ಶೋಧ ನ್ಯೂಸ್ ಡೆಸ್ಕ್: ಹೊತ್ತಿನ ಕೂಳಿಗಾಗಿ ಮೈ ಬಗ್ಗಿಸಿ ದುಡಿಯೋ ಅದೆಷ್ಟೋ ಜೀವಗಳ ಮೇಲೆ ಉಳ್ಳವರು ಪ್ರಹಾರ ನಡೆಸುವಂಥಾ ಘಟನಾವಳಿಗಳು ಆಗಾಗ ನಡೆಯುತ್ತಿರುತ್ತವೆ. ಇಂಥಾ ಬಡಪಾಯಿ ಜೀವಗಳ ಮೇಲೆ ಆಕ್ರಮಣ ನಡೆಸಿ, ಹಿಂಸಿಸಿದರೆ ಖದೀಮರಿಗೆ ಅದೆಂಥಾ ಸುಖ ಸಿಗುತ್ತದೋ ಗೊತ್ತಿಲ್ಲ. ಅಂತೂ ಕಷ್ಟಪಟ್ಟು ದುಡಿದು ತಿನ್ನುವವರನ್ನು ಪರಿ ಪರಿಯಾಗಿ ಕಾಡುವಂಥಾ ವಿಕೃತಿ ಎಲ್ಲೆಡೆ ಮೇಳೈಸಿಕೊಂಡಿದೆ. ಇಂಥಾದ್ದೇ ಒಂದು ಘಟನೆಯೀಗ ಉತ್ತರ ಪ್ರದೇಶದಲ್ಲಿಒ ನಡೆದು ಹೋಗಿದೆ. ಹರಿದ ನೋಟನ್ನು ತೆಗೆದುಕೊಳ್ಳಲು ನಿ೮ರಾಕರಿಸಿದ್ದ ಫಿಜ್ಜಾ ಡೆಲಿವರಿ ಹುಡುಗನ ಮೇಲೆ ನಶೆಯೇರಿಸಿಕೊಂಡಿದ್ದ ಗ್ಯಾಂಗೊಂದು ಗುಂಡು ಹಾರಿಸಿಬಿಟ್ಟಿದೆ.
ಮೊನ್ನೆ ದಿನ ಎಂದಿನಂತೆ ಶಹಜಹಾನ್ ಪುರದ ಆ ಫಿಜ್ಜಾ ಡೆಲಿವರಿ ಬಾಯ್ ಕಾರ್ಯಾರಂಭ ಮಾಡಿದ್ದಾನೆ. ಶಹಜಹಾನ್ಪುರ ಆತನ ಪಾಲಿಗೆ ಚಿರಪರಿಚಿತ. ಸರಿರಾತ್ರಿಯ ಹೊತ್ತಾದರೂ ಕೂಡಾ ಯಾವುದೇ ಅಂಜಿಕೆ, ಹೆದರಿಕೆ ಇಲ್ಲದೆ ಆತ ಫಿಜ್ಜಾ ಡೆಲಿವರಿ ಮಾಡುತ್ತಿದ್ದ. ಹೀಗಿರುವಾಗಲೇ ಮೊನ್ನೆ ದಿನ ಆತನಿಗೊಂದು ಆರ್ಡರ್ ಬಂದಿದೆ. ಹೇಳಿದ ಸಮಯಕ್ಕೆ ಸರಿಯಾಗಿ ಆ ಹುಡುಗ ಡೆಲಿವರಿ ಕೊಟ್ಟಿದ್ದಾನೆ. ಈ ಹಂತದಲ್ಲಿ ಫಿಜ್ಜಾ ತೆಗೆದುಕೊಂಡ ಗ್ಯಾಂಡು ಹರಿದು ಹೋದ ಇನ್ನೂರರ ನೋಟು ಕೊಟ್ಟು ಸಾಗಹಾಕಲು ನೋಡಿದೆ. ಪಾಪದ ಹುಡುಗ ಅದನ್ನು ಬದಲಾಗಿಸಿ ಕೊಡುವಂತೆ ಕೇಳಿಕೊಂಡಿದ್ದಾನೆ.
ಅದಾಗಲೇ ಎಣ್ಣೆಯ ನಶೆಯಲ್ಲಿದ್ದ ಆ ಗ್ಯಾಂಗು ಈ ಹುಡುಗನನ್ನು ಆಟವಾಡಿಸಿ ಮಜಾ ನೋಡುವ ವಿಕೃತಿಗಿಳಿದಿದೆ. ಆ ಹರಿದ ನೋಟು ತೆಗೆದುಕೊಂಡರೆ, ಅದನ್ನು ಯಾರೂ ತೆಗೆದುಕೊಳ್ಳೋದಿಲ್ಲ. ಒಂದು ಆರ್ಡರಿಗೆ ಹತ್ತೋ ಇಪ್ಪತ್ತೋ ಸಿಗುವಾಗ, ಏಕಾಏಕಿ ಇನ್ನೂರು ರೂಪಾಯಿ ನಷ್ಟವಾದರೆ ಆತ ಏನು ಮಾಡಲು ಸಾಧ್ಯ? ಇದನ್ನು ಪರಿ ಪರಿಯಾಗಿ ಹೇಳಿದರೂ ಆ ಗ್ಯಾಂಗಿನ ಮನಸು ಕರಗಲಿಲ್ಲ. ಯಾವಾಗ ಹುಡುಗ ನೋಟು ತೆಗೆದುಕೊಳ್ಳಲು ನಿರಾಕರಿಸಿದನೋ, ಆಗ ಗ್ಯಾಂಗಿನಲ್ಲಿದ್ದ ಒಬ್ಬ ಗುಂಡು ಹಾರಿಸಿದ್ದಾನೆ. ಚಿಕ್ಕಪುಟ್ಟ ಗಾಯಗಳೊಂದಿಗೆ ಹುಡುಗ ಹೇಗೋ ಬಚಾವಾಗಿದ್ದಾನೆ. ಈ ಸಂಬಂಧ ದೂರು ದಾಖಲಾಗಿ, ಪೊಲೀಸರು ಆರೋಪಿಗಳ ನನು ಹೆಡೆಮುರಿ ಕಟ್ಟಿದ್ದಾರೆ. ಅವರಿಂದ ಲೈಸೆನ್ಸ್ ಇಲ್ಲದ ವಿದೇಶಿ ನಿರ್ಮಿತ ರಿವಾಲ್ವರ್ ಅನ್ನು ವಶಪಡಿಸಿಕೊಂಡಿದ್ದಾರೆ.