ಬೆಂಗಳೂರಿನಲ್ಲಿ ಮೈಚಾಚಿಕೊಂಡ ಭೂಗತ ಜಗತ್ತಿನ ರಕ್ತರಂಜಿತ ಕಥನಗಳಲ್ಲಿ ನೆಲಮಂಗಲದ ಕದನಕ್ಕೆ ಬೇರೆಯದ್ದೇ ಕಿಮ್ಮತ್ತಿದೆ. ಈ ಭಾಗದಲ್ಲಿ ಹಬ್ಬಿಕೊಂಡಿದ್ದ ಗ್ಯಾಂಗ್ ವಾರ್, ದಂಧೆ ದೋಖಾಬಾಜಿ ಮತ್ತು ಪ್ರತೀಕಾರದ ಹತ್ಯೆಗಳಿಂದ ನೆಲಮಂಗಲವೆಂಬುದು ಅಕ್ಷರಶಃ ನೆತ್ತರಿಂದ ತೊಯ್ದು ತೊಪ್ಪೆಯಾಗಿತ್ತು. ಈ ಭಾಗದ ಭೂಗತ ಜಗತ್ತಿನ ಬಡಿದಾಟಗಳಲ್ಲಿ ಭಾರೀ ನಟೋರಿಟಿ ಪಡೆದುಕೊಂಡಿದ್ದದ್ದು ಬೆತ್ತನಗೆರೆ ಬ್ರ್ಯಾಂಡಿನ ಭೀಕರ ಬಡಿದಾಟ. ಇಂಥಾ ಗ್ಯಾಂಗುಗಳ ದೆಸೆಯಿಂದಾಗಿ ಕೃಷಿ, ಹೈನುಗಾರಿಕೆಯನ್ನು ನೆಚ್ಚಿಕೊಂಡು ಬದುಕುತ್ತಿದ್ದ ಈ ಚೆಂದದ ಊರ ತುಂಬಾ ರೌಡಿ ಎಲಿಮೆಂಟುಗಳದ್ದೇ ಮೇಲುಗೈ ಎಂಬಂಥಾ ಸ್ಥಿತಿಯೂ ನಿರ್ಮಾಣವಾಗಿತ್ತು. ಕಾಲಚಕ್ರದೊಂದಿಗೆ ಒಂದಷ್ಟು ತಲೆಗಳೂ ಉರುಳಿದ ನಂತರ ನೆಲಮಂಗಲದ ತುಂಬೆಲ್ಲ ಮೆಲ್ಲಗೆ ನೆಮ್ಮದಿ ಹಬ್ಬಿಕೊಂಡಿತ್ತು. ಆದರೀಗ ಸರಿಸುಮಾರು ಹದಿನೆಂಟು ವರ್ಷಗಳ ರಣದ್ವೇಷ ಮತ್ತೆ ಮೈಕೊಡವಿಕೊಂಡಿದೆ; ಕುಖ್ಯಾತ ಪಾತಕಿ ಬೆತ್ತನಗೆರೆ ಶಂಕ್ರನ ಹತ್ಯೆಗೆ ಹೊಂಚು ಹಾಕಿ ಕೂತಿದ್ದ ಹ್ಯಾಡಾಳು ದೇವಿಯ ಮಗನನ ಪಟಾಲಮ್ಮನ್ನು ಸಿಸಿಬಿ ಪೊಲೀಸರು ಹಡೆಮುರಿ ಕಟ್ಟುವ ಮೂಲಕ! ನಿಗಿನಿಗಿಸುತ್ತಿತ್ತು ದ್ವೇಷದ ಕಿಚ್ಚು ವಿರೋಧಿ ಗ್ಯಾಂಗುಗಳ ತಲೆಗಳೊಂದಿಗೆ ದ್ವೇಷದ ಕಿಚ್ಚೂ ಕೂಡಾ ಮಣ್ಣಾಗುತ್ತದೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ,…
ಬೆಂಗಳೂರಿನಲ್ಲಿ ಮೈಚಾಚಿಕೊಂಡ ಭೂಗತ ಜಗತ್ತಿನ ರಕ್ತರಂಜಿತ ಕಥನಗಳಲ್ಲಿ ನೆಲಮಂಗಲದ ಕದನಕ್ಕೆ ಬೇರೆಯದ್ದೇ ಕಿಮ್ಮತ್ತಿದೆ. ಈ ಭಾಗದಲ್ಲಿ ಹಬ್ಬಿಕೊಂಡಿದ್ದ ಗ್ಯಾಂಗ್ ವಾರ್, ದಂಧೆ ದೋಖಾಬಾಜಿ ಮತ್ತು ಪ್ರತೀಕಾರದ ಹತ್ಯೆಗಳಿಂದ…