Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಈ ವಾರವೇ ಬಿಡುಗಡೆಗೊಳ್ಳಲಿದೆ. ಕೊರೋನಾ ವೈರಸ್ಸಿನ ಘಾತುಕ ವಾತಾವರಣವನ್ನೆಲ್ಲ ದಾಟಿಕೊಂಡು ಬಂದಿದ್ದ ಚೇಸ್, ಅಂಥಾ ವಿಷಮ ಸನ್ನಿವೇಶದಲ್ಲಿಯೂ ಒಂದಲ್ಲೊಂದು ರೀತಿಯಲ್ಲಿ ಸುದ್ದಿ ಮಾಡಿಕೊಂಡೇ ಸಾಗಿ ಬಂದಿತ್ತು. ಇಂಥಾ ಪರಿಸ್ಥಿತಿಯಲ್ಲಿ ಒಂದಷ್ಟು ತಡವಾದಾಗ, ಸಿನಿಮಾ ಪ್ರೇಕ್ಷಕರ ಸ್ಮೃತಿಯಿಂದ ಮರೆಯಾಗದಂತೆ ನೋಡಿಕೊಳ್ಳೋದೇ ಒಂದು ಚಾಲೆಂಜ್. ಅದನ್ನು ವಿಲೋಕ್ ಶೆಟ್ಟಿ ಸಾರಥ್ಯದಲ್ಲಿ ಚಿತ್ರತಂಡ ಸಮರ್ಥವಾಗಿ ಎದುರಿಸಿದೆ. ತಡವಾದಷ್ಟೂ ಚೇಸ್ ಬಗೆಗಿನ ಕುತೂಹಲದ ಮೀಟರ್ ಏರುಗತಿ ಕಾಣುತ್ತಲೇ ಸಾಗುತ್ತಿತ್ತು. ಇದೀಗ ಕಡೇ ಕ್ಷಣದಲ್ಲಿ ಕುತೂಹಲದ ಕಿಚ್ಚು ಹಚ್ಚುವಂಥಾ ಜಬರ್ದಸ್ತ್ ಟ್ರೈಲರ್ ಲಾಂಚ್ ಆಗಿದೆ! ಒಂದಿಡೀ ಚಿತ್ರದ ಸಾರವನ್ನು ಕಥೆಯ ಆಂತರ್ಯ ಬಿಟ್ಟುಕೊಡದೆ, ಕುತೂಹಲವನ್ನಷ್ಟೇ ತೀವ್ರವಾಗಿಸುವಂತೆ ಕಟ್ಟಿ ಕೊಡೋದು ಸಿನಿಮಾ ತಂಡಗಳ ಪಾಲಿಗೆ ಸವಾಲಿನ ಸಂಗತಿ. ಇದುವರೆಗೂ ಟೀಸರ್ ಮುಂತಾದವುಗಳ ಮೂಲಕ ವಿಲೋಕ್ ಶೆಟ್ಟಿ ಅಂಥಾದ್ದೊಂದು ಜಾಣ್ಮೆ ತೋರಿಸಿದ್ದಾರೆ. ಈಗ ಟ್ರೈಲರ್ ವಿಚಾರದಲ್ಲಿಯೂ ಅದುವೇ ಮುಂದುವರೆದಿದೆ. ಒಂದು ಮರ್ಡರ್, ಅದರ ಸುತ್ತ ಹೆಪ್ಪುಗಟ್ಟಿಕೊಳ್ಳುವ ವಿದ್ಯಮಾನಗಳು, ಆ ಬಿಂದುವಿನಿಂದ ಚಿಮ್ಮುವಂಥಾ ಒಂದಷ್ಟು ಪಾತ್ರಗಳು……

Read More

ವಿಲೋಕ್ ಶೆಟ್ಟಿ ನಿರ್ದೇಶನದ ಚೇಜ಼್ ಚಿತ್ರ ಈ ವಾರ ಬಿಡುಗಡೆಗೊಳ್ಳಲಿದೆ. ವರ್ಷಾಂತರಗಳ ಕಾಲ ಒಂದಿಡೀ ತಂಡ ಬಲು ಆಸ್ಥೆಯಿಂದ ರೂಪಿಸಿರುವ ಈ ಚಿತ್ರ ಪ್ರತೀ ಕೆಲಸ ಕಾರ್ಯಗಳನ್ನೂ ಮೈಲಿಗಲ್ಲಾಗುವಂತೆ ಮಾಡುತ್ತಾ ಟೀಸರ್ ಮೂಲಕವೇ ಅಗಾಧ ಪ್ರಮಾಣದಲ್ಲಿ ಕ್ರೇಜ್ ಹುಟ್ಟು ಹಾಕಿದೆ. ಪ್ರಚಾರದ ಪಟ್ಟುಗಳಾಚೆಗೆ ತನ್ನ ಹೂರಣ, ಗಟ್ಟಿತನದಿಂದಲೇ ಪ್ರೇಕ್ಷಕರನ್ನು ಆಕರ್ಷಿಸಿಕೊಂಡಿರೋ ಈ ಸಿನಿಮಾದಲ್ಲಿ ಚಿತ್ರವಿಚಿತ್ರವಾದ ಪಾತ್ರಗಳಿವೆ. ಅವೆಲ್ಲವುಗಳಿಗೆ ಪ್ರತಿಭಾವಂತ ಕಲಾವಿದರೇ ಜೀವ ತುಂಬಿದ್ದಾರೆ. ಚೇಜ಼್ ಎಂಬ ದೊಡ್ಡ ಕ್ಯಾನ್ವಾಸಿನ ಸಿನಿಮಾದಲ್ಲಿ ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳುವಂಥಾದ್ದೊಂದು ಪಾತ್ರ ನಿರ್ವಹಿಸಿರುವವರು ಅರ್ಜುನ್ ಯೋಗಿ. ಈ ಹಿಂದೆ ಕಿರುತೆರೆಯಲ್ಲಿ ಒಂದಷ್ಟು ಖ್ಯಾತಿ ಹೊಂದಿದ್ದ ಅಕ್ಕ ಧಾರಾವಾಹಿಯ ಅರ್ಜುನ್ ಎಂಬ ಪಾತ್ರದ ಮೂಲಕವೇ ಪ್ರಸಿದ್ಧಿ ಪಡೆದುಕೊಂಡಿದ್ದ ಯೋಗೀಶ್ ತನ್ನ ಮೂಲ ನಾಮಧೇಯವನ್ನು ಮೀರಿ ಆ ಪಾತ್ರವನ್ನೇ ಐಡೆಂಟಿಟಿ ಆಗಿಸಿಕೊಂಡಿರೋದೊಂದು ಸೋಜಿಗ! ತುಮಕೂರಿನ ಅಳಾಲಸಂದ್ರದವರಾದ ಅರ್ಜುನ್ ಯೋಗಿ ಪಾಲಿಗೆ ಸಿನಿಮಾ ಎಂಬುದು ಶಾಲಾ ಕಾಲೇಜು ದಿನಗಳಲ್ಲಿಯೇ ಮೈ ಮನಸುಗಳನ್ನು ಆವರಿಸಿಕೊಂಡಿದ್ದ ಮಹಾ ಕನಸು. ಅದರ ಬೆಂಬತ್ತಿ ರಂಗಭೂಮಿಯ ಮೂಲಕ ತನ್ನ…

Read More

ಹಿಂದೂ, ಮುಸಲ್ಮಾನ, ಕ್ರೈಸ್ತ ಎಂಬೆಲ್ಲ ದರ್ಮದ ಪರಿಧಿಯಾಚೆಗೆ ಬೆಸೆದುಕೊಂಡಿರುವ ನೆಲ ನಮ್ಮದು. ಬಹುತ್ವ ಮತ್ತು ಅದನ್ನು ಆತ್ಮದಂತೆ ಹಬ್ಬಿಕೊಂಡಿರುವ ಭ್ರಾತೃತ್ವ ಈ ಮಣ್ಣಿನ ಗುಣ. ಒಂದು ಧರ್ಮದ ಹಬ್ಬವಾದಾಗ ಬೇರೆ ಧರ್ಮಿಯರೂ ಅದರಲ್ಲಿ ಪಾಲ್ಗೊಳ್ಳುವುದು, ಸಂಭ್ರಮಿಸೋದರಲ್ಲಿಯೇ ಈ ದೇಶದ ಐಕ್ಯತೆ ಇದೆ. ಆದರೆ ಎಲ್ಲ ಧರ್ಮಗಳಲ್ಲಿಯೂ ಪಿತಗುಡುತ್ತಿರುವ ಮತೀಯವಾದಿ ಹುಳುಗಳು ಈ ಈ ಒಗ್ಗಟ್ಟನ್ನು ಒಡೆಯೋ ಕೃತ್ಯಗಳಲ್ಲಿ ತಲ್ಲೀನರಾಗಿದ್ದಾರೆ. ಅದೆಲ್ಲದಕ್ಕಿರುವ ಏಕೈಕ ಕಾರಣ ರಾಜಕೀಯ. ಮತೀಯ ಸಂಘರ್ಷಗಳನ್ನೇ ಓಟಾಗಿ ಪರಿವರ್ತಿಸಿಕೊಳ್ಳುವ ವಿಕೃತ ಸೈತಾನರು ಮನಸು ಮನಸುಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಇಂಥಾ ಒಳ ಮರ್ಮ ಅರಿಯದೆ, ಮೈಲೇಜು ಸಿಕ್ಕರೆ ಸಾಕೆಂಬ ಅತೃಪ್ತ ಆತ್ಮಗಳೊಂದಷ್ಟು ಈ ಬೆಂಕಿಯ ಸುತ್ತ ಕೊಳ್ಳಿ ದೆವ್ವಗಳಂತೆ ಲಾಗಾ ಹಾಕುತ್ತಿವೆ. ಅಂಥಾ ಕೊಳ್ಳಿದೆವ್ವಗಳ ಸಾಲಿಗೆ ಸಾರಾಸಗಟಾಗಿ ಸೇರಿಕೊಳ್ಳುವಾತ ಬಿಗ್‌ಬಾಸ್ ಖ್ಯಾತಿಯ ಅವಿವೇಕಿ ಪ್ರಥಮ್! ಮೊನ್ನೆ ದಿನ ಹತ್ತನೇ ತಾರೀಕಿನಂದು ಮುಸ್ಲಿಂ ಬಾಂಧವರ ಬಕ್ರೀದ್ ಹಬ್ಬವಿತ್ತು. ಈ ಸಂದರ್ಭದಲ್ಲಿ ಮುಸ್ಲಿಮೇತರರನ್ನೂ ಮನೆಗೆ ಕರೆದು ಔತಣ ಕೊಡುವ ಸಂಪ್ರದಾಯ ಇಲ್ಲಿ ಲಾಗಾಯ್ತಿನಿಂದಲೂ…

Read More

ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಇದೇ ೧೫ರಂದು ಬಿಡುಗಡೆಗೊಳ್ಳಲಿದೆ. ಯುಎಫ್‌ಒ ಮೂಲಕ ದೇಶಾದ್ಯಂತ ತಲುಪಿಕೊಳ್ಳಲಿದೆ. ಯಾವುದೇ ಒಂದು ಚಿತ್ರ ಎರಡ್ಮೂರು ವರ್ಷಗಳ ಸುದೀರ್ಘಾವಧಿಯಲ್ಲಿ ಕುತೂಹಲವನ್ನು ಕಾಪಿಟ್ಟುಕೊಂಡು ಸಾಗೋದು ನಿಜಕ್ಕೂ ಸಾಹಸ. ಅದಕ್ಕೆ ಗಟ್ಟಿಯಾದ ಕಂಟೆಂಟು ಮತ್ತು ಹಂತ ಹಂತವಾಗಿ ಅದನ್ನು ಪ್ರೇಕ್ಷಕರಿಗೆ ದಾಟಿಸುವ ಜಾಣ್ಮೆ ಇರಬೇಕಾಗುತ್ತದೆ. ನಿರ್ದೇಶಕ ವಿಲೋಕ್ ಶೆಟ್ಟಿಗೆ ಆ ಕಲೆ ಸಿದ್ಧಿಸಿದೆ. ಅದಿಲ್ಲದೇ ಹೋಗಿದ್ದರೆ, ಕೊರೋನಾ ಕರಿನೆರಳಿನಲ್ಲಿಯೂ ನಿರೀಕ್ಷೆಯನ್ನು ನಿಗಿನಿಗಿಸುವಂತೆ ಕಾಯ್ದಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೀಗ ತನ್ನೊಳಗಿನ ಕಥೆ, ತಾರಾಗಣ ಸೇರಿದಂತೆ ನಾನಾ ದಿಕ್ಕಿನಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲಿಯೂ ನಾಯಕಿಯಾಗಿ ನಟಿಸಿರೋ ರಾಧಿಕಾ ನಾರಾಯಣ್ ಪಾತ್ರದ ಸುತ್ತಾ ಹತ್ತಾರು ಪ್ರಶ್ನೆಗಳು ಹರಳುಗಟ್ಟಿಕೊಂಡಿವೆ. ರಂಗಿತರಂಗ ಚಿತ್ರದ ಗೆಲುವಿನ ಒಡ್ಡೋಲಗದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವವರು ರಾಧಿಕಾ ನಾರಾಯಣ್. ಓರ್ವ ಯಶಸ್ವೀ ನಟಿ ಆಯ್ಕೆಯಲ್ಲಿ ಎಂಥಾ ಗುಣಮಟ್ಟ ಕಾಯ್ದುಕೊಳ್ಳಬೇಕಾಗುತ್ತದೋ ಅದೆಲ್ಲವನ್ನೂ ಮೈಗೂಡಿಸಿಕೊಂಡು ರಾಧಿಕಾ ಮುಂದುವರೆಯುತ್ತಿದ್ದಾರೆ. ಸಂಖ್ಯೆಗಳಿಗಿಂತಲೂ ಗುಣಮಟ್ಟ ಮುಖ್ಯ ಎಂಬ ಧ್ಯೇಯ ರೂಢಿಸಿಕೊಂಡಿರುವ ಅವರು, ಅದರ ನೆರಳಿನಲ್ಲಿಯೇ…

Read More

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅರವತ್ತನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಶಿವಣ್ಣನಿಗೆ ಅರವತ್ತಾಯ್ತೆಂಬುದೇ ಕನ್ನಡಿಗರೆಲ್ಲರಿಗೂ ಅಚ್ಚರಿ. ಯಾಕೆಂದರೆ, ಅವರ ಹಾವಭಾವದಲ್ಲಿ, ದೈಹಿಕವಾಗಿ ಸೇರಿದಂತೆ ಯಾವುದರಲ್ಲಿಯೂ ಆದ ವಯಸ್ಸಿನ ಸುಳಿವು ಸಿಕ್ಕುವುದೇ ಇಲ್ಲ. ಈ ಕ್ಷಣಕ್ಕೂ ಯುವಕರನ್ನೇ ನಾಚಿಸುವಂತೆ ಆಕ್ಟಿವ್ ಆಗಿರುವ ಶಿವಣ್ಣನ ಎನರ್ಜಿ ಎಲ್ಲರಿಗೂ ಸ್ಫೂರ್ತಿ. ಯಾವುದೇ ಸ್ಟಂಟ್ ಇರಲಿ, ಅದೆಂಥಾದ್ದೇ ಸ್ಟೆಪ್ಸ್ ಇರಲಿ; ಶಿವಣ್ಣ ಯಾವುದಕ್ಕೂ ಅಂಜುವವರಲ್ಲ. ಒಂದು ಕಡೆಯಿಂದ ಲೆಕ್ಕ ಹಾಕುತ್ತಾ ಬಂದರೆ ಅವರು ಏನಿಲ್ಲವೆಂದರೂ ಇನ್ನೊಂದು ಮೂರ್ನಾಲಕ್ಕು ವರ್ಷಗಳಿಗಾಗುವಷ್ಟು ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ಈಗ ಶಿವಣ್ಣ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದಂದೇ ಈ ಹೊಸಾ ಚಿತ್ರ ಘೋಷಣೆಯಾಗಿ, ಅದರ ಬಗೆಗಿನ ಒಂದಷ್ಟು ವಿವರಗಳು ಜಾಹೀರಾಗಲಿವೆ. ಶಿವರಾಜ್ ಕುಮಾರ್ ಯಂಗ್ ಆಂಡ್ ಎನರ್ಜಿಟಿಕ್ ಆಗಿರುವುದು ಮಾತ್ರವಲ್ಲ; ಸದಾ ಕಾಲವೂ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಗುಣವನ್ನೂ ಹೊಂದಿದ್ದಾರೆ. ಕಥೆ ಚೆಂದಗಿದ್ದರೆ, ಹೊಸತನದ ಕನಸು ಹೊಂದಿದ್ದರೆ ಅವರು ಹೊಸಬರ ನಿರ್ದೇಶನಕ್ಕೂ ಸೈ ಅಂದು ಬಿಡುತ್ತಾರೆ. ಅಂಥಾ ಮನಸ್ಥಿತಿ ಇಲ್ಲದೇ ಹೋಗಿದ್ದರೆ ಶಿವಣ್ಣ…

Read More

ಜಾತಿ, ಧರ್ಮ ಅಂತೆಲ್ಲ ದೊಂದಿ ಹಿಡಿದು ಹೊರಡೋರನ್ನು ಕಂಡು ಪ್ರಜ್ಞಾವಂತರೆಲ್ಲ ನಖಶಿಖಾಂತ ಉರಿದು ಬೀಳ್ತಾರಲ್ಲಾ? ಅದೇನು ಸುಮ್ಮನೆ ಶೋಕಿಗೆ ಹುಟ್ಟಿಕೊಳ್ಳೋ ಆಕ್ರೋಶವಲ್ಲ. ಅದರ ಹಿಂದಿರೋದು ಅಪ್ಪಟ ಮನುಷ್ಯತ್ವ. ಫ್ಯಾಸಿಸ್ಟ್ ಶಕ್ತಿಗಳ ಕೈಲಿರುವ ದೊಂದಿ ಮುಂದೊಂದು ದಿನ ಮನುಷ್ಯತ್ವದ ಬುಡಕ್ಕೇ ಬೆಂಕಿಯಿಡುತ್ತೆಂಬ ಸತ್ಯದಿಂದ ಹುಟ್ಟಿದ ಆಕ್ರೋಶವದು. ಧರ್ಮದ ಅಮಲು ಅದ್ಯಾವ ಮಟ್ಟಕ್ಕೆ ಮನುಷ್ಯನನ್ನು ಕ್ರೂರಿಯಾಗಿಸುತ್ತೆ, ಅದು ಕೊನೆಗೊಮ್ಮೆ ಯಾವ ಹಂತ ತಲುಪಿಕೊಳ್ಳುತ್ತೆ ಅನ್ನೋದಕ್ಕೆ ಅಫ್ಘಾನಿಸ್ತಾನಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಹತ್ತಾರು ವರ್ಷಗಳಿಂದ ಅಬ್ಬರಿಸುತ್ತಾ ಬಂದ ತಾಲಿಬಾನಿ ಉಗ್ರರು ಇದೀಗ ಸರ್ಕಾರವನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಬೆನ್ನಲ್ಲಿ ಬಂದೂಕು ತಗುಲಿಸಿಕೊಂಡು ನಂಬಿಕೆ ಗಿಟ್ಟಿಸಿಕೊಳ್ಳೋ ಬಣ್ಣದ ಮಾತಾಡುತ್ತಿದ್ದಾರೆ. ಆದರೆ ಈ ತಾಲಿಬಾನಿಗಳ ಆಡಳಿತ ಎಂಥಾದ್ದಿರುತ್ತದೆಂಬ ಅಂದಾಜು ಇದೀಗ ಸ್ಪಷ್ಟವಾಗಿಯೇ ಸಿಕ್ಕಿಬಿಟ್ಟಿದೆ. ತಾಲಿಬಾನ್ ಉಗ್ರರು ಇದುವರೆಗೆ ನಡೆಸಿರೋ ಅನಾಹುತಗಳು ಒಂದೆರಡಲ್ಲ. ಜೀವ ತೆಗೆಯೋದೆಂದ್ರೆ ಆ ಪಾಪಿಗಳಿಗೆ ಸಲೀಸು. ಪುಟ್ಟ ಕಂದಮ್ಮಗಳೆಂಬ ಕರುಣೆಯೂ ಇಲ್ಲದೆ ಅವರು ನಡೆಸಿರೋ ಕ್ರೌರ್ಯವಿದೆಯಲ್ಲಾ? ಅದನ್ನು ಇಸ್ಲಾಂ ಇರಲಿ, ಜಗತ್ತಿನ ಯಾವ ಧರ್ಮಗಳೂ ಕ್ಷಮಿಸಲು ಸಾಧ್ಯವಿಲ್ಲ. ಕ್ಷಮಿಸಿದರೆ…

Read More

ವೇಶ್ಯಾ ವೃತ್ತಿಯಲ್ಲಿರುವವರ ಹಿಂದಿದೆ ಕರಾಳ ಕಥೆ, ಕಣ್ಣೀರು! ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಬೇರೂರಿಕೊಂಡಿರೋ ದಂಧೆಗಳು ಒಂದೆರಡಲ್ಲ. ಅಲ್ಲಿ ದುಡಿದು ಬದುಕುವವರಿಗೆ ಅಗಾಧ ಅವಕಾಶಗಳಿವೆ. ಬೇರೆಯವರನ್ನ ಹುರಿದು ಮುಕ್ಕುವ ರಕ್ಕಸರಿಗೂ ಕೂಡಾ ಅಂಥಾದ್ದೇ ಅವಕಾಶಗಳಿವೆ. ನೀವೇನಾದರೂ ಬೆಂಗಳೂರಿನಂಥಾ ನಿವಾಸಿಗಳಾಗಿದ್ದರೆ, ಅಪರೂಪಕ್ಕಾದರೂ ಅಲ್ಲಿಗೆ ಹೋಗಿ ಬಂದ ಅನುಭವವಿದ್ದರೆ ಕಂಡ ಕಂಡಲ್ಲಿ ಸನ್ನೆಗಳ ಮೂಲಕ ಸೆಳೆಯೋ ಬೆಲೆವೆಣ್ಣುಗಳನ್ನು ಗಮನಿಸಿರುತ್ತೀರಿ. ಸಿಂಗಾರಗೊಂಡು, ಉದ್ರೇಕಿಸುವಂಥಾ ಮಾದಕ ನೋಟ ಬೀರುತ್ತಾ ಗಿರಾಕಿಗಳಿಗಾಗಿ ಕಾದು ಕೂತ ಈ ಜೀವಗಳಿಗೆ ಸಭ್ಯ ಸಮಾಜ ಸೂಳೆಯರೆಂಬ ಪಟ್ಟ ಕೊಟ್ಟಿದೆ. ಸಭ್ಯ ಭಾಷೆಯಲ್ಲದಕ್ಕೆ ವೇಶ್ಯಾವಾಟಿಕೆ ಅನ್ನಲಾಗುತ್ತೆ. ವಾಸ್ತವವೆಂದರೆ, ಮೇಲುನೋಟಕ್ಕೆ ಆ ಜೀವಗಳ ಬಗ್ಗೆ ಅಸಹ್ಯ ಹೊಂದಿರುವವರೇ ರಾತ್ರಿ ಹೊತ್ತಲ್ಲಿ ಗಿರಾಕಿಗಳಾಗೋದೂ ಇದೆ. ಆದರೆ, ಹಾಗೆ ಬೀದಿಯಲ್ಲಿ ಕೈಚಾಚಿ ನಿಂತವರ ಹಿಂದೆ ಅದೆಂಥಾ ಕರುಣಾಜನಕ ಕಥೆಗಳಿರಬಹುದು, ಅವರ ನೋವೆಂಥಾದ್ದು, ಯಾರದ್ದೋ ಮನೆಯ ಕೂಸಾಗಿ ಹುಟ್ಟಿದ್ದ ಆ ಹೆಣ್ಣುಮಕ್ಕಳನ್ನು ಈ ರೀತಿ ಬೀದಿಗಿಳಿಸಿದ ದುಷ್ಟ ವ್ಯವಸ್ಥೆ ಯಾವುದೆಂಬುದರ ಬಗ್ಗೆ ಬಹುತೇಕರು ಯೋಚಿಸೋ ಗೋಜಿಗೆ ಹೋಗುವುದಿಲ್ಲ. ವೇಶ್ಯಾವಾಟಿಕೆ ಅಂದಾಕ್ಷಣ ಕಾಮದ…

Read More

ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತೆ ಸುದ್ದಿಯಲ್ಲಿದ್ದಾಳೆ. ಈಕೆ ಸುದ್ದಿ ಕೇಂದ್ರಕ್ಕೆ ಬಂದಳೆಂದರೆ ಯಾವುದೋ ವಿವಾದದ ಕಿಡಿ ಹೊತ್ತಿಯೇ ತೀರುತ್ತೆ… ಹೀಗಂತ ಜನಸಾಮಾನ್ಯರೂ ನಿರ್ಧರಿಸುವಷ್ಟರ ಮಟ್ಟಿಗೆ ಕಂಗನಾ ಇತ್ತೀಚಿನ ದಿನಗಳಲ್ಲಿ ಚಾಲ್ತಿಯಲ್ಲಿದ್ದಾಳೆ. ಆರಂಭದ ಕಾಲದಲ್ಲಿ ಈಕೆ ಒಂದಷ್ಟು ಚೆಂದದ ಸಿನಿಮಾಗಳಲ್ಲಿ, ಸವಾಲಿನ ಪಾತ್ರಗಳ ಮೂಲಕ ಸೈ ಅನ್ನಿಸಿಕೊಂಡಿದ್ದು ಹೌದು. ಆದರೆ ಇತ್ತೀಚಿನ ವರ್ಷಗಳಲ್ಲಿ ತನ್ನ ಸಾಮಾಜಿಕ, ರಾಜಕೀಯ ನಿಲುವುಗಳ ಕಾರಣದಿಂದಾಗಿಯೇ ಈಕೆ ಸುದ್ದಿ ಮಾಡುತ್ತಾ ಸಾಗಿದ್ದಳು. ಇಂಥಾ ಕಂಗನಾ ಇದೀಗ ಬಹು ಕಾಲದ ನಂತರ ಮತ್ತೆ ನಟಿಯಾಗಿ ಸದ್ದು ಮಾಡಿದ್ದಾಳೆ. ವಿಶೇಷ ಅಂದ್ರೆ ಅದಕ್ಕೂ ಕೂಡಾ ರಾಜಕೀಯದ ನಂಟು ಥಳುಕು ಹಾಕಿಕೊಂಡಿದೆ. ಕಂಗನಾ ರಾಣಾವತ್ ತಲೈವಿ ಎಂಬ ಸಿನಿಮಾ ಮೂಲಕ ವರ್ಷದಿಂದೀಚೆಗೆ ಸಿನಿಮಾ ಪ್ರೇಮಿಗಳನ್ನ ಸೆಳೆದಿದ್ದಳು. ಅದು ದಕ್ಷಿಣ ಭಾರತದ ಪ್ರಭಾವೀ ರಾಜಕೀಯ ನಾಯಕಿಯಾಗಿದ್ದ, ತಮಿಳುನಾಡು ರಾಜಕೀಯದಲ್ಲಿ ಸಿಎಂ ಆಗಿ ಮಿಂಚಿದ್ದ ಜಯಲಲಿತಾರ ಬದುಕಿನ ಕಥೆಯಾಧಾರಿತ ಚಿತ್ರ. ಖುದ್ದು ನಟಿಯಾಗಿ, ಆ ನಂತರ ರಾಜಕಾರಣುಇಯಾಗಿ ಬದಲಾಗಿದ್ದ ಜಯಲಲಿತಾರದ್ದು ನಿಜಕ್ಕೂ ರೋಚಕ ಕಥನ.…

Read More

ಕನ್ನಡ ಚಿತ್ರರಂಗದ ಯಶಸ್ವೀ ಯುವ ನಿರ್ಮಾಪಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರು ತರುಣ್ ಶಿವಪ್ಪ ಅವರದ್ದು. ಸಿನಿಮಾ ನಿರ್ಮಾಣ ಕೂಡಾ ಅತೀವವಾದ ಶ್ರದ್ಧೆ ಮತ್ತು ವ್ಯಾವಹಾರಿಕ ಅಂಶಗಳಾಚೆಗಿನ ಆಸಕ್ತಿ ಬೇಡುವ ಕೆಲಸ. ಅದು ಮೈಗೂಡದೇ ಹೋಗಿದ್ದರೆ ಖಾಕಿ, ಮಾಸ್ ಲೀಡರ್, ವಿಕ್ಟರಿ೨, ರೋಸ್‌ನಂಥಾ ಯಶಸ್ವೀ ಚಿತ್ರಗಳನ್ನು ನಿರ್ಮಾಣ ಮಾಡಿ ಸೈ ಅನ್ನಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಂಥಾ ಶ್ರದ್ಧೆಯನ್ನು ದಕ್ಕಿಸಿಕೊಂಡು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ತರುಣ್ ಶಿವಪ್ಪ ಇತ್ತೀಚೆಗೆ ಸಿನಿಮಾ ಸ್ಕೂಲ್ ಆರಂಭಿಸಿದ್ದರು. ಎಲ್ಲ ಥರದಲ್ಲಿಯೂ ಸನ್ನದ್ಧಗೊಂಡ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಡಮಾಡುವ ಸದುದ್ದೇಶದಿಂದ ಈ ಸಿನಿಮಾ ಸ್ಕೂಲ್ ಆರಂಭವಾಗಿತ್ತು. ಇದೀಗ ಅದರ ಮತ್ತೊಂದು ಆರಂಭವಾಗಲು ತಯಾರಿ ಶುರುವಾಗಿದೆ. ಪ್ರವೇಶಾತಿ ಪ್ರಕ್ರಿಯೆಯೂ ಸಹ ಶುರುವಾಗಿದೆ. ಸಾಮಾನ್ಯವಾಗಿ ಸಿನಿಮಾ ಕನಸು ಸೋಕದ ಮನಸುಗಳೇ ವಿರಳ. ಯಾವುದಾದರೊಂದು ಬಗೆಯಲ್ಲಿ ಸಿನಿಮಾ ರಂಗದಲ್ಲಿ ಏನಾದರೂ ಸಾಧಿಸಬೇಕೆಂಬುದು ಹಲವರ ಕನಸಾಗಿರುತ್ತದೆ. ದುರಂತವೆಂದರೆ, ಬದುಕಿನ ಅನಿವಾರ್ಯತೆಗಳ ತಿರುಗಣಿಗೆ ಸಿಕ್ಕು ಅಂಥವರೊಂದಷ್ಟು ಮಂದಿ ಕನಸಿನ ಸಮೇತ, ಕುಹುಗಳೂ ಸಿಗದಂತೆ ಮಾಯವಾಗಿ ಬಿಟ್ಟಿರುತ್ತಾರೆ. ಹಾಗೆ ಎಲ್ಲೋ…

Read More

ಇಡೀ ವಿಶ್ವದ ನಾನಾ ಭಾಗಗಳ ಆಹಾರ ಪದ್ಧತಿಯೇ ಒಂದು ವಿಸ್ಮಯ. ಜಗತ್ತಿನ ಕೆಲ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಮಾಂಸಾಹಾರದ ಕ್ರಮಗಳಂತೂ ಬೆಚ್ಚಿ ಬೀಳುವಂತಿವೆ. ಕೈಯಲ್ಲಿ ಮುಟ್ಟೋದಿರಲಿ; ಬರಿಗಣ್ಣಿನಿಂದ ನೋಡಲೂ ಭಯವಾಗುವ ಹುಳ ಹುಪ್ಪಟೆಗಳನ್ನು ಹಸಿಯಾಗಿಯೇ ಜಗಿದು ತಿನ್ನುವವರಿದ್ದಾರೆ. ಕೈಗೆ ಸಿಕ್ಕರೆ ಪ್ರಾಣಿಗಳ ಕತ್ತಿಗೇ ಬಾಯಿ ಹಾಕಿ ಹಸೀ ರಕ್ತ ಹೀರಿ ಸುಖ ಪಡುವವರೂ ಇದ್ದಾರೆ. ಇಂಥವುಗಳೆಲ್ಲ ಮೇಲು ನೋಟಕ್ಕೆ ಹೌಹಾರುವಂತೆ ಮಾಡಿದರೂ ಅವುಗಳು ಕೆಲ ದೇಶಗಳಲ್ಲಿ, ಭೂಭಾಗಗಳಲ್ಲಿ ಪರಂಪರೆಯೆಂಬಂತೆ ನಡೆದು ಬಂದಿವೆ ಎಂದರೆ ಯಾರಿಗಾದರೂ ಅಚ್ಚರಿಯಾಗದಿರೋದಿಲ್ಲ! ನಮ್ಮಲ್ಲಿ ಹಾವುಗಳಿಗೂ ಹಾಲೆರೆದು ಭಯ ಭಕ್ತಿಯಿಂದ ಕೈ ಮುಗಿಯುವ ಪದ್ಧತಿ, ಪರಂಪರೆ ರೂಢಿಯಲ್ಲಿದೆ. ಅದರಲ್ಲಿಯೂ ಕೆಲ ಫವರ್ಫುಲ್ ಹಾವುಗಳನ್ನು ಕೊಂದರೆ ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡುವ ಕ್ರಮವೂ ಚಾಲ್ತಿಯಲ್ಲಿದೆ. ಆದರೆ ನಾವು ಯಾವ ಹಾವುಗಳನ್ನು ದೇವರೆಂದೇ ಪೂಜಿಸುತ್ತೇವೋ ಅದೇ ಹಾವುಗಳನ್ನು ವಿದೇಶಗಳಲ್ಲಿ ಥರ ಥರದಲ್ಲಿ ಭಕ್ಷಿಸಲಾಗುತ್ತದೆ. ವಿಯೇಟ್ನಾಂನಲ್ಲಿ ಪ್ರಚಲಿತದಲ್ಲಿರುವ ಹಾವಿನ ಭಕ್ಷಣಾ ಕ್ರಮವಂತೂ ತೀರಾ ಬೀಭತ್ಸವಾದದ್ದು! ಅಲ್ಲಿ ಹಾವುಗಳನ್ನು ಕೊಂದು ತಕ್ಷಣವೇ ಅದರ ಹೃದಯವನ್ನು ಹೊರ ತೆಗೆದು…

Read More