರೆಮೀರಿವೆ. ಆದರೆ, ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಹಿಡಿಯುವ ಉಮೇದಿನಲ್ಲಿರುವ ಬಿಜೆಪಿಯ ಒಡಲು ಮಾತ್ರ ಕರ್ನಾಟಕದ ಮಟ್ಟಿಗೆ ಅಕ್ಷರಶಃ ಧಗಧಗಿಸಲಾರಂಭಿಸಿದೆ. ಯಾಕೆಂದರೆ, ಎಲ್ಲರ ನಿರೀಕ್ಷೆ ಮೀರಿ ಜಗಜಟ್ಟಿಗಳಂತೆ ಮೆರೆಯುತ್ತಿದ್ದ, ಮಾತೆತ್ತಿದರೆ ಮತಗಳ ನಿಡುವೆ ಪೆಟ್ರೋಲು ಸುರಿದ ಬೆಂಕಿ ಹಚ್ಚುತ್ತಿದ್ದವರಿಗೇ ಟಿಕೇಟು ಕೈತಪ್ಪೋದು ಗ್ಯಾರೆಂಟಿ ಎಂಬಂತಾಗಿದೆ. ಸದ್ಯದ ಮಟ್ಟಿಗೆ ಮೈಸೂರು-ಕೊಡಗು ಲೋಕಸಭಾ ಕ್ರೇತ್ರದಲ್ಲಿ ಪ್ರತಾಪ್ ಸಿಂಂಹನಿಗೆ ತಬ್ಬಲಿ ಸ್ಥಿತಿಯೊಂದು ಸುತ್ತಿಕೊಂಡಿದೆ. ಒಳಸುಳಿಗಳನ್ನು ಬಲ್ಲ, ಕ್ಷೇತ್ರದೊಳಗಿನ ಪಲ್ಲಟಗಳ ಅರಿವಿರುವವರಿಗೆ ಇದು ನಿರೀಕ್ಷಿತ. ದೂರದಿಂದ ಸಿಂಹದ ಅಟಾಟೋಪಗಳನ್ನು ಕಂಡಿದ್ದವರಿಗಿದು ಅನಿರೀಕ್ಷಿತ ಆಘಾತ! ಅದೇನೇ ಗೋಳಾಡಿದರೂ, ಆನ್ ಲೈನಲ್ಲಿ ಕಣ್ಣೀರಿಟ್ಟರೂ ಪ್ರತಾಪ್ ಸಿಂಹ ಟಿಕೆಟ್ ವಂಚಿತನಾಗೋದು ಪಕ್ಕಾ. ಖುದ್ದು ಪ್ರತಾಪ್ ಇದು ರಾಜ್ಯದ ಕೆಲ ನಾಯಕರ ಷಡ್ಯಂತ್ರ ಅಂತೆಲ್ಲ ಪರೋಕ್ಷವಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ಕುದುರಿಕೊಳ್ಳುವ ಅನುಕಂಪದಲ್ಲಿ ಕಳೆದು ಹೋದ ರಾಜಕೀಯ ಕಿಮ್ಮತ್ತನ್ನು ಸಂಭಾಳಿಸಿಕೊಳ್ಳುವ ಜಾಣ ನಡೆ…
ಲೋಕಸಭಾ ಚುನಾವಣೆಯ (mp election) ಅಖಾಡ ರಂಗೇರಿಕೊಂಡಿದೆ. ಬಹುತೇಕ ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್ ಲಾಬಿ, ಆಂತರಿಕ ಜಟಾಪಟಿಗಳು ಮೇರೆಮೀರಿವೆ. ಆದರೆ, ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಹಿಡಿಯುವ…