Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಕಡಲ ತೀರದ ಭಾರ್ಗವ ಚಿತ್ರ ತೆರೆಗಾಣಲು ಕ್ಷಣಗಣನೆ ಆರಂಭವಾಗಿದೆ. ಒಂದಿಡೀ ಚಿತ್ರತಂಡದ ಪರಿಶ್ರಮ ಸಾರ್ಥಕಗೊಳ್ಳುವ ಘಳಿಗೆಯೂ ಹತ್ತಿರಾಗುತ್ತಿದೆ. ಈ ಹೊತ್ತಿನಲ್ಲಿ ಕಡಲ ತೀರದ ಭಾರ್ಗವನ ಒಡಲಲ್ಲಿರಬಹುದಾದ ಕಥೆಗಳು, ಆ ಬಿಂದುವಿನಿಂದ ಗರಿಗೆದರಿಕೊಳ್ಳಲಿರೋ ಪಾತ್ರಗಳ ಸುತ್ತಾ ಒಂದಷ್ಟು ಚರ್ಚೆಗಳಾಗುತ್ತಿವೆ. ಐದು ಬಹುಮುಖ್ಯ ಪಾತ್ರಗಳ ಸುತ್ತ ಸುತ್ತುವ, ರೋಚಕ ತಿರುವುಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ರಂಗಭೂಮಿಯಲ್ಲಿ ಹದಗೊಂಡಿರುವ ಅಪರೂಪದ ಪ್ರತಿಭೆ ರಾಘವ್ ನಾಗರಾಜ್ ಕೂಡಾ ಒಂದು ಪಾತ್ರವಾಗಿದ್ದಾರೆ. ಆ ಪಾತ್ರವೇ ತನ್ನ ವೃತ್ತಿ ಬದುಕಿಗೆ ಹೊಸಾ ದಿಕ್ಕು ತೋರಲಿದೆಯೆಂಬಂಥಾ ಗಾಢ ನಂಬುಗೆಯೂ ಅವರಲ್ಲಿದೆ. ಇದು ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈಗಾಗಲೇ ಟೀಸರ್, ಟ್ರೈಲರ್ ಮೂಲಕ ಇದರ ಕಸುವೇನೆಂಬುದರ ಸ್ಪಷ್ಟ ಸೂಚನೆಗಳು ಸಿಕ್ಕಿವೆ. ಅದರ ಮೂಲಕವೇ ಒಂದಷ್ಟು ಪಾತ್ರಗಳ ಚಹರೆಗಳೂ ಗೋಚರಿಸಿವೆ. ಅದರಲ್ಲಿ ರಾಘವ್ ನಾಗರಾಜ್ ನಟಿಸಿರುವ ಪಾತ್ರವೂ ಸೇರಿಕೊಂಡಿದೆ. ಈಗಾಗಲೇ ಹಲವಾರು ಸೀರಿಯಲ್ಲುಗಳಲ್ಲಿ ನಟಿಸಿ, ನಾಯಕರಾಗಿಯೂ ನೆಲೆ ಕಂಡುಕೊಳ್ಳುವ ಸನ್ನಾಹದಲ್ಲಿರುವವರು ರಾಘವ್. ಸಾಮಾನ್ಯವಾಗಿ, ರಂಗಭೂಮಿಯ ಹಿನ್ನೆಲೆಯಿಂದ ಬಂದವರಿಗೆ ಎಂಥಾ ಪಾತ್ರವನ್ನಾದರೂ…

Read More

ಒಂದು ಕಡೆಯಿಂದ ಪ್ಯಾನಿಂಡಿಯಾ ಸಿನಿಮಾಗಳ ಹಂಗಾಮಾ ಚಾಲ್ತಿಯಲ್ಲಿರುವಾಗಲೇ, ಮತ್ತೊಂದು ದಿಕ್ಕಿನಿಂದ ಹಲವು ಬಗೆಯ ಪ್ರಯತ್ನಗಳು ಚಾಲ್ತಿಯಲ್ಲಿವೆ. ಅಂಥಾ ಪ್ರಯತ್ನಗಳ ಸಾಲಿನಲ್ಲಿ ನೆಲ ಮೂಲದ ಕಥೆಗಳು, ನಾನಾ ಭಾಗಗಳಲ್ಲಿ ಜರುಗಿದ್ದ ಸತ್ಯ ಘಟನೆಗಳೂ ಕೂಡಾ ಸಿನಿಮಾ ಫ್ರೇಮಿನಲ್ಲಿ ನಸುನಗಲಾರಂಭಿಸಿವೆ. ಅಂಥಾ ಸಿನಿಮಾಗಳ ಪೈಕಿ ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ `1 ರಾಬರಿ ಕಥೆ’ಯೂ ಸೇರಿಕೊಂಡಿದೆ. ಶೀರ್ಷಿಕೆಯಲ್ಲಿಯೇ ಕಥೆಯ ಜೀವಾಳದ ಸುಳಿವನ್ನು ಅಡಗಿಸಿಕೊಂಡಿರುವ ಈ ಸಿನಿಮಾದ ಜಬರ್ಧಸ್ತಾದ ವೀಡಿಯೋ ಸಾಂಗ್ ಒಂದೀಗ ಬಿಡುಗಡೆಗೊಂಡಿದೆ! ಈ ಲೂಟಿ ಸಾಂಗ್ ದಿವ್ಯ ರಾಮಚಂದ್ರ ಮತ್ತು ಹರ್ಷ ಉಪ್ಪಾರರ ಧ್ವನಿಯಲ್ಲಿ ಮೂಡಿ ಬಂದಿದೆ. ಈ ಸಿನಿಮಾದ ನಿರ್ದೇಶಕರಾದ ಗೋಪಾಲ್ ಹಳ್ಳೇರ್ ಹೊನ್ನಾವರ ಸದರಿ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಅದು ನಾಟಿ ಶೈಲಿಯ ಶ್ರೀವತ್ಸರ ಸಂಗೀತ ಸ್ಪರ್ಶದೊಂದಿಗೆ ಪ್ರೇಕ್ಷಕರನ್ನು ಮುಟ್ಟಿದೆ. ಒಂದಷ್ಟು ಒಳ್ಳೆ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿರುವ ಈ ಹಾಡಿನ ಮೂಲಕ 1 ರಾಬರಿ ಕಥೆಯತ್ತ ಪ್ರೇಕ್ಷಕರ ಚಿತ್ತ ಕೀಲಿಸಿಕೊಂಡಿದೆ. ನಾಯಕ ನಾಯಕಿಯರಾದ ರಣಧೀರ್ ಗೌಡ ಮತ್ತು ರಿಷ್ವ್ವಿ ಭಟ್ ಮಾದಕವಾಗಿ ಹೆಜ್ಜೆ…

Read More

ಯಾವುದೋ ಘಳಿಗೆಯಲ್ಲಿ ಹೆಗಲೇರಿಕೊಂಡು, ಸಂಪೂರ್ಣವಾಗಿ ಆವರಿಸಕೊಳ್ಳುವ ಚಟಗಳು ಕೊಂಚ ಯಾಮಾರಿದರೂ ಜೀವಕ್ಕೇ ಕಂಟಕವಾಗಿ ಬಿಡುತ್ತವೆ. ಮೊದ ಮೊದಲು ಯಾವುದೋ ದುಃಖಕ್ಕೆ, ಹಳವಂಡಕ್ಕೆ, ಹತಾಶೆಗೆ ಸಾಥ್ ಕೊಡುವಂತೆ ಕಾಣಿಸೋ ಇಂಥಾ ಚಟಗಳೇ ಬದುಕನ್ನ ಆಪೋಶನ ತೆಗೆದುಕೊಂಡ ದಂಡಿ ದಂಡಿ ಉದಾಹರಣೆಗಳಿದ್ದಾವೆ. ಅದರಲ್ಲಿಯೂ ನಶೆಯ ಉತ್ತುಂಗದ ಸ್ಥಿತಿ ತಲುಪಿಸೋ ಗಾಂಜಾ ಗುಂಗು ಹತ್ತಿಕೊಂಡಂರಂತೂ ಬದುಕು ಲಯ ತಪ್ಪಿತೆಂದೇ ಅರ್ಥ. ಹಾಗೆ ಗಾಂಜಾ ನಶೆಯ ನಂಟು ಬೆಳೆಸಿಕೊಂಡವರೆಲ್ಲ ಬೆಚ್ಚಿ ಬೀಳುವಂಥಾ ಸಂಶೋಧನಾ ವರದಿಯೊಂದೀಗ ಜಾಹೀರಾಗಿದೆ! ಇಂಥಾದ್ದೊಂದು ವರದಿಯನ್ನು ಬಹುಕಾಲದ ಸಂಶೋಧನೆಯ ನಂತರ ಹೊರಗೆಡವಿರೋದು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ತಂಡ. ಇದರ ನೆರಳಿನಲ್ಲಿ ಹತ್ತಾರು ಮಂದಿ ತಜ್ಞರು ವರ್ಷಾಂತರಗಳ ಕಾಲ ವಿಸ್ತøತವಾದ ಅಧ್ಯಯನ ನಡೆಸಿದ್ದರು. ಆ ಅಧ್ಯಯನಗಳ ಕೇಂದ್ರ ಬಿಂದುವಾಗಿದ್ದದ್ದು ಗಾಂಜಾ ಸೇವನೆ ಮನುಷ್ಯನ ದೇಹದ ಮೇಲೆ ಬೀರುವಂಥಾ ವ್ಯತಿರಿಕ್ತ ಪರಿಣಾಮಗಳ ಕುರಿತಾಗಿತ್ತು. ಇದರ ಫಲವಾಗಿಯೇ ಅವರು ಭೀಕರ ಸತ್ಯವೊಂದನ್ನು ಕಂಡುಕೊಂಡಿದ್ದರೆ. ಅದರ ಪ್ರಕಾರವಾಗಿ ಹೇಳುವುದಾದರೆ, ನಿಯಮಿತವಾಗಿ ಗಾಂಜಾ ಸೇವಿಸೋದರಿಂದ ನಾನಾ ಅನಾರೋಗ್ಯಗಳು ಉಂಟಾಗುತ್ತವೆ. ಅಂಥವರು…

Read More

ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕನ್ನಡ ಚಿತ್ರರಂಗದ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವವರು ರಾಜವರ್ಧನ್. ಪ್ರಸಿದ್ಧ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರರಾದ ರಾಜವರ್ಧನ್, ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿರುವುದು ತನ್ನೊಳಗಿನ ನಟನೆಯ ಕಸುವಿನಿಂದಲೇ. ತಾನು ನಟಿಸುವ ಒಂದೊಂದು ಸಿನಿಮಾಗಳೂ ಸಂಚಲನ ಸೃಷ್ಟಿಸುವಂತಿರಬೇಕು, ಚಾಲೆಂಜಿಂಗ್ ಅನ್ನುಸುವಂಥಾ ಪಾತ್ರಗಳೇ ಬೇಕೆಂಬ ಅಪರೂಪದ ಮನಃಸ್ಥಿತಿಯನ್ನವರು ಕಾಪಿಟ್ಟುಕೊಂಡಿದ್ದಾರೆ. ಸದ್ಯಕ್ಕೆ ಏಕಕಾಲದಲ್ಲಿಯೇ ಮೂರು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿರುವ ರಾಜವರ್ಧನ್, ಅದರಲ್ಲೊಂದಾಗಿರುವ `ಪ್ರಣಯಂ’ ಮೂಲಕ ಸದ್ದು ಮಾಡಲಾರಂಭಿಸಿದ್ದಾರೆ. ಇದೀಗ ಆ ಸಿನಿಮಾದ ಟೀಸರ್ ಲಾಂಚ್ ಆಗಿದೆ. ಟೀಸರ್, ಟ್ರೈಲರ್ ಮೂಲಕ ಒಂದಿಡೀ ಸಿನಿಮಾದ ಸಾರವನ್ನು ಕುತೂಹಲ ಹರಳುಗಟ್ಟುವಂತೆ ಕಟ್ಟಿ ಕೊಡೋದೊಂದು ಸಾಹಸ. ಅದನ್ನು ಸಾಧ್ಯವಾಗಿಸಿಕೊಂಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿವೆ. ಆ ಯಾದಿಯಲ್ಲಿ `ಪ್ರಣಯಂ’ ಕೂಡಾ ಸೇರಿಕೊಳ್ಳುವ ಸೂಚನೆಗಳು ದಟ್ಟವಾಗಿಯೇ ಗೋಚರಿಸಲಾರಂಭಿಸಿವೆ. ನಿಖರವಾಗಿ ಹೇಳಬೇಕೆಂದರೆ, ಈ ಟೀಸರ್ ನೋಡುಗರಲ್ಲಿ ರೋಚಕ ರೋಮಾಂಚನ ಮೂಡಿಸಿದೆ. ಶೀರ್ಷಿಕೆ ಕೇಳಿದಾಕ್ಷಣವೇ ಇದೊಂದು ಪ್ರೇಮ ಕಥೆಯ ಚಿತ್ರವೆಂಬ ಸುಳಿವು ಸಿಕ್ಕಿ ಹೋಗುತ್ತೆ. ಆದರೆ ಈ ಟೀಸರ್…

Read More

ಅದೆಂಥಾದ್ದೇ ಪರಿಸ್ಥಿತಿ ಇದ್ದರೂ ಒಂದೊಳ್ಳೆ ಚಿತ್ರಕ್ಕೆ ಸಾಥ್ ಕೊಟ್ಟೇ ಕೊಡುತ್ತಾರೆಂಬುದು ಮತ್ತೊಮ್ಮೆ ಸಾಬೀತಾಗಿದೆ; ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ `ಹೊಂದಿಸಿ ಬರೆಯಿರಿ’ ಚಿತ್ರದ ಗೆಲುವಿನ ಮೂಲಕ. ಈ ಹಿಂದೆಯೂ ಕೂಡಾ ಪರಭಾಷಾ ಚಿತ್ರಗಳ ಹಾವಳಿ ಮತ್ತು ದೊಡ್ಡ ಸಿನಿಮಾಗಳ ಭರಾಟೆಗಳ ನಡುವೆಯೂ ಪ್ರೇಕ್ಷಕರು ಭಿನ್ನ ಕಥಾನಕದ ಸಿನಿಮಾಗಳನ್ನು ಬದುಕಿಸಿದ ಉದಾಹರಣೆಗಳಿದ್ದಾವೆ. ಆ ಸಾಲಿಗೀಗ ಹೊಂದಿಸಿ ಬರೆಯಿರಿ ಚಿತ್ರವೂ ಸೇರ್ಪಡೆಗೊಂಡಿದೆ. ಬಿಡುಗಡೆಯಾದ ಮೊದಲ ವಾರದಲ್ಲಿ ಬಂದೊದಗಿದ್ದ ಸ್ಥಿತಿ ಕಂಡು ಖುದ್ದು ಚಿತ್ರತಂಡ ಕಂಗಾಲಾಗಿತ್ತು. ಆದರೆ, ನಂತರದಲ್ಲಿ ಸಿನಿಮಾ ನೋಡಿದ ಮಂದಿಯ ಸದಭಿಪ್ರಾಯಗಳು ಬಾಯಿಂದ ಬಾಯಿಗೆ ಹಬ್ಬಿಕೊಂಡು, ಮನಸುಗಳನ್ನು ಆವರಿಸಿಕೊಂಡಿವೆ. ಅದುವೇ ಚಿತ್ರಮಂದಿರಗಳನ್ನು ತುಂಬಿಸಿ, ಇದೀಗ ಹೊಂದಿಸಿ ಬರೆಯಿರಿ ಚಿತ್ರ ಇಪ್ಪತೈದನೇ ದಿನದ ಸನಿಹದಲ್ಲಿದೆ! ಫೆಬ್ರವರಿ ಹತ್ತರಂದು ಹೊಂದಿಸಿ ಬರೆಯಿರಿ ಬಿಡುಗಡೆಗೊಂಡಿತ್ತು. ಆ ಘಳಿಗೆಯಲ್ಲಿ ಚಿತ್ರತಂಡದಲ್ಲಿ ಬೇರೆಯದ್ದೇ ಥರದ ಭರವಸೆ ಇತ್ತು. ಯಾಕೆಂದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ತುಂಬಾನೇ ಹೊಸತೆನ್ನಿಸುವಂಥಾ, ಪ್ರಯೋಗಾತ್ಮಕ ಹಾದಿಯಲ್ಲಿ ಚಿತ್ರತಂಡ ಪ್ರಚಾರ ನಡೆಸಿತ್ತು. ಅದರಲ್ಲಿ ಅಡಗಿದ್ದ ಕ್ರಿಯಾಶೀಲತೆಯೂ ಬೆರಗು ಮೂಡಿಸಿದ್ದದ್ದು ಸುಳ್ಳಲ್ಲ.…

Read More

ಸಿನಿಮಾ ಒಂದಕ್ಕೆ ಹೇಗೆಲ್ಲ ಪ್ರಚಾರ ಕೊಡಿಸಬಹುದೆಂಬುದಕ್ಕೂ, ಹಾಗೆ ಸಿಕ್ಕ ಪ್ರಚಾರದ ಶಿಖರವೇರಿ ನಿಂತ ಚಿತ್ರವೊಂದನ್ನು ಹೇಗೆ ಸೋಲಿನ ಪ್ರಪಾತಕ್ಕೆ ದೊಪ್ಪನೆ ಕೆಡವಬಹುದೆಂಬುದಕ್ಕೂ ಸಜೀವ ಉದಾಹರಣೆಯಂತಿರುವವರು ನಿರ್ದೇಶಕ ಜೋಗಿ ಪ್ರೇಮ್. ಈತನ ಪ್ರಚಾರದ ವರಸೆ, ಆರಂಭದಲ್ಲೇ ಕೊಡುವ ಬಿಟ್ಟಿ ಪೋಸುಗಳ ಬಗ್ಗೆ ಸಾಕಷ್ಟು ಮೂದಲಿಕೆಗಳೆದುರಾಗಿವೆ. ಕಡೆಗೂ ಅದೆಲ್ಲದರಿಂದಾಗಿ ಪ್ರೇಮ್ಸ್ ಕೊಂಚ ಬದಲಾದಂತಿದ್ದರು. ಈ ಹಿಂದೆ ಏಕ್ ಲವ್ ಯಾ ಸಂದರ್ಭದಲ್ಲಿ ಅಂಥಾದ್ದೊಂದು ಬದಲಾವಣೆ ಪ್ರೇಮ್ ವ್ಯಕ್ತಿತ್ವದಲ್ಲಿ ಸ್ಪಷ್ಟವಾಗಿಯೇ ಕಾಣಿಸಿಕೊಂಡಿತ್ತು. ಇದೀಗ ಹೊಸಾ ಚಿತ್ರದ ಭೂಮಿಕೆಯಲ್ಲಿ ಮತ್ತದೇ ಹಳೇ ಪ್ರೇಮ್ ಅವತರಿಸಿಬಿಟ್ಟಂತಿದೆ! ಪ್ರೇಮ್ ಕೆಡಿ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿರೋದು ಮತ್ತು ಧ್ರುವ ಸರ್ಜಾ ಅದರ ನಾಯಕನಾಗಿ ನಟಿಸುತ್ತಿರೋದು ಗೊತ್ತಿರುವ ವಿಚಾ. ಸದ್ಯಕ್ಕೆ ಧ್ರುವ ಮಾರ್ಟಿನ್ ಪ್ರಮೋಷನ್ನಿನಲ್ಲಿ ಬ್ಯುಸಿಯಾಗಿರೋದರಿಂದ ಸದ್ಯಕ್ಕೆ ಕೇಡಿ ಶುರುವಾಗೋ ಲಕ್ಷಣಗಳಿಲ್ಲ. ಆದರೆ ಆ ಸಿನಿಮಾ ಸೃಷ್ಟಿಸುತ್ತಿರುವ ಹೈಪುಗಳಿಗೇನೂ ಕಡಿಮೆಯಿಲ್ಲ. ಎಂದಿನಂತ ತಾರಾಗಣಕ್ಕೆ ಘಟಾನುಘಟಿ ನಟ ನಟಿಯರ ಹೆಸರನ್ನು ಹರಿಯ ಬಿಡುವ ಮೂಲಕವೇ ಪ್ರೇಮ್ ಕೇಡಿಗೆ ಪ್ರಚಾರ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ.…

Read More

ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಬಾಲ ನಟಿಯರಾಗಿ ನಟಿಸಿದ್ದವರನೇಕರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮತ್ತೆ ಕೆಲವರು ಪತ್ತೆಯೇ ಇಲ್ಲದಂತೆ ಎಲ್ಲೆಲ್ಲೋ ಕಳೆದು ಹೋಗಿದ್ದಾರೆ. ಹಾಗೆ ಬಾಲ ನಟಿಯಾಗಿ ಎಂಟ್ರಿ ಕೊಟ್ಟು, ಚಾಲ್ತಿಯಲ್ಲಿರುವವರ ಪೈಕಿ ತಮಿಳಿನಲ್ಲಿ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಅನಿಕಾ ಸುರೇಂದ್ರನ್ ಕೂಡಾ ಸೇರಿಕೊಳ್ಳುತ್ತಾಳೆ. ಬಹುಶಃ ಅನಿಕಾ ಸುರೇಂದ್ರನ್ ಅಂದರೆ ಬೇರೆ ಭಾಷೆಯ ಮಂದಿಗೆ ಗುರುತು ಹತ್ತುವುದು ತುಸು ಕಷ್ಟವೇನೋ… ಆದರೆ, ಅಜಿತ್ ನಟನೆಯ ವಿಶ್ವಾಸಂ ಚಿತ್ರದಲ್ಲಿ ಅವರ ಮಗಳಾಗಿ ನಟಿಸಿದ್ದ ಪುಟ್ಟ ಹುಡುಗಿ ಅಂದರೆ ಎಲ್ಲರಿಗೂ ಗುರುತು ಹತ್ತೀತು! ಈ ಹುಡುಗಿಯ ಬಗ್ಗೆ ಈಗ ಪ್ರಸ್ತಾಪಿಸುತ್ತಿರೋದಕ್ಕೂ ಕಾರಣವಿದೆ. ಅನಿಕಾ ಸುರೇಂದ್ರನ್ ಈಗ ದೊಡ್ಡವಳಾಗಿದ್ದಾಳೆ. ಸಿನಿಮಾ ನಾಯಕಿಯಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಓ ಮೈ ಡಾರ್ಲಿಂಗ್ ಎಂಬ ಪ್ರೇಮ ಕಥೆಯಾಧಾರಿತ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಳೆ. ಈ ಮೊದಲ ಚಿತ್ರದಲ್ಲಿಯೇ ಮೈ ಚಳಿ ಬಿಟ್ಟು ಕಿಸ್ಸಿಂಗ್ ಸೀನ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿದ್ದಾಳೆ. ಈ ಕಿಸ್ಸಿಂಗ್ ಸೀನ್ ಬಗ್ಗೆ…

Read More

ಅದೇನು ದುರಂತವೋ ಗೊತ್ತಿಲ್ಲ; ಕೆಲ ನಟರು ಎಲ್ಲ ರೀತಿಯಿಂದಲೂ ಅರ್ಹರಾಗಿದ್ದರೂ ಕೂಡಾ ಒಂದು ಬ್ರೇಕ್‍ಗಾಗಿ ವರ್ಷಗಟ್ಟಲೆ ಸೈಕಲ್ಲು ಹೊಡೆದು ಸರ್ಕಸ್ಸು ನಡೆಸಬೇಕಾಗುತ್ತೆ. ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳೋದಾದರೆ, ಈ ಮಾತಿಗೆ ಉದಾಹರಣೆಯಾಗಿ ನಿಲ್ಲಬಲ್ಲ ನಟರದ್ದೊಂದು ದಂಡೇ ಇದೆ. ಆ ಸಾಲಿಗೆ ಇತ್ತೀಚಿನ ಸೇರ್ಪಡೆಯಂತಿದ್ದ ಹುಡುಗ ರಾಕೇಶ್ ಅಡಿಗ. ಚುರುಕು ಸ್ವಭಾವದ, ಪ್ರತಿಭಾವಂತನೂ ಆಗಿರುವ ರಾಕೇಶ್ ಈವರೆಗೂ ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾನಾದರೂ ಹೇಳಿಕೊಳ್ಳುವಂಥಾ ಗೆಲುವು ಕೈ ಹಿಡಿಯಲಿಲ್ಲ. ಇಂಥಾ ವಾತಾವರಣದಲ್ಲಿಯೇ ರಾಕೇಶ್ ಏಕಾಏಕಿ ಕಾಕ್ರೋಚ್ ಅವತಾರವೆತ್ತಿದ್ದಾನೆ! ಈ ಬಾರಿಯ ಬಿಗ್‍ಬಾಸ್‍ನ ಓಟಿಟಿ ಅವತರಣಿಕೆಯಲ್ಲಿ ಸ್ಪರ್ಧಿಯಾಗಿದ್ದಾತ ರಾಕೇಶ್ ಅಡಿಗ. ಸೋನು ಗೌಡಳ ಹಿಂದೆ ಸುತ್ತಿ ರಂಕಲು ಮಾಡಿಕೊಂಡರೂ ಒಂದಷ್ಟು ಚೆಂದಗೆ ಆಡಿದ್ದ ಈತ ಸೀಜನ್9ಗೂ ಪಾದಾರ್ಪಣೆ ಮಾಡಿದ್ದ. ಅಲ್ಲಿಯೂ ಸ್ತ್ರೀ ಸೌಖ್ಯದ ಹಂಬಲದಲ್ಲಿ ಅಡ್ಡಾಡುತ್ತಾ, ಪ್ರೇಕ್ಷಕರಿಂದ ಒಂದಷ್ಟು ಉಗಿಸಿಕೊಂಡಿದ್ದ ರಾಕೇಶ್ ಅಡಿಗ, ಆಟದ ವಿಚಾರಕ್ಕೆ ಬಂದಾಗ ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದ. ಆ ದೆಸೆಯಿಂದಲೇ ಫೈನಲ್ ವರೆಗೂ ತಲುಪಿಕೊಂಡು ರನ್ನರ್ ಅಪ್ ಆಗಿ ಹೊರಬಿದ್ದಿದ್ದ. ಹಾಗೆ…

Read More

ಕೊರೋನಾ ಮಾರಿ ವಕ್ಕರಿಸಿಕೊಂಡ ನಂತರದಲ್ಲಿ ಅದೇಕೋ ಸಾವೆಂಬುದು ಮತ್ತಷ್ಟು ಸಲೀಸಾದಂತಿದೆ. ಸಣ್ಣಪುಟ್ಟ ಖಾಯಿಲೆ ಕಸಾಲೆಗಳೂ ಭೀಕರ ಸ್ವರೂಪ ಪಡೆದು ಜೀವ ಬಲಿ ಪಡೆಯುತ್ತಿವೆ. ನಲವತ್ತರಾಚೆ ಹೊಂಚಿ ಕೂರುತ್ತಿದ್ದ ಸಾವೆಂಬುದೀಗ ಮೂವತ್ತರ ಆಸುಪಾಸಿನಲ್ಲೇ ಗಸ್ತು ಹೊಡೆಯಲು ಶುರುವಿಟ್ಟಿದೆ. ತೀರಾ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಅಸುನೀಗಿದ ಪುನೀತ್ ಅಗಲಿಕೆ ಜೀವ ಹಿಂಡುತ್ತಿರುವಾಗಲೇ, ಅದನ್ನು ಹೋಲುವ ಮತ್ತೊಂದಷ್ಟು ಸಾವುಗಳು ಸಂಭವಿಸುತ್ತಿವೆ. ಇದೀಗ ಆ ಸೂತಕದ ಛಾಯೆ ಮಲೆಯಾಳಂ ಚಿತ್ರರಂಗಕ್ಕೆ ಕವುಚಿಕೊಂಡಿದೆ! ಕಳೆದ ಒಂದಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದುಕೊಂಡು, ಇದೀಗ ತಾನೇ ಸ್ವತಂತ್ರ ನಿರ್ದೇಶಕರಾಗಿದ್ದವರು ಜೋಸೆಫ್ ಮನು. ಪಾದರಸದಂತಿದ್ದ ಮೂವತ್ತೊಂದರ ಪ್ರಾಯದ ಜೋಸೆಫ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಾಕಷ್ಟು ಭರವಸೆ ಮೂಡಿಸಿದ್ದ ಈ ಯುವ ನಟನ ಅಕಾಲಿಕ ನಿರ್ಗಮನದಿಂದ ಮಾಲಿವುಡ್‍ಗೆ ಮಂಕು ಕವಿದಂತಾಗಿದೆ. ಅಷ್ಟಕ್ಕೂ ಜೋಸೆಫ್‍ರದ್ದು ಸಾಯುವ ವಯಸ್ಸೇನಲ್ಲ. ಆದರೆ ನ್ಯುಮೋನಿಯಾ ಸಮಸ್ಯೆ ಎಂಬುದು ಆತನನ್ನು ಹೈರಾಣು ಮಾಡಿತ್ತು. ಮೊನ್ನೆದಿನ ಜೋಸೆಫ್ ಆಸ್ಪತ್ರೆ ಪಾಲಾಗಿ ಪರಿಸ್ಥಿತಿ ಬಿಗಡಾಯಿಸಿದ್ದರೂ ಕೂಡಾ ಇಂಥಾ ದುರ್ವಾರ್ತೆಯನ್ನು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಆದರೆ, ಎಲ್ಲ ಹರಕೆ…

Read More

ಸದ್ಯದ ಮಟ್ಟಿಗೆ ಎಲ್ಲಾ ವರ್ಗದ ಪ್ರೇಕ್ಷಕರೊಳಗೂ ಕೌತುಕದ ಕಂದೀಲೊಂದನ್ನು ಆರದಂತೆ ಕಾಪಿಟ್ಟುಕೊಂಡಿರುವ ಚಿತ್ರ `ಕಡಲ ತೀರದ ಭಾರ್ಗವ’. ಸಾಮಾನ್ಯವಾಗಿ ಯಶಸ್ವೀ ಸಿನಿಮಾಗಳದ್ದೊಂದು ಅನೂಹ್ಯವಾದ ಹೆಜ್ಜೆ ಜಾಡಿರುತ್ತೆ. ಈ ಸಿನಿಮಾ ಸಾಗಿ ಬಂದ ಹಾದಿಯ ತುಂಬೆಲ್ಲ ಅದರ ಛಾಯೆಗಳು ದಟ್ಟವಾಗಿಯೇ ಗೋಚರಿಸುತ್ತವೆ. ಟೀಸರ್, ಟ್ರೈಲರ್ ಮೂಲಕವೇ ಕಡಲ ತೀರದ ಭಾರ್ಗವ ಹುಟ್ಟು ಹಾಕಿರೋ ಕ್ರೇಜ್ ಇದೆಯಲ್ಲಾ? ಅದು ಎಂಥವರನ್ನೂ ಬೆರಗಾಗಿಸುವಂತಿದೆ. ಈ ಎಲ್ಲ ಪಲ್ಲಟಗಳ ಹಿಂದೆ ಒಂದಿಡೀ ಚಿತ್ರತಂಡದ ಶ್ರಮವಿದೆ. ಅದರಲ್ಲಿಯೂ ವಿಶೇಷವಾಗಿ ಈ ಸಿನಿಮಾದ ನಿರ್ದೇಶಕ ಪನ್ನಗ ಸೋಮಶೇಖರ್ ಅವರದ್ದು ಸಿಂಹಪಾಲೆಂಬುದರಲ್ಲಿ ಯಾವ ಸಂದೇಹವೂ ಇಲ್ಲ! ಈಗಾಗಲೇ ಟೀಸರ್, ಟ್ರೈಲರ್, ಹಾಡುಗಳು ಸೇರಿದಂತೆ ಒಂದಷ್ಟು ಬಗೆಯಲ್ಲಿ ಕಡಲ ತೀರದ ಭಾರ್ಗವ ಪ್ರೇಕ್ಷಕರನ್ನು ಸೋಕಿದ್ದಾನೆ. ಈ ಅಷ್ಟೂ ನಡೆಯಲ್ಲಿಯೂ ನಿರ್ದೇಶಕ ಪನ್ನಗ ಸೋಮಶೇಖರ್ ಅವರ ಜಾಣ್ಮೆ ಎದ್ದು ಕಾಣಿಸುತ್ತದೆ. ಪ್ರಚಾರದ ಸಂದರ್ಭದಲ್ಲಿ ಹೇಗೆಲ್ಲ ಮುಂದುವರೆಯಬೇಕೆಂಬುದೂ ಒಂದು ಕಲೆ. ಕೆಲ ಮಂದಿಗೆ ಒಂದಷ್ಟು ದೂರ ಸಾಗಿದ ನಂತರವೂ ಅದು ದಕ್ಕುವುದಿಲ್ಲ. ಆದರೆ, ಪನ್ನಗ ಸೋಮಶೇಖರ್…

Read More