<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಕವರ್ ಸ್ಟೋರಿ Archives &#187; ಶೋಧ ನ್ಯೂಸ್ - Shodha News</title>
	<atom:link href="https://www.shodhanews.com/category/cover-story/feed/" rel="self" type="application/rss+xml" />
	<link>https://www.shodhanews.com/category/cover-story/</link>
	<description>Kannada Online News 24x7</description>
	<lastBuildDate>Sun, 16 Nov 2025 05:19:13 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>

<image>
	<url>https://www.shodhanews.com/wp-content/uploads/2022/04/cropped-shodha-news-icon-32x32.png</url>
	<title>ಕವರ್ ಸ್ಟೋರಿ Archives &#187; ಶೋಧ ನ್ಯೂಸ್ - Shodha News</title>
	<link>https://www.shodhanews.com/category/cover-story/</link>
	<width>32</width>
	<height>32</height>
</image> 
	<item>
		<title>Parappana Agrahara: ಪರಪ್ಪನ ಅಗ್ರಹಾರದೊಳಗೆ ಬೆಚ್ಚಿ ಬೀಳಿಸೋ ದಂಧೆ!</title>
		<link>https://www.shodhanews.com/parappana-agrahara-investigative-report-15-11-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 15 Nov 2025 16:46:05 +0000</pubDate>
				<category><![CDATA[ಕವರ್ ಸ್ಟೋರಿ]]></category>
		<category><![CDATA[#congress]]></category>
		<category><![CDATA[#crime]]></category>
		<category><![CDATA[#siddaramaiah]]></category>
		<category><![CDATA[bjp]]></category>
		<category><![CDATA[gparameshwar]]></category>
		<category><![CDATA[parappanaagrahara]]></category>
		<category><![CDATA[ranyarao]]></category>
		<category><![CDATA[terrorism]]></category>
		<category><![CDATA[terrorism_jailbreak_terroristnasir_bangaloreblast_shodhascoop_gparameshwar_bombblast_investigationreport_santhosh_bagilagadde]]></category>
		<category><![CDATA[terrorist]]></category>
		<category><![CDATA[umeshreddy]]></category>
		<category><![CDATA[videoleak]]></category>
		<guid isPermaLink="false">https://www.shodhanews.com/?p=14072</guid>

					<description><![CDATA[<p><img width="1600" height="855" src="https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07.jpg 1600w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-800x428.jpg 800w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1024x547.jpg 1024w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-768x410.jpg 768w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1536x821.jpg 1536w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-150x80.jpg 150w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-450x240.jpg 450w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1200x641.jpg 1200w" sizes="(max-width: 1600px) 100vw, 1600px" />&#160; ಪರಪ್ಪನ ಅಗ್ರಹಾರ ಜೈಲಿನೊಳಗೆ ವಿಕೃತ ಕಾಮಿ ಉಮೇಶ್ ರೆಡ್ಡಿ, ಭಯೋತ್ಪಾದಕ ಶಕೀಲ್, ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಬಂಧಿಯಾದ ರನ್ಯಾ ರಾವ್ ಗೆಣೆಕಾರನಂಥವರೆಲ್ಲ ಅಕ್ಷರಶಃ ಎಂಜಾಯ್ ಮಾಡುತ್ತಿದ್ದಾರೆ. ಒಂದು ವೀಡಿಯೋ ಮೂಲಕ ಪರಪ್ಪನ ಅಗ್ರಹಾರ ಜೈಲೊಳಗಿನ ಬಗ್ಗಡ ಕರುನಾಡಿನ ತುಂಬೆಲ್ಲ ಹಬ್ಬಿಕೊಂಡಿದೆ. ಈ ಕಾರಣದಿಂದಲೇ ರಾಜ್ಯ ಸರ್ಕಾರದ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿದೆ. ಈ ಹಂತದಲ್ಲಿ ತಲೆ ನೆಟ್ಟಗಿರುವ ಆಸಾಮಿಯೊಬ್ಬ ಗೃಹಮಂತ್ರಿಯಾಗಿದ್ದರೆ, ಜೈಲೊಳಗೆ ಕೈದಿಗಳಿಗೆ ಇಂಥಾ ಸೌಲಭ್ಯ ಕೊಟ್ಟವರ್‍ಯಾರು ಎಂಬ ನಿಟ್ಟಿನಲ್ಲಿ ತನಿಖೆ ನಡೆಸಿ, ಎಲ್ಲ ಭ್ರಷ್ಟರನ್ನೂ [...]</p>
<p>The post <a href="https://www.shodhanews.com/parappana-agrahara-investigative-report-15-11-2025/">Parappana Agrahara: ಪರಪ್ಪನ ಅಗ್ರಹಾರದೊಳಗೆ ಬೆಚ್ಚಿ ಬೀಳಿಸೋ ದಂಧೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1600" height="855" src="https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07.jpg 1600w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-800x428.jpg 800w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1024x547.jpg 1024w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-768x410.jpg 768w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1536x821.jpg 1536w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-150x80.jpg 150w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-450x240.jpg 450w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1200x641.jpg 1200w" sizes="(max-width: 1600px) 100vw, 1600px" /><p>&nbsp;</p>
<blockquote>
<p style="text-align: justify;"><span style="color: #666699;"><strong><span style="font-size: 14pt;">ಪರಪ್ಪನ ಅಗ್ರಹಾರ ಜೈಲಿನೊಳಗೆ ವಿಕೃತ ಕಾಮಿ ಉಮೇಶ್ ರೆಡ್ಡಿ, ಭಯೋತ್ಪಾದಕ ಶಕೀಲ್, ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಬಂಧಿಯಾದ ರನ್ಯಾ ರಾವ್ ಗೆಣೆಕಾರನಂಥವರೆಲ್ಲ ಅಕ್ಷರಶಃ ಎಂಜಾಯ್ ಮಾಡುತ್ತಿದ್ದಾರೆ. ಒಂದು ವೀಡಿಯೋ ಮೂಲಕ ಪರಪ್ಪನ ಅಗ್ರಹಾರ ಜೈಲೊಳಗಿನ ಬಗ್ಗಡ ಕರುನಾಡಿನ ತುಂಬೆಲ್ಲ ಹಬ್ಬಿಕೊಂಡಿದೆ. ಈ ಕಾರಣದಿಂದಲೇ ರಾಜ್ಯ ಸರ್ಕಾರದ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿದೆ. ಈ ಹಂತದಲ್ಲಿ ತಲೆ ನೆಟ್ಟಗಿರುವ ಆಸಾಮಿಯೊಬ್ಬ ಗೃಹಮಂತ್ರಿಯಾಗಿದ್ದರೆ, ಜೈಲೊಳಗೆ ಕೈದಿಗಳಿಗೆ ಇಂಥಾ ಸೌಲಭ್ಯ ಕೊಟ್ಟವರ್&#x200d;ಯಾರು ಎಂಬ ನಿಟ್ಟಿನಲ್ಲಿ ತನಿಖೆ ನಡೆಸಿ, ಎಲ್ಲ ಭ್ರಷ್ಟರನ್ನೂ ಅಂಡಿಗೊದ್ದು ಹೊರದಬ್ಬುವ ಕೆಲಸ ಮಾಡುತ್ತಿದ್ದರು. ಆದರೆ ಪರಮೇಶ್ವರ್ ವೀಡಿಯೋ ಲೀಕ್ ಮಾಡಿದ್ಯಾರೆಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಕ್ರಿಮಿನಲ್ಲುಗಳಿಗೆ, ಭಯೋತ್ಪಾದಕರಿಗೆ, ವಿಕೃತ ಕಾಮಿಗಳ ಪಾಲಿಗೆ ಜೈಲೊಂದು ರೆಸಾರ್ಟಿನಂತಾಗುತ್ತದೆಂದರೆ, ಅದು ಈ ದುಷ್ಟ ವ್ಯವಸ್ಥೆಯ ಅಸಲೀ ದುರಂತ. ನಿಜಕ್ಕೂ ಪರಪ್ಪನ ಅಗ್ರಹಾರ ಜೈಲಿನೊಳಗೆ ಎಂಥಾ ಪರಿಸ್ಥಿತಿ ಇದೆ ಅನ್ನೋದರ ತನಿಖಾ ವರದಿ ಇಲ್ಲಿದೆ&#8230; </span></strong></span><br />
<strong><span style="font-size: 14pt;">-ಸಂತೋಷ್ ಬಾಗಿಲಗದ್ದೆ</span></strong></p>
</blockquote>
<p style="text-align: justify;"><span style="font-size: 14pt;"><strong><span style="font-size: 18pt; color: #00ccff;">ರಾ</span></strong>ಜಕಾರಣಿಗಳೇ ಪ್ರಭುಗಳಾಗಿ ಮೆರೆಯುತ್ತಿರೋ ದುಷ್ಟ ವ್ಯವಸ್ಥೆಯಿದು. ಇಂಥಾ ರಾಜಕಾರಣಿಗಳು ಅಧಿಕಾರ ಕೇಂದ್ರಕ್ಕೆ ಬರುತ್ತಲೇ ತಮ್ಮ ತಲುಬಿಗಾಗಿ ಕಾನೂನು ಸುವ್ಯವಸ್ಥೆಗೇ ಕುಣಿಕೆ ಬಿಗಿಯಲೂ ಹೇಸೋದಿಲ್ಲ. ಈ ಮೂಲಕ ಸಂವಿಧಾನದ ಆಶಯಗಳನ್ನು ಕ್ರಿಮಿಗಳ ರಕ್ಷಣೆಗಾಗಿ ಅಡವಿಡಲೂ ಅಂಜದ ಅವಿವೇಕಿಗಳೇ ಇಂದು ಜನಪ್ರತಿನಿಧಿಗಳ ಸೋಗು ಹಾಕಿದ್ದಾರೆ. ಇಂಥಾ ಖಬರುಗೇಡಿ ರಾಜಕಾರಣಿಗಳ ಆಟಗಳು ಯಾವ ರೀತಿ ಇರುತ್ತವೆಂಬುದಕ್ಕೆ ಪರಪ್ಪನ ಅಗ್ರಹಾರ ಜೈಲಿಗಿಂತಲೂ ತಾಜಾ ಉದಾಹರಣೆ ಬೇರೊಂದಿಲ್ಲ. ಈ ಜೈಲನ್ನು ಕೂಳುಬಾಕ ಅಧಿಕಾರಿಗಳು ಲಾಡ್ಜಿನಂತೆ ಪರಿವರ್ತಿಸಿ ದಶಕಗಳೇ ಕಳೆದಿವೆ. ಯಾವ ಸರ್ಕಾರಗಳು ಬಂದರೂ ಪರಪ್ಪನ ಅಗ್ರಹಾರದೊಳಗಿನ ದಂಧೆಗಳು ಅನೂಚಾನವಾಗಿ ಮುಂದುವರೆದು ಬಂದಿದೆ. ಆದರೀಗ ರಕ್ಕಸ ಭಯೋತ್ಪಾದಕರು, ವಂಚಕರು ಮತ್ತು ಹೆಣ್ಣುಮಕ್ಕಳನ್ನು ಅತ್ಯಾಚಾರವೆಸಗಿ ಕೊಂದ ವಿಕೃತ ಕಾಮಿ ಉಮೇಶ್ ರೆಡ್ಡಿಯಂಥವರಿಗೂ ರಾಜಾತಿಥ್ಯ ನೀಡುವ ಕೀಳುಮಟ್ಟಕ್ಕೆ ಪರಪ್ಪನ ಅಗ್ರಹಾರದ ವ್ಯವಸ್ಥೆ ಇಳಿದುಬಿಟ್ಟಿದೆ!</span><br />
<span style="font-size: 14pt;">ಬೆಂಗಳೂರಿನಲ್ಲಿ ಭೂಗತ ಜಗತ್ತಿನ ಚಟುವಟಿಕೆಗಳು ಉತ್ತುಂಗದಲ್ಲಿದ್ದಾಗಲೇ ಪರಪ್ಪನ ಅಗ್ರಹಾರದೊಳಗೆ ಭ್ರಷ್ಟ ಅಧಿಕಾರಿಗಳು ದಂಧೆಯ ದುಖಾನು ತೆರೆದಿದ್ದರು. ಸಾವಿರವಲ್ಲ; ಲಕ್ಷಗಳ ಲೆಕ್ಕದಲ್ಲಿ ಜೈಲಿನ ಬ್ಯಾರಕ್ಕುಗಳನ್ನು ಬಾಡಿಗೆಗೆ ಬಿಡುವ ಮೂಲಕ ಲಕ್ಷಣವಾಗಿ ಕಾಸೆಣಿಸಲು ಶುರುವಿಟ್ಟಿದ್ದರು. ಅಂಥಾ ಹಡಬೆ ಹಣದಲ್ಲಿ ರಾಜಕೀಯ ಪುಢಾರಿಗಳಿಗೂ ಪಾಲಿದ್ದುದರಿಂದ ಒಂದಿಡೀ ಆಡಳಿತ ವ್ಯವಸ್ಥೆ ಹಡಾಲೆದ್ದು ಹೋಗಿತ್ತು. ಹೀಗೆ ಭೂಗತ ಜೀವಿಗಳ ಸೇವೆಯ ಮೂಲಕ ಆರಂಭವಾಗಿದ್ದ ಈ ಜೈಲೊಳಗಿನ ಭ್ರಷ್ಟಾವತಾರವೀಗ ದೇಶದ್ರೋಹಿ ಭಯೋತ್ಪಾದಕರ ಕೈಗೆ ಮೊಬೈಲು ಕೊಟ್ಟು, ಉಮೇಶ್ ರೆಡ್ಡಿಯಂಥಾ ವಿಕೃತ ಕಾಮಿಯನ್ನೂ ಸ್ವಚ್ಛಂದವಾಗಿ ಅಡ್ಡಾಡಲು ಬಿಟ್ಟು, ರನ್ಯಾ ರಾವ್ ಥರದ ಹೈಫೈ ವಂಚಕಿಯ ಇಷಾರೆಯಂತೆ ಗೃಹ ಇಲಾಖೆಯೇ ಕುಣಿಯುತ್ತಿದೆ ಎಂಬ ಆರೋಪ ಹರಿದಾಡುವ ಮಟ್ಟಕ್ಕೆ ಹಬ್ಬಿಕೊಂಡಿದೆ! </span></p>
<p style="text-align: justify;"><img fetchpriority="high" decoding="async" class="alignnone wp-image-14077" src="https://www.shodhanews.com/wp-content/uploads/2025/11/8b11050b-2d4b-41db-9623-157c03308550.jpg?_t=1763224566" alt="" width="1024" height="1395" srcset="https://www.shodhanews.com/wp-content/uploads/2025/11/8b11050b-2d4b-41db-9623-157c03308550.jpg 626w, https://www.shodhanews.com/wp-content/uploads/2025/11/8b11050b-2d4b-41db-9623-157c03308550-440x600.jpg 440w, https://www.shodhanews.com/wp-content/uploads/2025/11/8b11050b-2d4b-41db-9623-157c03308550-564x768.jpg 564w, https://www.shodhanews.com/wp-content/uploads/2025/11/8b11050b-2d4b-41db-9623-157c03308550-150x204.jpg 150w, https://www.shodhanews.com/wp-content/uploads/2025/11/8b11050b-2d4b-41db-9623-157c03308550-450x613.jpg 450w" sizes="(max-width: 1024px) 100vw, 1024px" /><strong><span style="font-size: 14pt;">ವೀಡಿಯೋ ಜಾಡು ಹಿಡಿದು&#8230; </span></strong><br />
<span style="font-size: 14pt;">ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧಿಯಾಗಿದ್ದ ದರ್ಶನ್ ಪ್ರಕರಣದ ಮೂಲಕ ಪರಪ್ಪನ ಅಗ್ರಹಾರದೊಳಗಿನ ದಂಧೆಗಳ ಲೋಕ ಮತ್ತೊಮ್ಮೆ ಜನರ ಮುಂದೆ ಜಾಹೀರಾಗಿತ್ತು. ವಿಲ್ಸನ್ ಗಾರ್ಡನ್ ನಾಗನಂಥಾ ರೌಡಿಯೊಂದಿಗೆ ಸಿಗರೇಟು ಸೇದುತ್ತಿದ್ದ ದರ್ಶನ್ ಫೋಟೋ ಲೀಕಾದದ್ದೇ ದೊಡ್ಡ ಸುದ್ದಿಯೆನ್ನಿಸಿಕೊಂಡಿತ್ತು. ಅದಾದ ನಂತರ ದಾಸ ಬೇರೊಂದು ಜೈಲಿಗೆ ಕಮಾನೆತ್ತಿಸಿಕೊಂಡಿದ್ದೂ ನಡೆದಿತ್ತು. ಆ ಹಂತದಲ್ಲಿ ಗೊತ್ತಿಲ್ಲ ಖ್ಯಾತಿಯ ಗೃಹ ಸಚಿವರಾದ ಪರಮೇಶ್ವರ್ ಪರಪ್ಪನ ಅಗ್ರಹಾರಕ್ಕೆ ದಾಂಗುಡಿಯಿಟ್ಟು ಎಲ್ಲವನ್ನೂ ಸಪಾಟಾಗಿ ಸರಿಪಡಿಸಿರುವಂತೆ ಪೋಸು ಕೊಟ್ಟಿದ್ದರು. ಅದರ ಬೆನ್ನಲ್ಲಿಯೇ ಮತ್ತೋರ್ವ ರೌಡಿ ಗುಬ್ಬಚ್ಚಿ ಸೀನ ಪರಪ್ಪನ ಅಗ್ರಹಾರದೊಳಗೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ವಿಚಾರವೊಂದು ಸಾಕ್ಷಿ ಸಮೇತ ಜಾಹೀರಾಗಿತ್ತು. ಆ ಹಂತದಲ್ಲಿಯೂ ಗೃಹಸಚಿವರೆನ್ನಿಸಿಕೊಂಡ ಆಸಾಮಿ ಗಂಭೀರ ನಡೆ ಅನುಸರಿಸಲೇ ಇಲ್ಲ!</span><br />
<span style="font-size: 14pt;">ಈ ಬಾರಿ ಎರಡನೇ ಅಲೆಯಲ್ಲಿ ದರ್ಶನ್ ಜೈಲುಪಾಲಾದ ನಂತರ ಜೈಲಾಧಿಕಾರಿಯಾಗಿದ್ದ ಸುರೇಶ ಆರಂಭದಲ್ಲಿಯೇ ಆಟ ಕಟ್ಟಿದ್ದ. ಅದರ ಫಲವಾಗಿಯೇ ದರ್ಶನ್ ಎಂಟ್ರಿ ಹಾಕುತ್ತಿದ್ದ ಸಂದರ್ಭದಲ್ಲಿ ತೆಗೆದಿದ್ದ ಫೋಟೋ ಪರಪ್ಪನ ಅಗ್ರಹಾರದಿಂದ ಕಂಡೋರ ಮೊಬೈಲಿಗೆ ಹೊಕ್ಕು ಹರಿದಾಡಿತ್ತು. ತೀರಾ ಪರಪ್ಪನ ಅಗ್ರಹಾರದ ಕಂಪ್ಯೂಟರ್ ಕಡತದಲ್ಲಿದ್ದ ಫೋಟೋ ಲೀಕಾದದ್ದು ಗಂಭೀರ ವಿಚಾರ ಅಂತ ಗೃಹ ಸಚಿವರಿಗಾಗಲಿ, ಆಳೋ ಸರ್ಕಾರಕ್ಕಾಗಲಿ ಅನ್ನಿಸಲೇ ಇಲ್ಲ. ಬಹುಶಃ ಆ ಹಂತದಲ್ಲಿ ಪರಪ್ಪನ ಅಗ್ರಹಾರವನ್ನು ಅಧ್ವಾನವೆಬ್ಬಿಸಿದ್ದ ಸುರೇಶನಂಥಾ ಅಡ್ನಾಡಿ ಅಧಿಕಾರಿಯ ಬುಡಕ್ಕೊದ್ದು ಹೊರಗಟ್ಟಿದ್ದರೆ, ಇಂಥಾ ಅಧಿಕಾರಿಗಳ ನೆರಳಿನಂತೆ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಹುಡುಕಿ ಸೂಕ್ತ ಕ್ರಮ ಕೈಗೊಂಡಿದ್ದಿದ್ದರೆ ಅಷ್ಟರ ಮಟ್ಟಿಗೆ ಈ ಸರ್ಕಾರದ ನಡೆ ಪ್ರಶಂಶೆಗೆ ಪಾತ್ರವಾಗುತ್ತಿತ್ತು.</span><br />
<span style="font-size: 14pt;">ಆದರೆ, ಗೃಹ ಸಚಿವ ಜಿ. ಪರಮೇಶ್ವರ್ ಪರಪ್ಪನ ಅಗ್ರಹಾರದ ವಿಚಾರದಲ್ಲಿ ಮತ್ತಷ್ಟು ಅಧ್ವಾನಗಳಾಗುವಂಥಾ ನಡೆಯನ್ನೇ ಅನುಸರಿಸುತ್ತಾ ಮುನ್ನಡೆದಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ತಗುಲಿಕೊಂಡಿರುವ ರನ್ಯಾ ರಾವ್‌ಗೂ, ಪರಂಗೂ ಇರುವ ವ್ಯಾವಹಾರಿಕ ಕನೆಕ್ಷನ್ನುಗಳು ಯಾವತ್ತೋ ಬಯಲಾಗಿವೆ. ಇದೀಗ ಅದೇ ರನ್ಯಾ ತನ್ನ ಗೆಣೆಕಾರ ತರುಣ್ ವಿರಾಟ್ ಕೊಂಡೂರನ ಸಮೇತ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾಳೆ. ಇದೀಗ ವೈರಲ್ ಆಗಿರೋ ವೀಡಿಯೋಗಳಲ್ಲಿ ಭಯೋತ್ಪಾದಕ ಶಕೀಲ್ ಮುನ್ನ, ವಿಕೃತ ಕಾಮಿ ಉಮೇಶ್ ರೆಡ್ಡಿ ಜೊತೆಗೆ ರನ್ಯಾ ರಾವ್ ಗೆಳೆಯ ತರುಣ್ ಕೂಡಾ ಇದ್ದಾನೆ. ಇವರೆಲ್ಲರೂ ಜೈಲೊಳಗೆ ವೈಭೋಗದ ಬದುಕು ನಡೆಸುತ್ತಿರೋ ವೀಡಿಯೋದಿಂದಾಗಿ ಈ ಸರ್ಕಾರದ ಮಾನ ಹರಾಜಾಗಿಸಿದೆ. ಈ ಹಂತದಲ್ಲಿ ತಲೆನೆಟ್ಟಗಿರುವ ಗೃಹಸಚಿವನೊಬ್ಬ ಇದ್ದಿದ್ದರೆ, ಆತ ಈ ವೀಡಿಯೋದಲ್ಲಿರುವಂತೆ ಕ್ರಿಮಿಗಳಿಗೆ ಅಂಥಾ ಸೌಕರ್ಯ ಕೊಟ್ಟವರ್&#x200d;ಯಾರು ಅನ್ನೋದನ್ನು ಪತ್ತೆಹಚ್ಚಲು ಮುಂದಾಗುತ್ತಿದ್ದರು. ಆದರೆ, ಈ ಪರಮೇಶ್ವರ್ ವೀಡಿಯೋ ಲೀಕ್ ಮಾಡಿದ್ಯಾರೆಂಬ ಬಗ್ಗೆ ತಲೆಕೆಡಿಸಿಕೊಂಡು ತಲಾಶಿಗಿಳಿಯುತ್ತಾರೆಂದರೆ, ಅವರ ಅಸಲೀ ಆಧ್ಯತೆ ಏನೆಂಬುದು ಯಾರಿಗಾದರೂ ಅರ್ಥವಾಗುತ್ತೆ!</span></p>
<p style="text-align: justify;"><strong><span style="font-size: 14pt;">ಸುರೇಶನ ಮೇಲೇಕೆ ಅಕ್ಕರೆ?</span></strong></p>
<p style="text-align: justify;"><img decoding="async" class="alignnone size-medium wp-image-14092" src="https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1-800x428.jpg" alt="" width="800" height="428" srcset="https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1-800x428.jpg 800w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1-1024x547.jpg 1024w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1-768x410.jpg 768w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1-1536x821.jpg 1536w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1-150x80.jpg 150w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1-450x240.jpg 450w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1-1200x641.jpg 1200w, https://www.shodhanews.com/wp-content/uploads/2025/11/d1b2d5b4-77b5-404c-a23a-41f226756f07-1.jpg 1600w" sizes="(max-width: 800px) 100vw, 800px" /><span style="font-size: 14pt;">ಇದುವರೆಗೂ ಪರಪ್ಪನ ಅಗ್ರಹಾರದ ಅಂದಾದುಂದಿಗಳು ಜಾಹೀರಾದಾಗೆಲ್ಲ ಅಮಾಯಕರನ್ನು ಅಮಾನತುಗೊಳಿಸಿ ತ್ಯಾಪೆ ಹಚ್ಚುವ ಪ್ರಯತ್ನಗಳೇ ಹೆಚ್ಚಾಗಿ ನಡೆದುಕೊಂಡು ಬಂದಿವೆ. ಈ ಹಿಂದೆ ಗುಬ್ಬಚ್ಚಿ ಸೀನನ ಬರ್ತ್‌ಡೇ ಆಚರಣೆ ಪ್ರಕರಣದಲ್ಲಿಯೂ ಖಾಕಿ ಗುಬ್ಬಚ್ಚಿಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿತ್ತು. ಈ ಬಾರಿಯೂ ಕೂಡಾ ಒಂದಷ್ಟು ಕರ್ತವ್ಯ ನಿಷ್ಠೆ ಉಳಿಸಿಕೊಂಡಿದ್ದವರನ್ನು ಅಮಾನತುಗೊಳಿಸಿ, ಪರಪ್ಪನ ಅಗ್ರಹಾರದ ವ್ಯವಸ್ಥೆ ಹಡಾಲೇಳಲು ಪ್ರಮುಖ ಕಾರಣನಾದ ಜೈಲಾಧಿಕಾರಿ ಸುರೇಶನನ್ನು ವರ್ಗಾವಣೆ ಮಾಡಲಾಗಿದೆ. ಈ ಸುರೇಶನ ಮೇಲಿರೋ ಆರೋಪಗಳು ಒಂದೆರಡಲ್ಲ. ಹಾಗಿದ್ದರೂ ಯಾಕೆ ಆತ ಪದೇ ಪದೆ ಬಚಾವಾಗುತ್ತಿದ್ದಾನೆ ಎಂಬ ನಿಟ್ಟಿನಲ್ಲಿ ನೋಡ ಹೋದರೆ, ನೇರಾನೇರ ಗೃಹಸಚಿವನ ಕೃಪಾಕಟಾಕ್ಷದ ಕಹಾನಿಯೊಂದು ಬಯಲಾಗುತ್ತೆ.</span></p>
<p style="text-align: justify;"><img decoding="async" class="alignnone wp-image-14078" src="https://www.shodhanews.com/wp-content/uploads/2025/11/1bb1fa31-85fd-4a46-b90e-21578ee9b51c.jpg" alt="" width="1024" height="1697" srcset="https://www.shodhanews.com/wp-content/uploads/2025/11/1bb1fa31-85fd-4a46-b90e-21578ee9b51c.jpg 353w, https://www.shodhanews.com/wp-content/uploads/2025/11/1bb1fa31-85fd-4a46-b90e-21578ee9b51c-150x249.jpg 150w" sizes="(max-width: 1024px) 100vw, 1024px" /><span style="font-size: 14pt;">ಈತ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಬಂಧಿಯಾಗಿರುವ ಮಾಯಾಂಗನೆ ರನ್ಯಾ ರಾವ್ ಗೂ ಕೂಡಾ ಸಕಲ ಸೌಲಭ್ಯಗಳನ್ನು ಕೊಟ್ಟಿದ್ದಾನೆಂಬ ಮಾತಿದೆ. ತನ್ನದೇ ಮೊಬೈಲಿನ ಮೂಲಕ ರನ್ಯಾ ರಾವ್ ಪರಂ ಜೊತೆ ಮಾತಾಡಲು ಸುರೇಶ ಅವಕಾಶ ಮಾಡಿ ಕೊಟ್ಟಿದ್ದನಾ? ಅಂಥಾ ವೀಡಿಯೋ ಕಾಲ್‌ಗಳನ್ನು ಚಾಲಾಕಿ ಸುರೇಶ ರೆಕಾರ್ಡು ಮಾಡಿಟ್ಟುಕೊಂಡಿದ್ದನಾ? ಒಂದು ವೇಳೆ ಆತನನ್ನು ಒತ್ತಡಕ್ಕೆ ಮಣಿದು ಅಮಾನತುಗೊಳಿಸಿದರೆ, ತನ್ನ ಅಸಲೀ ಕಥೆ ಬೀದಿಗೆ ಬರುತ್ತದೆಂಬ ಭಯದಿಂದ ಪರಂ ಸುರೇಶನ ತಲೆ ಕಾಯುತ್ತಿದ್ದಾರಾ? ಹೀಗೆ ಪೊಲೀಸ್ ವಲಯದಲ್ಲಿಯೇ ನಾನಾ ದಿಕ್ಕಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ರನ್ಯಾ ರಾವ್ ಆಟಗಳು ಎಂಥಾದ್ದಿವೆಯೆಂದರೆ, ತನ್ನ ಗೆಣೆಜಕಾರನಿಗೂ ರಾಜಾತಿಥ್ಯ ಸಿಗುವಂತೆ ನೋಡಿಕೊಂಡಿದ್ದಾಳೆ. ಇದೆಲ್ಲವೂ ಪರಂ ನೆರಳಿಲ್ಲದೆ ನಡೆಯಲು ಸಾಧ್ಯವೇ?</span></p>
<p style="text-align: justify;"><strong><span style="font-size: 14pt;">ನಿಂಬೆಹಣ್ಣು ರೇವಣ್ಣನ ಕೈಚಳಕ</span></strong></p>
<p style="text-align: justify;"><strong><span style="font-size: 14pt;"><img loading="lazy" decoding="async" class="alignnone wp-image-14079" src="https://www.shodhanews.com/wp-content/uploads/2025/11/HD-Revanna-696x392-1.avif" alt="" width="1024" height="577" /> </span></strong><span style="font-size: 14pt;">ಕಾನೂನು ಕಟ್ಟಳೆಗಳನ್ನು ಬಲಿಕೊಟ್ಟು, ಅಧಿಕಾರಸ್ಥರ ಬೂಟು ನೆಕ್ಕಲು ನಿಂತ ಅಧಿಕಾರಿಯೋರ್ವನಿಗೆ ನಾನಾ ಆಯಾಮಗಳ ನಂಟಿರುತ್ತದೆ. ಈ ಹಿಂದೆ ಪರಪ್ಪನ ಅಗ್ರಹಾರದ ಜೈಲಾಧಿಕಾರಿಯಾಗಿದ್ದ ಸುರೇಶನನ್ನು ಗೃಹಸಚಿವ ಮಾತ್ರವೇ ಕಾಪಾಡುತ್ತಿದ್ದಾರೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಸುರೇಶ ಅಧಿಕಾರ ಬಳಸಿಕೊಂಡು ಎಲ್ಲ ಕ್ರಿಮಿಗಳಿಗೂ ಸೇವೆ ಮಾಡಿದ್ದಾನೆ. ಎಳೇ ಹುಡುಗಿಯರು ಮಾತ್ರವಲ್ಲ; ಹಳೇ ಮುದುಕಿಯರನ್ನೂ ಬಿಡದ ಪರಮ ಕಾಮುಕ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಸೇರಿಕೊಂಡು ವರ್ಷ ಕಳೆದಿದೆ. ಹಾಗೆ ಆತ ಜೈಲು ಪಾಲಾದಾಗಿನಿಂದಲೂ ಸುರೇಶನ ಕಡೆಯಿಂದ ರಾಜಾತಿಥ್ಯ ನಡೆಯುತ್ತಾ ಬಂದಿತ್ತೆಂದು ಪರಪ್ಪನ ಅಗ್ರಹಾರದ ಪಡಸಾಲೆಯಲ್ಲಿ ಗುಲ್ಲೆದ್ದಿದೆ. ಅಂಥಾದ್ದೊಂದು ವೈಭೋಗ ರೇಪಿಸ್ಟ್ ಪ್ರಜ್ವಲ್‌ಗೆ ದಕ್ಕಿರೋದರ ಹಿಂದೆ ಆತನ ಪಿತಾಶ್ರೀ ರೇವಣ್ಣನ ಶ್ರಮವಿದೆ.</span><br />
<span style="font-size: 14pt;">ಹೇಳಿಕೇಳಿ ರೇವಣ್ಣ ಮುಖ್ಯಮಂತ್ರಿ ಸಿದ್ಧರಾಮಯ್ಯ ಜೊತೆ ಆತ್ಮೀಯ ಬಂಧ ಹೊಂದಿದ್ದಾರೆ. ಈಗಂತೂ ತನ್ನ ಕಚ್ಚೆಹರುಕ ಬುದ್ಧಿಯಿಂದ ದೇವೇಗೌಡರ ಪಾಳೆಯದಿಂದ ರೇವಣ್ಣ ಫ್ಯಾಮಿಲಿ ಹೊರದಬ್ಬಿಸಿಕೊಂಡಿದೆ. ಅನಧಿಕೃತವಾಗಿ ಜೆಡಿಎದಸ್‌ನಿಂದ ಭಹಿಷ್ಕಾರಕ್ಕೀಡಾಗಿರೋ ರೇವಣ್ಣ ತನ್ನ ಸಹೋದರ ಕುಮಾರಣ್ಣನ ಮೇಲೆ ನಖಶಿಖಾಂತ ಕೋಪವಿಟ್ಟುಕೊಂಡಿದ್ದಾರೆ. ಇಂಥಾ ಸಮಾನ ಮನಃಸ್ಥಿತಿ ಹೊಂದಿರುವ ಸಿದ್ದಣ್ಣನಿಗೆ ದುಂಬಾಲು ಬಿದ್ದಿದ್ದ ರೇವಣ್ಣ ಪ್ರಜ್ವಲ್‌ಗೆ ರಾಜಾತಿಥ್ಯ ದೊರೆಯುವಂತೆ ಮಾಡಿದ್ದರೆ ಅಚ್ಚರಿಯೇನಿಲ್ಲ. ಸಿದ್ದಣ್ಣನ ಕಡೆಯಿಂದ ಇಂಥಾದ್ದೊಂದು ಸೀಕ್ರೆಟ್ ಠರಾವು ಪರಂ ಮೂಲಕ ಸುರೇಶನಿಗೆ ರವಾನೆಯಾಗಿರಬಹುದು. ಈಗಂತೂ ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆಯಾಗಿದೆ. ಇಂಥಾ ಹೊತ್ತಿನಲ್ಲಿ ಸುರೇಶ ತೊಲಗಿದರೆ, ತನ್ನ ಮಗ ಅನಾಥ ಶಿಶುವಾಗುತ್ತಾನೆಂಬ ಭಯ ರೇವಣ್ಣನನ್ನು ಆವರಿಸಿದಂತಿದೆ. ಒಂದು ಮೂಲದ ಪ್ರಕಾರ, ರೇವಣ್ಣ ಈ ಕ್ಷಣದವರೆಗೂ ಸುರೇಶನ ತಲೆ ಕಾಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸುರೇಶನ ಮೇಲೆ ಗಂಭೀರ ಆರೋಪಗಳಿರೋದರಿಂದ ಬೇರೆ ನಿರ್ವಾಹವಿಲ್ಲದೆ ಗೃಹ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ!</span></p>
<p style="text-align: justify;"><strong><span style="font-size: 14pt;">ನಿಜಕ್ಕೂ ಆಗಬೇಕಿದ್ದದ್ದೇನು?</span></strong></p>
<figure id="attachment_14080" aria-describedby="caption-attachment-14080" style="width: 1024px" class="wp-caption alignnone"><img loading="lazy" decoding="async" class="wp-image-14080" src="https://www.shodhanews.com/wp-content/uploads/2025/11/karna-426x600.jpg" alt="" width="1024" height="1442" srcset="https://www.shodhanews.com/wp-content/uploads/2025/11/karna-426x600.jpg 426w, https://www.shodhanews.com/wp-content/uploads/2025/11/karna-545x768.jpg 545w, https://www.shodhanews.com/wp-content/uploads/2025/11/karna-768x1081.jpg 768w, https://www.shodhanews.com/wp-content/uploads/2025/11/karna-150x211.jpg 150w, https://www.shodhanews.com/wp-content/uploads/2025/11/karna-450x634.jpg 450w, https://www.shodhanews.com/wp-content/uploads/2025/11/karna.jpg 1017w" sizes="(max-width: 1024px) 100vw, 1024px" /><figcaption id="caption-attachment-14080" class="wp-caption-text">ಕರ್ಣ ಕ್ಷತ್ರಿಯ</figcaption></figure>
<p style="text-align: justify;"><span style="font-size: 14pt;">ಪರಪ್ಪನ ಅಗ್ರಹಾರದೊಳಗೆ ಸ್ವಚ್ಛಂದವಾಗಿರೋ ವಿಕೃತಕಾಮಿ, ಭಯೋತ್ಪಾದಕರು ಮತ್ತು ವಂಚಕರ ಪುರಾಣ ಬಯಲಾಗುತ್ತಲೇ ಸರ್ಕಾರದ ಕಡೆಯಿಂದ ಖಡಕ್ಕಾದ ಕ್ರಮ ಜರುಗಬೇಕಿತ್ತು. ಪರಂಗೆ ಬೆನ್ನ ಹುರಿ ನೆಟ್ಟಗಿದ್ದಿದ್ದರೆ, ಈ ವೀಡಿಯೋ ಲೀಕ್ ಮಾಡಿದ್ಯಾರೆಂಬ ಬಗ್ಗೆ ತನಿಖೆ ನಡೆಸುತ್ತಿರಲಿಲ್ಲ. ಅದರ ಭಾಗವಾಗಿ ದರ್ಶನ್ ಆಪ್ತ ಧನ್ವೀರನನ್ನು ವಿಚಾರಣೆಗೊಳಪಡಿಸುವ ಜೋಕೊಂದು ನಡೆಯುತ್ತಿರಲಿಲ್ಲ. ಹಾಗಾದರೆ, ನಿಜಕ್ಕೂ ಆಗಬೇಕಿದ್ದದ್ದು, ಮುಂದಾದರೂ ಆಗಲೇ ಬೇಕಿರೋದೇನು? ಈ ಪ್ರಶ್ನೆಗೆ ನಿಖರ ಉತ್ತರ ಲಾಗಾಯ್ತಿನಿಂದಲೂ ರೆಡಿಯಿದೆ. ಪ;ರಪ್ಪನ ಅಗ್ರಹಾರವನ್ನು ದಂಧೆಯ ಉಗ್ರಾಣವಾಗಿಸಿರುವ ಖೂಳ ಅಧಿಕಾರಿಗಳನ್ನು ಖಾಕಿ ಕಳಚಿ ಹೊರದಬ್ಬೋದು ಮತ್ತು ಖಡಕ್ಕಾದ, ಸಾಮಾಜಿಕ ಕಳಕಳಿ ಇರುವ ನಿಷ್ಠಾವಂತ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ತಂದು ಕೂರಿಸುವ ಕೆಲಸ ನಿಜಕ್ಕೂ ಆಗಬೇಕಿದೆ.</span><br />
<span style="font-size: 14pt;">ಈವತ್ತಿಗೆ ಮಾಲಿನಿ ಕೃಷ್ಣಮೂರ್ತಿಯ ಭಂಟನಾಗಿದ್ದ ಮುಖ್ಯ ಜೈಲು ಅಧೀಕ್ಷಕನಾಗಿದ್ದ ಸುರೇಶನ ಜೊತೆಗೆ ಮತ್ತೊಂದಷ್ಟು ಭ್ರಷ್ಟ ಹೆಗ್ಗಣಗಳು ಪರಪ್ಪನ ಅಗ್ರಹಾರದಲ್ಲಿವೆ. ಅಸಿಸ್ಟೆಂಟ್ ಸೂಪರಿಡೆಂಟ್ ಕರ್ಣ ಕ್ಷತ್ರಿಯ, ಅಶೋಕ್ ಭಜಂತ್ರಿಯಂಥಾ ಕಂತ್ರಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ. ಇದು ಹೇಳಿಕೇಳಿ ಬಹುದೊಡ್ಡ ಜೈಲಾಗಿರೋದರಿಂದ, ಸರಿಕಟ್ಟಾದ ಜಾಗಗಳಲ್ಲಿ ಭ್ರಷ್ಟ ಅಧಿಕಾರಿಗಳು ತಮ್ಮ ನೆಂಟರೇ ಇರುವಂತೆ ನೋಡಿಕೊಂಡಿದ್ದಾರೆ. ಇಂಥವರ ಕಾರಣದಿಂದಲೇ ಭಯೋತ್ಪಾದಕರ ಕೈಯಲ್ಲಿಯೂ ಮೊಬೈಲು ಕುಣಿದಾಡುತ್ತಿದೆ. ಕ್ರಿಮಿನಲ್ಲುಜಗಳು ಎಣ್ಣೆ ಪಾರ್ಟಿ ನಡೆಸುತ್ತಾ ಹಾಯಾಗಿದ್ದಾರೆ. ವಿಕೃತ ಕಾಮಿ ಉಮೇಶ ಯಾರ್&#x200d;ಯಾರೊಂದಿಗೋ ಮೊಬೈಲಿನಲ್ಲಿ ಹರಟುತ್ತಾ ಓಡಾಡಿಕೊಂಡಿದ್ದಾನೆ. ಇನ್ನು ನಾನಾ ಅಪರಾಧ ಪ್ರಕರಣ ಗಳಲ್ಲಿ ಭಾಗಿಯಾಗಿ ಒಳ ಬಂದಿರುವ ಕೈದಿಗಳಿಗೂ ಇಂಥಾ ಸೌಕರ್ಯಗಳ ಭಾಗ್ಯವನ್ನು ಕರುಣಿಸಲಾಗಿದೆ. ಅದಕ್ಕೆ ಕಾರಣರಾದವರ ಅಂಡಿಗೊದ್ದು ಹೊರಗಟ್ಟುವ ಗತ್ತು ಗೃಹಸಚಿವನಿಗಂತೂ ಇಲ್ಲ. ಎಲ್ಲ ಮುಲಾಜುಗಳಾಚೆಗೆ ಪರಪ್ಪನ ಅಗ್ರಹಾರದ ಅವ್ಯವಸ್ಥೆಗಳ ಬಗ್ಗೆ ಸಿದ್ದರಾಮಯ್ಯನವರಾದರೂ ಗಮನ ಹರಿಸುವ ತುರ್ತಿದೆ.</span><br />
<span style="font-size: 14pt;">ದರ್ಶನ್‌ಗೆ ರಾಜಾತಿಥ್ಯ ನೀಡಿದ ಕೇಸಿನಲ್ಲಿ ಒಂದಷ್ಟು ಜೈಲಾಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತಲ್ಲಾ? ಆಗ ಈ ಹಿಂದೆ ಬಂಧೀಖಾನೆ ಡಿಜಿಯಾಗಿದ್ದ ಮಾಲಿನಿ ಕೃಷ್ಣಮೂರ್ತಿಯ ಕೃಪಾಶೀರ್ವಾದದಿಂದ ಮುಖ್ಯ ಅಧೀಕ್ಷಕನಾಗಿ ಒಲಕ್ಕರಿಸಿಕೊಂಡಿದ್ದವನು ಸುರೇಶ. ಈ ಬೃಹತ್ ಬಂಧೀಖಾನೆಯನ್ನು ಸಂಭಾಳಿಸುವ ಯಾವ ನುಭವವೂ ಇಲ್ಲದ ಸುರೇಶ, ಅದಾಗಲೇ ಅಲ್ಲಿ ಗೆಬರಲು ನಿಂತಿದ್ದ ಪಟಾಲಮ್ಮಿನ ಸೂತ್ರಧಾರಿಕೆ ವಹಿಸಿಕೊಂಡಿದ್ದ. ಅಸಿಸ್ಟೆಂಟ್ ಸೂಪರಿಡೆಂಟ್ ಕರ್ಣ ಕ್ಷತ್ರಿಯ ಮತ್ತು ಅಶೋಕ್ ಭಜಂತ್ರಿ ತಮ್ಮ ಅಧೀನದಲ್ಲಿರುವ ಒಂದಷ್ಟು ಜೈಲರುಗಳನ್ನು ದಂಧೆಗಿಳಿಸಿದ್ದರು. ಜೈಲರುಗಳಾದ ಕಾಂತಪ್ಪ, ಗೋಪಿನಾಥ್, ಎಸ್.ಎಂ, ಬೆಳಗಾವಿ ಮುಂತಾದವರು ಲಕ್ಷಣವಾಗಿ ಎಲ್ಲದರಲ್ಲೂ ಕಮಾಯಿ ನಡೆಸಲಾರಂಭಿಸಿದ್ದರು!</span></p>
<p style="text-align: justify;"><strong><span style="font-size: 14pt;">ಬೆಚ್ಚಿಬೀಳಿಸೋ ದಂಧೆ</span></strong></p>
<p style="text-align: justify;"><img loading="lazy" decoding="async" class="alignnone wp-image-14081" src="https://www.shodhanews.com/wp-content/uploads/2025/11/16b63c18-95e5-4b85-843b-c9b56c08912c-800x396.jpg" alt="" width="1024" height="507" srcset="https://www.shodhanews.com/wp-content/uploads/2025/11/16b63c18-95e5-4b85-843b-c9b56c08912c-800x396.jpg 800w, https://www.shodhanews.com/wp-content/uploads/2025/11/16b63c18-95e5-4b85-843b-c9b56c08912c-1024x507.jpg 1024w, https://www.shodhanews.com/wp-content/uploads/2025/11/16b63c18-95e5-4b85-843b-c9b56c08912c-768x380.jpg 768w, https://www.shodhanews.com/wp-content/uploads/2025/11/16b63c18-95e5-4b85-843b-c9b56c08912c-150x74.jpg 150w, https://www.shodhanews.com/wp-content/uploads/2025/11/16b63c18-95e5-4b85-843b-c9b56c08912c-450x223.jpg 450w, https://www.shodhanews.com/wp-content/uploads/2025/11/16b63c18-95e5-4b85-843b-c9b56c08912c.jpg 1080w" sizes="(max-width: 1024px) 100vw, 1024px" /><br />
<span style="font-size: 14pt;">ಇದೀಗ ಅಮಾನತು ಶಿಕ್ಷೆಯಿಂದ ಈ ಕ್ಷಣಕ್ಕೆ ಬಚಾವಾಗಿ, ವರ್ಗಾವಣೆಗೊಂಡಿರುವ ಮಾಜೀ ಮುಖ್ಯ ಅಧೀಕ್ಷಕರ ಸುರೇಶನ ಲೀಲೆಗಳು ಒಂದೆರಡಲ್ಲ. ಪರಿವರ್ತನೆಯ ಕೇಂದ್ರವಾಗಬೇಕಿದ್ದ ಪರಪ್ಪನ ಅಗ್ರಹಾರವನ್ನೀತ ಅಕ್ಷರಶಃ ದಂಧೆಗಳ ಕಾರಸ್ಥಾನವಾಗಿಸಿ ಬಿಟ್ಟಿದ್ದ. ಯಾಕೆ ಈತನ ಮೇಲೆ ಕಠಿಣ ಕ್ರಮ ಜರುಗಬೇಕೆಂಬ ಪ್ರಶ್ನೆಯೇನಾದರೂ ನಿಮ್ಮಲ್ಲಿದ್ದರೆ, ಆತ ಮಾಡಿರುವ ಘನ ಕಾರ್ಯದ ವಿವರಗಳೇ ಅದಕ್ಕುತ್ತರವಾಗಿ ನಿಲ್ಲುತ್ತವೆ. ಥೇಟು ದಂಧೆಕೋರನಂತೆ ಪ್ರತಿಯೊಂದಕ್ಕೂ ದರಪಟ್ಟಿ ನಿಗಧಿಗೊಳಿಸಿದ್ದ ಸುರೇಶ, ಹಂತ ಹಂತವಾಗಿ ಪರಪ್ಪನಗ್ರಹಾರದ ವಾತಾವರಣವನ್ನು ಮತ್ತಷ್ಟು ಹದಗೆಡಿಸಿಬಿಟ್ಟಿದ್ದ. ಯಾವನೇ ಕ್ವಾರಂಟೈನ್ ರೂಮಿನಿಂದ ನೇರವಾಗಿ ಸ್ಪೆಷಲ್ ಸೆಲ್ ಬ್ರಾರಕ್ಕಿನೊಳಗೆ ಪ್ರವೇಶ ಪಡೆಯಲು ಸುರೇಶನ ದರ್ಭಾರಿನಲ್ಲಿ ಒಂದು ಲಕ್ಷ ನಿಗಧಿಯಾಗಿತ್ತು. </span><br />
<span style="font-size: 14pt;">ಈ ಬಾರಿ ವೈರಲ್ ಆಗಿದ್ದ ವೀಡಿಯೋ ನೋಡಿದವರಿಗೆ ಆಂಡ್ರಾಯ್ಡ್ ಮೊಬೈಲು ಭಯೋತ್ಪಾದಕರು ಮತ್ತು ವಿಕೃತ ಕಾಮಿಯ ಕೈಗವೆ ಸಿಕ್ಕಿದ್ದು ಹೇಗೆಂಬ ಪ್ರಶ್ನೆ ಮೂಡಿಕೊಂಡಿತ್ತು. ಅದಕ್ಕೂ ಕೂಡಾ ಸುರೇಶನ ದಂಧೆಗಳ ಹಿಸ್ಟರಿಯಲ್ಲೇ ಉತ್ತರ ಅಡಗಿದೆ. ಈತನ ದರ್ಭಾರಿನಲ್ಲಿ ಇಂಥಾ ಅಚ್ಚುಕಟ್ಟಾದ ಮೊಬೈಲ್ ಸೇವೆಗೆ ಒಂದು ಲಕ್ಷ ರೂಪಾಯಿ ನಿಗಧಿಯಾಗಿತ್ತು. ವಿಐಪಿ ಸೆಲ್ಲುಗಳಿಗಂತೂ ತಿಂಗಳಿಗೆ ಲಕ್ಷಗಟ್ಟಲೆ ಬಾಡಿಗೆ ನಿಗಧಿಯಾಗಿತ್ತು. ಒಂದು ಸೆಲ್ಲಿನಿಂದ ಮತ್ತೊಂದಕ್ಕೆ ಶಿಫ್ಟ್ ಮಾಡಲು ಕನಿಷ್ಠ ಒಂದು ಲಕ್ಷ ನಿಗಧಿಯಾಗಿತ್ತು. ಇನ್ನುಳಿದಂತೆ ಸ್ಪೆಷಲ್ ಎಂಟ್ರಿ, ನಾರ್ಮಲ್ ಎಂಟ್ರಿ ಸೇರಿದಂತೆ ಎಲ್ಲದಕ್ಕೂ ಸಾವಿರಗಟ್ಟಲೆ ರೊಕ್ಕದ ಚಾರ್ಟು ನಿಗಧಿಯಾಗಿತ್ತು. ಇದಕ್ಕಿಂತಲೂ ಭಯಾನಕ ವಿಚಾರವೆಂದರೆ, ಜೈಲಿನ ಭದ್ರತಾ ಸಿಬ್ಬಂದಿಯೇ ಎಂಡಿಎಂ ಗುಳಿಗೆ, ಗಾಂಜಾ, ಹಶೀಶ್ ಮುಂತಾದ ದ್ರಗ್ಸ್‌ಗಳನ್ನು ದುಪ್ಪಟ್ಟು ರೇಟಿಗೆ ಮಾರೋ ದಲ್ಲಾಳಿಗಳಂತಾಗಿದ್ದಾರೆಂಬ ಘನ ಗಂಭೀರ ಆರೋಪವಿದೆ!</span><br />
<span style="font-size: 14pt;">ಹೀಗೆ ದೋಚಿಕೊಂಡ ಕಾಸಿನಲ್ಲಿಯೇ ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ವರ್ಗದ ಕೆಲ ಮಂದಿ ಕೋಟಿ ಕುಳಗಳಾಗಿ ಮೆರೆಯುತ್ತಿದ್ದಾರೆ. ಇಂಥಾ ಕೂಳುಬಾಕ ಅಧಿಕಾರಿಗಳಿಗೆ ಕಾಸಿನ ರುಚಿ ತೋರಿಸಿದರೆ ಭಯೋತ್ಪಾದಕರಿಗೂ ಕೇಳಿದ್ದೆಲ್ಲ ಸಿಗುತ್ತದೆ. ಈ ಪಟಾಲಮ್ಮಿಗಾಗಿಯೇ ದನದ ಮಾಂಸ ಮತ್ತು ಮೊಬೈಲುಗಳೂ ಜೈಲೊಳಗೆ ತೂರಿಕೊಳ್ಳುತ್ತವೆ. ದಯಾನಂದ್ ಅವರು ಎಂಟ್ರಿ ಕೊಟ್ಟ ಮೇಲೆ ಇಂಥಾ ಒಂದಷ್ಟು ದಂಧೆಗಳಿಗೆ ಕಡಿವಾಣ ಹಾಕಲು ಯತ್ನಿಸಿದ್ದರೂ ಕೂಡಾ ಕೆಳಹಂತದ ಅಧಿಕಾರಿಗಳು ಎಲ್ಲವನ್ನೂ ಬಾಚಿಕೊಂಡು, ಸಿಕ್ಕಿದ್ದನ್ನು ಹಂಚಿಕೊಂಡು ಮಜವಾಗಿದ್ದಾರೆ. ಇವರೆಲ್ಲ ಎಂಥಾ ಅಡ್ನಾಡಿಗಳೆಂದರೆ, ಯಾವ ಥರದ ಕ್ರಿಮಿನಲ್ಲುಗಳಿಗೂ ಕೂಡಾ ಬರ್ತ್‌ಡೇ ಪಾರ್ಟಿ ಆಚರಿಸೋದೂ ಸೇರಿದಂತೆ, ಹೊರಜಗತ್ತಿನ ಫೀಲ್ ಮೂಡಿಸಲು ಕಟಿಬದ್ಧರಾಗಿ ನಿಂತಿದ್ದಾರೆ. ಇಂಥವರು ಲೂಟಿ ಕಾಸಲ್ಲಿ ಖರೀದಿಸಿದ ಆಸ್ತಿ, ಕೋಟಿ ಕಿಮ್ಮತ್ತಿನ ಕಾರ್ನರ್ ಸೈಟುಗಳ ವಿವರವನ್ನು ಸರಿಕಟ್ಟಾದ ತನಿಖೆಯೊಂದು ಸಾಕ್ಷಿ ಸಮೇತ ಜಾಹೀರು ಮಾಡುತ್ತದೆ. ಆದರೆ, ನಮ್ಮ ಗೃಹ ಸಚಿವರು ಮಾತ್ರ ವೀಡಿಯೋದಲ್ಲಿರುವ ಅಧ್ವಾನಕ್ಕೆ ಕಾರಣರಾದ ಇಂಥಾ ಭ್ರಷ್ಟರ ಅಂಡಿಗೊದ್ದು ಹೊರದಬ್ಬೋದನ್ನು ಬಿಟ್ಟು, ವೀಡಿಯೋ ಲೀಕ್ ಮಾಡಿದ್ಯಾರೆಂಬುದರ ಬಗ್ಗೆ ತಲೆಕೆಡಿಸಿಕೊಂಡು ಕೂತಿದ್ದಾರೆ!</span></p>
<p style="text-align: justify;"><strong><span style="font-size: 14pt;">ಮತ್ತೊಂದು ವಿವಾದ!</span></strong></p>
<p style="text-align: justify;"><img loading="lazy" decoding="async" class="alignnone wp-image-14082" src="https://www.shodhanews.com/wp-content/uploads/2025/11/43c07a93-b2b6-4d77-8e63-555c60836b53.jpg" alt="" width="1024" height="1296" srcset="https://www.shodhanews.com/wp-content/uploads/2025/11/43c07a93-b2b6-4d77-8e63-555c60836b53.jpg 343w, https://www.shodhanews.com/wp-content/uploads/2025/11/43c07a93-b2b6-4d77-8e63-555c60836b53-150x190.jpg 150w" sizes="(max-width: 1024px) 100vw, 1024px" /><span style="font-size: 14pt;">ದಿವ್ಯಶ್ರೀ ಈಗ ಪರಪ್ಪನ ಅಗ್ರಹಾರ ಬಂಧಿಖಾನೆಯ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಜೈಲಿನಲ್ಲಿ ಭಯೋತ್ಪಾದಕರು ಕೈಲಿ ಮೊಬೈಲು ಹಿಡಿದು ಅಡ್ಡಾಡುತ್ತಿರುವಾಗ, ವಿಕೃತ ಕಾಮಿ ಉಮೇಶ್ ರೆಡ್ಡಿ ಸುಖದ ಸುಪ್ಪತ್ತಿಗೆಯಲ್ಲಿ ಮಿಂದೇಳುತ್ತಿರುವಾಗ, ವಂಚಕರು, ಕ್ರಿಮಿನಲ್ಲುಗಳು ಜೈಲೊಳಗೇ ಎಣ್ಣೆ ಪಾರ್ಟಿ ನಡೆಸುತ್ತಿರುವಾಗ ಅದೆಲ್ಲವನ್ನೂ ನೋಡಿ ಕಣ್ಮುಚ್ಚಿ ಕುಳಿತಿದ್ದರಾ? ಇಂಥಾ ಅಕ್ರಮಗಳಿಂದ ಸಂಗ್ರಹವಾದ ಹಣದಲ್ಲಿ ಪಾಲು ಪಡೆದು ಸುಮ್ಮನಿದ್ದರಾ ಎಂಬಂಥಾ ಗುಮಾನಿಗಳು ಸಹಜವಾಗಿಯೇ ಕಾಡುತ್ತದೆ. ಇದೀಗ ಇಂಥಾ ನಾನ್ ಐಪಿಎಸ್ ಅಧಿಕಾರಿಣಿಯ ಕೈಕೆಳಗೆ ಓರ್ವ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡುವ ಮೂಲಕ ಪರಂ ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ!</span></p>
<p style="text-align: justify;"><img loading="lazy" decoding="async" class="alignnone wp-image-14083" src="https://www.shodhanews.com/wp-content/uploads/2025/11/01940465-731f-434e-a2e6-e7abc3978c2e-800x417.jpg" alt="" width="1024" height="534" srcset="https://www.shodhanews.com/wp-content/uploads/2025/11/01940465-731f-434e-a2e6-e7abc3978c2e-800x417.jpg 800w, https://www.shodhanews.com/wp-content/uploads/2025/11/01940465-731f-434e-a2e6-e7abc3978c2e-1024x534.jpg 1024w, https://www.shodhanews.com/wp-content/uploads/2025/11/01940465-731f-434e-a2e6-e7abc3978c2e-768x400.jpg 768w, https://www.shodhanews.com/wp-content/uploads/2025/11/01940465-731f-434e-a2e6-e7abc3978c2e-150x78.jpg 150w, https://www.shodhanews.com/wp-content/uploads/2025/11/01940465-731f-434e-a2e6-e7abc3978c2e-450x235.jpg 450w, https://www.shodhanews.com/wp-content/uploads/2025/11/01940465-731f-434e-a2e6-e7abc3978c2e.jpg 1080w" sizes="(max-width: 1024px) 100vw, 1024px" /><br />
<span style="font-size: 14pt;">ಓರ್ವ ನಾನ್ ಐಪಿಎಸ್ ಅಧಿಕಾರಿಗೆ ಸೆಲ್ಯೂಟ್ ಹೊಡೆದು, ಐಪಿಎಸ್ ಅಧಿಕಾರಿಯೋರ್ವ ಚಾರ್ಜ್ ತೆಗೆದುಕೊಳ್ಳೋದು ಸಾಧ್ಯವಾ? ಇದು ಒಂದು ರೀತಿಯಲ್ಲಿ ಐಪಿಎಸ್ ಅಧಿಕಾರಿ ಅಂಶುಕುಮಾರ್ ಅವರಿಗೆ ಅವಮಾನ ಮಾಡಿದಂತಲ್ಲವೇ? ೨೦೧೯ರ ಬ್ಯಾಚಿನ ಐಪಿಎಸ್ ಅಧಿಕಾರಿಯಾದ ಅಂಶುಕುಮಾರ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಸೂಪರಿಡೆಂಟ್ ಆಗಿ ಪರಮೇಶ್ವರ್ ನೇಮಿಸಿದ್ದಾರೆ. ಈ ಬಗ್ಗೆ ವಿರೋಧ ಪಕ್ಷಗಳೂ ಕೂಡಾ ಸರ್ಕಾರದ ನಡೆಯನ್ನು ಟೀಕಿಸುತ್ತಿವೆ. ಯಾಕೆಂದರೆ, ಇದು ಕಾನ್ಸ್‌ಟೇಬಲ್ ಕೈಕೆಳಗೆ ಇನ್ಸ್‌ಪೆಕ್ಟರ್ ಅನ್ನು ನೇಮಿಸಿದಂಥಾದ್ದೇ ಪ್ರಕ್ರಿಯೆ. ಇದೊಂದು ತಾತ್ಕಾಲಿಕ ನೇಮಕ ಅಂತೆಲ್ಲ ಸರ್ಕಾರದ ಕಡೆಯಿಂದ ತಿಪ್ಪೆ ಸಾರಿಸುವ ಕೆಲಸ ನಡೆದಿದೆ. ಆದರೆ, ಮಾನ್ಯ ಗೃಹ ಸಚಿವರು ಇಂತಾ ಯಡವಟ್ಟುಗಳನ್ನ ಗೊತ್ತಿದ್ದೇ ಮಾಡುತ್ತಾರಾ ಅಥವಾ ಗೊತ್ತಿಲ್ಲದೆ ಇಂಥಾ ಪವಾಡಗಳು ನಡೆಯುತ್ತಿವೆಯಾ ಅನ್ನೋದೇ ಈ ನಾಡಿನ ಬಡಪಾಯಿ ನಾಗರಿಕರಿಗೆ ಗೊತ್ತಾಗುತ್ತಿಲ್ಲ!</span></p>
<p style="text-align: justify;"><img loading="lazy" decoding="async" class="alignnone wp-image-14084" src="https://www.shodhanews.com/wp-content/uploads/2025/11/g-parameshwara-2.jpg" alt="" width="1024" height="576" srcset="https://www.shodhanews.com/wp-content/uploads/2025/11/g-parameshwara-2.jpg 800w, https://www.shodhanews.com/wp-content/uploads/2025/11/g-parameshwara-2-768x432.jpg 768w, https://www.shodhanews.com/wp-content/uploads/2025/11/g-parameshwara-2-150x84.jpg 150w, https://www.shodhanews.com/wp-content/uploads/2025/11/g-parameshwara-2-450x253.jpg 450w" sizes="(max-width: 1024px) 100vw, 1024px" /><span style="font-size: 14pt;">ಒಟ್ಟಾರೆಯಾಗಿ ಸರ್ಕಾರದ ನೆರಳಲ್ಲಿ ಪರಪ್ಪನ ಅಗ್ರಹಾರದೊಳಗೆ ಅಕ್ಷರಶಃ ದಂಧೆ ನಡೆಯುತ್ತಿದೆ. ಭಯೋತ್ಪಾದಕರಿಗೆ ಜೈಲೊಳಗೇ ಸವಲತ್ತುಗಳನ್ನು ನೀಡೋದಿದೆಯಲ್ಲಾ? ಅದು ನಿಜಕ್ಕೂ ಶುದ್ಧ ದೇಶದ್ರೋಹದ ಕೆಲಸ. ಇನ್ನು ವಿಕೃತ ಕಾಮಿ ಉಮೇಶ್ ರೆಡ್ಡಿಯ ಕಾಸಿಗೂ ಕೈಚಾಚುತ್ತಾರೆಂದರೆ, ಅಂಥಾ ಹೇಸಿಗೆ ಹುಳುವಿಗೂ ಸೌಕರ್ಯ ಕಲ್ಪಿಸುತ್ತಾರೆಂದರೆ, ಅಂಥಾ ಜೈಲಾಧಿಕಾರಿಗಳನ್ನೂ ಕೂಡಾ ವಿಕೃತರೆಂದೇ ಪರಿಗಣಿಸಬೇಕಾಗುತ್ತದೆ. ಇದೆಲ್ಲದರ ಮೂಲಕ ಗೃಹ ಸಚಿವ ಪರಮೇಶ್ವರ್ ಓರ್ವ ಅಸಮರ್ಥ ಎಂಬ ಆರೋಪಕ್ಕೆ ಮತ್ತಷ್ಟು ಬಲ ಬಂದಿದೆ. ಪರಪ್ಪನ ಅಗ್ರಹಾರದ ವೀಡಿಯೋ ಲೀಕ್ ಆದ ನಂತರ ಪರಂ ಇಟ್ಟ ಪ್ರತೀ ನಡೆಯೂ ಕೂಡಾ ಅವರ ರಾಜಕೀಯ ಬದುಕಿನ ಕಪ್ಪು ಚುಕ್ಕೆಯಾಗಿ ದಾಖಲಾಗುತ್ತದೆ. ಇದೆಲ್ಲವನ್ನು ನೋಡಿದ ಮಂದಿ ಗೊತ್ತಿಲ್ಲ ಖ್ಯಾತಿಯ ಗೃಹಸಚಿವರಿಗೆ ಮಾನ ಮರ್ಯಾದೆ ಅಂದ್ರೇನು ಗೊತ್ತಾ ಅಂತ ಆಕ್ರೋಶಿತರಾಗಿ ಪ್ರಶ್ನಿಸುತ್ತಿದ್ದಾರೆ. ಇಂಥಾ ಜನಸಾಮಾನ್ಯರ ಅಸಹನೆಯಾದರೂ ಪರಮೇಶ್ವರ್‌ಗೆ ಗೊತ್ತಾಗಬಹುದಾ? ಅದೂ ಗೊತ್ತಿಲ್ಲ!</span><br />
<span style="font-size: 14pt;">ಈಗಂತೂ ಪರಪ್ದಪನ ಅಗ್ರಹಾರದ ಪಡಸಾಲೆಯಲ್ಲೇ ಈ ಸರ್ಕಾರದ ಮಾನ ಮರ್ಯಾದೆ ಪಡ್ಚಾ ಆಗಿದೆ. ಸದ್ಯ ಇಂಥಾದ್ದೊಂದು ಅಸ್ತ್ರ ಸಿಕ್ಕಿರೋದರಿಂದ ಅದನ್ನು ಜನಪರವಾಗಿ ಪ್ರಯೋಗಿಸುವ ಕಸುವನ್ನೂ ಕೂಡಾ ವಿರೋಧ ಪಕ್ಷವಾದ ಬಿಜೆಪಿ ಕಳೆದುಕೊಂಡಿದೆ. ಅಷ್ಟಕ್ಕೂ ಈ ಬಿಜೆಪಿ ಮಂದಿ ರಾಷ್ಟ್ರಪ್ರೇಮವನ್ನು ಗುತ್ತಿಗೆ ಪಡೆದವರಂತಾಡುತ್ತಾರೆ. ಇಂಥಾ ದೇಶಭಕ್ತರ ದರ್ಬಾರಿನಲ್ಲಿಯೇ ನಾಸಿರ್ ಎಂಬ ನಾಯಂಡಳ್ಳಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿತ ಭಯೋತ್ಪಾದಕ ರಾಜಾತೀಥ್ಯ ಪಡೆದಿದ್ದ. ಇದು ನೌಟಂಕಿ ರಾಜಕೀಯ ಪಟ್ಟುಗಳಿಗೊಂದು ಕ್ರೂರ ಸಾಕ್ಷಿ. ಈ ಪ್ರಕರಣದಿಂದ ಸರ್ಕಾರದ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿರೋದರಿಂದ ಮುಖ್ಯ ಜೈಲಾಧಿಕಾರಿಯಾಗಿದ್ದ ಸುರೇಶನ ತಲೆದಂಡವಾಗೋ ಸಾಧ್ಯತೆಯಿದೆ. ಈಗಿರುವ ವಾತಾವರಣದ ಆಧಾರದಲ್ಲಿ ಹೇಳೋದಾದರೆ, ಸಚಿವ ಸಂಪುಟ ಪುನಾರಚನೆಯ ಪಲ್ಲಟದಲ್ಲಿ ಪರಂ ಗೃಹಸಚಿವಗಿರಿಯೂ ಧೂಳೀಪಟವಾಗಲಿದೆ. ಸಿಎಂ ಸಿದ್ದರಾಮಯ್ಯ ಪರಪ್ಪನ ಅಗ್ರಹಾರ ಹೊಕ್ಕಿರುವ ಖಾಕಿ ಕ್ರಿಮಿಗಳನ್ನು ಒದ್ದು ಹೊರಗಟ್ಟಬೇಕಿದೆ. ಸಮರ್ಥ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಮೂಲಕ ಈ ಜೈಲೊಳಗಿನ ಅಕ್ರಮಗಳಿಗೆ ಬ್ರೇಕ್ ಹಾಕಬೇಕಿದೆ&#8230; </span></p>
<p>The post <a href="https://www.shodhanews.com/parappana-agrahara-investigative-report-15-11-2025/">Parappana Agrahara: ಪರಪ್ಪನ ಅಗ್ರಹಾರದೊಳಗೆ ಬೆಚ್ಚಿ ಬೀಳಿಸೋ ದಂಧೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>hassan sex scandal: ಯುವ ಕಾಮುಕನ ಅಪ್ಪನದ್ದೂ ಅದೇ ಕಥೆ?</title>
		<link>https://www.shodhanews.com/hassan-sex-scandal-shodha-blast-23-04-2024/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 23 Apr 2024 16:53:09 +0000</pubDate>
				<category><![CDATA[ಕವರ್ ಸ್ಟೋರಿ]]></category>
		<guid isPermaLink="false">https://www.shodhanews.com/?p=13880</guid>

					<description><![CDATA[<p><img width="1080" height="609" src="https://www.shodhanews.com/wp-content/uploads/2024/04/final.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2024/04/final.jpg 1080w, https://www.shodhanews.com/wp-content/uploads/2024/04/final-800x451.jpg 800w, https://www.shodhanews.com/wp-content/uploads/2024/04/final-1024x577.jpg 1024w, https://www.shodhanews.com/wp-content/uploads/2024/04/final-768x433.jpg 768w, https://www.shodhanews.com/wp-content/uploads/2024/04/final-150x85.jpg 150w, https://www.shodhanews.com/wp-content/uploads/2024/04/final-450x254.jpg 450w" sizes="(max-width: 1080px) 100vw, 1080px" />ರಾಜಕಾರಣವೆಂಬದೀಗ ಹೊಲಸೆದ್ದು ನಾರುವ ಗಟಾರಕ್ಕಿಂತಲೂ ಕಡೆಯಾಗಿಬಿಟ್ಟಿದೆ. ಹಾಗಂತ ಸಾರಾಸಗಟಾಗಿ ಷರಾ ಬರೆಯಲು ಹಿಂದೆ ಮುಂದೆ ನೋಡುವಂತೆ ಮಾಡಬಲ್ಲ ಕೆಲವೇ ಕೆಲ ವ್ಯಕ್ತಿತ್ವಗಳು ಆ ವಲಯದಲ್ಲಿರೋದು ನಿಜ. ಅದರಾಚೆಗೆ ಪಿತಗುಡುತ್ತಿರುವ ಪ್ರಭೃತ್ತಿಗಳು ಜನಸಾಮಾನ್ಯರ ಪಾಲಿಗೆ ಕಂಟಕವಾಗಿರೋದು ಕಣ್ಣೆದುರಿನ ವಾಸ್ತವ. ರಾಜಕಾರಣ ಅಂದೇಟಿಗೆ ಭ್ರಷಾಚಾರ ಕಣ್ಣೆದುರು ನಿಲ್ಲುತ್ತದೆ. ಆದರೆ, ಕೆಲ ರಾಜಕಾರಣಿಗಳ ವಿಕೃತಿಗಳಿವೆಯಲ್ಲಾ? ಅದು ನಾಗರಿಕ ಸಮಾಜದ ಊಹೆಗೆ ನಿಲುಕದ ಕರಾಳ ಸತ್ಯ. ಇದೀಗ ಹಾಸನ ಸೀಮೆಯ ತುಂಬ ಇಟ್ಟಾಡುತ್ತಿರುವ ವಿಕೃತ ಯುವ ರಾಜಕಾರಣಿಯೊಬ್ಬನ ಕಾಮಪುರಾಣ ಮೇಲಕ್ಕಂಡ ಮಾತಿಗೆ ಸ್ಪಷ್ಟ [...]</p>
<p>The post <a href="https://www.shodhanews.com/hassan-sex-scandal-shodha-blast-23-04-2024/">hassan sex scandal: ಯುವ ಕಾಮುಕನ ಅಪ್ಪನದ್ದೂ ಅದೇ ಕಥೆ?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1080" height="609" src="https://www.shodhanews.com/wp-content/uploads/2024/04/final.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2024/04/final.jpg 1080w, https://www.shodhanews.com/wp-content/uploads/2024/04/final-800x451.jpg 800w, https://www.shodhanews.com/wp-content/uploads/2024/04/final-1024x577.jpg 1024w, https://www.shodhanews.com/wp-content/uploads/2024/04/final-768x433.jpg 768w, https://www.shodhanews.com/wp-content/uploads/2024/04/final-150x85.jpg 150w, https://www.shodhanews.com/wp-content/uploads/2024/04/final-450x254.jpg 450w" sizes="(max-width: 1080px) 100vw, 1080px" /><p style="text-align: justify;"><strong><span style="font-size: 14pt;">ರಾಜಕಾರಣವೆಂಬದೀಗ ಹೊಲಸೆದ್ದು ನಾರುವ ಗಟಾರಕ್ಕಿಂತಲೂ ಕಡೆಯಾಗಿಬಿಟ್ಟಿದೆ. ಹಾಗಂತ ಸಾರಾಸಗಟಾಗಿ ಷರಾ ಬರೆಯಲು ಹಿಂದೆ ಮುಂದೆ ನೋಡುವಂತೆ ಮಾಡಬಲ್ಲ ಕೆಲವೇ ಕೆಲ ವ್ಯಕ್ತಿತ್ವಗಳು ಆ ವಲಯದಲ್ಲಿರೋದು ನಿಜ. ಅದರಾಚೆಗೆ ಪಿತಗುಡುತ್ತಿರುವ ಪ್ರಭೃತ್ತಿಗಳು ಜನಸಾಮಾನ್ಯರ ಪಾಲಿಗೆ ಕಂಟಕವಾಗಿರೋದು ಕಣ್ಣೆದುರಿನ ವಾಸ್ತವ. ರಾಜಕಾರಣ ಅಂದೇಟಿಗೆ ಭ್ರಷಾಚಾರ ಕಣ್ಣೆದುರು ನಿಲ್ಲುತ್ತದೆ. ಆದರೆ, ಕೆಲ ರಾಜಕಾರಣಿಗಳ ವಿಕೃತಿಗಳಿವೆಯಲ್ಲಾ? ಅದು ನಾಗರಿಕ ಸಮಾಜದ ಊಹೆಗೆ ನಿಲುಕದ ಕರಾಳ ಸತ್ಯ. ಇದೀಗ ಹಾಸನ ಸೀಮೆಯ ತುಂಬ ಇಟ್ಟಾಡುತ್ತಿರುವ ವಿಕೃತ ಯುವ ರಾಜಕಾರಣಿಯೊಬ್ಬನ ಕಾಮಪುರಾಣ ಮೇಲಕ್ಕಂಡ ಮಾತಿಗೆ ಸ್ಪಷ್ಟ ಸಾಕ್ಷಿಯಂತಿದೆ. ಕಂಡೋರ ಮನೆ ಹೆಣ್ಣುಮಕ್ಕಳನ್ನು ತನ್ನ ತೆವಲಿಗೆ ಬಳಸಿಕೊಂಡ ಈ ಗಳಗಂಟೆ ಪುರಾಣ ನಾಗರಿಕ ಸಮುದಾಯವನ್ನೇ ತಲೆತಗ್ಗಿಸುವಂತೆ ಮಾಡಿಬಿಟ್ಟಿದೆ. ಕಾಮದ ಕೊಚ್ಚೆಯಲ್ಲಿ ಉರುಳಾಡುವ ಇಂಥಾ ಹೇಸಿಗೆ ಹುಳಗಳ ಹುಟ್ಟಡಗಲೆಂಬ ಆಶಯದೊಂದಿಗೆ, ಒಟ್ಟಾರೆ ಗಲೀಜು ವೃತ್ತಾಂತದ ಒಳ ಹೊರಗಿನ ವಿಸೃತ ವರದಿ ಇಲ್ಲಿದೆ&#8230;</span></strong></p>
<p style="text-align: justify;"><strong><span style="font-size: 14pt;"> -ಸಂತೋಷ್ ಬಾಗಿಲಗದ್ದೆ</span></strong></p>
<p style="text-align: justify;"><span style="font-size: 12pt;"><span style="text-align: justify; color: var(--c-contrast-800); font-size: 18pt;"><strong>ಇ</strong></span><span style="text-align: justify; color: var(--c-contrast-800);">ನ್ನೇನು ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಘಳಿಗೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಬಿರುಸಿನ ವಾತಾವರಣ ಮನೆಮಾಡಿದೆ. ಹೆಚ್ಚೇನಲ್ಲ; ದಿನವೊಂದರ ಹಿಂದೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಂಥಾದ್ದೇ ಛಾಯೆಯಿತ್ತು. ಸೋಮವಾರದ ಮಧ್ಯಾಹ್ನ ಮಗುಚಿಕೊಳ್ಳುವ ವೇಳೆಯಲ್ಲಿ ಹಬ್ಬಿಕೊಂಡಿದ್ದೊಂದು ಸುದ್ದಿ ಮತ್ತು ಅದರ ಹಿಂದೆಯೇ ಕಣ್ಣೆದುರು ಪ್ರತ್ಯಕ್ಷವಾದ ಕಾಮಪುರಾಣವೊಂದು ಈ ಪ್ರತಿಷ್ಠಿತ ಕ್ಷೇತ್ರದ ಮಂದಿಯನ್ನೆಲ್ಲ ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ಮೂಲಕ ಹಾಸನ ಸೀಮೆಯಲ್ಲಿ ಗತ್ತು ಗೈರತ್ತು ಹೊಂದಿದ್ದ ಕುಟುಂಬದ ಕುಡಿಯೊಂದರ ಗಳಗಂಟೆ ಪುರಾಣವೀಗ ಹಾಸನದ ಹಾದಿಬೀದಿಗಳಲ್ಲಿ ಪಿತಗುಡಲಾರಂಭಿಸಿದೆ. ಈ ಕಾಮುಕ ನೂರಾರು ಹೆಣ್ಣುಮಕ್ಕಳನ್ನು ತನ್ನ ತೆವಲಿಗೆ ಬಳಸಿಕೊಂಡ ಪರಿ ಕಂಡು ಸೂಕ್ಷ್ಮವಂತರೆಲ್ಲ ಕುದ್ದು ಹೋಗಿದ್ದಾರೆ. ಯಾಕೆಂದರೆ, ಇದು ವರ್ಷದ ಹಿಂದೆ ಚಲ್ಲಣ ಕಳಚಿ ಪ್ರದರ್ಶನ ನೀಡಿದ್ದ ಬೆಳಗಾವಿಯ ಮುದಿ ಸಾಹುಕಾರನ ರಾಸಲೀಲೆಯನ್ನೇ ಮೀರಿಸುವ ಗಲೀಜು ವೃತ್ತಾಂತ. ಇದು ಈ ನಾಡಿನ ಮಟ್ಟಿಗೆ ಅತೀ ದೊಡ್ಡ ವಿಕೃತ ಲೈಂಗಿಕ ಹಗರಣವೆಂಬುದರಲ್ಲಿ ಯಾವ ಸಂಶಯವೂ ಇಲ್ಲ!</span></span></p>
<p style="text-align: justify;"><span style="font-size: 12pt;">ನೆನ್ನೆದಿನ ಸಂಜೆಯ ಹೊತ್ತಿಗೆಲ್ಲ ಈ ಯುವ ನಾಯಕನ ರಾಸಲೀಲೆಯ ವೀಡಿಯೋಗಳಿರುವ ಪೆನ್ ಡ್ರೈವ್ ಗಳು ಹಾಸನದ ತುಂಬೆಲ್ಲ ಇಟ್ಟಾಡಿಬಿಟ್ಟಿವೆ. ಯಾವ ಕುಟುಂಬದ ಮೇಲೆ ಗೌರವದಿಂದ ಓಟು ಹಾಕಿದ್ದರೋ, ಯಾವ ಎಳೆ ನಿಂಬೇಕಾಯಿಯನ್ನು ಯವನಾಯಕನನ್ನಾಗಿ ರೂಪಿಸಿದ್ದರೋ ಆ ಪಾಪಿಯ ಭಯಾನಕ ಮುಖ ಕಂಡು ಹಾಸನದ ಮಂದಿ ಬೆಚ್ಚಿಬಿದ್ದಿದ್ದಾರೆ. ಈ ಅಯೋಗ್ಯ ಗೆದ್ದ ಮೊದಲ ಅವಧಿಯಲ್ಲಿ ಕೊಂಚ ತಲೆ ನೆಟ್ಟಗಿರುವವನಂತೆ ಮಾತಾಡಲಾರಂಭಿಸಿದ್ದ. ಹೊರಜಗತ್ತಿಗೆ ಘನತೆ, ಗಾಂಭೀರ್ಯವಿರುವ ವ್ಯಕ್ತಿತ್ವವಾಗಿ ಕಾಣಿಸಿಕೊಂಡಿದ್ದ. ಅದರ ಮರೆಯಲ್ಲಿ ಈತ ನಡೆಸಿದ್ದದ್ದು ಕಷ್ಟ ಹೇಳಿಕೊಂಡು ಬಂದ, ತನ್ನ ಪಕ್ಷಕ್ಕಾಗಿ ದುಡಿದ ಹೆಣ್ಣುಮಕ್ಕಳನ್ನು ಬೆತ್ತಲಾಗಿಸೋ ಹೀನ ಕಸುಬನ್ನಷ್ಟೇ. ಇದೀಗ ಅದೆಲ್ಲವೂ ಖುಲ್ಲಂಖುಲ್ಲಾ ಜಾಹೀರಾಗಿದೆ. ತನ್ನ ರಾಸಲೀಲೆ ಬಯಲಾಗೋ ಭಯದಲ್ಲಿ ಕಾನೂನಿನ ಮೂಲಕ ಬಚಾವಾಗಲು ನೋಡಿದ್ದ ಈತನೀಗ ಬೆತ್ತಲಾಗಿ ನಿಂತಿದ್ದಾನೆ!</span><br />
<strong><span style="font-size: 14pt;">ಡಿಸೆಂಬರಿನಲ್ಲಿಯೇ ಡೌಟು ಶುರು!</span></strong><br />
<span style="font-size: 12pt;">ಅಷ್ಟಕ್ಕೂ ಈಗ ಹಾಸನದ ಹಾದಿಬೀದಿಗಳಲ್ಲಿ ಹರಡಿಕೊಂಡಿರುವ ಈ ಕಾಮಪುರಾಣದ ಸುಳಿವು ಕಳೆದ ವರ್ಷದಂಚಿನಲ್ಲಿಯೇ ಸಿಕ್ಕಿಬಿಟ್ಟಿತ್ತು. ಈ ಯುವ ನಾಯಕನ ಕಾಮ ಪುರಾಣದ ಬಗ್ಗೆ ತಣ್ಣಗೆ ಒಂದಷ್ಟು ಗುಲ್ಲೆದ್ದುಬಿಟ್ಟಿತ್ತು. ಇದೇ ಹಂತದಲ್ಲಿ ಹೊಳೆನರಸೀಪುರ ಭಾಗದ ಬಿಜೆಪಿ ಮುಖಂಡ ಹಾಗೂ ವಕೀಲರೂ ಆಗಿರುವ ಒಬ್ಬರು ಪತ್ರವೊಂದರ ಮೂಲಕ ಸದರಿ ಯುವನಾಯಕನ ರಾಸಲೀಲೆಯ ಬಗ್ಗೆ ಬಿಜೆಪಿ ರಾಜ್ಯ ನಾಯಕರಿಗೆ ವಿಷಯ ಮುಟ್ಟಿಸುವ ಕೆಲಸ ಮಾಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದ ಆ ಬಿಜೆಪಿ ಮುಖಂಡ, ಯಾವ ಕಾರಣಕ್ಕೂ ಜೆಡಿಎಸ್&#x200d;ನೊಂದಿಗೆ ಮೈತ್ರಿ ಬೇಡ. ಒಂದು ವೇಳೆ ಮೈತ್ರಿ ಆದರೂ ಸಹ ಆ ಯುವ ರಾಜಕಾರಣಿಗೆ ಮಣೆ ಹಾಕಕೂಡದು. ಅದರಿಂದ ಬಿಜೆಪಿಗೇ ಭಾರೀ ಮುಜುಗರವಾಗಲಿದೆ. ಯಾಕೆಂದರೆ, ಆ ಯುವ ರಾಜಕಾರಣಿಯ ಎರಡು ಸಾವಿರ ಚಿಲ್ಲರೆ ರಾಸಲೀಲೆಯ ವೀಡಿಯೋಗಳಿದ್ದಾವೆ. ಅವು ಹೊರ ಬಂದರೆ ಮಾನ ಹೋಗೋದು ಗ್ಯಾರೆಂಟಿ ಎಂಬುದನ್ನು ಒತ್ತಿ ಹೇಳಿದ್ದರು.</span><br />
<span style="font-size: 12pt;">ಒಂದು ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಆ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಒಂದಷ್ಟು ನಾಯಕರ ಜೊತೆಗೆ ಚರ್ಚಿಸಿ ಖಡಕ್ಕಾದ ತೀರ್ಮಾನ ಕೈಗೊಂಡಿದ್ದರೆ ಇಂಥಾ ಮುಜುಗರದ ವಾತಾವರಣ ಎದುರಿಸುವಂತಾಗುತ್ತಿರಲಿಲ್ಲ. ಅತ್ತ ಪತ್ರದ ಮೂಲಕ ಎಚ್ಚರಿಸಿದರೂ ರಾಜ್ಯಾಧ್ಯಕ್ಷ ಉಡಾಫೆ ತೋರಿಸಿದ್ದರು. ಕೊಂಚ ನಿರಾಳವಾದರೂ ಕೂಡಾ ಈ ಯುವ ಕಾಮಪಿಪಾಸುವಿಗೆ ಮಾನ ಹರಾಜಾಗುವ ಭಯ ಕಾಡಲಾಂಭಿಸಿತೇನೋ&#8230; ಅದರಿಂದಾಗಿಯೇ ಕಳೆದ ಡಿಸೆಂಬರಿನಲ್ಲಿ ತನಗೆ ಸಂಬಂಧಿಸಿದ ಯಾವುದೇ ಅಶ್ಲೀಲ ವೀಡಿಯೋಗಳಲ್ಲಿ ದೃಷ್ಯ ಮಾಧ್ಯಮವೂ ಸೇರಿದಂತೆ ಇತರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದೆಂಬಂತೆ ಕೋರ್ಟಿನಿಂದ ಸ್ಟೇ ತಂದು ಬಿಟ್ಟಿದ್ದ. ಆದರೀಗ ಮತದಾನಕ್ಕೆ ಮೂರು ದಿನ ಬಾಕಿ ಇರುವಾಗಲೇ ಟೀವಿ ಚಾನೆಲ್ಲುಗಳು, ಸಾಮಾಜಿಕ ಜಾಲತಾಣಗಳ ಹಂಗಿಲ್ಲದೆ ಈತನ ಕಾಮಪುರಾಣ ಹಾಸನದ ತುಂಬೆಲ್ಲ ಪ್ರಸಾರವಾಗಿಬಿಟ್ಟಿದೆ!</span><br />
<span style="font-size: 14pt;"><strong>ಅವನೋರ್ವ ವಿಕೃತ ಕಾಮಿ!</strong></span><br />
<span style="font-size: 12pt;">ಹೀಗೆ ಹಾಸನದ ಗಲ್ಲಿಗಳಲ್ಲಿ ಯುವ ನಾಯಕನ ರಾಸಲೀಲೆ ಪೆನ್ ಡ್ರೈವುಗಳ ಮೂಲಕ ಹಬ್ಬಿದ್ದರ ಹಿಂದೆ ಖಂಡಿತಾ ರಾಜಕಾರಣದ ಕಿಸುರಿರಬಹುದು. ಆದರೆ, ಇಲ್ಲಿ ಮುಖ್ಯವಾಗೋದು ಸಂಭಾವಿತನಂತೆ ಪೋಸು ಕೊಡುತ್ತಾ ಬಂದಿದ್ದ, ಪ್ರತಿಷ್ಠಿತ ಕುಟುಂಬದ ಕುಡಿಯ ಅಸಹ್ಯದ ಕಾಮುಕತನವಷ್ಟೇ. ಸದ್ಯದ ಮಟ್ಟಿಗೆ ಹಾಸನದ ಜನತೆಗೆಲ್ಲ ಆ ಯುವ ನಾಯಕ ಯಾರೆಂಬುದು ಸ್ಪಷ್ಟವಾಗಿದೆ. ಕಂಡೋರ ಮನೆ ಹೆಣ್ಣುಮಕ್ಕಳನ್ನು ಬೆತ್ತಲಾಗಿಸಿ ಆನಂದಿಸಿದ ಈತ ಅಕ್ಷರಶಃ ವಿಕೃತಕಾಮಿ ಎಂಬುದೂ ಕೂಡಾ ಪಕ್ಕಾ ಆಗಿಬಿಟ್ಟಿದೆ. ಹೀಗೆ ಹರಡಿಕೊಂಡಿರುವ ವೀಡಿಯೋಗಳು, ಸ್ಕ್ರೀನ್ ಶಾಟುಗಳೇ ಇವನೆಂಥಾ ಬರಗೆಟ್ಟ ಆಸಾಮಿ ಎಂಬುದಕ್ಕೆ ಸೂಕ್ತ ಉದಾಹರಣೆಯಂತಿವೆ. ಅಲ್ಲಿಗೆ ಹಾಸನ ಸೀಮೆಯಲ್ಲಷ್ಟೇ ಅಲ್ಲದೇ, ರಾಜಕೀಯವಾಗಿಯೂ ಪ್ರತಿಷ್ಠಿತ ಮನೆತನದ ಮಾನ ಒಂಚೂರೂ ಉಳಿಯದಂತೆ ಹರಾಜಾದಂತಾಗಿದೆ!</span><br />
<span style="font-size: 12pt;">ಹೀಗೆ ಹಾಸನದ ತುಂಬೆಲ್ಲ ಪ್ರಜ್ವಲಿಸುತ್ತಿರುವ ಈ ಕಾಮಪುರಾಣದ ಸುತ್ತ ಅನೇಕ ರೂಮರುಗಳೂ ಹಬ್ಬಿಕೊಂಡಿವೆ. ಓರ್ವ ಜವಾಬ್ದಾರಿಯುತ ಜನನಾಯಕನಾಗಿ, ಯುವ ನಾಯಕನಾಗಿ ಈ ಮಾಡಿಕೊಂಡು ಬಂದಿದ್ದೆಲ್ಲವೂ ಇಂಥಾ ಮಣ್ಣು ತಿನ್ನೋ ಕೆಲಸಗಳನ್ನೇ. ಸಾಮಾನ್ಯವಾಗಿ ಎಲ್ಲ ಪಕ್ಷಗಳ ಪಡಸಾಲೆಯಲ್ಲಿಯೂ ಕಾರ್ಯಕರ್ತರು ಮುಖಂಡರುಗಳು ಅಡ್ಡಾಡುತ್ತಿರುತ್ತಾರೆ. ಅದರಲ್ಲಿ ಮಹಿಳೆಯರ ಸಂಖ್ಯೆಯೂ ದೊಡ್ಡದಿದೆ. ಹಾಗೆ ಪಕ್ಷಕ್ಕಾಗಿ ಶ್ರಮಿಸುವವರ ಮನೆಯ ಹೆಣ್ಣುಮಕ್ಕಳನ್ನು ಓರ್ವ ನಾಯಕ ಬೆತ್ತಲಾಗಿಸಿ ಸಂಭ್ರಮಿಸುತ್ತಾನೆಂದರೆ ಅದಕ್ಕಿಂತಲೂ ರಾಕ್ಷಸತನ ಬೇರ್ಯಾವುದಿದೆ? ಈ ಕಾಮಪುರಾಣದ ಇಂಚಿಂಚೂ ಕೂಡಾ ರಾಜಕೀಯದ ಪ್ರಭೆಯಲ್ಲಿ ಅಡ್ಡಾಡುವ ಹೆಣ್ಣುಮಕ್ಕಳಿಗೊಂದು ಪಾಠದಂತಿದೆ. ಯಾಕೆಂದರೆ, ಅವರಿರುವ ವಾತಾವರಣದಲ್ಲಿಯೂ ಇಂಥವನೊಬ್ಬ ವಿಕೃತ ಕಾಮಿಯಿದ್ದುಬಿಟ್ಟರೆ, ಏಕಾಏಕಿ ಅದೆಷ್ಟೋ ಜನರ ನೆಮ್ಮದಿಗೆ ಕೊಳ್ಳಿಯಿಟ್ಟಂತಾಗುತ್ತದೆ.</span><br />
<strong><span style="font-size: 14pt;">ಮಾನ ಕಳೆದುಕೊಂಡವರೆಷ್ಟು?</span></strong><br />
<span style="font-size: 12pt;">ಈವತ್ತಿಗೆ ದಿನವೊಂದು ಉರುಳಿಕೊಂಡರೂ ಯುವ ನಾಯಕನ ಕಾಮಪುರಾಣದ ಎಳೆ ಎಳೆಗಳು ಸಾಮಾಜಿಕ ಜಾಲತಾಣ, ವಾಟ್ಸಪ್ ಗಳ ಮೂಲಕ ಹರಿದಾಡುತ್ತಲೇ ಇದೆ. ಇದರಿಂದ ಆ ಯುವನಾಯಕನ ಮಾನವಷ್ಟೇ ಅಲ್ಲ; ಹಾಸನ ಭಾಗದ ನೂರಾರು ಮಹಿಳೆಯರ ನೆಮ್ಮದಿಗೂ ಬೆಂಕಿ ಬಿದ್ದಿದೆ. ವಿರೋಧ ಪಕ್ಷದ ಮಂದಿ ಈ ವೀಡಿಯೋ ಜಾಹೀರು ಮಾಡಿ, ಯುವ ರಾಜಕಾರಣಿಯನ್ನು ಬೆತ್ತಲುಯ ಮಾಡುವ ಭರದಲ್ಲಿ ಅದೆಷ್ಟೋ ಕುಟುಂಬಗಳ ನೆಮ್ಮದಿಗೂ ಬರೆ ಎಳೆದು ಬಿಟ್ಟಿವೆ. ಈಗ ಬಯಲಾಗಿರುವ ವೀಡಿಯೋಗಳಲ್ಲಿ ನೂರಾರು ಹೆಂಗಸರು ವೀಡಿಯೋ ಕಾಲ್ ಮೂಲಕ ಪ್ರಜ್ವಲ್ ಮುಂದೆ ಬೆತ್ತಲಾಗಿದ್ದಾರೆ. ಈ ಯುವ ನಾಯಕ ಉಡದಂತೆ ಹಣಕಿ ಹಾಕುತ್ತಾ ಅದೆಲ್ಲವನ್ನೂ ಸಂಭ್ರಮಿಸಿದ್ದಾನೆ.</span><br />
<span style="font-size: 12pt;">ಹಾಗೆ ಯುವ ನಾಯಕನ ಮುಂದೆ ಬೆತ್ತಲಾದವರಲ್ಲಿ ಆತನ ಗೆಲುವಿಗಾಗಿ ಶ್ರಮಿಸಿದವರಿದ್ದಾರೆ. ಈ ಅಯೋಗ್ಯನ ಗೆಲುವಿಗಾಗಿ ಮಣ್ಣುಹೊತ್ತವರ ಮಡದಿಮಕ್ಕಳಿದ್ದರೂ ಅಚ್ಚರಿಯೇನಿಲ್ಲ. ಈ ಕಾಮುಕ ತೀರಾ ತನ್ನ ಮನೆಗೆಲಸದವರನ್ನೂ ಇಂಥಾ ವಿಕೃತಿಗೆ ಬಳಸಿಕೊಂಡಿದ್ದಾನೆಂಬ ರೂಮರುಗಳೂ ಇದ್ದಾವೆ ಇದರಲ್ಲಿ ಒಂದಷ್ಟು ಮಂದಿ ನಾನಾ ಕೆಲಸ ಕಾರ್ಯಗಳಿಗೋಸ್ಕರ ಈತನ ಸರಹದ್ದಿಗೆ ಬಂದವರಿದ್ದಾರೆ. ಅಂಥಾ ಎಲ್ಲ ಅನಿವಾರ್ಯತೆಗಳನ್ನೂ ಈ ಕಾಮಿಷ್ಠ ತನ್ನ ವಿಕೃತ ತೀಟೆಗೆ ಬಳಸಿಕೊಂಡಿರೋದು ಮಾತ್ರ ಅಕ್ಷಮ್ಯ. ದುರಂತವೆಂದರೆ, ಸಾವಿರಾರು ಸಂಖ್ಯೆಯ ವೀಡಿಯೋಗಳಲ್ಲಿ ಬೆತ್ತಲಾದ ಹೆಂಗಳೆಯರೆಲ್ಲ ಹಾಸನ ಸುತ್ತಮುತ್ತಲಿನವರೇ. ಅವರೆಲ್ಲರ ಗುರುತೂ ಕೂಡಾ ಸ್ಥಳೀಯರಿಗೆ ಸ್ಪಷ್ಟವಾಗಿಯೇ ಸಿಕ್ಕಿದೆ. ಅಂಥವರ ಮನೆಗಳೀಗ ಅಕ್ಷರಶಃ ರಣರಂಗವಾಗಿದೆ. ಹೆಣ್ಣುಮಕ್ಕಳನ್ನು ಬೆತ್ತಲುಗೊಳಿಸಿ ವೀಡಿಯೋ ಮಾಡಿಟ್ಟುಕೊಳ್ಳುವ ಈ ದುಷ್ಟನ ಹೀನ ಬುದ್ಧಿ ಸಾವಿರಾರು ಮಹಿಳೆಯರ ನೆಮ್ಮದಿಯನ್ನೇ ಕೊಂದು ಹಾಕಿದೆ!</span><br />
<strong><span style="font-size: 14pt;">ಮುಂಬೈ ಭೂಗತದ ಲಿಂಕು!</span></strong><br />
<span style="font-size: 12pt;">ಕಳೆದ ವರ್ಷದ ಕಡೇಯ ಭಾಗದಲ್ಲಿ ಈ ಯುವ ನಾಯಕನ ರಾಸಲೀಲೆಯ ಘಾಟು ಹೊಡೆಯಲಾರಂಭಿಸಿತ್ತಲ್ಲಾ? ಅದರ ಆಸುಪಾಸಲ್ಲಿಯೇ ನಾನಾ ಸರ್ಕಸ್ಸುಗಳು ನಡೆದಿವೆ. ಯಾವಾಗ ಈ ವೀಡಿಯೋಗಳೆಲ್ಲ ಯುವ ನಾಯಕನ ಮೊಬೈಲಿನಿಂದ ಬೇರೆಡೆಗೆ ಬಸಿಯಲ್ಪಟ್ಟಿತೋ, ಆ ಕ್ಷಣದಿಂದಲೇ ಪ್ರತೀ ವಿಡಿಯೋಗಳ ಸುತ್ತಲೂನ ಕೋಟಿ ಕೋಟಿ ವ್ಯವಹಾರ ಕುದುರಿಕೊಂಡಿತ್ತೆಂಬ ಮಾತೂ ಇದೆ. ಆ ನಂತರದಲ್ಲಿ ಅವೆಲ್ಲವೂ ಮುಂಬೈ ಭೂಗತಕ್ಕೆ ತಲುಪಿಕೊಂಡು, ಆ ಕೇಂದ್ರದಿಂದಲೇ ವ್ಯವಹಾರ ನಡೆದಿತ್ತೆನ್ನಲಾಗಿದೆ. ಈ ಹಿಂದೆ ಬೆಳಗಾವಿ ಸಾಹುಕಾರನನ್ನು ಬೆತ್ತಲೆ ನಿಲ್ಲಿಸಿದ್ದ ಕಾಂಗ್ರೆಸ್ ಪಟಾಲಮ್ಮು ಕೂಡಾ ಆ ವೀಡಿಯೋಗಳನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿತ್ತಂತೆ. </span><br />
<span style="font-size: 12pt;">ಇಂಥಾದ್ದೊಂದು ಅವಘಡ ನಡೆದೀತೆಂಬುದನ್ನು ಹಾಸನದ ಹಳೆನಿಂಬೇಕಾಯಿಯ ಮುದ್ದಿನ ಪುತ್ರ ಎಳೆನಿಂಬೆಕಾಯಿಯಂಥಾ ಯುವ ನಾಯಕ ಕನಸಲ್ಲಿಯೂ ಊಹಿಸಿರಲಿಕ್ಕಿಲ್ಲ. ತನ್ನ ಮಾನ ಕೈಬದಲಾಗುತ್ತಾ ಮುಂಬೈ ಭೂಗತ ಜೀವಿಗಳ ಕೈ ಸೇರಿದ್ದನ್ನು ತಿಳಿದು ಕಂಗಾಲಾಗಿದ್ದ ಈ ಕಾಮಪಿಪಾಸು, ತನ್ನ ಲಿಂಕುಗಳ ಮೂಲಕ ವ್ಯವಹಾರ ಕುದುರಿಸಲು ಪ್ರತ್ನಿಸಿದ್ದ. ಅದೆಷ್ಟು ಕೋಟಿಗಳನ್ನಾದರೂ ಸುರಿದು ತನ್ನ ಮಾನ ಮುಚ್ಚಿಕೊಂಡು, ರಾಜಕೀಯ ಭವಿಷ್ಯ ಕಾಪಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದ. ಆದರೆ, ಅದಾಗಲೇ ವಿರೋಧಿ ಪಾಳೆಯದ ಮಂದಿ ಈತನಿಗಿಂತೂ ಒಂದಷ್ಟು ಹೆಜ್ಜೆ ಮುಂದೆ ಸಾಗಿಬಿಟ್ಟಿದ್ದರು. ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ಸ್ಟೇ ತಂದರೂ ಕೂಡಾ, ತನ್ನ ಮಾನ ಊರುಬಾಗಿಲಾಗುತ್ತದೆಂಬುದು ಈತನಿಗೆ ಸ್ಪಷ್ಟವಾಗಿಬಿಟ್ಟಿತ್ತು. ಆ ಹಂತದಲ್ಲಿ ಈ ವಿಚಾರ, ಕರುನಾಡಿನ ಖ್ಯಾತ ರಸಿಕ ರಾಜಕಾರಣಿ ಕಂ ಈ ಯುವ ನಾಯಕನ ಚಿಕ್ಕಪ್ಪನೂ ಆಗಿರುವ ವ್ಯಕ್ತಿಗೆ ತಲುಪಿಕೊಂಡು ಬಿಟ್ಟಿತ್ತು!</span><br />
<span style="font-size: 14pt;"><strong>ಚಿಕ್ಕಪ್ಪನ ತಿಪ್ಪರಲಾಗ</strong></span><br />
<span style="font-size: 12pt;">ತನ್ನ ಸಹೋದರನ ಮಗ ಮಾಡಿದ ಮಣ್ಣುತಿನ್ನೋ ಕೆಲಸದ ಬಗ್ಗೆ ತಿಳಿದಾಕ್ಷಣವೇ ಆ ಪ್ರಭಾವಿ ರಾಜಕಾರಣಿ ಕಂ ಕಾಮುಕ ಯುವ ರಾಜಕಾರಣಿಯ ಚಿಕ್ಕಪ್ಪನಿಗೆ ಮತ್ತೊಂದು ಸುತ್ತಿಗೆ ಹೃದಯಬೇನೆ ಕಾಣಿಸಿಕೊಂಡು ಬಿಟ್ಟಿತ್ತು. ಹಾಗಂತ ಸುಮ್ಮನೆ ಕೂರುವಂತಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ತನ್ನ ಪಕ್ಷ ನಾಮಾವಶೇಷವಾಗುವ ಸೂಚನೆ ಸಿಕ್ಕಾಗಿನಿಂದಲೇ ಆತ ಹೈರಾಣಾಗಿ ಬಿಟ್ಟಿದ್ದರು. ಒಂದು ವೇಳೆ ನಿಂಬೆಹಣ್ಣು ಮಾಂತ್ರಿಕನೂ ಆಗಿರುವ ತನ್ನ ಸಹೋದರನ ಮಗನ ಕಾಮಪುರಾಣ ಬಯಲಾದರೆ ಒಂದಿಡೀ ಕುಟುಂಬದ ಘನತೆಗೆ ಕುತ್ತುಂಟಾಗುತ್ತದೆಂಬ ಸತ್ಯ ಚಿಕ್ಕಪ್ಪನನ್ನು ಕೊರೆಯಲಾರಂಭಿಸಿತ್ತು. ಅದಾಗಲೇ ಮಗರಾಯನ ಕಾಮಪುರಾಣ ಆಯಕಟ್ಟಿನಲ್ಲಿಕುಂತ ಮಂದಿಯ ಕೈಯಲ್ಲಿ ಪ್ರಜ್ವಲಿಸಲಾರಂಭಿಸಿತ್ತು.</span><br />
<span style="font-size: 12pt;">ಹೀಗೆ ಯುವ ಕಾಮುಕನನ್ನು ಕಾಪಾಡಲು ಸಾಕ್ಷಾತ್ತು ಚಿಕ್ಕಪ್ಪನೇ ಅಖಾಡಕ್ಕಿಳಿದಿರುವ ಸುದ್ದಿ ತಿಳಿದು, ರಾಜಕೀಯ ವಿರೋಧಿ ಪಾಳೆಯ ಮತ್ತಷ್ಟು ಆವೇಗದೊಂದಿಗೆ ಆಕ್ಟೀವ್ ಆಗಿತ್ತು. ಅದು ಹೇಳಿಕೇಳಿ ಇಂಥಾ ಆಪರೇಷನ್ನುಗಳಲ್ಲಿ ಪಳಗಿಕೊಂಡಿದ್ದ ತಂಡ. ಅದಕ್ಕೆದುರಾಗಿ ನಿಂತಿದ್ದ ಯುವ ಕಾಮುಕನ ಚಿಕ್ಕಪ್ಪನವರು ತಮ್ಮ ಇಷ್ಟೂ ವರ್ಷದ ಅನುಭವವನ್ನು ಧಾರೆಯೆರೆದು, ತನ್ನ ಸಮಸ್ತ ಸಂಪರ್ಕಗಳನ್ನೂ ಬಳಸಿಕೊಂಡು ಸಂಧಾನ ನಡೆಸಲು ಪ್ರಯತ್ನಿಸಿದ್ದರು. ನಂತರ ಕೋಟಿ ಕೋಟಿ ಸುರಿಯಲು ತಯಾರಾಗಿ ವ್ಯವಹಾರಕ್ಕೆ ನಿಂತಿದ್ದರೆಂಬ ಮಾತೂ ಇದೆ. ಕಡೆಗೂ ಚಿಕ್ಕಪ್ಪನ ಶ್ರಮವೆಲ್ಲವೂ ಹಾಸನದ ಗಟಾರದಲ್ಲಿ ತೊಳೆದು ಹೋದಂತಾಗಿ, ಮಗನ ಸಾವಿರಾರು ಅಸಹ್ಯದ ವೀಡಿಯೋಗಳೆಲ್ಲ ವಿರೋಧಿ ಬಣದ ಕೈ ಸೇರಿ ಬಿಟ್ಟಿತ್ತು!</span><br />
<strong><span style="font-size: 14pt;">ಅಪ್ಪನದ್ದೂ ಅದೇ ಕಥೆ?</span></strong><br />
<span style="font-size: 12pt;">ಹೀಗೆ ಹಾಸನದಲ್ಲಿ ಈ ಬಾರಿ ಚುನಾವಣೆ ಗೆದ್ದುಕೊಳ್ಳುವ ಉಮೇದಿನಲ್ಲಿದ್ದ ಭಂಡ ಯುವನಾಯಕನ ಅಂಡಿಗೀಗ ಸರಿಕಟ್ಟಾಗಿಯೇ ಒದೆ ಬಿದ್ದಿದೆ. ಅಂದಹಾಗೆ, ಹೀಗೆ ಒಂದು ಪುಟಗೋಸಿಗೂ ಗತಿಯಿಲ್ಲದಂತೆ ಮಾನಗೆಡಿಸಿಕೊಂಡಿರುವ ಈ ಯುವ ನಾಯಕನ ಅಪ್ಪ ರಾಜ್ಯ ರಾಜಕಾರಣದಲ್ಲಿ ತನ್ನದೇ ಛಾಪು ಮೂಡಿಸಿರುವ ರಾಜಕಾರಣಿ. ಕೈಯಲ್ಲಿ ಸದಾ ಮಂತ್ರಿಸಿದ ಲಿಂಬೆ ಕಾಯಿಗಳನ್ನಿಟ್ಟುಕೊಂಡು ಓಡಾಡುವ ಈತ, ಆಗಾಗ ನಗೆಪಾಟಲಿಗೀಡಾಗೋದೂ ಇದೆ. ಈ ಹಿಂದೆ ತನ್ನ ಕೋಟಿ ಕಾರಿಗೆ ಅಡ್ಡ ಬಂದ ಬಡಪಾಯಿಯನ್ನು ಹೀನಾಮಾನ ನಿಂದಿಸಿದ್ದ ದುರಹಂಕಾರಿ ಹೆಂಗಸು ಈ ನಿಂಬೆಹಣ್ಣು ಸ್ಪೆಷಲಿಷ್ಟನ ಖಾಸಾ ಹೆಂಡತಿ. ಈ ಅಪರೂಪದ ದಂಪತಿಯ ಇಬ್ಬರು ಮಕ್ಕಳಲ್ಲಿ ಈ ಯುವ ನೇತಾರ ಮೊದಲನೆಯವನು.</span><br />
<span style="font-size: 12pt;">ವಿಶೇಷವೆಂದರೆ, ಈಗ ಹಬ್ಬಿಕೊಂಡಿರುವ ಎಳೇನಿಂಬೆಕಾಯಿಯ ವೀಡಿಯೋ ಕಂಡು ಬೆಚ್ಚಿಬಿದ್ದಿರುವವರೆಲ್ಲ ಮತ್ತಷ್ಟು ಬೆದರುವಂಥಾ ಮತ್ತೊಂದು ರೂಮರ್ ಕೂಡಾ ಹಾಸನದ ತುಂಬಾ ಅಡ್ಡಾಡುತ್ತಿದೆ. ಈ ಯುವ ನಾಯಕನ ತಂದೆಯ ವೀಡಿಯೋಗಳೂ ಇವೆಯಂತೆ ಅನ್ನೋದು ಆ ರೂಮರುಗಳ ಸಾರಾಂಶ. ಇಷ್ಟು ಮಾತ್ರವಲ್ಲದೆ ಈ ಯುವ ನಾಯಕನ ಸಹೋದರನಿಗೂ ಅಂಥಾದ್ದೇ ಕಂಕಟವಿದೆ ಎಂಬಂಥಾ ಸುದ್ದಿಯೂ ಹರಿದಾಡುತ್ತಿದೆ. ಆ ಸುದ್ದಿ ನಿಜವಾ? ಒಂದು ವೇಳೆ ನಿಜವಾಗಿದ್ದರೆ ಅದು ಯಾರು ಉಡಿಯಲ್ಲಿದೆ? ಅದರ ಬಿಡುಗಡೆಗೂ ವಿರೋಧಿ ಪಾಳೆಯ ಮುಹೂರ್ತ ನಿಗಧಿ ಮಾಡಿಕೊಂಡಿದೆಯಾ? ಇಂಥಾ ಪ್ರಶ್ನೆಗಳೆದ್ದಿವೆ. ಸದರಿ ರಾಜಕಾರಣಿ ಹೋದಲ್ಲಿ ಬಂದಲ್ಲಿ ಲಿಂಬೆಹಣ್ಣು ಹಿಚುಕಿಕೊಂಡು ಓಡಾಡುತ್ತಿರೋದರ ಹಿಂದೆ ರಾಸಲೀಲೆ ಬಯಲಾಗೋ ಭಯ ಕೆಲಸ ಮಾಡುತ್ತಿರಲೂಬಹುದು!</span><br />
<strong><span style="font-size: 14pt;">ಸ್ತ್ರೀ ಕಂಟಕ</span></strong><br />
<span style="font-size: 12pt;">ಇದೀಗ ಮಾನ ಹರಾಜಾಗಿಸಿಕೊಂಡು ಕೂತಿರುವ ಯುವ ನಾಯಕನ ಚಿಕ್ಕಪ್ಪನ ರಸಿಕತೆ ಈ ನಾಡಿನ ಮಟ್ಟಿಗೆ ಸವಕಲು ಸಂಗತಿ. ಅವರ ಸ್ವಂತ ಮಗ ಒಂದು ಕಾಲದಲ್ಲಿ ಹೀನಾಮಾನ ಮೆರೆದಾಡಿದರೂ ಕೂಡಾ, ಆ ನಂತರದಲ್ಲಿ ಸಾದಾಸೀದಾ ಹುಡುಗನಾಗಿ ಬದಲಾಗಿ ಬಿಟ್ಟಿದ್ದ. ಕೊಂಚ ಸೆನ್ಸಿಬಲ್ ವ್ಯಕ್ತಿಯಾಗಿ ಕಾಣಿಸುವ ಈ ಹುಡುಗ ಹೀರೋ ಆಗಿ ಮೆರೆಯುವ ಕನಸು ಕಂಡಿದ್ದ. ಅದಕ್ಕಾಗಿ ಪಿತಾಶ್ರೀಯೇ ವೇದಿಕೆ ಸಜ್ಜುಗೊಳಿಸಿ ಎರಡೆರಡು ಸಿನಿಮಾಗಳಲ್ಲಿ ನಾಯಕನಾಗಿಯೂ ನಟಿಸಿದ್ದ. ಕಡೇಯದೊಂದು ಸಿನಿಮಾದಲ್ಲಿ ಈತನಿಗೆ ಗುಳಿಗೆನ್ನೆಯ ಮಾಯಾಂಗನೆಯೊಬ್ಬಳು ನಾಯಕಿಯಾಗಿದ್ದಳು. ನಂತರ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ವಿಚಾರ ಸೆಟ್ಟಿಂದಲೇ ಹೊರಬೀಳಲಾರಂಭಿಸಿತ್ತು. </span><br />
<span style="font-size: 12pt;">ಈ ವಿಚಾರ ತಿಳಿಯುತ್ತಲೇ ಆ ಕುಟುಂಬದ ಹಿರಿಯ ವ್ಯಕ್ತಿ ಸಿಟ್ಟಾಗಿದ್ದರು. ಯಾಕೆಂದರೆ, ಅದಾಗಲೇ ತಮ್ಮ ಮಗ ಸಿನಿಮಾ ನಟಿಯ ಸಂಗದಲ್ಲಿ ಮಾಡಿಕೊಂಡ ಎಡವಟ್ಟು ಅವರಲ್ಲೊಂದು ರೇಜಿಗೆ ಮೂಡಿಸಿತ್ತು. ತಮ್ಮ ಮನೆತನಕ್ಕೆ ಸಿನಿಮಾದವರು ಸರಿಹೊಂದುವುದಿಲ್ಲ ಅಂತೆಲ್ಲ ತಿಳಿಹೇಳಿ ಮೊಮ್ಮಗನ ಮನಃಪರಿವರ್ತನೆ ಮಾಡಿದ್ದರು. ಈ ಹುಡುಗ ಗುಳಿಕೆನ್ನೆಯನ್ನುಕಷ್ಟಪಟ್ಟು ಮರೆತು ಬೇರೆ ಹುಡುಗಿಯೊಂದಿಗೆ ಮದುವೆಯಾಗಿದ್ದ. ಅದಾಗಲೇ ಈತನಿಂದ ಒಂದು ಮನೆಯನ್ನೂ ಗಿಫ್ಟಾಗಿ ಪಡೆದಿದ್ದ ಗುಳಿಕೆನ್ನೆಯಾಕೆ ಅದ್ಯಾವ ಪರಿ ಕಾಟ ಕೊಟ್ಟಿದ್ದಳೆಂದರೆ, ಈ ಹುಡುಗ ಫಸ್ಟ್ ನೈಟ್ ಮಾಡಿಕೊಳ್ಳಲೂ ಅವಕಾಶ ಕೊಟ್ಟಿರಲಿಲ್ಲವಂತೆ. ಕಡೆಗೂ ಆ ಕುಟುಂಬದ ಹಿರೀಕರು ಮಡಿಕೇರಿಯಲ್ಲಿ ಮಹಾಯಾಗವೊಂದನ್ನು ಮಾಡಿ ತಮ್ಮ ಕುಟುಂಬದ ಕುಡಿಯ ಸಂಸಾರ ನೆಟ್ಟಗಾಗಿಸಲು ಹೆಣಗಿದ್ದರು. ಖುದ್ದು ಹಿರಿಯರೇ ಗುಳಿಕೆನ್ನೆಗೆ ಫೋನಾಯಿಸಿ ತಂಟೆಗೆ ಬರದಂತೆ ಆವಾಜು ಹಾಕಿದ್ದರೆಂಬ ಮಾತೂ ಇದೆ. ಹಾಗಂತ ಈ ಹುಡುಗ ಕಾಮದ ದೃಷ್ಟಿಯಿಂದ ಆಹುಡುಗಿಯನ್ನು ಕಂಡಿರಲಿಲ್ಲ. ಆ ಹುಡುಗಿಯೇ ಈತನನ್ನು ಬಿಡಲೊಪ್ಪದೆ ಕಾಡಿಸಿದ್ದಳಷ್ಟೇ. ಆ ವಿಚಾರದಲ್ಲಿ ಸಿನಿಮಾ ಹುಡುಗಿ ತನ್ನ ಮನೆತನಕ್ಕೆ ಸರಿ ಹೊಂದೋದಿಲ್ಲವೆಂಬಂತೆ ಆ ಹಿರಿಯರು ಮಡಿವಂತಿಕೆ ತೋರಿಸಿದ್ದರು. ಅವರು ನಿಜಕ್ಕು ಯೌವನದಿಂದ ಇಳಿಗಾಲದವರೆಗೂ ಈ ವಿಚಾರದಲ್ಲಿ ಘನತೆ ಗೌರವ ಕಾಪಾಡಿಕೊಂಡವರು. ಅಂಥವರ ಮೊಮ್ಮಗ, ಈ ಯುವ ರಾಜಕಾರಣಿ ಕಂಡೋರ ಮನೆ ಹೆಣ್ಣುಮಕ್ಕಳ ಬದುಕನ್ನೇ ಬಲಿಬೀಳಿಸಿರೋದು ದುರಂತವಲ್ಲದೆ ಮತ್ತಿನ್ನೇನು? </span><br />
<strong><span style="font-size: 14pt;">ಇಂಥಾ ಕಾಮುಕ ಜನ ನಾಯಕನಾಗಬಹುದೇ?</span></strong><br />
<span style="font-size: 12pt;">ತನ್ನ ಕ್ಷಣಿಕ ಸುಖಕ್ಕೋಸ್ಕರ, ತನ್ನೊಳಗಿನ ವಿಕೃತಿ ನೀಗಿಕೊಳ್ಳಲೋಸ್ಕರ ಈ ಯುವ ನಾಯಕ ನೂರಾರು ಹೆಣ್ಣು ಜೀವಗಳ ಬದುಕನ್ನೇ ನರಕವಾಗಿಸಿದ್ದಾನೆ. ಈವತ್ತಿಗೆ ಹಾಸನ ಸೀಮೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಮಾನ ಕಳೆದುಕೊಂಡು ಕಂಗಾಲಾಗಿರುವ ಮಹಿಳೆಯರ ಕುಟುಂಬಿಕರ ಸಂಕಟಗಳನ್ನು ನೋಡಿದರೆ ನಿಜಕ್ಕೂ ಮರುಕ ಮೂಡಿಕೊಳ್ಳುತ್ತದೆ. ವೊರೋಧಿ ಪಾಳೆಯ ಇದೊಂದು ವಿಚಾರದಲ್ಲಿ ಸಂವೇದನೆಯಿಂದ ನಡೆದುಕೊಳ್ಳಬೇಕಿತ್ತೆಂಬ ಭಾವವೂ ಮೂಡಿಕೊಳ್ಳುತ್ತದೆ. ಇದರಾಚೆ ನೋಡಿದರೆ, ಈ ಘಟನೆ ರಾಜಕಾರಣದ ನೆರಳಲ್ಲಿ ಹೆಡೆಯೆತ್ತಿ ನಿಂತಿರುವ ಕರಾಳ ಸತ್ಯಗಳನ್ನು ಜಾಹೀರು ಮಾಡಿದೆ. ನಿಜಕ್ಕೂ ಈ ಕಾಮುಕ ಜನನಾಯಕನಾಗಲು ಅರ್ಹನಲ್ಲ. ಹೆಣ್ಣುಮಕ್ಕಳನ್ನು ಈ ಪರಿಯಾಗಿ ಬಳಸಿಕೊಂಡ, ಅವರೆಲ್ಲರ ಬದುಕನ್ನು ಸಾರಾಸಗಟಾಗಿ ಬರ್ಬಾದು ಮಾಡಿದ ಈತ ಯಾವ ಕ್ಷಮೆಗೂ ಅರ್ಹನಲ್ಲ.</span><br />
<span style="font-size: 12pt;">ಇಂಥವರಿಗೆ ಸರಿಯಾದೊಂದು ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಪಕ್ಷಾತೀತವಾಗಿ ಎಲ್ಲರ ಮೇಲಿದೆ. ನಿಜ, ಈಗ ರಾಸಲೀಲೆಯ ವೀಡಿಯೋಗಳು ಹರಡಿಕೊಂಡಿರುವುದರ ಹಿಂದೆ ರಾಜಕೀಯದ ಕಿಸುರಿದೆ. ಹಾಗಂತ ಈ ಒಟ್ಟಾರೆ ಘಟನೆಯನ್ನು ರಾಜಕೀಯಗೊಳಿಸಿ, ಆ ಮೂಲಕ ಈ ಪ್ರಕಲರಣವನ್ನು ಹಳ್ಳ ಹಿಡಿಸುವುದು ತರವಲ್ಲ. ಹಾಗೊಂದು ವೇಳೆ ಯಾವನಾದರೂ ಈ ಯುವ ಕಾಮುಕನನ್ನು ರಕ್ಷಿಸಲು ಯತ್ನಿಸಿದರೆ, ಅಂಥವರಿಗೆಲ್ಲ ಬದುಕು ಕಳೆದುಕೊಂಡಿರುವ ಹೆಣ್ಣುಮಕ್ಕಳ ಶಾಪ ತಟ್ಟದೇ ಬಿಡುವುದಿಲ್ಲ. ಇಂಥಾ ಹಲಾಲುಕೋರ ಯುವ ನಾಯಕನ ತಂದೆ ಸಾರ್ವಜನಿಕವಾಗಿಯೇ ಪರಮ ಭಕ್ತನಂತೆ ಪೋಸು ಕೊಡುತ್ತಾನೆ. ಲಿಂಬೆಹಣ್ಣು ಹಿಸುಕುತ್ತಾ ಕ್ಷುದ್ರ ಜೀವಿಯಂತೆ ಅಡ್ಡಾಡುತ್ತಾನೆ. ಬಹುಶಃ ಆತ ವರ್ಷಗಳ ಹಿಂದೆಯೇ ಎಚ್ಚೆತ್ತುಕೊಂಡು ತನ್ನ ಮಗನ ಗಳಗಂಟೆಗೊಂದು ಮಂತ್ರಿಸಿದ ಲಿಂಬೆಹಣ್ಣು ಕಟ್ಟಿದ್ದರೆ, ಸಾವಿರಾರು ಹೆಂಗಳೆಯರ ಮಾನ ಉಳಿಯುತ್ತಿತ್ತೇನೋ&#8230;! </span></p>
<p>&nbsp;</p>
<p>The post <a href="https://www.shodhanews.com/hassan-sex-scandal-shodha-blast-23-04-2024/">hassan sex scandal: ಯುವ ಕಾಮುಕನ ಅಪ್ಪನದ್ದೂ ಅದೇ ಕಥೆ?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>exclusive: ಪ್ರತಾಪ್ ಸಿಂಹ ಮಾಡಿಕೊಂಡ ಯಡವಟ್ಟುಗಳೇನು?</title>
		<link>https://www.shodhanews.com/exclusive-prathap-simha-mysore-13-03-24/</link>
		
		<dc:creator><![CDATA[Santhosh Bagilagadde]]></dc:creator>
		<pubDate>Wed, 13 Mar 2024 08:13:54 +0000</pubDate>
				<category><![CDATA[ಕವರ್ ಸ್ಟೋರಿ]]></category>
		<category><![CDATA[prathap_simha_mpelection_modi_amithashah_harshavadhansing_jpnadda_mysorekodagu_shodhanewsexclusive_santhosh_bagilagadde]]></category>
		<guid isPermaLink="false">https://www.shodhanews.com/?p=13855</guid>

					<description><![CDATA[<p><img width="1600" height="900" src="https://www.shodhanews.com/wp-content/uploads/2024/03/6c417fdd-2fab-465c-ae45-416eec34d728.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2024/03/6c417fdd-2fab-465c-ae45-416eec34d728.jpg 1600w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-800x450.jpg 800w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-1024x576.jpg 1024w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-768x432.jpg 768w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-1536x864.jpg 1536w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-150x84.jpg 150w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-450x253.jpg 450w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-1200x675.jpg 1200w" sizes="(max-width: 1600px) 100vw, 1600px" />ಲೋಕಸಭಾ ಚುನಾವಣೆಯ (mp election) ಅಖಾಡ ರಂಗೇರಿಕೊಂಡಿದೆ. ಬಹುತೇಕ ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್ ಲಾಬಿ, ಆಂತರಿಕ ಜಟಾಪಟಿಗಳು ಮೇರೆಮೀರಿವೆ. ಆದರೆ, ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಹಿಡಿಯುವ ಉಮೇದಿನಲ್ಲಿರುವ ಬಿಜೆಪಿಯ ಒಡಲು ಮಾತ್ರ ಕರ್ನಾಟಕದ ಮಟ್ಟಿಗೆ ಅಕ್ಷರಶಃ ಧಗಧಗಿಸಲಾರಂಭಿಸಿದೆ. ಯಾಕೆಂದರೆ, ಎಲ್ಲರ ನಿರೀಕ್ಷೆ ಮೀರಿ ಜಗಜಟ್ಟಿಗಳಂತೆ ಮೆರೆಯುತ್ತಿದ್ದ, ಮಾತೆತ್ತಿದರೆ ಮತಗಳ ನಿಡುವೆ ಪೆಟ್ರೋಲು ಸುರಿದ ಬೆಂಕಿ ಹಚ್ಚುತ್ತಿದ್ದವರಿಗೇ ಟಿಕೇಟು ಕೈತಪ್ಪೋದು ಗ್ಯಾರೆಂಟಿ ಎಂಬಂತಾಗಿದೆ. ಸದ್ಯದ ಮಟ್ಟಿಗೆ ಮೈಸೂರು-ಕೊಡಗು ಲೋಕಸಭಾ ಕ್ರೇತ್ರದಲ್ಲಿ ಪ್ರತಾಪ್ ಸಿಂಂಹನಿಗೆ ತಬ್ಬಲಿ ಸ್ಥಿತಿಯೊಂದು ಸುತ್ತಿಕೊಂಡಿದೆ. [...]</p>
<p>The post <a href="https://www.shodhanews.com/exclusive-prathap-simha-mysore-13-03-24/">exclusive: ಪ್ರತಾಪ್ ಸಿಂಹ ಮಾಡಿಕೊಂಡ ಯಡವಟ್ಟುಗಳೇನು?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1600" height="900" src="https://www.shodhanews.com/wp-content/uploads/2024/03/6c417fdd-2fab-465c-ae45-416eec34d728.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2024/03/6c417fdd-2fab-465c-ae45-416eec34d728.jpg 1600w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-800x450.jpg 800w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-1024x576.jpg 1024w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-768x432.jpg 768w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-1536x864.jpg 1536w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-150x84.jpg 150w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-450x253.jpg 450w, https://www.shodhanews.com/wp-content/uploads/2024/03/6c417fdd-2fab-465c-ae45-416eec34d728-1200x675.jpg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><span style="color: #00ccff;"><strong><span style="font-size: 18pt;">ಲೋ</span></strong></span>ಕಸಭಾ ಚುನಾವಣೆಯ (mp election) ಅಖಾಡ ರಂಗೇರಿಕೊಂಡಿದೆ. ಬಹುತೇಕ ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್ ಲಾಬಿ, ಆಂತರಿಕ ಜಟಾಪಟಿಗಳು ಮೇರೆಮೀರಿವೆ. ಆದರೆ, ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಹಿಡಿಯುವ ಉಮೇದಿನಲ್ಲಿರುವ ಬಿಜೆಪಿಯ ಒಡಲು ಮಾತ್ರ ಕರ್ನಾಟಕದ ಮಟ್ಟಿಗೆ ಅಕ್ಷರಶಃ ಧಗಧಗಿಸಲಾರಂಭಿಸಿದೆ. ಯಾಕೆಂದರೆ, ಎಲ್ಲರ ನಿರೀಕ್ಷೆ ಮೀರಿ ಜಗಜಟ್ಟಿಗಳಂತೆ ಮೆರೆಯುತ್ತಿದ್ದ, ಮಾತೆತ್ತಿದರೆ ಮತಗಳ ನಿಡುವೆ ಪೆಟ್ರೋಲು ಸುರಿದ ಬೆಂಕಿ ಹಚ್ಚುತ್ತಿದ್ದವರಿಗೇ ಟಿಕೇಟು ಕೈತಪ್ಪೋದು ಗ್ಯಾರೆಂಟಿ ಎಂಬಂತಾಗಿದೆ. ಸದ್ಯದ ಮಟ್ಟಿಗೆ ಮೈಸೂರು-ಕೊಡಗು <span style="color: #000000;">ಲೋ</span>ಕಸಭಾ ಕ್ರೇತ್ರದಲ್ಲಿ ಪ್ರತಾಪ್ ಸಿಂಂಹನಿಗೆ ತಬ್ಬಲಿ ಸ್ಥಿತಿಯೊಂದು ಸುತ್ತಿಕೊಂಡಿದೆ. ಒಳಸುಳಿಗಳನ್ನು ಬಲ್ಲ, ಕ್ಷೇತ್ರದೊಳಗಿನ ಪಲ್ಲಟಗಳ ಅರಿವಿರುವವರಿಗೆ ಇದು ನಿರೀಕ್ಷಿತ. ದೂರದಿಂದ ಸಿಂಹದ ಅಟಾಟೋಪಗಳನ್ನು ಕಂಡಿದ್ದವರಿಗಿದು ಅನಿರೀಕ್ಷಿತ ಆಘಾತ!</span></p>
<p style="text-align: justify;"><img loading="lazy" decoding="async" class="alignnone wp-image-13860" src="https://www.shodhanews.com/wp-content/uploads/2024/03/prathapsimha-1681988504-800x450.jpg" alt="" width="1024" height="576" srcset="https://www.shodhanews.com/wp-content/uploads/2024/03/prathapsimha-1681988504-800x450.jpg 800w, https://www.shodhanews.com/wp-content/uploads/2024/03/prathapsimha-1681988504-1024x576.jpg 1024w, https://www.shodhanews.com/wp-content/uploads/2024/03/prathapsimha-1681988504-768x432.jpg 768w, https://www.shodhanews.com/wp-content/uploads/2024/03/prathapsimha-1681988504-150x84.jpg 150w, https://www.shodhanews.com/wp-content/uploads/2024/03/prathapsimha-1681988504-450x253.jpg 450w, https://www.shodhanews.com/wp-content/uploads/2024/03/prathapsimha-1681988504.jpg 1200w" sizes="(max-width: 1024px) 100vw, 1024px" /><span style="font-size: 12pt;">ಅದೇನೇ ಗೋಳಾಡಿದರೂ, ಆನ್ ಲೈನಲ್ಲಿ ಕಣ್ಣೀರಿಟ್ಟರೂ ಪ್ರತಾಪ್ ಸಿಂಹ ಟಿಕೆಟ್ ವಂಚಿತನಾಗೋದು ಪಕ್ಕಾ. ಖುದ್ದು ಪ್ರತಾಪ್ ಇದು ರಾಜ್ಯದ ಕೆಲ ನಾಯಕರ ಷಡ್ಯಂತ್ರ ಅಂತೆಲ್ಲ ಪರೋಕ್ಷವಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ಕುದುರಿಕೊಳ್ಳುವ ಅನುಕಂಪದಲ್ಲಿ ಕಳೆದು ಹೋದ ರಾಜಕೀಯ ಕಿಮ್ಮತ್ತನ್ನು ಸಂಭಾಳಿಸಿಕೊಳ್ಳುವ ಜಾಣ ನಡೆ ಸಿಂಹದ ಕಡೆಯಿಂದ ಜಾಹೀರಾಗುತ್ತಿದೆ. ಇದೆಲ್ಲವನ್ನೂ ಕಂಡ ಸೋಶಿಯಲ್ ಮೀಡಿಯಾಗಳ ಸಿಂಹಾಭಿಮಾನಿಗಳು ಧಾರಾಕಾರವಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಪ್ರತಾಪ್ ಸಿಂಹನನ್ನು ಅಭಿವೃದ್ಧಿಯ ಹರಿಕಾರ ಎಂಬಂಥಾ ಅತಿಶಯದ ಮಾತುಗಳಿಂದ ಉಬ್ಬಿಸುತ್ತಿದ್ದಾರೆ. ಇದು ಯಡಿಯೂರಪ್ಪ, ವಿಜಯೇಂದ್ರ ಮುಂತಾದವರ ಹಿಕ್ಮತ್ತೆಂಬಂತೆ ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿವೆ. ಹಾಗಾದರೆ, ನಿಜಕ್ಕೂ ನಡೆದಿರುವುದೇನು? ಟಿಕೆಟು ತಪ್ಪಿಸಿಕೊಂಡ ಸಿಂಹ ಕುಂಯ್ಯೋ ಅನ್ನಲು ಕಾರಣರಾದವರು ಯಾರು? ಈ ಪ್ರಶ್ನೆಗಳನ್ನಿಟ್ಟುಕೊಂಡು ತಲಾಷಿಗಿಳಿದರೆ ಒಂದಷ್ಟು ಅಚ್ಚರಿದಾಯಕ ವಿದ್ಯಮಾನಗಳು ಎದುರಾಗುತ್ತವೆ!</span><br />
<strong><span style="font-size: 14pt;">ಯದುವೀರ್ ಮಾವನ ಮ್ಯಾಜಿಕ್ಕು!</span></strong></p>
<figure id="attachment_13861" aria-describedby="caption-attachment-13861" style="width: 1024px" class="wp-caption alignnone"><img loading="lazy" decoding="async" class="wp-image-13861" src="https://www.shodhanews.com/wp-content/uploads/2024/03/984d6068-bcd1-4d61-80fa-9d3e5593a1a6-343x600.jpg" alt="" width="1024" height="1791" srcset="https://www.shodhanews.com/wp-content/uploads/2024/03/984d6068-bcd1-4d61-80fa-9d3e5593a1a6-343x600.jpg 343w, https://www.shodhanews.com/wp-content/uploads/2024/03/984d6068-bcd1-4d61-80fa-9d3e5593a1a6-150x262.jpg 150w, https://www.shodhanews.com/wp-content/uploads/2024/03/984d6068-bcd1-4d61-80fa-9d3e5593a1a6.jpg 438w" sizes="(max-width: 1024px) 100vw, 1024px" /><figcaption id="caption-attachment-13861" class="wp-caption-text">ಯದುವೀರ್ ಮಾವ ಹರ್ಷವರ್ಧನ್ ಸಿಂಗ್</figcaption></figure>
<p style="text-align: justify;"><span style="font-size: 12pt;">ಪ್ರತಾಪ್ ಸಿಂಹನಿಗೆ ಟಿಕೆಟಿಲ್ಲ ಎಂಬ ಸುದ್ದಿ ಜಾಹೀರಾಗಿ, ಆತ ಲೈವ್ ಬಂದು ಭಾವುಕನಾಗುವಲ್ಲಿಗೆ ಮೈಸೂರು-ಕೊಡಗು ಕ್ಷೇತ್ರಕ್ಕೆ ಹೊಸಾ ಅಭ್ಯರ್ಥಿಯ ಆಗಮನದ ಸ್ಪಷ್ಟ ಸೂಚನೆ ರವಾನೆಯಾಗಿದೆ. ಯದುವೀರ್ ಒಡೆಯರ್ ಈ ಬಾರಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಅಷ್ಟಕ್ಕೂ ಈ ಹಿಂದಿನ ಒಂದಷ್ಟು ವಿಧಾನಸಭಾ ಚುನಾವಣೆಗಳಲ್ಲಿಯೇ ಯದುವೀರ್ ರನ್ನು ಅಖಾಡಕ್ಕಿಳಿಸುವ ಪ್ರಯತ್ನ ನಡೆದಿತ್ತು. ಅದೇಕೋ ಯದುವೀರ ಹಿಂದೆ ಸರಿದಿದ್ದರು. ಆದರೆ, ಲೋಕಸಭಾ ಚುನಾವಣಾ ಅಖಾಡಕ್ಕಿಳಿಯುವುದಕ್ಕೆ ಮಾತ್ರ ಯದುವೀರ್ ಉತ್ಸುಕರಾಗಿದ್ದಾರೆಂಬ ಮಾತುಗಳು ಅರಮನೆಯ ಅಂತಃಪುರದಿಂದಲೇ ಹೊರಬೀಳುತ್ತಿವೆ. ಯಾವಾಗ ಅಳೀಮಯ್ಯನಿಗೆ ಸಂಸತ್ತಿಗೆ ತೆರಳೋ ಮನಸಾಗಿದೆ ಅಂತ ಮನವರಿಕೆಯಾಯ್ತೋ, ಆಗ ರಾಜಸ್ಥಾನದ ಮಾವಯ್ಯ ಹರ್ಷವರ್ಧನ್ ಸಿಂಗ್ ಅಖಾಡಕ್ಕಿಳಿದು ಬಿಟ್ಟಿದ್ದಾರೆ!</span><br />
<span style="font-size: 12pt;">ಈ ಹರ್ಷವರ್ಧನ್ ಸಿಂಗ್ ಡುಂಗರಾಪುರ್ ಯದುವೀರ್ ಮಡದಿ ತ್ರಿಶಿಕಾರ ತಂದೆ. ರಾಜಸ್ಥಾನದ ಡುಂಗಾರಪುರ ರಾಜಮನೆತನದ ಹರ್ಷವರ್ಧನ್ ಈ ಕಾಲಮಾನಕ್ಕೂ ರಾಜವೈಭೋಗದ ಬದುಕನ್ನು, ಪ್ರತಿಷ್ಠೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಮೋದಿ ಪ್ರಧಾನಿಯಾದ ನಂತರದಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಅಧಿಕೃತವಾಗಿ ಗುರುತಿಸಿಕೊಂಡಿದ್ದ ಹರ್ಷವರ್ಧನ್, ಈ ಹಿಂದೆ ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಆತ ಎಂಥಾ ಪ್ರಭಾವಿಯೆಂದರೆ, ಈ ಕ್ಷಣಕ್ಕೂ ಪ್ರಧಾನಿ ಮೋದಿಯಿಂದ ಹಿಡಿದು, ಗೃಹಸಚಿವ ಅಮಿತ್ ಶಾ ವರೆಗೆ ಎಲ್ಲ ಪ್ರಭಾವಿಗಳೊಂದಿಗೂ ಖಾಸಾ ಗೆಳೆತನ ಹೊಂದಿದ್ದಾರೆ. ಒಂದು ಮೂಲದ ಪ್ರಕಾರ, ಖುದ್ದ ಹರ್ಷವರ್ಧನ್ ಸಿಂಗ್ ಮೋದಿ, ಅಮಿತ್ ಷಾರನ್ನು ಭೇಟಿ ಮಾಡಿ ಮೈಸೂರು ಕೊಡಗು ಕ್ಷೇತ್ರದಿಂದ ತನ್ನ ಅಳಿಯನನ್ನು ಕಣಕ್ಕಿಳಿಸುವಂತೆ ಪ್ರಸ್ವಾನೆಯನ್ನಿಟ್ಟಿದ್ದಾರೆ. ಆ ನಂತರ ನಡೆದ ವಿದ್ಯಮಾನಗಳು ಪ್ರತಾಪ್ ಸಿಂಹನಿಗೆ ಸಲೀಸಾಗಿ ಮನೆಯ ದಾರಿ ತೋರಿಸಿಬಿಟ್ಟಿವೆ!</span><br />
<strong><span style="font-size: 14pt;">ವಾತಾವರಣವೇ ಅದಲು ಬದಲು!</span></strong></p>
<p style="text-align: justify;"><strong><span style="font-size: 14pt;"><img loading="lazy" decoding="async" class="alignnone wp-image-13862" src="https://www.shodhanews.com/wp-content/uploads/2024/03/IMG_Women_Commission_2_1_QABNSQ1C-800x532.jpg" alt="" width="1024" height="681" srcset="https://www.shodhanews.com/wp-content/uploads/2024/03/IMG_Women_Commission_2_1_QABNSQ1C-800x532.jpg 800w, https://www.shodhanews.com/wp-content/uploads/2024/03/IMG_Women_Commission_2_1_QABNSQ1C-1024x681.jpg 1024w, https://www.shodhanews.com/wp-content/uploads/2024/03/IMG_Women_Commission_2_1_QABNSQ1C-768x511.jpg 768w, https://www.shodhanews.com/wp-content/uploads/2024/03/IMG_Women_Commission_2_1_QABNSQ1C-150x100.jpg 150w, https://www.shodhanews.com/wp-content/uploads/2024/03/IMG_Women_Commission_2_1_QABNSQ1C-450x299.jpg 450w, https://www.shodhanews.com/wp-content/uploads/2024/03/IMG_Women_Commission_2_1_QABNSQ1C.jpg 1200w" sizes="(max-width: 1024px) 100vw, 1024px" /> </span></strong><span style="font-size: 12pt;">ಯದುವೀರ್ ಮಾವ ಇಂಥಾದ್ದೊಂದು ಬೇಡಿಕೆ ಇಡುತ್ತಲೇ ಮೈಸೂರು ಕೊಡಗು ಕ್ಷೇತ್ರದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲು ಮುಂದಾದದ್ದು ಅಮಿತ್ ಷಾ. ಈ ಬಗ್ಗೆ ಗ್ರೌಂಡ್ ರಿಪೋರ್ಟ್ ತರಿಸಿಕೊಂಡಿದ್ದ ಷಾಗೆ ಈ ಬಾರಿ ಟಿಕೇಟು ಕೊಟ್ಟರೂ ಪ್ರತಾಪ್ ಗೆಲ್ಲೋದು ಕಷ್ಟ ಎಂಬುದು ಸ್ಪಷ್ಟವಾಗಿತ್ತು. ಎರಡು ಅವಧಿಯಲ್ಲಿ ಗೆದ್ದ ಪ್ರತತಾಪ್ ಸಿಂಹ ತನ್ನ ದಾರಿ ಸುಗಮಗೊಳಿಸಿಕೊಳ್ಳುವ ಉಮೇದಿನಲ್ಲಿ ಪಕ್ಷಸಂಘಟನೆಯನ್ನು ಛಿದ್ರಗೊಳಿಸಿದ್ದ ಸತ್ಯವೊಂದು ಅಮಿತ್ ಶಾ ಮುಂದೆ ತೆರೆದುಕೊಂಡಿತ್ತು. ಖುದ್ದು ಈ ಭಾಗದ ಬಿಜೆಪಿಯ ಬಹುತೇಕ ಮುಖಂಡರು, ಪ್ರಭಾವಿಗಳೇ ಸಿಂಹದ ಪ್ರತಾಪ ಕಂಡು ರೊಚ್ಚಿಗೆದ್ದಿದ್ದಾರೆಂಬ ಸತ್ಯವೂ ತಲುಪಿಕೊಂಡಿತ್ತು. ಹಾಗೊಂದು ವೇಳೆ ಸಿಂಹ ಎಲ್ಲಿ ನಿಂತರೂ ಗೆಲ್ಲುವ ಛಾರ್ಮ್ ಹೊಂದಿದ್ದರೆ, ಅದಕ್ಕೊಂದು ವ್ಯವಸ್ಥೆಯಾಗುತ್ತಿತ್ತೇನೋ&#8230; </span><br />
<span style="font-size: 12pt;">ಆದರೆ, ಸ್ವಂತ ಕ್ಷೇತ್ರದಲ್ಲಿಯೇ ನಿತ್ರಾಣಗೊಂಡಿರೋ ಸಿಂಹ, ಮತ್ಯಾವ ಕ್ಷೇತ್ರದಲ್ಲಿಯೂ ಬಚಾವಾಗೋದು ಕಷ್ಟ ಎಂಬುದು ಅಮಿತ್ ಶಾಗೂ ಸ್ಪಷ್ಟವಾಗಿದೆ. ಇದಾಗುತ್ತಲೇ ಮೋದಿ ಮುಂದೆ ಈ ಬಗ್ಗೆ ಷಾ ಪ್ರಸ್ತಾಪಿಸಿದ್ದಾರೆ. ಎಷ್ಟೆಂದರೂ ಪತ್ರಕರ್ತನಾಗಿದ್ದ ಸಂದರ್ಭದಲ್ಲಿ ಪ್ರತಾಪ್ ಮೋದಿಯ ಬಗ್ಗೆ ಥಾನುಗಟ್ಟಲೆ ಬರೆದಿದ್ದರಲ್ಲಾ? ಅದಕ್ಕೆ ಎರಡು ಸುತ್ತಿಗೆ ಮೆರೆಯುವ ಅವಕಾಶದ ಇನಾಮು ಸಾಕೆನಿಸಿತೇನೋ&#8230; ಮೋದಿಯ ಕಡೆಯಿಂದಲೂ ಪ್ರತಾಪ್ ಗೆ ಟಾಂಗ್ ಕೊಡಲು ಇಷಾರೆ ಸಿಕ್ಕಿದೆ. ಅಷ್ಟಾಗುತ್ತಲೇ ಹರ್ಷವರ್ಧನ್ ಸಿಂಗ್ ರನ್ನು ಸಂಪರ್ಕಿಸಿದ್ದ ಷಾ ಹಸಿರು ನಿಶಾನೆ ತೋರಿಸಿದ್ದಾರೆ. ಅಲ್ಲಿಗೆ ಪ್ತಾಪ್ ಸಿಂಹನಿಗೆ ಮೈಸೂರು ಕೊಡಗು ಕ್ಷೇತ್ರದ ನಂಟು ಖಾಯಮ್ಮಾಗಿ ಕಳಚಿಕೊಂಡಂತಾಗಿದೆ. ಗಮನೀಯ ಅಂಶವೆಂದರೆ, ಈಗ ಪ್ರತಾಪ್ ರಾಜ್ಯದ ಕೆಲ ನಾಯಕರೇ ತನ್ನನ್ನು ತುಳಿಯುತ್ತಿದ್ದಾರೆ ಎಂಬರ್ಥದಲ್ಲಿ ಮಾತಾಡುತ್ತಿದ್ದಾರೆ. ಆದರೆ, ಟಿಕೆಟ್ ಕೈತಪ್ಪಿದ್ದರ ಹಿಂದೆ ರಾಜಸ್ಥಾನದ ನಂಟಿದೆಯೇ ಹೊರತು, ಅದರ ಸುತ್ತ ರಾಜ್ಯ ನಾಯಕರ ನೆರಳು ಕಾಣಿಸುತ್ತಿಲ್ಲ!</span><br />
<strong><span style="font-size: 14pt;">ಪ್ರತಾಪ್ ಗೆಲುವಿನ ಹಿಂದಿದೆ ರಹಸ್ಯ!</span></strong></p>
<p style="text-align: justify;"><img loading="lazy" decoding="async" class="alignnone wp-image-13863" src="https://www.shodhanews.com/wp-content/uploads/2024/03/download-1.jpg" alt="" width="1024" height="652" srcset="https://www.shodhanews.com/wp-content/uploads/2024/03/download-1.jpg 281w, https://www.shodhanews.com/wp-content/uploads/2024/03/download-1-150x96.jpg 150w" sizes="(max-width: 1024px) 100vw, 1024px" /><span style="font-size: 12pt;">ಪ್ರತಾಪ್ ಸಿಂಹ ಹಾಸನ ಸೀಮೆಯವರು. ನಾನಾ ಲೆಕ್ಕಾಚಾರಗಳ ಕಾರಣದಿಂದ ಆತನಿಗೆ ಮೈಸೂರು ಕೊಡಗು ಕ್ಷೇತ್ರದಿಂದ ಟಿಕೇಟು ಸಿಕ್ಕಿತ್ತು. ಎರಡೆರಡು ಸಲ ಗೆಲುವೂ ಕೂಡಾ ಸಲೀಸಾಗಿಯೇ ದಕ್ಕಿತ್ತು. ಅದಕ್ಕೆ ಮೋದಿ ಅಲೆ ಕಾರಣ ಅಂತ ಅನೇಕರು ಹೇಳೋದಿದೆ. ಆದರೆ, ಪ್ರತಾಪ್ ಗೆಲುವಿನ ಹಿಂದೆ ರಾಜಕಾರಣದ ಆಂತರಿಕ ಒಡಂಬಡಿಕೆ, ಕಿತ್ತಾಟ ಮತ್ತು ಅದರ ಫಲವಾಗಿ ಚದುರಿದ ಒಕ್ಕಲಿಗರ ಓಟುಗಳೆಲ್ಲವೂ ಕಾರಣವಾಗಿತ್ತೆಂಬುದು ಆತ್ಯಂತಿಕ ಸತ್ಯ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಅಲೆಯಾಚೆಗೆ ಪ್ರತಾಪ್ ನನ್ನು ಗೆಲ್ಲಿಸಿದ್ದು ಮೈಸೂರು ಕೊಡಗು ಕ್ರೇತ್ರದ ರಾಜಕೀಯ ವಲಯದಲ್ಲಿ ನಡೆದಿದ್ದ ಆಂತರಿಕ ಪಲ್ಲಟಗಳಷ್ಟೇ. </span><br />
<span style="font-size: 12pt;">ಪ್ರತಾಪ್ ಮೊದಲ ಚುನಾವಣೆಯ ಸಂದರ್ಭದಲ್ಲಿಯೂ ಈ ಕ್ಷೇತ್ರ ಆತನ ಗೆಲುವಿಗೆ ತಂತಾನೇ ಹದಗೊಂಡಿತ್ತು. ಆ ಕಾಲಕ್ಕೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಅಡಗೂರು ವಿಶ್ವನಾಥ್ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದರು. ಗಮನಿಸಲೇ ಬೇಕಾದ ವಿಚಾರವೆಂದರೆ, ಒಕ್ಕಲಿಗ ಸಮುದಾಯದಿಂದ ಯಾವ ಅಭ್ಯರ್ಥಿಯೂ ಕಣದಲ್ಲಿರಲಿಲ್ಲ. ಇದೇ ಸಂದರ್ಭದಲ್ಲಿ ಜೆಡಿಎಸ್ ಕೂಡಾ ನಿವೃತ್ತ ಜಡ್ಜ್ ಚಂದ್ರಶೇಖರಯ್ಯ ಅವರನ್ನು ಕಣಕ್ಕಿಳಿಸಿ ಲಿಂಗಾಯತ ಮತ ಸೆಳೆಯಲು ಪ್ರಯತ್ನಿಸಿತ್ತು. ಅದರ ಹಿಂದಿದ್ದದ್ದು ಒಕ್ಕಲಿಗ ಮತಗಳು ಒಂದು ಕಡೆ ಸರಿಯಲೆಂಬ ಉದ್ದೇಶವಷ್ಟೇ. ಇದೇ ಹಂತದಲ್ಲಿ ಸಿಕ್ಕಸಿಕ್ಕಲ್ಲಿ ಪ್ರಹಾರ ನಡೆಸುತ್ತಿದ್ದ ವಿಶ್ವನಾಥ್ ರನ್ನು ಸೋಲಿಸುವುದು ಮಾತ್ರವೇ ಕುಮಾರಸ್ವಾಮಿ ಮತ್ತು ದೇವೇಗೌಡರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಕಡೆಯಿಂದ ಪ್ರತಾಪ್ ಸಿಂಹನಿಗೆ ಓಟು ಹಾಕಿ ಎಂಬ ಸಂದೇಶವೊಂದು ಗುಪ್ತವಾಗಿ ಜೆಡಿಎಸ್ ಒಕ್ಕಲಿಗ ನಾಯಕರಿಗೆ ರವಾನೆಯಾಗಿತ್ತು. ಬಹುತೇಕ ಕಾಂಗ್ರೆಸ್ ಕಡೆಯ ಒಕ್ಕಲಿಗ ಮತಗಳೂ ಸಿಂಹನಿಗೆ ಬಿದ್ದಿದ್ದರಿಂದಾಗಿ ಆತ ಗೆಲುವು ಕಾಣುವಂತಾಗಿತ್ತು!</span><br />
<span style="font-size: 12pt;">ಹೀಗೆ ಗೆದ್ದು ಮೊದಲ ಅವಧಿ ಸವೆಸಿದ್ದ ಪ್ರತಾಪ್ ಸಿಂಹನ ಪಾಲಿಗೆ ಎರಡನೇ ಅವಧಿಯಲ್ಲಿಯೂ ಅದೃಷ್ಟ ಕೈ ಹಿಡಿದಿತ್ತು. ಆ ಹಂತದಲ್ಲಿ ಕಾಂಗ್ರೆಸ್ ಜೆಡಿಎಸ್ ಖದರ್ ಇರುವ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿದಿದ್ದರೆ, ಜೆಡಿಎಸ್ ಸಾಥ್ ಕೊಟ್ಟಿದ್ದರೆ ಪ್ರತಾಪ್ ಗೆಲುವು ಖಂಡಿತವಾಗಿಯೂ ಕಷ್ಟವಾಗುತ್ತಿತ್ತು. ಆದರೆ ಈ ಮೈತ್ರಿ ಅಭ್ಯರ್ಥಿಯಾಗಿ ವಿಜಯಶಂಕರ್ ಕಣಕ್ಕಿಳಿದರು. ಈತ ಅದಾಗಲೇ ತೆರೆಮರೆಗೆ ಸರಿದಿದ್ದ ರಾಜಕಾರಣಿ. ಒಂದು ವೇಳೆ ಈ ಜಾಗಕ್ಕೆ ಛಾತಿ ಇರುವ ಒಕ್ಕಲಿಗ ಅಭ್ಯರ್ಥಿ ಬಂದಿದ್ದರೆ ಚಿತ್ರಣವೇ ಬೇರೆಯದ್ದಿರುತ್ತಿತ್ತು. ಒಕ್ಕಲಿಗ ಮತಗಳು ಪ್ರತಾಪನತ್ತ ಮತ್ತೆ ಹರಿದಿದ್ದರಿಂದ ಎರಡನೇ ಬಾರಿಗೆ ಗೆಲುವು ದಕ್ಕಿತ್ತು.</span><br />
<strong><span style="font-size: 14pt;">ಸಿಂಹಕ್ಕೆ ಗ್ಯಾಸ್ ಟ್ರಬಲ್!</span></strong></p>
<p style="text-align: justify;"><img loading="lazy" decoding="async" class="alignnone wp-image-13864" src="https://www.shodhanews.com/wp-content/uploads/2024/03/news_thumbnail_1710176866-800x450.jpg" alt="" width="1024" height="576" srcset="https://www.shodhanews.com/wp-content/uploads/2024/03/news_thumbnail_1710176866-800x450.jpg 800w, https://www.shodhanews.com/wp-content/uploads/2024/03/news_thumbnail_1710176866-768x432.jpg 768w, https://www.shodhanews.com/wp-content/uploads/2024/03/news_thumbnail_1710176866-150x84.jpg 150w, https://www.shodhanews.com/wp-content/uploads/2024/03/news_thumbnail_1710176866-450x253.jpg 450w, https://www.shodhanews.com/wp-content/uploads/2024/03/news_thumbnail_1710176866.jpg 960w" sizes="(max-width: 1024px) 100vw, 1024px" /><span style="font-size: 12pt;">ಈ ಬಾರಿ ಮಾತ್ರ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಎರಡು ಬಾರಿ ಗೆದ್ದ ಮದ, ಬೆಂಗಳೂರು ಮೈಸೂರು ಕಾರಿಡಾರ್ ರಸ್ತೆಯ ಮೂಲಕಪಡೆದುಕೊಂಡಿದ್ದ ಬಿಟ್ಟಿ ಬಿಲ್ಡಪ್ಪುಗಳ ನಡುವೆ ಪ್ರತಾಪ್ ಕಡೆಯಿಂದ ಸಾಲು ಸಾಲು ಎಡವಟ್ಟುಗಳಾಗುತ್ತಾ ಬಂದಿವೆ. ಅದೆಲ್ಲದರ ಫಲವಾಗಿ ಈವತ್ತಿಗೆ ಬಿಜೆಪಿ ಪಾಳೆಯದ ಸ್ಥಳೀಯ ಮುಖಂಡರುಗಳೇ ಪ್ರತಾಪ್ ಸಿಂಹನನ್ನು ಕಂಡರೆ ಉರಿದು ಬೀಳುವಂತಾಗಿದೆ. ಚುನಾವಣೆ ಒಂದಷ್ಟು ದೂರವಿದ್ದಾಗಲೇ ಅವರೆಲ್ಲ ಪ್ರತಾಪನಿಗೆ ಸೋಲಿನ ರುಚಿ ತೋರಿಸಲು ತಯಾರಾಗಿ ಬಿಟ್ಟಿದ್ದರು. ಪ್ರತಾಪ್ ಅದ್ಯಾವ ಪರಿಯಲ್ಲಿ ಮರೆಯಲಾರಂಭಿಸಿದ್ದರೆಂದರೆ, ಖುದ್ದು ಮೈಸೂರು ಸೀಮೆಯ ಹಿರಿಯ ಬಿಜೆಪಿ ನಾಯಕರನ್ನೇ ಸಾರ್ವಜನಿಕವಾಗಿ ಮುಜುಗರಕ್ಕೀಡು ಮಾಡಲಾರಂಭಿಸಿದ್ದರು. ತೀರಾ ಪಕ್ಷದ ಪರಿಧಿಯಲ್ಲಿ ಪರಿಹರಿಸಿಕೊಳ್ಳಬಹುದಾದ ಸೂಕ್ಷ್ಮ ಸಂಗತಿಗಳನ್ನು ಹಾದಿರಂಪ ಮಾಡುವ ಮೂಲಕ ಶಿಸ್ತಿನ ಸರಹದ್ದು ದಾಟಿ ಬಿಟ್ಟಿದ್ದರು.</span><br />
<span style="font-size: 12pt;">ಕೃಷ್ಣರಾಜ ಕ್ಷೇತ್ರದಲ್ಲಿ ರಾಮದಾಸ್ ಶಾಸಕರಾಗಿದ್ದಾಗ ಗುಂಬಜ್ ವಿವಾದಕ್ಕೆ ಕಿಚ್ಚು ಹಚ್ಚಿದ್ದದ್ದು ಇದೇ ಪ್ರತಾಪ್ ಸಿಂಹ. ಈ ಹಿನ್ನೆಲೆಯಲ್ಲಿ ರಾಮದಾಸ್ ಮೇಲೆ ಕೆಸರೆರಚಿದ್ದ ಸಿಂಹನ ವಿರುದ್ಧ ಬಿಜೆಪಿ ಪಾಳೆಯದಲ್ಲಿಯೇ ಆಕ್ರೋಶ ಮೂಡಿಕೊಂಡಿತ್ತು. ಇನ್ನುಳಿದಂತೆ, ಮೈಸೂರಿನ ಒಡಲಲ್ಲಿ ಅಡುಗೆ ಅನಿಲ ಕನೆಕ್ಷನ್ನು ಮಾಡಲು ಕಂಡ ಕಂಡಲ್ಲಿ ನೆಲ ಅಗೆಯಲಾಗಿತ್ತಲ್ಲಾ? ಅದರಿಂದ ಬಂದ ಕಮಿಷನ್ ಬಾಬತ್ತನ್ನು ಪಾಲಿಕೆ ಮಟ್ಟದ ಮುಖಂಡರಿಗಾಗಲಿ, ಇತರೇ ಮುಖಂಡರಿಗಾಗಲಿ ಕೊಡದೆ ತಾನೇ ಜೇಬಿಗಿಳಿಸಿದ್ದರೆಂಬ ಆರೋಪವೂ ಸಿಂಹನ ಮೇಲಿದೆ. ಈ ವಿಚಾರದಲ್ಲಿ ತಿರುಗಿ ಬಿದ್ದ ಬಿಜೆಪಿ ಮಂದಿಗೇ ಆವಾಜು ಹಾಕುವ ಮೂಲಕ ಸಿಂಹ ಎಲ್ಲರನ್ನೂ ಎದುರುಹಾಕಿಕೊಂಡಿತ್ತು. ಕೇವಲ ಗ್ಯಾಸ್ ಲೈನ್ ವಿಚಾರದಲ್ಲಿ ಮಾತ್ರವಲ್ಲ; ಎಲ್ಲದರಲ್ಲಿಯೂ ಸರ್ವಾರಿಕಾರಿಯಂತೆ ಪಾರಮ್ಯ ಮೆರೆದು, ಫಾಯಿಧೆ ಗಿಟ್ಟಿಸಿಕೊಳ್ಳುತ್ತಾ ಬಂದಿರುವ ಪ್ರತಾಪ್ ವಿರುದ್ಧ ಮೈಸೂರು ಕೊಡಗು ಕ್ಷೇತ್ರದ ಬಿಜೆಪಿಯಲ್ಲಿ ಅಕ್ಷರಶಃ ಕುದಿತವಿದೆ. </span><br />
<strong><span style="font-size: 14pt;">ಹೊರಗಿನವರೇ ಗೆಳೆಯರು!</span></strong></p>
<p style="text-align: justify;"><img loading="lazy" decoding="async" class="alignnone wp-image-13865" src="https://www.shodhanews.com/wp-content/uploads/2024/03/8a535c13-4d74-49d1-b15e-4c41fc22d22d-441x600.jpg" alt="" width="1024" height="1392" srcset="https://www.shodhanews.com/wp-content/uploads/2024/03/8a535c13-4d74-49d1-b15e-4c41fc22d22d-441x600.jpg 441w, https://www.shodhanews.com/wp-content/uploads/2024/03/8a535c13-4d74-49d1-b15e-4c41fc22d22d-565x768.jpg 565w, https://www.shodhanews.com/wp-content/uploads/2024/03/8a535c13-4d74-49d1-b15e-4c41fc22d22d-768x1044.jpg 768w, https://www.shodhanews.com/wp-content/uploads/2024/03/8a535c13-4d74-49d1-b15e-4c41fc22d22d-150x204.jpg 150w, https://www.shodhanews.com/wp-content/uploads/2024/03/8a535c13-4d74-49d1-b15e-4c41fc22d22d-450x612.jpg 450w, https://www.shodhanews.com/wp-content/uploads/2024/03/8a535c13-4d74-49d1-b15e-4c41fc22d22d.jpg 1080w" sizes="(max-width: 1024px) 100vw, 1024px" /><span style="font-size: 12pt;">ಹೀಗೆ ಸ್ವಪಕ್ಷದ ಶಾಸಕರು, ಮುಖಂಡರ ವಿರುದ್ಧ ಬಹಿರಂಗವಾಗಿ ಮಾತಾಡುತ್ತಾ, ಮುಜುಗರಕ್ಕೆ ಸಿಲುಕಿಸುತ್ತಾ ಬಂದಿದ್ದ ಸಿಂಹ, ಪಕ್ಷದ ಶಿಸ್ತನ್ನು ಉಲ್ಲಂಘಿಸುತ್ತಾ ಸಾಗಿ ಬಂದಿದ್ದರು. ಒಂದೆಡೆ ಸ್ವಪಕ್ಷೀಯರನ್ನು ಪರಕೀಯರಂತೆ ಕಾಣುತ್ತಾ, ಬೇರೆ ಪಕ್ಷದವರೊಂದಿಗೆ ಆತ್ಮೀಯ ನಂಟು ಹೊಂದಿದ್ದೇ ಪ್ರತಾಪ್ ಸಿಂಹನ ಪ್ರಧಾನ ಯಡವಟ್ಟಾಗಿ ಗೋಚರಿಸುತ್ತದೆ. ಜಿಟಿ ದೇವೇಗೌಡ, ಸಾರಾ ಮಹೇಶ್ ಮುಂತಾದವರೊಂದಿಗೆ ಗಳಸ್ಯಕಂಠಸ್ಯ ನಂಟು ಹೊಂದಿರೋ ಸಿಂಹಕ್ಕೆ ಕ್ಷೇತ್ರದ ಸ್ವಪಕ್ಷೀಯರೆಂದರೇನೇ ಅಲರ್ಜಿ. ಲೋಕಸಭಾ ಚುನಾವಣೆಯಲ್ಲಿ ತನ್ನ ಗೆಲುವಿಗೆ ಬೇಕಾದ ಅನುಕೂಲ, ಮಿಲಾಪಿಗಳನ್ನು ಅಚ್ಚುಕಟ್ಟಾಗಿ ನಡೆಸಿದ್ದ ಪ್ರತಾಪ್, ವಿಧಾನಸಭಾ ಚುನಾವಣೆ ಬಂದಾಕ್ಷಣ ತಟಸ್ಥ ಧೋರಣೆ ಅನುಸರಿಸಿದ್ದಾರೆಂಬ ಆರೋಪವಿದೆ.</span><br />
<span style="font-size: 12pt;">2018 ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣದಿಂದ ಕಣಕ್ಕಿಲಿದಿದ್ದ ಮಹದೇವ್ ಗೆ ಅನುಕೂಲವಾಗುವಂತೆ ಪ್ರತಾಪ್ ನಡೆದುಕೊಂಡಿದ್ದರು. ಬಿಜೆಪಿ ಓಟುಗಳನ್ನು ತಿರುಗಿಸಿ, ಮಹದೇವ್ ಗೆಲ್ಲುವಂತೆ ಮಾಡಿದ್ದರೆಂಬ ಮಾತಿದೆ. ಆ ನಂತರವೂ ಪ್ರತಾಪನ ಸಹಕಾರ ಮಹದೇವನತ್ತ ಹರಿದು ಹೋಗಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲೂ ಅವರ ಮುಂದೆ ನಡಬಗ್ಗಿಸಿ ನಿಂತು ಪಿರಿಯಾಪಟ್ಟಣಕ್ಕೆ ಕೋಟಿ ಕೋಟಿ ಅನುದಾನ ಕೊಡಿಸಲೂ ಸಿಂಹ ಬೆವರು ಹರಿಸಿದೆ. ಇನ್ನುಳಿದಂತೆ ಜಿಟಿ ದೇವೇಗೌಡ. ಕೆಆರ್ ನಗರ ಸಾ ರಾ ಮಹೇಶ್ ಮುಂತಾದವರ ಜೊತೆ ನಿಕಟ ನಂಟು ಸಿಂಹಕ್ಕಿದೆ. ಈ ಹಿಂದೆ ಚುನಾವಣೆಗಳ ಸಂದರ್ಭದಲ್ಲಿ ತಟಸ್ಥ ಧೋರಣೆಯ ಮೂಲಕ ಇಂಥವರಿಗೆಲ್ಲ ಅನುಕೂಲ ಮಾಡಿಕೊಟ್ಟ ಆರೋಪವೂ ಇದ್ದೇ ಇದೆ. ಇದೆಲ್ಲವನ್ನೂ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಅದು ಅಮಿತ್ ಶಾಗೂ ತಲುಪಿದೆ. ಇದೆಲ್ಲವೂ ಯದುವೀರ್ ಪಾಲಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ!</span><br />
<strong><span style="font-size: 14pt;">ಸಿಂಹಕ್ಕೆ ಟಿಕೆಟ್ ತಪ್ಪಿದ್ದರಿಂದ ನೊಂದವರ್ಯಾರು? </span></strong></p>
<p style="text-align: justify;"><img loading="lazy" decoding="async" class="alignnone wp-image-13866" src="https://www.shodhanews.com/wp-content/uploads/2024/03/download-2.jpg" alt="" width="1024" height="573" srcset="https://www.shodhanews.com/wp-content/uploads/2024/03/download-2.jpg 300w, https://www.shodhanews.com/wp-content/uploads/2024/03/download-2-150x84.jpg 150w" sizes="(max-width: 1024px) 100vw, 1024px" /><span style="font-size: 12pt;">ಪ್ರತಾಪ್ ಸಿಂಹ ಸೀಮೆಗಿಲ್ಲದ ಕೆಲಸಗಳನ್ನೆಲ್ಲ ಕಡಿದು ಕಟ್ಟೆ ಹಾಕಿರುವಂತೆ ಆಗಾಗ ಪೋಸು ಕೊಡುತ್ತಾ ಬಂದಿದ್ದಾರೆ. ಈ ಕೆಲಸವನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿಯೇ ಮೈಲೇಜು ಗಿಟ್ಟಿಸಿಕೊಂಡಿದ್ದಾರೆ. ಇನ್ನುಳಿದಂತೆ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡಿ, ತಾನು ಅಭಿವೃದ್ಧಿಯ ಮುಂದಾಳು ಎಂಬಂತೆÀ ತೋರಿಸಿಕೊಳ್ಳಲು ಪ್ರತಾಪ್ ಮುಂದಾಗಿದ್ದರು. ಆದರೆ, ಅದೂ ಕೂಡಾ ಕಮೀಷನ್ ಕಿಸುರಿನ ಭಾಗ ಅಂತ ಖುದ್ದು ಬಿಜೆಪಿ ವಲಯದಲ್ಲಿಯೇ ಮಾತಾಡಿಕೊಳ್ಳುತ್ತಾರೆ. ಪುಣ್ಯಕ್ಕೆ ಸಾಂಸ್ಕøತಿಕ ನಗರಿಗೆ ಕುಂದುಂಟಾಗುತ್ತದೆಂದು ನಾಗರಿಕರು ರೊಚ್ಚಿಗೆದ್ದಿದ್ದರಿಂದ ಆ ಪ್ರಾಜೆಕ್ಟು ಗೋತಾ ಹೊಡೆದಿದೆ. ಊರುತುಂಬಾ ಅಗೆದು ಬಗೆದು, ಅದರಲ್ಲಿಯೇ ಲಾಭ ಗಿಟ್ಟಿಸಿಕೊಂಡಿರುವ ಪ್ರತಾಪ್ ಈವತ್ತಿಗೂ ಸರಿಪಡಿಸಲಾಗಿಲ್ಲ!</span><br />
<span style="font-size: 12pt;">ಈವತ್ತಿಗೆ ಪ್ರತಾಪ್ ಸಿಂಹನಿಗೆ ಟಿಕೇಟು ತಪ್ಪಿದ್ದಕ್ಕೆ ಮೈಸೂರು ಕೊಡಗು ಕ್ಷೇತ್ರದ ಬಿಜೆಪಿಗರಿಗೆ ಖುಷಿಯೇ ಇದ್ದಂತಿದೆ. ಆದರೆ ಬೇರೆ ಪಕ್ಷಗಳಲ್ಲಿರುವ ಸಿಂಹದ ನೆಂಟರಿಷ್ಟರಿಗೆಲ್ಲ ತಡಕೊಳ್ಳಲಾರದಷ್ಟು ದುಃಖವಾಗಿದೆ. ಮೈಸೂರಿನ ಮಗ್ಗುಲಲ್ಲಿ, ಒಡಲಲ್ಲಿ ಇಂಥಾ ಅನೇಕರು ಒಟ್ಟಾಗಿ ಕೂತು ಅತ್ತಿದ್ದರೂ ಅಚ್ಚರಿಯೇನಿಲ್ಲ. ಯಾಕೆಂದರೆ ಸಿಂಹ ಅವರೆಲ್ಲರಿಗೂ ಆ ಮಟ್ಟಿಗೆ ಆತ್ಮೀಯವಾಗಿತ್ತು. ಜಿಟಿ ದೇವೇಗೌಡರ ಮಗ ಹರೀಶ್ ಗೌಡಗೂ ಪ್ರತಾಪ್ ಆತ್ಮೀಯ. ಹರೀಶ್ ಈಗ ಹುಣಸೂರು ಎಂಎಲ್&#x200d;ಎ. ಆತ ಶಾಸಕನಾಗುತ್ತಲಕೇ ಪ್ರಸ್ತಾವನೆ ಸಲ್ಲಿಸಿದ್ದ ಪ್ರತಾಪ ಬಿಳೆಕೆರೆವರೆಗೆ ಚತಷ್ಪಥ ರಸ್ತೆಗಾಗಿ ಎಪ್ಪತ್ತಾರು ಕೋಟಿಯಷ್ಟು ಕೇಂದ್ರಹ ಹಣ ಕೊಡಿಸಿದ್ದಾರೆ. ನಿತಿನ್ ಗಡ್ಕರಿಯೇ ಅದನ್ನು ಬಿಡುಗಡೆಗೊಳಿಸಿದ್ದಾರೆ. ಇತ್ತೀಚೆಗೆ ಗಡ್ಕರಿ ಆ ಕಾಮಗಾರಿಗೆ ಗುದ್ದಲಿ, ಪೂಜೆ ಮಾಡಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone wp-image-13867" src="https://www.shodhanews.com/wp-content/uploads/2024/03/bb068b6b-a6cd-481b-a96d-ea9932f679bf-627x600.jpg" alt="" width="1024" height="980" srcset="https://www.shodhanews.com/wp-content/uploads/2024/03/bb068b6b-a6cd-481b-a96d-ea9932f679bf-627x600.jpg 627w, https://www.shodhanews.com/wp-content/uploads/2024/03/bb068b6b-a6cd-481b-a96d-ea9932f679bf-802x768.jpg 802w, https://www.shodhanews.com/wp-content/uploads/2024/03/bb068b6b-a6cd-481b-a96d-ea9932f679bf-768x735.jpg 768w, https://www.shodhanews.com/wp-content/uploads/2024/03/bb068b6b-a6cd-481b-a96d-ea9932f679bf-150x144.jpg 150w, https://www.shodhanews.com/wp-content/uploads/2024/03/bb068b6b-a6cd-481b-a96d-ea9932f679bf-450x431.jpg 450w, https://www.shodhanews.com/wp-content/uploads/2024/03/bb068b6b-a6cd-481b-a96d-ea9932f679bf.jpg 1079w" sizes="(max-width: 1024px) 100vw, 1024px" /><span style="font-size: 12pt;">ಒಟ್ಟಾರೆಯಾಗಿ, ಟಿಕೆಟು ತಪ್ಪಿದ್ದರ ಹಿಂದೆ ನಿಜಕ್ಕೂ ಪ್ರತಾಪ್ ಸಿಂಹನ ಸ್ವಯಂಕೃತ ಅಪರಾಧಗಳ ಹೊರತಾಗಿ ಬೇರೇನೂ ಇಲ್ಲ. ಹೇಗಿದ್ದರೂ ತನಗೇ ಟಿಕೆಟು ಪಕ್ಕಾ ಎಂಬ ಭರವಸೆಯಲ್ಲಿ ಆನೆ ನಡೆದಿದ್ದೇ ದಾರಿ ಎಂಬಂತೆ ಮುಂದುವರೆದಿದ್ದರಿಂದಲೇ ಈ ಸ್ಥಿತಿ ಬಂದೊದಗಿದೆ. ತನ್ನ ಪ್ರಭೆಯ ಮುಂದೆ ಕ್ಷೇತ್ರದಲ್ಲಿರುವ ಇತರೇ ಮುಖಂಡರು ಲೆಕ್ಕಕ್ಕಿಲ್ಲ ಎಂಬಂಥಾ ಅಹಮ್ಮಿಕೆ, ಬೇರೆ ಪಕ್ಷದವರನ್ನು ಓಲೈಸಿಕೊಂಡು, ತನ್ನ ಗೆಲುವಿಗೆ ಮಣ್ಣು ಹೊತ್ತವರ ಬಾಯಿಗೆ ಮಣ್ಣು ತುರುಕೋ ದುರ್ಭುದ್ಧಿಗಳೇ ಪ್ರತಾಪನಿಗೆ ಗುನ್ನ ಮಡಗಿವೆ. ಇದೆಲ್ಲವೂ ಅಳೀಮಯ್ಯನನ್ನು ಎಂಪಿ ಮಾಡುವ ರಾಜಸ್ಥಾನದ ದೊರೆ ಹರ್ಷವರ್ಧನ್ ಸಿಂಗ್ ಗೆ ಸಹಕಾರಿಯಾಗಿದೆ. ಇದರ ಹಿಂದೆ ಯಡ್ಡಿ, ಅವರ ಪುತ್ರ ವಿಜಯೇಂದ್ರ ಸೇರಿದಂತೆ ರಾಜ್ಯ ನಾಯಕರ ನೆರಳಿಲ್ಲ. ಇದೆಲ್ಲದರಾಚೆಗೆ, ಪ್ರತಾಪ್ ಸಿಂಹ ಮುಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಬಿಕ್ಕಳಿಸಿ ಅತ್ತರೆ ಆತನ ಅಭಿಮಾನಿಗಳ್ಯಾರೂ ಮನಸಿಗೆ ತೆಗೆದುಕೊಳ್ಳುವಂತಿಲ್ಲ. ಯಾಕೆಂದರೆ, ಈವತ್ತಿಗೆ ಸಿಂಹದ ಎದೆಮೇಲಿರುವ ಚಪ್ಪಡಿಯ ಮೇಲೆ ಆತ ಮಾಡಿಕೊಂಡು ಬಂದಿರುವ ಯಡವಟ್ಟುಗಳ ರಾಶಿ ಇದೆ!</span></p>
<p>The post <a href="https://www.shodhanews.com/exclusive-prathap-simha-mysore-13-03-24/">exclusive: ಪ್ರತಾಪ್ ಸಿಂಹ ಮಾಡಿಕೊಂಡ ಯಡವಟ್ಟುಗಳೇನು?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ground report: ಭಯೋತ್ಪಾದಕನಿಗೆ ಮಾಂಸ ತಿನ್ನಿಸಿ ಕೊಬ್ಬಿಸಿದ್ದು ಟಿ.ಪಿ ಶೇಷ!</title>
		<link>https://www.shodhanews.com/09-03-2024-shodha-investigation-report-rameshwaram-cafe-blast/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 09 Mar 2024 11:47:27 +0000</pubDate>
				<category><![CDATA[ಕವರ್ ಸ್ಟೋರಿ]]></category>
		<category><![CDATA[terrorism_jailbreak_terroristnasir_bangaloreblast_shodhascoop_gparameshwar_bombblast_investigationreport_santhosh_bagilagadde]]></category>
		<guid isPermaLink="false">https://www.shodhanews.com/?p=13776</guid>

					<description><![CDATA[<p><img width="1600" height="900" src="https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50.jpg 1600w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-800x450.jpg 800w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-1024x576.jpg 1024w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-768x432.jpg 768w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-1536x864.jpg 1536w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-150x84.jpg 150w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-450x253.jpg 450w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-1200x675.jpg 1200w" sizes="(max-width: 1600px) 100vw, 1600px" />ಬೆಂಗಳೂರಿನ (rameshwaram cafe blast) ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವೀಗ ದಿನಕ್ಕೊಂದು, ಕ್ಷಣಕ್ಕೊಂದು ದಿಕ್ಕು ಬದಲಿಸುತ್ತಾ ಮುಂದುವರೆಯುತ್ತಿದೆ. ಈ ಪ್ರಕರಣವೀಗ ರಾಷ್ಟ್ರೀಯ ತನಿಖಾ ದಳದ ನೆರಳಿಗೆ ಸರಿದಿದೆ. ಅಷ್ಟಕ್ಕೂ ಇಂಥಾ ಸ್ಫೋಟಗಳು ನಡೆದಾಗ ನೇರವಾಗಿ ಇದೊಂದು ಭಯೋತ್ಪಾದನಾ ಕೃತ್ಯ ಎಂಬ ವಿಚಾರ ಮೇಲುನೋಟಕ್ಕೇ ಸಾಬೀತಾಗುತ್ತದೆ. ಬೆಂಗಳೂರು ಮಂದಿ ತುಸು ನಿರಾಳವಾದಾಗೆಲ್ಲ ಇಂಥಾ ವಿಧ್ವಂಸಕ ಕೃತ್ಯಗಳು ಘಟಿಸಿದಾಗ ನಾಗರಿಕರು ಕಂಗಾಲಾಗುತ್ತಾರೆ. ಇಂಥಾ ಹೊತ್ತಿನಲ್ಲಿ ಈ ವ್ಯವಸ್ಥೆಯಿಂದ ಭಯೋತ್ಪಾದನಾ (terrorism)ಕೃತ್ಯಗಳನ್ನು ಮಟ್ಟ ಹಾಕಲು ಯಾಕೆ ಸಾಧ್ಯವಾಗುತ್ತಿಲ್ಲ? ಡಜನ್ನುಗಟ್ಟಲೆ ನಟೋರಿಯಸ್ ಭಯೋತ್ಪಾದಕರನ್ನು [...]</p>
<p>The post <a href="https://www.shodhanews.com/09-03-2024-shodha-investigation-report-rameshwaram-cafe-blast/">ground report: ಭಯೋತ್ಪಾದಕನಿಗೆ ಮಾಂಸ ತಿನ್ನಿಸಿ ಕೊಬ್ಬಿಸಿದ್ದು ಟಿ.ಪಿ ಶೇಷ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1600" height="900" src="https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50.jpg 1600w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-800x450.jpg 800w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-1024x576.jpg 1024w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-768x432.jpg 768w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-1536x864.jpg 1536w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-150x84.jpg 150w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-450x253.jpg 450w, https://www.shodhanews.com/wp-content/uploads/2024/03/f6f933d6-796a-4b48-9ce5-b43d27b2ee50-1200x675.jpg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><span style="color: #00ccff;"><strong><span style="font-size: 18pt;">ಬೆಂ</span></strong></span>ಗಳೂರಿನ (rameshwaram cafe blast) ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವೀಗ ದಿನಕ್ಕೊಂದು, ಕ್ಷಣಕ್ಕೊಂದು ದಿಕ್ಕು ಬದಲಿಸುತ್ತಾ ಮುಂದುವರೆಯುತ್ತಿದೆ. ಈ ಪ್ರಕರಣವೀಗ ರಾಷ್ಟ್ರೀಯ ತನಿಖಾ ದಳದ ನೆರಳಿಗೆ ಸರಿದಿದೆ. ಅಷ್ಟಕ್ಕೂ ಇಂಥಾ ಸ್ಫೋಟಗಳು ನಡೆದಾಗ ನೇರವಾಗಿ ಇದೊಂದು ಭಯೋತ್ಪಾದನಾ ಕೃತ್ಯ ಎಂಬ ವಿಚಾರ ಮೇಲುನೋಟಕ್ಕೇ ಸಾಬೀತಾಗುತ್ತದೆ. ಬೆಂಗಳೂರು ಮಂದಿ ತುಸು ನಿರಾಳವಾದಾಗೆಲ್ಲ ಇಂಥಾ ವಿಧ್ವಂಸಕ ಕೃತ್ಯಗಳು ಘಟಿಸಿದಾಗ ನಾಗರಿಕರು ಕಂಗಾಲಾಗುತ್ತಾರೆ. ಇಂಥಾ ಹೊತ್ತಿನಲ್ಲಿ ಈ ವ್ಯವಸ್ಥೆಯಿಂದ ಭಯೋತ್ಪಾದನಾ (terrorism)ಕೃತ್ಯಗಳನ್ನು ಮಟ್ಟ ಹಾಕಲು ಯಾಕೆ ಸಾಧ್ಯವಾಗುತ್ತಿಲ್ಲ? ಡಜನ್ನುಗಟ್ಟಲೆ ನಟೋರಿಯಸ್ ಭಯೋತ್ಪಾದಕರನ್ನು ಹಂತ ಹಂತವಾಗಿ ಜೈಲು ಸೇರಿಸಲಾಗಿದೆಯಲ್ಲಾ? ಅಂಥವರಿಂದ ಮಾಹಿತಿ ಕಲೆ ಹಾಕಿ ರಾಜ್ಯದಲ್ಲಿ ಹಬ್ಬಿಕೊಂಡಿರುವ ಭಯೋತ್ಪಾದನೆಯ ಬೇರುಗಳನ್ನು ಕಿತ್ತೆಸೆಯಲು ಯಾಕೆ ಸಾಧ್ಯವಾಗುತ್ತಿಲ್ಲ? ಹೀಗೆ ಸಾಲು ಸಾಲು ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತವೆ. ಸದ್ಯದ ಮಟ್ಟಿಗೆ ಪರಪ್ಪನ ಅಗ್ರಹಾರದೊಳಗೆ ನಡೆಯುತ್ತಿರುವ ಹಲಾಲು ಕೃತ್ಯಗಳು ಆ ಎಲ್ಲ ಪ್ರಶ್ನೆಗಳಿಗೂ ನಿಖರ ಉತ್ತರದಂತಿವೆ!</span></p>
<p style="text-align: justify;"><strong style="color: var(--c-contrast-800); font-size: 14pt;">ಅಲ್ಲಿ ನಡೆಯುತ್ತಿರೋದು ಉಗ್ರ ಪರಿವರ್ತನೆ!</strong></p>
<p><img loading="lazy" decoding="async" class="alignnone wp-image-13781" src="https://www.shodhanews.com/wp-content/uploads/2024/03/bengaluru-central-jail-1-1663151095.jpg" alt="" width="1024" height="577" srcset="https://www.shodhanews.com/wp-content/uploads/2024/03/bengaluru-central-jail-1-1663151095.jpg 600w, https://www.shodhanews.com/wp-content/uploads/2024/03/bengaluru-central-jail-1-1663151095-150x85.jpg 150w, https://www.shodhanews.com/wp-content/uploads/2024/03/bengaluru-central-jail-1-1663151095-450x254.jpg 450w" sizes="(max-width: 1024px) 100vw, 1024px" /></p>
<p style="text-align: justify;"><span style="font-size: 12pt;">ಜೈಲು ಅಂದರೆ ಅಕ್ಷರಶಃ ಮನಃ ಪರಿವರ್ತನೆಯ ಜಾಗ ಎಂಬುದು ಸವಕಲು ನಂಬಿಕೆ. ಅದರ ನೆತ್ತಿಗೆ ಹೊಡೆದಂಥಾ ದಂಧೆಗಳೇ ಈವತ್ತಿಗೆ ಕರ್ನಾಟಕದ ಬಹುತೇಕ ಜೈಲುಗಳಲ್ಲಿ ನಡೆಯುತ್ತಿದೆ. ಅದರಲ್ಲಿಯೂ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿದೆ ಎನ್ನಲಾಗಿರುವ ಕೃತ್ಯಗಳ ಮುಂದೆ ಇದುವರೆಗೆ ಬಂದಿರುವ ಅಷ್ಟೂ ಸಿನಿಮಾ ದೃಷ್ಯಗಳೂ ಡಲ್ಲು ಹೊಡೆಯುತ್ತವೆ. ನಿಮಗೆ ಅಚ್ಚರಿಯಾಗಬಹುದೇನೋ&#8230; ರಾಷ್ಟ್ರೀಯ ತನಿಖಾ ದಳದ ತನಿಖೆಯ ಜಾಡು ಹರಿದಾಡುತ್ತಿರುವ ರೀತಿ, ಅಲ್ಲೆದುರಾಗುತ್ತಿರುವ ಭೀಕರ ವಾಸ್ತವಗಳು ಜೈಲೆಂಬೋ ಕಲ್ಪನೆಯನ್ನೇ ಬುಡಮೇಲು ಮಾಡುವಂತಿವೆ. </span></p>
<p style="text-align: justify;"><span style="font-size: 12pt;">ಅದ್ಯಾವುದೋ ಕೇಸುಗಳಲ್ಲಿ ತಗುಲಿಕೊಂಡು ಪರಪ್ಪನ ಅಗ್ರಹಾರ ಸೇರಿದವರನ್ನು ದಂಧೆಗಿಳಿಸೋ ನಟೋರಿಯಸ್ ರೌಡಿಗಳು ಪರಪ್ಪನ ಅಗ್ರಹಾರದಲ್ಲಿದ್ದಾರೆ.</span><span style="font-size: 12pt;">ಅದೇ ರೀತಿ ಬೇರೆ ಬೇರೆ ಕೇಸುಗಳಲ್ಲಿ ಶಿಕ್ಷೆಗೀಡಾದ ಸಾಧಾರಣ ಕ್ರಿಮಿಗಳನ್ನು ಅಸಾಧಾರಣ ಭಯೋತ್ಪಾದಕರನ್ನಾಗಿ ರೂಪಿಸುವ ಕೆಲಸವೂ ಕೂಡಾ ಪರಪ್ಪನ ಅಗ್ರಹಾರದೊಳಗೆ ನಡೆಯುತ್ತಾ ಬಂದಿದೆ. ಕ್ರಿಮಿನಲ್ಲುಗಳಿಗೆ ವಿಐಪಿ ವ್ಯವಸ್ಥೆ ಕಲ್ಪಿಸಿ, ಬೇಕಾದುದನ್ನೆಲ್ಲ ಪೂರೈಸೋ ಆರೋಪ, ಜೈಲಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಮೇಲೆ ಲಾಗಾಯ್ತಿನಿಂದಲೂ ಇದ್ದೇ ಇದೆ. ಇಂಥಾದ್ದರಿಂದಾಗಿಯೇ ಈವತ್ತಿಗೆ ಎಲ್ಲಿ ಏನೇ ದುಷೃತ್ಯಗಳು ಸಂಭವಿಸಿದರೂ ತನಿಖಾಧಿಕಾರಿಗಳ ಕಣ್ಣ್ಣು ಪ್ರಧಾನವಾಗಿ ಪರಪ್ಪನ ಅಗ್ರಹಾರದತ್ತಲೇ ಕೀಲಿಸುವಂಥಾ ದುಃಸ್ಥಿತಿ ಬಂದೊದಗಿದೆ. ಕಾಂಜಿಪೀಂಜಿ ರೌಡಿಗಳ ಕಥೆ ಹಾಗಿರಲಿ; ಒಂದಿಡೀ ದೇಶಕ್ಕೇ ಕಂಟಕಪ್ರಾಯರಾದ ಭಯೋತ್ಪಾದಕರನ್ನೂ ದೊರೆಗಳಂತೆ ಮೆರೆಸೋ ಘನ ಗಂಭಿರ ಆರೋಪ ಪರಪ್ಪನ ಅಗ್ರಹಾರಕ್ಕೆ ಸುತ್ತಿಕೊಂಡು ವರ್ಷಗಳೇ ಕಳೆದಿವೆ. ಈ ಜೈಲಿನಲ್ಲಿರುವ ನಟೋರಿಯಸ್ ಭಯೋತ್ಪಾದಕ ಟಿ. ನಾಸೀರ್ ಪರಪ್ಪನ ಅಗ್ರಹಾರವನ್ನು ಅಕ್ಷರಶಃ ಪರಿವರ್ತನೆಯ ಕೇಂದ್ರವಾಗಿಸಿದ್ದಾನೆ. ಅದು ಸಕಾರಾತ್ಮಕ ಪರಿವರ್ತನೆಯಲ್ಲ; ಉಗ್ರ ಪರಿವರ್ತನೆ!</span></p>
<p style="text-align: justify;"><span style="font-size: 14pt;"><strong style="font-size: 14pt; color: var(--c-contrast-800);">ಎಲ್ಲದಕ್ಕೂ ಇದೆ ಟೆರರ್ ಲಿಂಕು!</strong><strong><img loading="lazy" decoding="async" class="alignnone wp-image-13783" src="https://www.shodhanews.com/wp-content/uploads/2024/03/rameshwaram-800x469.jpg" alt="" width="1024" height="600" srcset="https://www.shodhanews.com/wp-content/uploads/2024/03/rameshwaram-800x469.jpg 800w, https://www.shodhanews.com/wp-content/uploads/2024/03/rameshwaram-1024x600.jpg 1024w, https://www.shodhanews.com/wp-content/uploads/2024/03/rameshwaram-768x450.jpg 768w, https://www.shodhanews.com/wp-content/uploads/2024/03/rameshwaram-150x88.jpg 150w, https://www.shodhanews.com/wp-content/uploads/2024/03/rameshwaram-450x264.jpg 450w, https://www.shodhanews.com/wp-content/uploads/2024/03/rameshwaram-1200x703.jpg 1200w, https://www.shodhanews.com/wp-content/uploads/2024/03/rameshwaram.jpg 1280w" sizes="(max-width: 1024px) 100vw, 1024px" /></strong></span><span style="font-size: 12pt;">ಮೊನ್ನೆದಿನ ರಾಮೇಶ್ವರಂ ಕೆಫೆಯೊಳಗೆ ಸ್ಫೋಟ ನಡೆಯಿತಲ್ಲಾ? ಆ ಘಳಿಗೆಯಲ್ಲಿ ಕರ್ನಾಟಕದಲ್ಲಿ ಮೈಚಾಚಿಕೊಂಡಿರುವ ಭಯೋತ್ಪಾದಕರ ದುನಿಯಾದಲ್ಲಿ ಒಂದಷ್ಟು ಪಲ್ಲಟಗಳು ಸಂಭವಿಸಿವೆ. ನಿಖರವಾಗಿ ಸ್ಫೋಟ ನಡೆದ ದಿನವೇ ಉತ್ತರಕರ್ನಾಟಕದ ದೊಡ್ಡ ಜೈಲೊಂದರಿಂದ ಗಲಭೆಕೋರರ ಹಿಂಡೊಂದು ಬಿಡುಗಡೆಗೊಂಡಿದೆ. ಹುಬ್ಬಳ್ಳಿ ಸೀಮೆಯಲ್ಲಿ ನಡೆದಿದ್ದ ಗಲಭೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆ ಹಿಂಡನ್ನು ಜೈಲು ಸೇರಿಸಲಾಗಿತ್ತು. ಸೂಕ್ತ ಸಾಕ್ಷಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ, ಪೊಲೀಸ್ ಠಾಣೆಗೆ ಬೆಂಕಿಯಿಟ್ಟಿದ್ದ ದಂಡು ಹೊರ ಬಿದ್ದಿದೆ. ಅದಾಗಿ ಸ್ವಲ್ಪ ಹೊತ್ತಿನಲ್ಲಿಯೇ ಗಿಜಿಗುಡುತ್ತಿದ್ದ ರಾಮೇಶ್ವರಂ ಕೆಫೆಯಲ್ಲಿ ಬಾಂಬು ಭಡಾರೆಂದಿದೆ!</span><br />
<span style="font-size: 12pt;">ಇದರ ಹಿಂಚುಮುಂಚಲ್ಲಿ ನಡೆದ ಒಂದಷ್ಟು ವಿದ್ಯಮಾನಗಳು, ನಿಜಕ್ಕೂ ಎದೆ ಅದುರುವಂತಿವೆ. ಒಂದು ಮೂಲದ ಪ್ರಕಾರ ಉತ್ತರ ಕರ್ನಾಟಕದ ಜೈಲಿನಿಂದ ಬಿಡುಗಡೆಗೊಂಡ ಆ ಗಲಭೆಕೋರರ ದಂಡು ವಿಜಯ ಯಾತ್ರೆ ನಡೆಸಲು ಬಸ್ಸಿನ ವ್ಯವಸ್ಥೆ ಮಾಡಿದ್ದು ಭಯೋತ್ಪಾದಕ ನಾಸೀರ್ ಎಂಬ ಮಾತಿದೆ. ಪರಪ್ಪನ ಅಗ್ರಹಾರದೊಳಗೆ ಕುಳಿತೇ ನಾಸೀರ್ ಹೊರಜಗತ್ತಿನ ಭಯೋತ್ಪಾದನಾ ನೆಟ್ ವರ್ಕನ್ನು ಸಂಭಾಳಿಸುತ್ತಿದ್ದಾನೆಂಬ ಆರೋಪ ಈ ಹಿಂದಿನಿಂದಲೂ ಇತ್ತು. ಅದೀಗ ಈ ವಿಚಾರದ ಮೂಲಕ ಮತ್ತೆ ಸಾಬೀತಾಗಿದೆಯಷ್ಟೆ. ಪರಪ್ಪನ ಅಗ್ರಹಾರದೊಳಗೇ ಕುಳಿತು, ಬಿಡುಗಡೆಗೊಂಡ ಗಲಭೆಕೋರರಿಗೆ ಬಸ್ ವ್ಯವಸ್ಥೆ ಮಾಡಿಸಿದ್ದ ನಾಸಿರನೇ ರಾಮೇಶ್ವರಂ ಕೆಫೆಯಲ್ಲಿ ಬಾಂಬಿಡಲು ಹುಕುಂ ಹೊರಡಿಸಿದ್ದನಾ? ಅದು ಈಗಾಗಲೇ ನಡೆದಿರಬಹುದಾದ ಮತ್ತೊಂದು ಸುತ್ತಿನ ಸರಣಿ ಸ್ಫೋಟದ ಟ್ರಯಲ್ ಟೆಸ್ಟಾ? ಈ ಟೆಸ್ಟಿನೊಂದಿಗೆ ಗಲಭೆ, ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣಗಳಲ್ಲಿದ್ದ ತನ್ನ ಪಾಳೆಯ ಬಿಡುಗಡೆಗೊಂಡಿದ್ದಕ್ಕೆ ಸಂಭ್ರಮಾಚರಣೆಯೂ ಹೌದಾಗಿರಬಹುದಾ? ಹೀಗೆ ನಾನಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ!</span></p>
<p style="text-align: justify;"><strong><span style="font-size: 14pt;">ನಟೋರಿಯಸ್ ನಾಸೀರ್!</span></strong></p>
<p style="text-align: justify;"><strong><span style="font-size: 14pt;"><img loading="lazy" decoding="async" class="alignnone wp-image-13782" src="https://www.shodhanews.com/wp-content/uploads/2024/03/0580c593-0399-479d-85ff-c17b85425afe.jpg" alt="" width="1024" height="815" srcset="https://www.shodhanews.com/wp-content/uploads/2024/03/0580c593-0399-479d-85ff-c17b85425afe.jpg 749w, https://www.shodhanews.com/wp-content/uploads/2024/03/0580c593-0399-479d-85ff-c17b85425afe-150x119.jpg 150w, https://www.shodhanews.com/wp-content/uploads/2024/03/0580c593-0399-479d-85ff-c17b85425afe-450x358.jpg 450w" sizes="(max-width: 1024px) 100vw, 1024px" /> </span></strong><span style="font-size: 12pt;">2008ರಲ್ಲಿ ನಾಯಂಡಹಳ್ಳಿಯೂ ಸೇರಿದಂತೆ ಬೆಂಗಳೂರಿನ ಒಂದಷ್ಟು ಏರಿಯಾಗಳಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣ ನಡೆದಿತ್ತಲ್ಲಾ? ಆ ಪ್ರಕರಣದಲ್ಲಿ ನಾಸಿರ್ ಮದನಿ ಗ್ಯಾಂಗಲ್ಲಿ ಕಾರ್ಯ ನಿರ್ವಹಿಸಿದ್ದವನು ಟಿ. ನಾಸಿರ್. ಆ ಪ್ರಕರಣದಲ್ಲಿ ಮದನಿಯನ್ನೂ ಬಂಧಿಸಲಾಗಿತ್ತು. ನಾಸೀರ್ ಕೂಡಾ ತನಿಖಾಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ತಗುಲಿಕೊಂಡಿದ್ದ. ಸದ್ಯಕ್ಕೆ ಮದನಿ ಅನಾರೋಗ್ಯ ಸಮಸ್ಯೆಯಿಂದಾಗಿ ಜೈಲಿಂದ ಹೊರ ಬಂದಿದ್ದಾನೆ. ಆದರೆ, ಒಂದು ಕಾಲದಲ್ಲಿ ಆತನ ಸಹಚರನಾಗಿದ್ದ ಪ್ರಳಯಾಂತಕ ನಾಸಿರ್ ಮಾತ್ರ ದಶಕಗಳಿಂದೀಚೆಗೆ ಪರಪ್ಪನ ಅಗ್ರಹಾರ ವಾಸಿಯಾಗಿದ್ದಾನೆ. ಹೊರ ಜಗತ್ತಿನ ಪಾಲಿಗೆ ಆತನೋರ್ವ ಭಯೋತ್ಪಾದಕ. ಧರ್ಮದ ಅಫೀಮನ್ನೇ ಮೆದುಳಾಗಿಸಿಕೊಂಡು ಒಂದಿಡೀ ದೇಶಕ್ಕೇ ಕಂಟಕನಾದವನಿಗೆ ಜೈಲೊಳಗೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಸಿಗುತ್ತದೆ ಅಂತಲೇ ಬಹುತೇಕರು ಅಂದುಕೊಂಡಿರಬಹುದು. ಆದರೆ, ಆರಂಭದಿಂದ ಇಲ್ಲಿಯವರೆಗೂ ಪರಪ್ಪನ ಅಗ್ರಹಾರದೊಳಗೆ ನಡೆಯುತ್ತಿರೋದು ನಾಗರಿಕರ ನಂಬಿಕೆಗೆ ಅಕ್ಷರಶಃ ದ್ರೋಹವೆಸಗುವಂಥಾ ವಿದ್ಯಮಾನ!</span><br />
<span style="font-size: 12pt;">ಕೇರಳದ ಕೊಲ್ಲಂ ಮೂಲದವನಾದ ಟಿ ನಾಸೀರ್, ಸಿಮಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದವನು. ಸಿಮಿ ಸಂಘಟನೆ ನಿಷೇಧಕ್ಕೊಳಪಡುತ್ತಲೇ ಇಂಡಿಯನ್ ಮುಜಾಹಿದ್ದೀನ್ ಗೆ ಸೇರ್ಪಡೆಗೊಂಡಿದ್ದ. ಪಕ್ಕಾ ನಟೋರಿಯಸ್ ಆಸಾಮಿಯಾದ ನಾಸೀರ್, ಭಯೋತ್ಪಾದನಾ ತರಬೇತಿ ಕೊಡುವುದರಿಂದ ಹಿಡಿದು, ದೊಡ್ಡ ಮಟ್ಟದ ಕುಕೃತ್ಯಗಳಿಗೆ ನಿಖರವಾಗಿ ಸ್ಕೆಚ್ ಹಾಕಿ ಕಾರ್ಯರೂಪಕ್ಕೆ ತರುವುದರಲ್ಲಿಯೂ ಈತ ನಿಸ್ಸೀಮ. ಅತ್ಯಂತ ಕಡಿಮೆ ಅವಧಿಯಲ್ಲಿ ಕುಖ್ಯಾತನಾಗಿರುವ ಈತ ಆರಂಭದಲ್ಲಿ ನಾಸಿರ್ ಮದನಿಯ ನೆರಳಿನಲ್ಲಿದ್ದ. ಬಳಿಕ ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿ ಸರಣಿ ಸ್ಫೋಟ ನಡೆಸಲು ವರ್ಷಾಂತರಗಳ ಕಾಲ ಫೀಲ್ಡ್ ವರ್ಕ್ ನಡೆಸಿದ್ದವನು ನಾಸೀರ್. ಇಂಥವನು ಅಂದುಕೊಂಡಂತೆಯೇ 2008ರಲ್ಲಿ ಸರಣಿ ಸ್ಫೋಟ ನಡೆಸಿ ಕರ್ನಾಟಕ ಪೊಲೀಸರಿಗೆ ತಗುಲಿಕೊಂಡಿದ್ದ. ಅಂದಿನಿಂದ ಇಂದಿನವರೆಗೂ ಪರಪ್ಪನ ಅಗ್ರಹಾರದಲ್ಲಿರುವ ನಾಸೀರ್, ಅಲ್ಲೇ ಒಂದು ಸ್ವರ್ಗ ಸೃಷ್ಟಿಸಿ ಬದುಕುತ್ತಿದ್ದಾನೆಂದರೆ ಅದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಮತ್ಯಾವುದಿದೆ? </span><br />
<strong><span style="font-size: 14pt;">ಶೇಷನೆಂಬೋ ಭಯೋತ್ಪಾದಕನ ಬಂಧು!</span></strong></p>
<p style="text-align: justify;"><strong><span style="font-size: 14pt;"><img loading="lazy" decoding="async" class="alignnone wp-image-13784" src="https://www.shodhanews.com/wp-content/uploads/2024/03/tp-shesha-525x600.jpg" alt="" width="1024" height="1171" srcset="https://www.shodhanews.com/wp-content/uploads/2024/03/tp-shesha-525x600.jpg 525w, https://www.shodhanews.com/wp-content/uploads/2024/03/tp-shesha-672x768.jpg 672w, https://www.shodhanews.com/wp-content/uploads/2024/03/tp-shesha-768x878.jpg 768w, https://www.shodhanews.com/wp-content/uploads/2024/03/tp-shesha-150x172.jpg 150w, https://www.shodhanews.com/wp-content/uploads/2024/03/tp-shesha-450x515.jpg 450w, https://www.shodhanews.com/wp-content/uploads/2024/03/tp-shesha.jpg 1053w" sizes="(max-width: 1024px) 100vw, 1024px" /> </span></strong><span style="font-size: 12pt;">ನಾಸೀರನಂಥಾ ಭಯೋತ್ಪಾದಕರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದು ಕೂಡಾ ಮಹಾನ್ ದೇಶದ್ರೋಹದ ಸಂಗತಿ. ದುರಂತವೆಂದರೆ, ಇಷ್ಟು ವರ್ಷಗಳಲ್ಲಿ ಹಣದಾಸೆಗೆ ಬಿದ್ದ ಒಂದಷ್ಟು ಮಂದಿ ಜೈಲಾಧಿಕಾರಿಗಳೇ ದೇಶದ್ರೋಹಿಗಳ ಸ್ಥಾನದಲ್ಲಿ ನಿಲ್ಲುತ್ತಾರೆ. ಎಂಥಾ ಪರಿಸ್ಥಿತಿಯನ್ನಾದರೂ ತನಗೆ ಬೇಕಾದಂತೆ ಪಳಗಿಸಿಕೊಳ್ಳಬಲ್ಲ ಶುದ್ಧ ಕ್ರಿಮಿನಲ್ ಈ ನಾಸೀರ್. ಹಂತ ಹಂತವಾಗಿ ಈತ ಜೈಲಾಧಿಕಾರಿಗಳನ್ನು, ಕೆಲ ಸಿಬ್ಬಂದಿಗಳನ್ನು ಪಳಗಿಸಿಕೊಂಡು ಬಂದಿದ್ದ. ಈ ಕಾರಣದಿಂದಲೇ ನಾನಾ ನಾಟಕವಾಡಿ, ಇದೀಗ ವಿಐಪಿ ಟ್ರೀಟ್ ಮೆಂಟ್ ಪಡೆದುಕೊಂಡು ಸೇಫಾಗಿದ್ದಾನೆ. ಈ ಹಿಂದೆ ಜೈಲಾಧಿಕಾರಿಯಾಗಿದ್ದ ರಂಗನಾಥ್, ಈಗಿರುವ ಸೂಪರಿಟೆಂಡೆಂಟ್ ಶೇಷಮೂರ್ತಿ ಸೇರಿದಂತೆ, ನಾಸಿರ್ ವಿಚಾರದಲ್ಲಿ ಎಲ್ಲರ ಮೇಲೂ ಆರೋಪಗಳಿದ್ದಾವೆ.</span><br />
<span style="font-size: 12pt;">ಆದರೆ, ಈ ಹಿಂದೆ ಪರಪ್ಪನ ಅಗ್ರಹಾರದ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷನ ಮೇಲಿರುವಷ್ಟು ಆರೋಪಗಳು ಮತ್ಯಾರ ಮೇಲೂ ಇರಲಿಕ್ಕಿಲ್ಲ. ಅಷ್ಟಕ್ಕೂ ಭಯೋತ್ಪಾದಕ ನಾಸೀರ್ ಈ ಪರಿಯಾಗಿ ಕೊಬ್ಬಲು ಮೂಲ ಕಾರಣವೇ ಶೇಷ ಎಂಬ ಆರೋಪವಿದೆ. ಜೈಲೊಳಗಿರುವ ನಾಸೀರ್ ಅಲ್ಲೇ ದಂಧೆಗಳ ದುಖಾನು ತೆರೆದು ಕೂತಿದ್ದಾನೆ. ಅದರಲ್ಲಿ ಯಥೇಚ್ಛವಾಗಿ ಗಾಂಜಾ, ಬೇಕಾದವರಿಗೆ ಮೊಬೈಲು ಮುಂತಾದ ನಾನಾ ಸರಕುಗಳು ಸಲೀಸಾಗಿ ಸಿಗುತ್ತಿವೆ. ಹಾಗೆ ನಾಸೀರ್ ಕ್ವಿಂಟಾಲುಗಟ್ಟಲೆ ಗಾಂಜಾವನ್ನು ಪರಪ್ಪನ ಅಗ್ರಹಾರದೊಳಗೆ ಮಾರುತ್ತಾನೆ. ಆ ಕಾಸಲ್ಲಿ ಪ್ರತೀ ತಿಂಗಳು ದೊಡ್ಡ ಮೊತ್ತದಲ್ಲಿ ಪಾಲು ಪಡೆಯುತ್ತಾ, ನಾಸಿರನೆಗೆ ಅನುಕೂಲಕರ ವಾತಾವರಣ ಸೃಷ್ಟಿಸಿದ್ದರೆಂಬ ಗುರುತರ ಆರೋಪ ಶೇಷ ವಿರುದ್ಧ ಕೇಳಿ ಬರುತ್ತಿದೆ!</span><br />
<strong><span style="font-size: 14pt;">ಜೈಲೊಳಗೆ ಕ್ವಿಂಟಾಲುಗಟ್ಟಲೆ ದನದ ಮಾಂಸ!</span></strong></p>
<p style="text-align: justify;"><img loading="lazy" decoding="async" class="alignnone wp-image-13785" src="https://www.shodhanews.com/wp-content/uploads/2024/03/Untitled-design-2023-07-06T180304.393-1024x576-1-800x450.jpg" alt="" width="1024" height="576" srcset="https://www.shodhanews.com/wp-content/uploads/2024/03/Untitled-design-2023-07-06T180304.393-1024x576-1-800x450.jpg 800w, https://www.shodhanews.com/wp-content/uploads/2024/03/Untitled-design-2023-07-06T180304.393-1024x576-1-768x432.jpg 768w, https://www.shodhanews.com/wp-content/uploads/2024/03/Untitled-design-2023-07-06T180304.393-1024x576-1-150x84.jpg 150w, https://www.shodhanews.com/wp-content/uploads/2024/03/Untitled-design-2023-07-06T180304.393-1024x576-1-450x253.jpg 450w, https://www.shodhanews.com/wp-content/uploads/2024/03/Untitled-design-2023-07-06T180304.393-1024x576-1.jpg 1024w" sizes="(max-width: 1024px) 100vw, 1024px" /><span style="font-size: 12pt;">ನಿಮಗೆ ಮರೆತು ಹೋಗಿರಲಿಕ್ಕಿಲ್ಲ; ಕಳೆದ ವರ್ಷದ ಮಳೆಗಾಲದಲ್ಲಿ ಪರಪ್ಪನ ಅಗ್ರಹಾರದಲ್ಲಿ ನಾಸಿರನಿಗೆ ದೊರೆಯುತ್ತಿರುವ ರಾಜಾತಿಥ್ಯದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಜೊತೆಗೆ ಆತನ ಖಾತೆಗೆ ದುಬೈ ಸೇರಿದಂತೆ ನಾನಾ ಕಡೆಗಳಿಂದ ಫಂಡುಗಳು ಬಂದು ಬೀಳುತ್ತಿವೆ ಅನ್ನೋದರ ಬಗ್ಗೆಯೂ ಗುಲ್ಲೆದ್ದಿತ್ತು. ಆತ ಪರಪ್ಪನ ಅಗ್ರಹಾರದಿಂದಲೇ ಮ್ಯಾನೇಜು ಮಾಡುತ್ತಿರುವ ಉಗ್ರರ ನೆಟ್ ವರ್ಕ್ ಮತ್ತು ಆ ಮೂಲಕ ನಡೆಸುತ್ತಿರುವ ಸರಣಿ ಸ್ಫೋಟದ ಸಂಚಿನ ಬಗ್ಗೆಯೂ ಮಾಹಿತಿಗಳು ಹೊರಬಿದ್ದಿದ್ದವು. ಅಷ್ಟಾದೇಟಿಗೆ ನಾಸಿರನ ಬುಡಕ್ಕೊದ್ದು, ಆತನಿಗೆ ಸಹಾಯ ಮಾಡುತ್ತಿದ್ದವರಿಗೂ ಒಂದು ಗತಿ ಕಾಣಿಸಿದ್ದರೆ, ಬಹುಶಃ ಬೆಂಗಳೂರು ಸೇಫ್ ಆಗುಳಿಯುತ್ತಿತ್ತು. ಹಾಗಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ? ಯಾಕೆ ನಾಸಿರ್ ಈವತ್ತಿಗೂ ಅಲ್ಲೆಲ್ಲೋ ಗಲಭೆಕೋರರು ಜೈಲಿಂದ ಬಿಡುಗಡೆಗೊಂಡರೆ ಬಸ್ಸು ಕಳಿಸಿ ವ್ಯವಸ್ಥೆ ಮಾಡಿ ಕೊಡುವ ಮಟ್ಟಕ್ಕೆ ಪ್ರಭಾವ ಉಳಿಸಿಕೊಂಡಿದ್ದಾನೆ? ಇಂಥಾ ಪ್ರಶ್ನೆಗಳು ಯಾರಿಗಾದರೂ ಕಾಡದಿರೋದಿಲ್ಲ.</span><br />
<span style="font-size: 12pt;">ಅದಕ್ಕೆ ಉತ್ತರವಾಗಿ ನಿಲ್ಲುವ ಆಕೃತಿ ಜೈಲಾಧಿಕಾರಿ ಟಿ.ಪಿ ಶೇಷ. ಇವರು ಪರಪ್ಪನ ಅಗ್ರಹಾರದಲ್ಲಿ ಮೆರೆಯುತ್ತಿದ್ದ ಕಾಲದಲ್ಲಿಯೇ ಉಗ್ರ ನಾಸೀರ್ ಕೊಬ್ಬಿ ಹೋಗಿದ್ದ ಅನ್ನಲಾಗುತ್ತಿದೆ. ಆ ಕಾಲಮಾನದ ಬಗ್ಗೆ ನಾಗರಿಕರೆಲ್ಲ ರೊಚ್ಚಿಗೇಳುವಂಥಾ ಅನೇಕ ಘಟನಾವಳಿಗಳು ನಡೆದಿದ್ದವಂತೆ. ನಾಸೀರ್ ಗೆ ಗಾಂಜಾ ದಂಧೆ ಸೇರಿದಂತೆ ಎಲ್ಲದಕ್ಕೂ ಅನುವು ಮಾಡಿಕೊಟ್ಟಿದ್ದೇ ಈ ಶೇಷ ಎನ್ನಲಾಗುತ್ತಿದೆ. ಕ್ವಿಂಟಾಲುಗಟ್ಟಲೆ ದನದ ಮಾಂಸ ಸರಬರಾಜಾಗುವಂತೆ ಮಾಡಿ, ಅದರೊಳಗೆ ಮೊಬೈಲುಗಳನ್ನೂ ತರಿಸುವ ವ್ಯವಸ್ಥೆ ಆದದ್ದರ ಹಿಂದೆಯೂ ಸಾಹೇಬರ ನೇರಾನೇರ ಕೈವಾಡವಿದೆ. ಅದನ್ನು ತಾನು ಭಯೋತ್ಪಾದನಾ ತರಬೇತಿ ಕೊಟ್ಟ ಕ್ರಿಮಿನಲ್ಲುಗಳಿಗೆ ತಿನ್ನಿಸಿ, ತಾನೂ ತಿಂದು ನಾಸೀರ್ ಮಜಾ ಉಡಾಯಿಸಿಕೊಂಡು ಬಂದಿದ್ದಾನೆ!</span><br />
<strong><span style="font-size: 14pt;">ವೀಡಿಯೋ ಮಾಡಿಟ್ಟುಕೊಂಡನೇ ಉಗ್ರ?</span></strong></p>
<p style="text-align: justify;"><img loading="lazy" decoding="async" class="alignnone wp-image-13786" src="https://www.shodhanews.com/wp-content/uploads/2024/03/FotoJet-23-5.webp" alt="" width="1024" height="576" srcset="https://www.shodhanews.com/wp-content/uploads/2024/03/FotoJet-23-5.webp 800w, https://www.shodhanews.com/wp-content/uploads/2024/03/FotoJet-23-5-768x432.webp 768w, https://www.shodhanews.com/wp-content/uploads/2024/03/FotoJet-23-5-150x84.webp 150w, https://www.shodhanews.com/wp-content/uploads/2024/03/FotoJet-23-5-450x253.webp 450w" sizes="(max-width: 1024px) 100vw, 1024px" /><span style="font-size: 12pt;">ಪರಪ್ಪನ ಅಗ್ರಹಾರದೊಳಗೆ ನಾಸೀರ್ ರಾಜನಂತೆ ಮೆರೆಯುತ್ತಿರೋ ವಿಚಾರ ಅದ್ಯಾವತ್ತೋ ಮುಖ್ಯವಾಹಿನಿ ತಲುಪಿಕೊಂಡಿದೆ. ಒಂದು ವೇಳೆ ಜೈಲೊಳಗಿನ ಸಿಬ್ಬಂದಿಯೋ, ಅಧಿಕಾರಿಗಳೋ ಇಂಥಾ ತಪ್ಪು ಮಾಡಿದ್ದರೆ ಮೇಲಾಧಿಕಾರಿಗಳು ಕ್ರಮ ಜರುಗಿಸಿ, ಎಲ್ಲವನ್ನೂ ಕಟ್ಟುನಿಟ್ಟಾಗಿರುವಂತೆ ನೋಡಿಕೊಳ್ಳುವ ಅವಕಾಶವಿತ್ತು. ಅದಕ್ಕೆ ಕೊಳ್ಳಿಯಿಟ್ಟು ಕೊಳ್ಳಿದೆವ್ವದಂಥಾ ನಾಸಿರನನ್ನು ಕೊಬ್ಬಲು ಬಿಟ್ಟಿದ್ದರ ಹಿಂದೆಯೂ ಮತ್ತದೇ ಶೇಷನ ಹೆಸರು ಕೇಳಿ ಬರುತ್ತದೆ. ಹಾಗಾದರೆ, ಶೇಷ ಯಾಕೆ ಪಟ್ಟು ಹಿಡಿದು ನಾಸಿರನನ್ನು ಪೊರೆಯಲು ನಿಂತರು? ಸಸ್ಪೆಂಡ್ ವಆಗುವ ಭಯವೂ ಇಲ್ಲದೆ ಯಾಕೆ ಭಯೋತ್ಪಾದಕನಿಗೆ ಬೆಂಗಾವಲಾದರು? ಈ ದಿಶೆಯಲ್ಲಿ ಹುಡುಕ ಹೊರಟರೆ ಮತ್ತೊಂದಷ್ಟು ಇಂಟರೆಸ್ಟಿಂಗ್ ಆದ, ಆಘಾತಕರ ವಿಚಾರಗಳು ಜಾಹೀರಾಗುತ್ತವೆ!</span><br />
<span style="font-size: 12pt;">ಶೇಷ ಸಾಹೇಬರು ಕ್ವಿಂಟಾಲುಗಟ್ಟಲೆ ಗಾಂಜಾವನ್ನು ಪರಪ್ಪನ ಅಗ್ರಹಾರದೊಳಕ್ಕೆ ಬಿಟ್ಟು, ತಿಂಗ ತಿಂಗಳು ಕಾಸೆಣಿಸುತ್ತಿದ್ದರಲ್ಲಾ? ಹಾಗೊಂದು ಸಲ ಮಂತ್ಲಿ ಸೆಟಲ್ ಮೆಂಟಿನಲ್ಲಿ ಅವರು ಬ್ಯುಸಿಯಾಗಿದ್ದಾಗ, ನಟೋರಿಯಸ್ ನಾಸಿರ್ ಸಣ್ಣ ಗ್ಯಾಪಿನಲ್ಲಿ ಕೈಚಳಕ ತೋರಿಸಿದ್ದಾನೆ. ಶೇಷ ಲಕ್ಷಣವಾಗಿ ಕಾಸೆಣಿಸುವ ದೃಷ್ಯವನ್ನು, ಅದರ ಹಿಂಚುಮುಂಚಿನ ಸಂವಾದವನ್ನು ನಾಸಿರ್ ವೀಡಿಯೋ ಮಾಡಿಕೊಂಡಿದ್ದಾನೆಂಬ ಮಾತೂ ಇದೆ. ಯಾವಾಗ ತನ್ನ ಅಸಲೀ ಜಾತಕ ಉಗ್ರನ ಕೈಲಿಗೆ ಎಂಬ ಸತ್ಯ ಗೊತ್ತಾಯಿತೋ, ಆಗ ಹೀನಾಯವಾಗಿ ಸಸ್ಪೆಂಡ್ ಆಗೋ ಭಯಕ್ಕೆ ಸಾಹೇಬರ ಬಾಟಮ್ಮು ಒದ್ದೆಯಾಗಿದೆ. ಆ ವೀಡಿಯೋವನ್ನೇ ಇಟ್ಟುಕೊಂಡು ನಾಸೀರ್ ಪರಪ್ಪನ ಅಗ್ರಹಾರವನ್ನು ಅಕ್ಷರಶಃ ಕಂಟ್ರೋಲಿನಲ್ಲಿಟ್ಟುಕೊಂಡಿದ್ದಾನೆ. ಈ ನಿಟ್ಟಿನಲ್ಲಿ ನೋಡಹೋದರೆ, ಒಟ್ಟಾರೆ ಅಧ್ವಾನದ ಹಿಂದಿರುವ ನಿಜವಾದ ಕಾರಣದಂತೆ ಶೇಷ ಗೋಚರಿಸುತ್ತಿರೋದು ಸಳ್ಳಲ್ಲ!</span><br />
<strong><span style="font-size: 14pt;">ಜೈಲೊಳಗೇ ಭಯೋತ್ಪಾದಕರ ಸೃಷ್ಟಿ! </span></strong></p>
<p style="text-align: justify;"><strong><span style="font-size: 14pt;"><img loading="lazy" decoding="async" class="alignnone wp-image-13787" src="https://www.shodhanews.com/wp-content/uploads/2024/03/istockphoto-106492379-612x612-1.jpg" alt="" width="1024" height="768" srcset="https://www.shodhanews.com/wp-content/uploads/2024/03/istockphoto-106492379-612x612-1.jpg 612w, https://www.shodhanews.com/wp-content/uploads/2024/03/istockphoto-106492379-612x612-1-150x113.jpg 150w, https://www.shodhanews.com/wp-content/uploads/2024/03/istockphoto-106492379-612x612-1-450x338.jpg 450w" sizes="(max-width: 1024px) 100vw, 1024px" /> </span></strong><span style="font-size: 12pt;">ಹೀಗೆ ಅತ್ಯಂತ ವ್ಯವಸ್ಥಿತವಾಗಿ ಪರಪ್ಪನ ಅಗ್ರಹಾರವನ್ನು ಸುಪರ್ಧಿಗೆ ತೆಗೆದುಕೊಂಡ ನಾಸಿರ್ ಅದನ್ನು ಭಯೋತ್ಪಾದನಾ ತರಬೇತಿ ಕೇಂದ್ರವಾಗಿಸಿ ಬಿಟ್ಟಿದ್ದಾನೆ. ಬೇರೆ ಬೇರೆ ಪ್ರಕರಣಗಳಲ್ಲಿ ಕೆಲ  ಹುಡುಗರು ಪರಪ್ಪನ ಅಗ್ರಹಾರ ಸೇರಿಕೊಳ್ಳುತ್ತಿರುತ್ತಾರೆ. ಅಂಥವರನ್ನೆಲ್ಲ ತಲೆಸವರಿ ಹತ್ತಿರ ಕರೆದುಕೊಳ್ಳುವ ನಾಸೀರ್ ಮೊಬೈಲು, ಮಾಂಸ ಮಡ್ಡಿ, ಎಣ್ಣೆಯೂ ಸೇರಿದಂತೆ ಸಖಲ ಸ್ವರೂಪಗಳಲ್ಲಿ ಉಪಚರಿಸುತ್ತಾನೆ. ನಂತರ ಹಂತ ಹಂತವಾಗಿ ಭಯೋತ್ಪಾದನೆಯನ್ನು ಬೋಧಿಸಲಾರಂಭಿಸುತ್ತಾನೆ. ಹೀಗೆ ಸಾಮಾನ್ಯ ಕ್ರಿಮಿನಲ್ಲು ಹುಡುಗರ ತಲೆಗೆ ಹಿಂಸೆಯನ್ನು ತುಂಬಿ, ಎಲ್ಲ ರೀತಿಯಿಂದಲೂ ಪಳಗಿಸಿ ಬಿಡುತ್ತಾನೆ. ಅಪರಾಧ ಪ್ರಕರಣಗಳಲ್ಲಿ ಜೈಲು ಪಾಲಾಗುವ ಯುವಕರಲ್ಲಿ ಬಹುತೇಕರು ಭಯೋತ್ಪಾದಕರಾಗಿಯೇ ಹೊರ ಹೋಗುತ್ತಿದ್ದಾರೆ. </span><br />
<span style="font-size: 12pt;">ನಾಸಿರನ ನಟೋರಿಟಿಗೆ ಸೂಕ್ತ ಉದಾಹರಣೆಯಂತಿರುವಾತ ಆರ್ ಟಿ ನಗರದ ಮಠದಹಳ್ಳಿಯ ಮಹಮದ್ ಜುನೈದ್. ಆತ 2017ರಲ್ಲಿ ಕೊಲೆ ಕೇಸೊಂದರಲ್ಲಿ ಪರಪ್ಪನ ಅಗ್ರಹಾರಕ್ಕೆ ತಲುಪಿದ್ದ. ಜುನೈದ್ ನನ್ನು ನಾಸಿರ್ ಅದು ಹೇಗೆ ಪಳಗಿಸಿದ್ದನೆಂದರೆ, ಬೇಲ್ ಮೂಲಕ ಬಿಡುಗಡೆಗೊಂಡಿದ್ದ ಆತ ಭಯೋತ್ಪಾದನಾ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ. ಎರಡು ವರ್ಷದ ಹಿಂದೆ ಮತ್ತೆ ಶ್ರೀಗಂಧ ಕಳ್ಳತನ ಕೇಸಿನಲ್ಲಿ ಜೈಲಿಗೆ ಬಂದಿದ್ದ ಜುನೈದ್ ನನ್ನು ನಾಸಿರ್ ತನ್ನ ಸಂಘಟನೆಗೆ ಸೇರಿಸಿಕೊಂಡಿದ್ದ. ಹೀಗೆ ಕೊಲೆ ಸುಲಿಗೆಯಂಥಾ ಕೇಸುಗಳಲ್ಲಿ ಜೈಲುಪಾಲಾಗುವ ತನ್ನ ಸಮುದಾಯದ ಯುವಕರ ತಲೆಗೆ ನಾಸಿರ್ ವ್ಯವಸ್ಥಿತವಾಗಿ ಮೂಲಭೂತವಾದವನ್ನು ತುಂಬಿಸುತ್ತಿದ್ದಾನೆ. ಈತನಿಂದಲೇ ಭಯೋತ್ಪಾದಕನಾಗಿರುವ ಜುನೈದ್ ಕಳೆದ ವರ್ಷವೇ ದುಬೈಗೆ ಹಾರಿದ್ದಾನೆ. ಅಲ್ಲಿಂದಲೇ ಬೆಂಗಳೂರು ಸ್ಫೋಟಕ್ಕೆ ಸಂಚನ್ನೂ ರೂಪಿಸುತ್ತಿದ್ದಾನೆ. ಅದೆಲ್ಲದರ ಮಾಸ್ಟರ್ ಮೈಂಡ್ ಇದೇ ನಾಸಿರ್!</span><br />
<strong><span style="font-size: 14pt;">ಎಸ್ಕೇಪಾಗಲು ವ್ಯವಸ್ಥಿತ ಸಂಚು!</span></strong></p>
<p style="text-align: justify;"><img loading="lazy" decoding="async" class="alignnone wp-image-13789" src="https://www.shodhanews.com/wp-content/uploads/2024/03/depositphotos_274387074-stock-photo-broken-jail-bars-in-prison.webp" alt="" width="1024" height="683" srcset="https://www.shodhanews.com/wp-content/uploads/2024/03/depositphotos_274387074-stock-photo-broken-jail-bars-in-prison.webp 600w, https://www.shodhanews.com/wp-content/uploads/2024/03/depositphotos_274387074-stock-photo-broken-jail-bars-in-prison-150x100.webp 150w, https://www.shodhanews.com/wp-content/uploads/2024/03/depositphotos_274387074-stock-photo-broken-jail-bars-in-prison-450x300.webp 450w" sizes="(max-width: 1024px) 100vw, 1024px" /><span style="font-size: 12pt;">ಹೀಗೆ ಜೈಲೊಳಗಿದ್ದುಕೊಂಡೇ ಹೊರಜಗತ್ತನ್ನು ಸಂಭಾಳಿಸುತ್ತಿರುವ ಉಗ್ರ ನಾಸಿರ್ ಜೈಲುಪಾಲಾಗಿ ಹದಿಮೂರು ವರ್ಷ ಕಳೆದಿದೆ. ಆತನಿಗೆ ಬಿಡುಗಡೆ ಭಾಗ್ಯವಂತೂ ಸಾಧ್ಯವಿಲ್ಲ. ಅಲ್ಲಿಯೇ ಆತನ ಬದುಕು ನಾಮಾವಶೇಷಗೊಳ್ಳುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದ್ದಾವೆ. ಹಾಗಿರೋದರಿಂದಲೇ ಹೇಗಾದರೂ ಮಾಡಿ ಪರಪ್ಪನ ಅಗ್ರಹಾರದಿಂದ ಎಸ್ಕೇಪ್ ಆಗಲು ನಾಸಿರ್ ಸಂಚು ನಡೆಸುತ್ತಿದ್ದಾನೆಂಬ ಅನುಮಾನವೂ ಇದೆ. ಅದಕ್ಕಾಗಿ ಒಂದು ಬೆಟಾಲಿಯನ್ನನ್ನು ರೆಡಿ ಮಾಡಿಟ್ಟುಕೊಂಡಿದ್ದಾನೆ. ಇತ್ತೀಚೆಗಷ್ಟೇ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದಾಗ ಬೇರೆ ವೆಪನ್ನುಗಳ ಜೊತೆಗೆ ಗ್ರೆನೇಟ್ ಕೂಡಾ ಸಿಕ್ಕಿತ್ತು. ಅದರ ಹಿಂದೆ ಉಗ್ರ ನಾಸಿರನ ಎಸ್ಕೇಪ್ ಪ್ಲಾನಿದೆ ಎಂಬ ಮಾತೂ ಇದೆ.</span><br />
<span style="font-size: 12pt;">ಸದ್ಯಕ್ಕೆ ನಾಸಿರ್ ಪರಪ್ಪನ ಅಗ್ರಹಾರದ ವಿಶೇಷ ಕೊಠಡಿಯಲ್ಲಿ ಸೇಫಾಗಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಎದುರಿಗೇ ಈತನ ಕೋಣೆ ಇದೆ. ಆ ಕೋಣೆಯ ಪಕ್ಕದಲ್ಲಿಯೇ ಒಂದು ಖಾಲಿ ಜಾಗವೂ ಇದೆ. ಆ ಭಾಗದಿಂದಲೇ ಎಸ್ಕೇಪ್ ಆಗುವ ಪ್ಲಾನೂ ಚಾಲ್ತಿಯಲ್ಲಿರುವಂತಿದೆ. ಎಸ್ಕೇಪ್ ಆಗಲು ಬೇರೆ ಬೇರೆ ತಂತ್ರ ಹೆಣೆದಿರುವ ನಾಸಿರ್ ಹುಡುಗರ ಕೈಗೆ ಗ್ರೆನೇಟ್ ಕೊಟ್ಟು ಸಜ್ಜುಗೊಳಿಸಿದ್ದಾನೆ. ವಿಚಾರಣೆ, ಕೋರ್ಟ್ ಹಾಜರಿ ಸಂದರ್ಭದಲ್ಲಿ ಪೊಲೀಸ್ ವಾಹನದ ಮೇಲೆ ಗ್ರೆನೇಟ್ ದಾಳಿ ನಡೆಸಿ ಕಂಬಿ ಕೀಳುವ ತಂತ್ರಗಳನ್ನೂ ನಾಸಿರ್ ಹೆಣೆಯುತ್ತಿದ್ದಾನೆ. ರಾಷ್ಟ್ರೀಯ ತನಿಖಾ ದಳದ ಚಿತ್ತ ಬೇಗನೆ ನಾಸಿರನತ್ತ ಹರಿದು, ಆತನ ಎಲ್ಲ ಆಟಗಳಿಗೂ ಬ್ರೇಕ್ ಹಾಕಿದರೆ ದೊಡ್ಡ ಅನಾಹುತಗಳನ್ನು ತಪ್ಪಿಸಿದಂತಾಗುತ್ತದೆ.</span><br />
<strong><span style="font-size: 14pt;">ಇದೆಲ್ಲವೂ ಶೇಷನ ಅವಶೇಷ!</span></strong></p>
<p style="text-align: justify;"><img loading="lazy" decoding="async" class="alignnone wp-image-13790" src="https://www.shodhanews.com/wp-content/uploads/2024/03/download.jpg" alt="" width="1024" height="568" srcset="https://www.shodhanews.com/wp-content/uploads/2024/03/download.jpg 301w, https://www.shodhanews.com/wp-content/uploads/2024/03/download-150x83.jpg 150w" sizes="(max-width: 1024px) 100vw, 1024px" /><span style="font-size: 12pt;">ಪರಪ್ಪನ ಅಗ್ರಹಾರದೊಳಗೇ ಉಗ್ರನೊಬ್ಬ ಈ ಪರಿಯಲ್ಲಿ ರಾಜ್ಯಭಾರ ನಡೆಸುತ್ತಿದ್ದಾನೆಂದರೆ, ಅದಕ್ಕೆ ನೇರ ಹೊಣೆ ಶೆಷನೇ ಹೊರತು ಮತ್ಯಾರೂ ಅಲ್ಲ. ಆತ ತೊಲಗಿದ ನಂತರ ಬಂದ ಜೈಲಾಧಿಕಾರಿಗಳೂ ಕೂಡಾ ಆತನದ್ದೇ ಹಾದಿಯಲ್ಲಿ ಮುಂದುವರೆಯುತ್ತಿದ್ದಾರೆ. ಇದೆಲ್ಲದರ ಹಿಂದೆ ಶೇಷ ಸಿಲುಕಿಕೊಂಡಿರುವ ವೀಡಿಯೋ ಇಕ್ಕಳವೂ ಕಾರಣವಾಗಿದ್ದಿರಬಹುದು. ಹೀಗೆ ನಾಸಿರ್ ವಿಚಾರದಲ್ಲಿ ಕಳ್ಳಾಟವಾಡಿರುವ ಶೇಷನ ಜಾಯಮಾನವೇ ಅಂಥಾದ್ದಿದೆ. ಈ ಹಿಂದೆ ಹ್ಯಾಕರ್ ಶ್ರೀಕಿ ಬಿಟ್ ಕಾಯಿನ್ ದಂಧೆಯಲ್ಲಿ ಸಿಕ್ಕಿಬಿದ್ದಾಗಲೂ, ಆ ಪ್ರಕರಣದಲ್ಲಿ ಶೆಷನ ಹೆಸರು ಕೇಳಿ ಬಂದಿತ್ತು. ಅತ್ಯಂತ ಬುದ್ಧಿವಂತನಾದ ಶ್ರೀಕಿ ಅಮೆರಿಕಾದಂಥಾ ಅಮೆರಿಕೆಗೇ ಛಳುಕು ಮೂಡಿಸಿದ್ದ ಹ್ಯಾಕರ್.</span><br />
<span style="font-size: 12pt;">ಇಂಥವನಿಗೆ ಕೊಕೇನ್ ನಂಥಾದ್ದನ್ನು ಸರಬರಾಜು ಮಾಡಿ, ಬಹುಕೋಟಿ ಕಿಮ್ಮತ್ತಿನ ಬಿಟ್ ಕಾಯಿನ್ನುಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡ ಗುರುತರ ಆರೋಪವೂ ಶೇಷನ ಮೇಲಿದೆ. ಇದೀಗ ಬೆಳಗಾವಿ ಜೈಲಿನ ಡಿ.ಐ.ಜಿ ಆಗಿರುವ ಶೇಷನನ್ನು ಬಿಟ್ ಕಾಯಿನ್ ಕೇಸಿನಲ್ಲಿ ಎಸ್ ಐಟಿ ತಂಡ ತಡವಿಕೊಂಡಿತ್ತು. ಒದಷ್ಟು ದಿನ ರಜೆ ಹಾಕುವ ನಾಟಕವಾಡಿ ಆತ ಬಚಾವಾಗಲೆತ್ನಿಸಿದ್ದ. ಒಂದು ವೇಳೆ ಬಿಟ್ ಕಾಯಿನ್ ಕೇಸಿನ ವಿಚಾರಣೆ ಸರಿ ದಿಕ್ಕಿನಲ್ಲಿ ನಡೆದರೆ ಮೊದಲು ಶೇಷನೇ ಜೈಲುವಾಸಿಯಾದರೂ ಅಚ್ಚರಿಯೇನಿಲ್ಲ. ನಾಸಿರ್ ಕೇಸಿನಲ್ಲಿಯೂ ಆತನ ನೆತ್ತಿಯ ಮೇಲೆ ಅಪಾಯದ ತೂಗುಕತ್ತಿ ನೇತಾಡುತ್ತಲೇ ಇದೆ. ಯಾಕೆಂದರೆ, ಪರಪ್ಪನ ಅಗ್ರಹಾರದಲ್ಲಿ ಈ ಕ್ಷಣಕ್ಕೂ ಚಾಲ್ತಿಯಲ್ಲಿರುವ ಅಧ್ವಾನಗಳೆಲ್ಲವೂ ಈ ಶೇಷನ ಅವಶೇಷಗಳೇ!</span><br />
<strong><span style="font-size: 14pt;">ಝಳಪಿಸಲಿ ತನಿಖೆಯ ತಲವಾರು!</span></strong></p>
<p style="text-align: justify;"><img loading="lazy" decoding="async" class="alignnone wp-image-13791" src="https://www.shodhanews.com/wp-content/uploads/2024/03/879906-xdzlovcpnr-1526997687-800x420.jpg" alt="" width="1024" height="538" srcset="https://www.shodhanews.com/wp-content/uploads/2024/03/879906-xdzlovcpnr-1526997687-800x420.jpg 800w, https://www.shodhanews.com/wp-content/uploads/2024/03/879906-xdzlovcpnr-1526997687-1024x538.jpg 1024w, https://www.shodhanews.com/wp-content/uploads/2024/03/879906-xdzlovcpnr-1526997687-768x403.jpg 768w, https://www.shodhanews.com/wp-content/uploads/2024/03/879906-xdzlovcpnr-1526997687-150x79.jpg 150w, https://www.shodhanews.com/wp-content/uploads/2024/03/879906-xdzlovcpnr-1526997687-450x236.jpg 450w, https://www.shodhanews.com/wp-content/uploads/2024/03/879906-xdzlovcpnr-1526997687.jpg 1200w" sizes="(max-width: 1024px) 100vw, 1024px" /><span style="font-size: 12pt;">ಸಂಬಂಧಿಸಿದ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬಂಧಿಖಾನೆ ಇಲಾಖೆ ಗಮನ ಹರಿಸದಿದ್ದರೆ ಪರಪ್ಪನ ಅಗ್ರಹಾರ ಮತ್ತೊಂದಷ್ಟು ಅನಾಹುತಗಳಿಗೆ ಸಾಕ್ಷಿಯಾಗಲಿದೆ. ಬಿಟ್ ಕಾಯಿನ್ನು ಸೇರಿದಂತೆ ನಾನಾ ಮೂಲದಿಂದ ಶೇಷನಂಥಾ ಅಧಿಕಾರಿಗಳು ಬೇನಾಮಿ ಆಸ್ತಿಯ ಒಡೆಯರಾಗಿದ್ದಾರೆಂಬ ಮಾತಿದೆ. ಈ ಕೂಡಲೇ ಸರತಿಯಾದ ತನಿಖೆ ನಡೆಸಿ, ಸರಿಯಾಗಿಕ ಶಿಕ್ಷೆ ವಿಧಿಸಬೇಕಿದೆ. ಭಯೋತ್ಪಾದನೆಯಂಥಾದ್ದು ಮೇಳೈಸಿದಾಗೆಲ್ಲ ನಾನಾ ದಿಕ್ಕಿನತ್ತ ಆರೋಪಗಳ ಹರಿದಾಡುತ್ತವೆ. ಆದರೆ ಅದೆಲ್ಲದಕ್ಕೂ ಕ್ರಿಮಿನಲ್ಲುಗಳ ಜೊತೆ ಮಿಲಾಪಿ ನಡೆಸುವ ಕೆಲ ಖೂಳ ಅಧಿಕಾರಿಗಳೇ ಕಾರಣ. ಬಹುಶಃ ಅಂಥಾ ಅಧಿಕಾರಿಗಳಿಲ್ಲದೇ ಹೋಗಿದ್ದರೆ ನಾಸಿರ್ ನಂಥಾ ಭಯೋತ್ಪಾದಕರು ಎಂದೋ ಮೂಲೆ ಸೇರುತ್ತಿದ್ದರು. </span></p>
<p style="text-align: justify;"><span style="font-size: 12pt;">ಈಗ್ಗೆ ವರ್ಷಗಳ ಹಿಂದೆ ಪರಪ್ಪನ ಅಗ್ರಹಾರದಲ್ಲಿ ಖೈದಿಗಳಿಗೆ ವೈಭೋಗದ ವ್ಯವಸ್ಥೆ ಮಾಡಿ ಕೊಡುತ್ತಿರೋದರ ಬಗ್ಗೆರ ಗುಲ್ಲೆದ್ದಿತ್ತು. ಅದರ ಬಗ್ಗೆ ತನಿಖೆ ನಡೆಸಲು ಮುರುಗನ್ ನೇತೃತ್ವದಲ್ಲೊಂದು ತನಿಖಾ ತಂಡವನ್ನು ನೇಮಿಸಲಾಗಿತ್ತು. ಆ ಕಾಲದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಡಿ.ಐಜಿ ಆಗಿದ್ದಾತ ಇದೇ ಟಿ.ಪಿ ಶೇಷ. ಮುರುಗನ್ ಮತ್ತವರ ತಂಡ ಪರಪ್ಪನ ಅಗ್ರಹಾರದ ಅಖಾಡಕ್ಕಿಳಿದು ತನಿಖೆ ಶುರುವಿಡುತ್ತಲೇ ಎಲ್ಲ ಅಕ್ರಮಗಳೂ ಒಂದೊಂದಾಗಿ ಜಾಹೀರಾಗಿದ್ದವು. ಶೇಷನ ನೆರಳಲ್ಲಿ ಖೈದಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಡೆದಿದ್ದ ಅಷ್ಟೂ ಸರ್ಕಸ್ಸುಗಳು ತೆರೆದುಕೊಂಡಿದ್ದವು. ಶೇಷ ಮಿಸುಕಲೂ ಸಾಧ್ಯವಾಗದಂತೆ, ಆರೋಪಗಳೆಲ್ಲವೂ ಸಾಬೀತಾಗಿ ಬಿಟ್ಟಿದ್ದವು. ಮುರುಗನ್ ನೇತೃತ್ವದ ತಂಡ ಯಾವ ಮುಲಾಜೂ ಇಲ್ಲದೆ ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆ ಎಲ್ಲ ಅಂದಾದುಂದಿಗಳ ಸೂತ್ರದಾರನಾಗಿದ್ದ ಶೇಷರನ್ನು ಆ ಕ್ಷಣವೇ ಬೆಳಗಾವಿ ಜೈಲಿಗೆ ಎತ್ತಂಗಡಿ ಮಾಡಲಾಗಿತ್ತು. ಒಂದು ವೇಳೆ ಸರಿಯಾಗಿ ತನಿಖೆ ನಡೆದರೆ, ಪರಪ್ಪನ ಅಗ್ರಹಾರದ ಕಿಸುರುಗಳೇ ಶೇಷನ ಉಸಿರುಗಟ್ಟಿಸೋದರಲ್ಲಿ ಯಾವ ಸಂಶಯವೂ ಇಲ್ಲ!</span><br />
<span style="font-size: 12pt;">ನಾಸಿರನಂಥಾ ಉಗ್ರ ಜೈಲುಪಾಲಾಗಿದ್ದರೂ ಅಲ್ಲಿಂದಲೇ ಭಯೋತ್ಪಾದನಾ ಚಟುವಟಿಕೆಗಳನ್ನು ಆಪರೇಟ್ ಮಾಡುತ್ತಿದ್ದಾನೆಂದರೆ, ಅದಕ್ಕೆ ಶೇಷನಂಥಾ ಅಧಿಕಾರಿಗಳ ಖೂಳುಬಾಕತನವೇ ಮೂಲ ಕಾರಣ. ಗೃಹಸಚಿವ ಪರಮೇಶ್ವರ್ ಅಡಿಗಡಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸೋಲುತ್ತಿದ್ದಾರೆ. ಅವರೋರ್ವ ಬೆನ್ನುಹುರಿಯೇ ನೆಟ್ಟಗಿಲ್ಲದ ವಿಫಲ ಗೃಹಸಚಿವನೆಂಬ ಆರೋಪಗಳೂ ಕೇಳಿ ಬರುತ್ತಿವೆ. ಪರಪ್ಪನ ಅಗ್ರಹಾರದ ಅಧ್ವಾನಗಳನ್ನು ನೋಡಿದರೆ ಯಾರಿಗಾದರೂ ಅಂಥಾ ಆರೋಪಗಳಲ್ಲಿ ಅರ್ಥವಿದೆ ಅನ್ನಿಸುತ್ತೆ. ಪರಮೇಶ್ವರ್ ಎಲ್ಲಕ್ಕಿಂತ ಮೊದಲು ಜೈಲೊಳಗಿನ ದಂಧೆಗಳನ್ನು ಮಟ್ಟಹಾಕಲಿ. ಶೇಷನಂಥಾ ಅಧಿಕಾರಿಗಳ ಮೇಲೆ ಸರಿಯಾದ ಕ್ರಮ ಜರುಗಿಸುವ ಮನಸು ಮಾಡಲೆಂಬುದು ಎಲ್ಲರ ಆಗ್ರಹ!</span></p>
<p>The post <a href="https://www.shodhanews.com/09-03-2024-shodha-investigation-report-rameshwaram-cafe-blast/">ground report: ಭಯೋತ್ಪಾದಕನಿಗೆ ಮಾಂಸ ತಿನ್ನಿಸಿ ಕೊಬ್ಬಿಸಿದ್ದು ಟಿ.ಪಿ ಶೇಷ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>deadly virus: ಅಂಥಾ ಸಿನಿಮಾ ಪ್ರಿಯರು ಇದನ್ನೊಮ್ಮೆ ಓದಿ!</title>
		<link>https://www.shodhanews.com/deadly-virus-2023-29-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 29 Apr 2023 09:28:40 +0000</pubDate>
				<category><![CDATA[ಜಾಗತಿಕ]]></category>
		<category><![CDATA[#becarfull]]></category>
		<category><![CDATA[#deadlyvirus]]></category>
		<category><![CDATA[#pornsites]]></category>
		<category><![CDATA[#shodhanews]]></category>
		<guid isPermaLink="false">https://www.shodhanews.com/?p=13502</guid>

					<description><![CDATA[<p><img width="693" height="384" src="https://www.shodhanews.com/wp-content/uploads/2023/04/031319f9-ccd7-4c57-9ea6-89d59b809ee5.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/031319f9-ccd7-4c57-9ea6-89d59b809ee5.jpeg 693w, https://www.shodhanews.com/wp-content/uploads/2023/04/031319f9-ccd7-4c57-9ea6-89d59b809ee5-150x83.jpeg 150w, https://www.shodhanews.com/wp-content/uploads/2023/04/031319f9-ccd7-4c57-9ea6-89d59b809ee5-450x249.jpeg 450w" sizes="(max-width: 693px) 100vw, 693px" />ಎಲ್ಲಿ ಮಡಿವಂತಿಕೆ ಅಧಿಕವಾಗಿರುತ್ತೋ ಅಲ್ಲಿಯೇ ನಾನಾ ಬಯಕೆಗಳು ಥರ ಥರದ ಮುಖವಾಡ ತೊಟ್ಟು ಕೂತಿರುತ್ವೆ. ಭಾರತದಲ್ಲಿಯಂತೂ (india) ನಾನಾ ವಿಚಾರಗಳಲ್ಲಿ ಇಂಥಾ ಮಡಿವಂತಿಕೆ ತೀವ್ರವಾಗಿದೆ. ಹಾಗಿರುವಾಗ ಕಾಮದ (sex) ಬಗ್ಗೆ ಇಲ್ಲಿ ಬಿಡು ಬೀಸಾಗಿ ಮಾತಾಡೋದು ಕೊಂಚ ಕಷ್ಟ. ಆದ್ರೆ ಜನಸಂಖ್ಯೆ ಮಾತ್ರ ಇಡೀ ವಿಶ್ವಕ್ಕೇ ಸೆಡ್ಡು ಹೊಡೆಯುವಂತೆ ಬೆಳೆಯುತ್ತಲೇ ಇದೆ. ಇದರಾಚೆಗೆ ಮೈಥುನದ ಬಗ್ಗೆ ಅತೀವ ಆಸಕ್ತಿ ಹೊಂದಿರೋ ಮಂದಿಯ ಪಾಲಿಗೆ ಇತ್ತೀಚಿನ ದಿನಗಳಲ್ಲಿ ನೀಲಿ ಚಿತ್ರಗಳು ವರದಾನವಾಗಿವೆ. ಇಂಥಾ ನೀಲಿ ಚಿತ್ರಗಳನ್ನ (porn sites) [...]</p>
<p>The post <a href="https://www.shodhanews.com/deadly-virus-2023-29-04/">deadly virus: ಅಂಥಾ ಸಿನಿಮಾ ಪ್ರಿಯರು ಇದನ್ನೊಮ್ಮೆ ಓದಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="693" height="384" src="https://www.shodhanews.com/wp-content/uploads/2023/04/031319f9-ccd7-4c57-9ea6-89d59b809ee5.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/031319f9-ccd7-4c57-9ea6-89d59b809ee5.jpeg 693w, https://www.shodhanews.com/wp-content/uploads/2023/04/031319f9-ccd7-4c57-9ea6-89d59b809ee5-150x83.jpeg 150w, https://www.shodhanews.com/wp-content/uploads/2023/04/031319f9-ccd7-4c57-9ea6-89d59b809ee5-450x249.jpeg 450w" sizes="(max-width: 693px) 100vw, 693px" /><p style="text-align: justify;"><span style="font-size: 12pt;"><strong><span style="font-size: 18pt;">ಎ</span></strong>ಲ್ಲಿ ಮಡಿವಂತಿಕೆ ಅಧಿಕವಾಗಿರುತ್ತೋ ಅಲ್ಲಿಯೇ ನಾನಾ ಬಯಕೆಗಳು ಥರ ಥರದ ಮುಖವಾಡ ತೊಟ್ಟು ಕೂತಿರುತ್ವೆ. ಭಾರತದಲ್ಲಿಯಂತೂ (india) ನಾನಾ ವಿಚಾರಗಳಲ್ಲಿ ಇಂಥಾ ಮಡಿವಂತಿಕೆ ತೀವ್ರವಾಗಿದೆ. ಹಾಗಿರುವಾಗ ಕಾಮದ (sex) ಬಗ್ಗೆ ಇಲ್ಲಿ ಬಿಡು ಬೀಸಾಗಿ ಮಾತಾಡೋದು ಕೊಂಚ ಕಷ್ಟ. ಆದ್ರೆ ಜನಸಂಖ್ಯೆ ಮಾತ್ರ ಇಡೀ ವಿಶ್ವಕ್ಕೇ ಸೆಡ್ಡು ಹೊಡೆಯುವಂತೆ ಬೆಳೆಯುತ್ತಲೇ ಇದೆ. ಇದರಾಚೆಗೆ ಮೈಥುನದ ಬಗ್ಗೆ ಅತೀವ ಆಸಕ್ತಿ ಹೊಂದಿರೋ ಮಂದಿಯ ಪಾಲಿಗೆ ಇತ್ತೀಚಿನ ದಿನಗಳಲ್ಲಿ ನೀಲಿ ಚಿತ್ರಗಳು ವರದಾನವಾಗಿವೆ.</span></p>
<p style="text-align: justify;"><img loading="lazy" decoding="async" class="alignnone wp-image-13507" src="https://www.shodhanews.com/wp-content/uploads/2023/04/download-11-1.jpeg" alt="" width="1024" height="767" srcset="https://www.shodhanews.com/wp-content/uploads/2023/04/download-11-1.jpeg 259w, https://www.shodhanews.com/wp-content/uploads/2023/04/download-11-1-150x112.jpeg 150w" sizes="(max-width: 1024px) 100vw, 1024px" /><span style="font-size: 12pt;">ಇಂಥಾ ನೀಲಿ ಚಿತ್ರಗಳನ್ನ (porn sites) ಹುಡುಕಾಡಿ ನೋಡೋ ದೇಶಗಳ ಲಿಸ್ಟಿನಲ್ಲಿ ನಮಗೂ ಅಗ್ರ ಸ್ಥಾನವಿದೆ. ಅದರಲ್ಲಿ ಲಿಂಗಾಧಾರಿತ ಸರ್ವೆಗಳು ನಡೆದಾಗ ಹೆಂಗಳೆಯ ಪಾಲೂ ಮಹತ್ತರವಾಗಿರೋ ವಿಚಾರ ಬಯಲಾಗಿದೆ. ಅದರರ್ಥ ನೀಲಿ ಚಿತ್ರಗಳತ್ತ ವಯೋಮಾನದ ಹಂಗಿಲ್ಲದೆ ಜನ ವಾಲಿಕೊಂಡಿದ್ದಾರನ್ನೋದು. ಹೀಗೆ ನೀಲಿ ಚಿತ್ರಗಳನ್ನ ನೋಡೋದನ್ನೇ ಚಟವಾಗಿಸಿಕೊಂಡರೆ ಅದರಿಂದ ಮನೋ ದೈಹಿಕವಾಗಿ ಒಂದಷ್ಟು ಅಡ್ಡಪರಿಣಾಮಗಳಾಗುತ್ತವೆ.</span></p>
<p style="text-align: justify;"><img loading="lazy" decoding="async" class="alignnone wp-image-13508" src="https://www.shodhanews.com/wp-content/uploads/2023/04/images-2-1.jpeg" alt="" width="1024" height="573" srcset="https://www.shodhanews.com/wp-content/uploads/2023/04/images-2-1.jpeg 300w, https://www.shodhanews.com/wp-content/uploads/2023/04/images-2-1-150x84.jpeg 150w" sizes="(max-width: 1024px) 100vw, 1024px" /><span style="font-size: 12pt;">ಹಾಗಂತ ನೀಲಿ ಚಿತ್ರಗಳಿಂದ ಮನಸಿಗೆ, ದೇಹಕ್ಕೆ ಮಾತ್ರವೇ ಪರಿಣಾಮವಾಗುತ್ತೆ ಅಂದುಕೊಳ್ಳುವಂತಿಲ್ಲ. ಅದರಿಂದ ನಿಮ್ಮ ಮೊಬೈಲು, ಕಂಪ್ಯೂಟರ್, ಲ್ಯಾಪ್&#x200d;ಟಾಪ್&#x200d;ಗಳು ವೈರಸ್ ದಾಳಿಗೀಡಾಗಬಹುದು. ನಿಮ್ಮ ಫೈಲುಗಳೆಲ್ಲ ಸರ್ವನಾಶವಾಗಿ ಜುಟ್ಟು ಕೆದರಿಕೊಳ್ಳುವ ಸ್ಥಿತಿಯೂ ಎದುರಾಗಬಹುದು. ಇತ್ತೀಚೆಗೆ ನಡೆದಿರೋ ಕೆಲ ಶೋಧನೆಗಳು ಇಂಥಾದದ್ದೊಂದು ಎಚ್ಚರಿಕೆಯನ್ನ ರವಾನಿಸಿವೆ.</span></p>
<p style="text-align: justify;"><img loading="lazy" decoding="async" class="alignnone wp-image-13509" src="https://www.shodhanews.com/wp-content/uploads/2023/04/images-1-1.jpeg" alt="" width="1024" height="588" srcset="https://www.shodhanews.com/wp-content/uploads/2023/04/images-1-1.jpeg 296w, https://www.shodhanews.com/wp-content/uploads/2023/04/images-1-1-150x86.jpeg 150w" sizes="(max-width: 1024px) 100vw, 1024px" /><span style="font-size: 12pt;">ಇಂಥಾ ಪಾರ್ನ್ ಸೈಟ್&#x200d;ಗಳು ನಾಯಿ ಕೊಡೆಗಳಂತೆ ಹಬ್ಬಿಕೊಂಡಿವೆ. ಅಂಥವೆಲ್ಲ ಭಾರೀ ಪ್ರಮಾಣದಲ್ಲಿ ಕಮಾಯಿಯನ್ನೂ ಮಾಡಿಕೊಳ್ಳುತ್ತಿವೆ. ಇಂಥವಕ್ಕೆ ಕಾನೂನು ಕಟ್ಟಳೆಗಳ ಬಂಧವಿದ್ದರೂ ಬಿಂದಾಸಾಗಿಯೇ ಕಾರ್ಯ ನಿರ್ವಹಿಸುತ್ತಿವೆ. ಇಂಥವೆಲ್ಲ ಬೇಕೆಂದೇ ವೈರಸ್ ಹಬ್ಬಿಸೋ ಕೆಲಸವನ್ನೂ ಮಾಡ್ತಿವೆಯಂತೆ. ಈ ಮೂಲಕವೇ ಆಂಟಿ ವೈರಸ್ ಕಂಪೆನಿಗಳಿಗೆ ಸಹಕಾರಿಯಾಗಿಯೂ ನಡೆದುಕೊಳ್ತಿವೆಯಂತೆ. ಇಂಥಾ ಪಾರ್ನ್ ವೆಬ್&#x200d;ಸೈಟ್&#x200d;ಗಳಲ್ಲಿ ಕೆಲವೊಮ್ಮೆ ಸಿಸ್ಟಮ್ ಅನ್ನು ಸರ್ವನಾಶ ಮಾಡಿ ಬಿಡಬಲ್ಲ ರಕ್ಕಸ ವೈರಸ್&#x200d;ಗಳೂ ದಾಳಿಯಿಡುತ್ತವೆ ಅಂತ ವರದಿಗಳು ಹೇಳುತ್ತಿವೆ. </span></p>
<p>The post <a href="https://www.shodhanews.com/deadly-virus-2023-29-04/">deadly virus: ಅಂಥಾ ಸಿನಿಮಾ ಪ್ರಿಯರು ಇದನ್ನೊಮ್ಮೆ ಓದಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>covid19: ಸಾವಿನ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ!</title>
		<link>https://www.shodhanews.com/corona-hike-in-delhi-2023-29-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 29 Apr 2023 09:13:13 +0000</pubDate>
				<category><![CDATA[ರಾಷ್ಟ್ರ]]></category>
		<category><![CDATA[#coronavirus]]></category>
		<category><![CDATA[#deathratehike]]></category>
		<category><![CDATA[#delhi]]></category>
		<category><![CDATA[#india]]></category>
		<category><![CDATA[#shodhanews]]></category>
		<guid isPermaLink="false">https://www.shodhanews.com/?p=13481</guid>

					<description><![CDATA[<p><img width="693" height="384" src="https://www.shodhanews.com/wp-content/uploads/2023/04/4a823b6f-8875-4b2c-8d10-a74cad6c021e.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/4a823b6f-8875-4b2c-8d10-a74cad6c021e.jpeg 693w, https://www.shodhanews.com/wp-content/uploads/2023/04/4a823b6f-8875-4b2c-8d10-a74cad6c021e-150x83.jpeg 150w, https://www.shodhanews.com/wp-content/uploads/2023/04/4a823b6f-8875-4b2c-8d10-a74cad6c021e-450x249.jpeg 450w" sizes="(max-width: 693px) 100vw, 693px" />ಕೊರೋನಾ (corona) ಕರಾಳ ಪರ್ವವೊಂದನ್ನು ಪ್ರಯಾಸ ಪಟ್ಟು ದಾಟಿಕೊಂಡ ಖುಷಿ ದೇಶವಾಸಿಗಳನ್ನು ಆವರಿಸಕೊಂಡಿದೆ. ಬಹುತೇಕ ಎಲ್ಲರೂ ಕೂಡಾ ಈ ಮಹಾಮಾರಿ ಶಾಶ್ವತವಾಗಿ ತೊಲಗಿತೆಂಬಂತೆ ನಿರಾಳವಾಗಿದ್ದಾರೆ. ಆದರೆ, ಆಗಾಗ ಕೊರೋನಾ ಮಾರಿ (pendamic) ನಾನಾ ಸ್ವರೂಪಗಳಲ್ಲಿ ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಿದೆ. ಈ ಮೂಲಕ ಮತ್ತೆ ಭಯದ ನಗಾರಿ ಹೊಡೆದುಕೊಳ್ಳುವಂತೆ ಮಾಡುತ್ತಿದೆ. ಕೆಲವೊಮ್ಮೆ ಬೇರ್ಯಾವ ಸುದ್ದಿಗಳಿಗೂ ದಿಕ್ಕಿಲ್ಲದಿದ್ದಾಗ ಮಾಧ್ಯಮ (media) ಮಂದಿ ಕೊರೋನಾ ಹುಳ ಬಿಡುತ್ತಾರೆಂಬ ಆರೋಪವೂ ಸಾರ್ವಜನಿಕ ವಲಯದಲ್ಲಿದೆ. ಆದರೀಗ ದೆಹಲಿಯಲ್ಲಿ ಕೊರೋನಾ (corona virus) ಪೀಡಿತರ [...]</p>
<p>The post <a href="https://www.shodhanews.com/corona-hike-in-delhi-2023-29-04/">covid19: ಸಾವಿನ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="693" height="384" src="https://www.shodhanews.com/wp-content/uploads/2023/04/4a823b6f-8875-4b2c-8d10-a74cad6c021e.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/4a823b6f-8875-4b2c-8d10-a74cad6c021e.jpeg 693w, https://www.shodhanews.com/wp-content/uploads/2023/04/4a823b6f-8875-4b2c-8d10-a74cad6c021e-150x83.jpeg 150w, https://www.shodhanews.com/wp-content/uploads/2023/04/4a823b6f-8875-4b2c-8d10-a74cad6c021e-450x249.jpeg 450w" sizes="(max-width: 693px) 100vw, 693px" /><p style="text-align: justify;"><strong><span style="font-size: 18pt;">ಕೊ</span></strong>ರೋನಾ (corona) ಕರಾಳ ಪರ್ವವೊಂದನ್ನು ಪ್ರಯಾಸ ಪಟ್ಟು ದಾಟಿಕೊಂಡ ಖುಷಿ ದೇಶವಾಸಿಗಳನ್ನು ಆವರಿಸಕೊಂಡಿದೆ. ಬಹುತೇಕ ಎಲ್ಲರೂ ಕೂಡಾ ಈ ಮಹಾಮಾರಿ ಶಾಶ್ವತವಾಗಿ ತೊಲಗಿತೆಂಬಂತೆ ನಿರಾಳವಾಗಿದ್ದಾರೆ. ಆದರೆ, ಆಗಾಗ ಕೊರೋನಾ ಮಾರಿ (pendamic) ನಾನಾ ಸ್ವರೂಪಗಳಲ್ಲಿ ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಿದೆ. ಈ ಮೂಲಕ ಮತ್ತೆ ಭಯದ ನಗಾರಿ ಹೊಡೆದುಕೊಳ್ಳುವಂತೆ ಮಾಡುತ್ತಿದೆ. ಕೆಲವೊಮ್ಮೆ ಬೇರ್ಯಾವ ಸುದ್ದಿಗಳಿಗೂ ದಿಕ್ಕಿಲ್ಲದಿದ್ದಾಗ ಮಾಧ್ಯಮ (media) ಮಂದಿ ಕೊರೋನಾ ಹುಳ ಬಿಡುತ್ತಾರೆಂಬ ಆರೋಪವೂ ಸಾರ್ವಜನಿಕ ವಲಯದಲ್ಲಿದೆ. ಆದರೀಗ ದೆಹಲಿಯಲ್ಲಿ ಕೊರೋನಾ (corona virus) ಪೀಡಿತರ ಸಂಖ್ಯೆ ಏರುಗತಿ ಕಾಣುತ್ತಿರೋದು ಇಡೀ ದೇಶವನ್ನೇ ದಿಗಿಲಾಗಿಸಿಬಿಟ್ಟಿದೆ. ಇದೀಗ ದೆಹಲಿಯಲ್ಲಿ (delhi) ಸಾವಿನ ಸಂಖ್ಯೆಯಲ್ಲಿಯೂ ತೀವ್ರಗತಿಯಲ್ಲಿ ಏರಿಕೆ ಕಂಡಿದೆ!</p>
<p style="text-align: justify;"><img loading="lazy" decoding="async" class="alignnone size-medium wp-image-13486" src="https://www.shodhanews.com/wp-content/uploads/2023/04/COVID-19-6_d-800x450.webp" alt="" width="800" height="450" srcset="https://www.shodhanews.com/wp-content/uploads/2023/04/COVID-19-6_d-800x450.webp 800w, https://www.shodhanews.com/wp-content/uploads/2023/04/COVID-19-6_d-1024x576.webp 1024w, https://www.shodhanews.com/wp-content/uploads/2023/04/COVID-19-6_d-768x432.webp 768w, https://www.shodhanews.com/wp-content/uploads/2023/04/COVID-19-6_d-150x84.webp 150w, https://www.shodhanews.com/wp-content/uploads/2023/04/COVID-19-6_d-450x253.webp 450w, https://www.shodhanews.com/wp-content/uploads/2023/04/COVID-19-6_d-1200x675.webp 1200w, https://www.shodhanews.com/wp-content/uploads/2023/04/COVID-19-6_d.webp 1280w" sizes="(max-width: 800px) 100vw, 800px" />ದೆಹಲಿಯಲ್ಲಿ ಆಗಾಗ ಕೊರೋನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಾ ಬಂದಿದ್ದಾವೆ. ಆದರೆ ಈಗ ಕಂಡು ಬಂದಿರುವಷ್ಟು ಪ್ರಮಾಣದ ಪೀಡಿತರ ಸಂಖ್ಯೆ ಲಾಕ್&#x200d;ಡೌನ್ ಮುಗಿದ ನಂತಗರದಲ್ಲಿ ಹಿಂದ್ಯಾವತ್ತೂ ಕಾಣಿಸಿರಲಿಲ್ಲ. ಈಗ್ಗೆ ತಿಂಗಳಿಂದೀಚೆಗೆ ಕೊರೋನಾ ಕಾಣಿಸಿಕೊಂಡಿತ್ತಾದರೂ, ಇತ್ತೀಚೆಗೆ ಒಂದೇ ದಿನದಲ್ಲಿ ದೆಹಲಿ ನಗರದಲ್ಲಿ ಸಾವಿದರ ಆರುನೂರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ. ಈ ಮೂಲಕ ಪಾಸಿಟಿವಿಟಿ ರೇಟ್ ಕೂಡಾ ಏಕಾಏಕಿ ಏರುಗತಿ ಕಂಡಿದೆ.</p>
<p style="text-align: justify;"><img loading="lazy" decoding="async" class="alignnone size-medium wp-image-13487" src="https://www.shodhanews.com/wp-content/uploads/2023/04/Covid-vaccine-3-800x445.jpg" alt="" width="800" height="445" srcset="https://www.shodhanews.com/wp-content/uploads/2023/04/Covid-vaccine-3-800x445.jpg 800w, https://www.shodhanews.com/wp-content/uploads/2023/04/Covid-vaccine-3-1024x569.jpg 1024w, https://www.shodhanews.com/wp-content/uploads/2023/04/Covid-vaccine-3-768x427.jpg 768w, https://www.shodhanews.com/wp-content/uploads/2023/04/Covid-vaccine-3-150x83.jpg 150w, https://www.shodhanews.com/wp-content/uploads/2023/04/Covid-vaccine-3-450x250.jpg 450w, https://www.shodhanews.com/wp-content/uploads/2023/04/Covid-vaccine-3.jpg 1200w" sizes="(max-width: 800px) 100vw, 800px" />ಹೇಳಿಕೇಳಿ ದೆಹಲಿ ಆಗಾಗ ಹಲವಾರು ಹವಾಮಾನ ವೈಪರೀತ್ಯಗಳಿಂದ ಕಂಗಾಲಾಗುವ ನಗರ. ಆದರೀಗ ಅಲ್ಲಿಮ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲ ಝಳವಿದೆ. ಇಂಥಾ ಹೊತ್ತಿನಲ್ಲಿ ನಾನಾ ಥರದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳೋದು ಮಾಮೂಲು. ಅದರಲ್ಲಿ ಜ್ವರವಂತೂ ತೀರಾ ಸಾಮಾನ್ಯ ಕಾಯಿಲೆಯಂತಾಗಿದೆ. ಆದರೆ ದೆಹಲಿ ಮಂದಿಯಲ್ಲಿ ಕಾಣಿಸಿಕೊಂಡ ಜ್ವರ ಅಷ್ಟ ಸಲೀಸಾಗಿ ಜಗ್ಗದೆ ವಾರಗಟ್ಟಲೆ ಳಿದುಕೊಂಇದೆ. ಅದರಲ್ಲನೇಕರನ್ನು ಅನುಮಾನದಿಂದ ತಪಾಸಣೆಗೊಳಪಡಿಸಿದಾಗ ಹೆಚ್ಚಿನ ಮಂದಿ ಕೊರೋನಾ ಬಾಧಿತರಾಗಿರೋದು ಜಾಹೀರಾಗಿದೆ. ಸದ್ಯಕ್ಕೆ ಕೇಜ್ರಿವಾಲ್ ಸರ್ಕಾರಕ್ಕೆ ಕೊರೋನಾ ಸವಾಲೆಸೆದಿದೆ. ಅದರ ಬೆನ್ನಲ್ಲಿಯೇ ರಾಷ್ಟ್ರ ರಾಜಧಾನಿಯಿಂದ ಈ ವೈರಸ್ಸು ಎಲ್ಲ ರಾಜ್ಯಗಳಿಗೂ ಹಬ್ಬಿಕೊಳ್ಳುವ ಭೀತ ವಾತಾವರಣ ಸೃಷ್ಟಿಯಾಗಿದೆ.</p>
<p>The post <a href="https://www.shodhanews.com/corona-hike-in-delhi-2023-29-04/">covid19: ಸಾವಿನ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>rafael voltur: ಅದು ಅಳಿವಿನಂಚಿನಲ್ಲಿರೋ ಅಪರೂಪದ ಪಕ್ಷಿ!</title>
		<link>https://www.shodhanews.com/rafael-voltur-2023-23-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sun, 23 Apr 2023 09:52:11 +0000</pubDate>
				<category><![CDATA[ಜಾಗತಿಕ]]></category>
		<category><![CDATA[#london]]></category>
		<category><![CDATA[#rafaelvoltur]]></category>
		<category><![CDATA[#shodhanews]]></category>
		<guid isPermaLink="false">https://www.shodhanews.com/?p=13422</guid>

					<description><![CDATA[<p><img width="1600" height="899" src="https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e.jpeg 1600w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-800x450.jpeg 800w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-1024x575.jpeg 1024w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-768x432.jpeg 768w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-1536x863.jpeg 1536w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-150x84.jpeg 150w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-450x253.jpeg 450w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-1200x674.jpeg 1200w" sizes="(max-width: 1600px) 100vw, 1600px" />ನಮ್ಮೆಲ್ಲರ ದುರಾಸೆಯ ದೆಸೆಯಿಂದಾಗಿ ಒಂದು ಕಡೆಯಿಂದ ಕಾಡುಗಳೆಲ್ಲ (forrest) ನಾಶವಾಗುತ್ತಿವೆ. ಅದೆಷ್ಟೋ ಶತಮಾನಗಳಿಂದ ತಂತಾನೇ ಧ್ಯಾನಸ್ಥವಾಗಿ ಬೆಳೆದಿದ್ದ ಕಾಡು, ಅದರೊಳಗಿರುವ ಅಂದಾಜಿಗೆ ನಿಲುಕದ ಅಸಂಖ್ಯ ಜೀವ ಸಂಕುಲಗಳೆಲ್ಲವೂ ಅವಸಾನ ಹೊಂದಿವೆ. ದುರಂತವೆಂದರೆ, ಒಂದು ಕಡೆಯಿಂದ ಹೊಸ ಹೊಸಾ ಜೀವಿಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಚಿರಪರಿಚಿತ ಜೀವಿಗಳೇ ಶಾಶ್ವತವಾಗಿ ಇನ್ನಿಲ್ಲವಾಗುತ್ತಿವೆ. ಹಾಗೆ ಮರೆಯಾದ, ಅದರ ಅಂಚಿನಲ್ಲಿರುವ ಜೀವಿಗಳಿಗೆ ಸಾವಿರ ಉದಾಹರಣೆಗಳನ್ನು ಕೊಡಬಹುದು. ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳೋದು (rafael voltur) ರಾಫೆಪ್ ಗ್ರಿಫನ್! ಇದು ಭಯಾನಕವಾದ [...]</p>
<p>The post <a href="https://www.shodhanews.com/rafael-voltur-2023-23-04/">rafael voltur: ಅದು ಅಳಿವಿನಂಚಿನಲ್ಲಿರೋ ಅಪರೂಪದ ಪಕ್ಷಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1600" height="899" src="https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e.jpeg 1600w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-800x450.jpeg 800w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-1024x575.jpeg 1024w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-768x432.jpeg 768w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-1536x863.jpeg 1536w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-150x84.jpeg 150w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-450x253.jpeg 450w, https://www.shodhanews.com/wp-content/uploads/2023/04/40ee190a-c782-4fb1-9ae1-d0f21e05bc3e-1200x674.jpeg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong><span style="font-size: 18pt;">ನ</span></strong>ಮ್ಮೆಲ್ಲರ ದುರಾಸೆಯ ದೆಸೆಯಿಂದಾಗಿ ಒಂದು ಕಡೆಯಿಂದ ಕಾಡುಗಳೆಲ್ಲ (forrest) ನಾಶವಾಗುತ್ತಿವೆ. ಅದೆಷ್ಟೋ ಶತಮಾನಗಳಿಂದ ತಂತಾನೇ ಧ್ಯಾನಸ್ಥವಾಗಿ ಬೆಳೆದಿದ್ದ ಕಾಡು, ಅದರೊಳಗಿರುವ ಅಂದಾಜಿಗೆ ನಿಲುಕದ ಅಸಂಖ್ಯ ಜೀವ ಸಂಕುಲಗಳೆಲ್ಲವೂ ಅವಸಾನ ಹೊಂದಿವೆ. ದುರಂತವೆಂದರೆ, ಒಂದು ಕಡೆಯಿಂದ ಹೊಸ ಹೊಸಾ ಜೀವಿಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಚಿರಪರಿಚಿತ ಜೀವಿಗಳೇ ಶಾಶ್ವತವಾಗಿ ಇನ್ನಿಲ್ಲವಾಗುತ್ತಿವೆ. ಹಾಗೆ ಮರೆಯಾದ, ಅದರ ಅಂಚಿನಲ್ಲಿರುವ ಜೀವಿಗಳಿಗೆ ಸಾವಿರ ಉದಾಹರಣೆಗಳನ್ನು ಕೊಡಬಹುದು. ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳೋದು (rafael voltur) ರಾಫೆಪ್ ಗ್ರಿಫನ್!</span></p>
<p style="text-align: justify;"><img loading="lazy" decoding="async" class="alignnone size-full wp-image-13427" src="https://www.shodhanews.com/wp-content/uploads/2023/04/Buitre-leonado-YAN1.jpg" alt="" width="800" height="531" srcset="https://www.shodhanews.com/wp-content/uploads/2023/04/Buitre-leonado-YAN1.jpg 800w, https://www.shodhanews.com/wp-content/uploads/2023/04/Buitre-leonado-YAN1-768x510.jpg 768w, https://www.shodhanews.com/wp-content/uploads/2023/04/Buitre-leonado-YAN1-150x100.jpg 150w, https://www.shodhanews.com/wp-content/uploads/2023/04/Buitre-leonado-YAN1-450x299.jpg 450w" sizes="(max-width: 800px) 100vw, 800px" /><span style="font-size: 12pt;">ಇದು ಭಯಾನಕವಾದ ರಣಹದ್ದುಗಳ ಸಂಕುಲಕ್ಕೆ ಸೇರಿದ್ದೊಂದು ವಿಶಿಷ್ಟ ಪ್ರಬೇಧ. ಯಾವುದೇ ಭೂಭಾಗಗಳಲ್ಲಾದರೂ ಆಹಾರ ಸರಪಳಿಯ ಮತೋಲನ ಕಾಯ್ದುಕೊಳ್ಳುವ ಕ್ರಿಯೆಯಲ್ಲಿ ಹದ್ದುಗಳ ಪಾತ್ರ ಮಹತ್ವದ್ದು. ಆದರೆ, ನಮ್ಮ ದೇಶವೂ ಸೇರಿದಂತೆ ವಿಶ್ವಾದ್ಯಂತ ನಾನಾ ಪ್ರಬೇಧಗಳ ರಣ ಹದ್ದುಗಳು ಅವಸಾನಗೊಂಡಿವೆ. ಆ ಹಂತದ ಅಂಚಿನಲ್ಲಿರುವ ರಾಫೆಲ್ ಗ್ರಿಫನ್ ರಣಹದ್ದುಗಳು ಲಂಡನ್&#x200d;ನಲ್ಲಿವೆ. ಈ ಬಗೆಯ ರಣ ಹದ್ದಿನ ಸಂತತಿ ಬೆರಳೆಣಿಕೆಯಷ್ಟಿತ್ತು. ಆದ್ದರಿಂದಲೇ ಅದೆಷ್ಟೋ ವರ್ಷಗಳ ಹಿಂದೆಯೇ ಈ ರಣಹದ್ದುಗಳನ್ನು ಲಂಡನ್ನಿನ ಮೃಗಾಲಯವೊಂದರಲ್ಲಿ ಜತನದಿಂದ ಕಾಪಾಡಿಕೊಂಡು ಬರಲಾಗಿತ್ತು. ಕಡೆಗೂ ಆ ಶ್ರಮವೀಗ ಫಲ ಕೊಟ್ಟಿದೆ; ಕೃತಕ ಕಾವಿನ ಮೂಲಕ ರಾಫೆಲ್ ಗ್ರಿಫನ್ ರಣಹದ್ದಿನ ಮರಿ ಮೊಟ್ಟೆಯೊಡೆದು ಹೊರ ಬರುವ ಮೂಲಕ!</span></p>
<p style="text-align: justify;"><img loading="lazy" decoding="async" class="alignnone wp-image-13428" src="https://www.shodhanews.com/wp-content/uploads/2023/04/download-5-2.jpeg" alt="" width="1024" height="681" srcset="https://www.shodhanews.com/wp-content/uploads/2023/04/download-5-2.jpeg 275w, https://www.shodhanews.com/wp-content/uploads/2023/04/download-5-2-150x100.jpeg 150w" sizes="(max-width: 1024px) 100vw, 1024px" /><span style="font-size: 12pt;">ಗ್ರಿಫನ್ ಹದ್ದಿನ ಸಂತತಿಯನ್ನು ವೃದ್ಧಿಸಬೇಕೆಂಬ ಕಾರಣದಿಂದಲೇ ಸರಿ ಮೃಗಾಲಯದಲ್ಲಿ ಅವುಗಳನ್ನು ಸಂರಕ್ಷಿಸಲಾಗಿತ್ತು. ಆದರೆ ಅದೆಷ್ಟೇ ಎಚ್ಚರದಿಂದ ಕಾದರೂ ಕೂಡಾ ಅವುಗಳು ಮೊಟ್ಟೆಯೊಡೆದು ಮರಿ ಮಾಡುತ್ತಿರಲಿಲ್ಲ. ಒಂದಲ್ಲ ಎರಡಲ್ಲ&#8230; ಭರ್ತಿ ನಲವತ್ತು ವರ್ಷಗಳಷ್ಟು ಕಾಲನ ಈ ಝೂನ ಸಿಬ್ಬಂದಿಗಳು, ತಜ್ಞರು ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಮರಿ ಮಾಡಸಲು ಸಾಧ್ಯವಾಗಿರಲಿಲ್ಲ. ಕಡೆಗೂ ಹ್ಯಾಚರ್ ಮೂಲಕ ಮೊಟ್ಟೆಯೊಡೆಸಲಾಗಿದೆ. ಕಡೆಗೂ ನಲವತ್ತು ವರ್ಷಗಳ ನಂತರ ರಾಫೆಲ್ ಗ್ರಿಫನ್ ರಣಹದ್ದಿನ ಮರಿಯೊಂದು ಹೊರ ಬಂದಂತಾಗಿದೆ.</span></p>
<p style="text-align: justify;"><img loading="lazy" decoding="async" class="alignnone wp-image-13429" src="https://www.shodhanews.com/wp-content/uploads/2023/04/download-6-2.jpeg" alt="" width="1024" height="827" srcset="https://www.shodhanews.com/wp-content/uploads/2023/04/download-6-2.jpeg 250w, https://www.shodhanews.com/wp-content/uploads/2023/04/download-6-2-150x121.jpeg 150w" sizes="(max-width: 1024px) 100vw, 1024px" /><span style="font-size: 12pt;">ಹುಟ್ಟುತ್ತಲೇ 112 ಗ್ರಾಂನಷ್ಟಿದ್ದ ಈ ಮರಿಯನ್ನು ಅತ್ಯಂತ ಸೂಕ್ಷ್ಮವಾಗಿ ಕಾಪಾಡಿಕೊಳ್ಳಲಾಗುತ್ತಿದೆ. ಆರೋಗ್ಯವಂತವಾಗಿರುವ ಈ ಮರಿ ಬದುಕುಳಿಯುತ್ತದೆಂದು ತಜ್ಞರು ಭರವಸೆ ನೀಡಿದ್ದಾರಂತೆ. ಅಂದಹಾಗೆ, ರಾಫೆಲ್ ಗ್ರಿಫನ್ ರಣಹದ್ದು ಹದ್ದುಗಳ ಅಷ್ಟೂ ಪ್ರಬೇಧಗಳಲ್ಲಿ ಅತ್ಯಂತ ಬಲಿಷ್ಟವಾಗಿವೆ. ಅವು ಲಂಡನ್ನನ್ನು ಹೊರತು ಪಡಿಸಿ ಬೇರ್ಯಾವ ಭೂಭಾಗಗಳಲ್ಲಿಯೂ ಕಂಡು ಬರುವುದಿಲ್ಲ. ಅವು ಸಮುದ್ರ ಮಟ್ಟದಿಂದ 11.300 ಮೀಟರ್ ಎತ್ತರ ಹಾರಬಲ್ಲವು. ಅಲ್ಲಿಂದಲೇ ಬೇಟೆಯನ್ನು ಹುಡುಕಿ, ಕ್ಷಣಾರ್ಧದಲ್ಲಿ ಮೇಲೆರಗಿ ಆಹಾರ ಕಂಡುಕೊಳ್ಳಬಲ್ಲ ಜಾಣ್ಮೆ ರಾಫೆಲ್&#x200d;ಗಳಿಗಿದೆ. ಇಂಥಾ ಅಪರೂಪದ ಪ್ರಬೇಧವನ್ನು ಸಂರಕ್ಷಣೆ ಮಾಡಿದ ಖುಷಿ ಲಂಡನ್ನಿನ ಝೂನ ಸಿಬ್ಬಂದಿ ಮತ್ತು ತಜ್ಞ ವರ್ಗಕ್ಕಿದೆ. ಅದು ಜಗತ್ತಿನ ಎಲ್ಲ ಪಕ್ಷಿ ಪ್ರೇಮಿಗಳು, ಪರಿಸರ ಪ್ರೇಮಿಗಳ ಪಾಲಿಗೂ ಖುಷಿಯ ಸಂಗತಿ ಎಂದರೂ ತಪ್ಪೇನಿಲ್ಲ!</span></p>
<p>The post <a href="https://www.shodhanews.com/rafael-voltur-2023-23-04/">rafael voltur: ಅದು ಅಳಿವಿನಂಚಿನಲ್ಲಿರೋ ಅಪರೂಪದ ಪಕ್ಷಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>delhi corona virus: ನಡು ಬೇಸಗೆಯಲ್ಲಿ ಭುಗಿಲೆದ್ದಿತು ವೈರಸ್!</title>
		<link>https://www.shodhanews.com/corona-virus-hike-in-delhi-2023-21-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 21 Apr 2023 08:25:19 +0000</pubDate>
				<category><![CDATA[ರಾಷ್ಟ್ರ]]></category>
		<category><![CDATA[#coronavirus]]></category>
		<category><![CDATA[#covid19]]></category>
		<category><![CDATA[#dehli]]></category>
		<category><![CDATA[#shodhanews]]></category>
		<guid isPermaLink="false">https://www.shodhanews.com/?p=13328</guid>

					<description><![CDATA[<p><img width="1280" height="720" src="https://www.shodhanews.com/wp-content/uploads/2023/04/1895e1bf-f24b-45fb-8d55-8991c296734c.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/1895e1bf-f24b-45fb-8d55-8991c296734c.jpeg 1280w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-800x450.jpeg 800w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-1024x576.jpeg 1024w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-768x432.jpeg 768w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-150x84.jpeg 150w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-450x253.jpeg 450w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-1200x675.jpeg 1200w" sizes="(max-width: 1280px) 100vw, 1280px" />delhi: ಕೊರೋನಾ ಕರಾಳ ಪರ್ವವೊಂದನ್ನು ಪ್ರಯಾಸ ಪಟ್ಟು ದಾಟಿಕೊಂಡ ಖುಷಿ ದೇಶವಾಸಿಗಳನ್ನು ಆವರಿಸಕೊಂಡಿದೆ. ಬಹುತೇಕ ಎಲ್ಲರೂ ಕೂಡಾ ಈ ಮಹಾಮಾರಿ ಶಾಶ್ವತವಾಗಿ ತೊಲಗಿತೆಂಬಂತೆ ನಿರಾಳವಾಗಿದ್ದಾರೆ. ಆದರೆ, ಆಗಾಗ ಕೊರೋನಾ ಮಾರಿ ನಾನಾ ಸ್ವರೂಪಗಳಲ್ಲಿ ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಿದೆ. ಈ ಮೂಲಕ ಮತ್ತೆ ಭಯದ ನಗಾರಿ ಹೊಡೆದುಕೊಳ್ಳುವಂತೆ ಮಾಡುತ್ತಿದೆ. ಕೆಲವೊಮ್ಮೆ ಬೇರ್ಯಾವ ಸುದ್ದಿಗಳಿಗೂ ದಿಕ್ಕಿಲ್ಲದಿದ್ದಾಗ ಮಾಧ್ಯಮ ಮಂದಿ ಕೊರೋನಾ ಹುಳ ಬಿಡುತ್ತಾರೆಂಬ ಆರೋಪವೂ ಸಾರ್ವಜನಿಕ ವಲಯದಲ್ಲಿದೆ. ಆದರೀಗ ದೆಹಲಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಏರುಗತಿ ಕಾಣುತ್ತಿರೋದು ಇಡೀ [...]</p>
<p>The post <a href="https://www.shodhanews.com/corona-virus-hike-in-delhi-2023-21-04/">delhi corona virus: ನಡು ಬೇಸಗೆಯಲ್ಲಿ ಭುಗಿಲೆದ್ದಿತು ವೈರಸ್!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1280" height="720" src="https://www.shodhanews.com/wp-content/uploads/2023/04/1895e1bf-f24b-45fb-8d55-8991c296734c.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/1895e1bf-f24b-45fb-8d55-8991c296734c.jpeg 1280w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-800x450.jpeg 800w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-1024x576.jpeg 1024w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-768x432.jpeg 768w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-150x84.jpeg 150w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-450x253.jpeg 450w, https://www.shodhanews.com/wp-content/uploads/2023/04/1895e1bf-f24b-45fb-8d55-8991c296734c-1200x675.jpeg 1200w" sizes="(max-width: 1280px) 100vw, 1280px" /><p style="text-align: justify;"><span style="font-size: 12pt;"><strong>delhi:</strong> ಕೊರೋನಾ ಕರಾಳ ಪರ್ವವೊಂದನ್ನು ಪ್ರಯಾಸ ಪಟ್ಟು ದಾಟಿಕೊಂಡ ಖುಷಿ ದೇಶವಾಸಿಗಳನ್ನು ಆವರಿಸಕೊಂಡಿದೆ. ಬಹುತೇಕ ಎಲ್ಲರೂ ಕೂಡಾ ಈ ಮಹಾಮಾರಿ ಶಾಶ್ವತವಾಗಿ ತೊಲಗಿತೆಂಬಂತೆ ನಿರಾಳವಾಗಿದ್ದಾರೆ. ಆದರೆ, ಆಗಾಗ ಕೊರೋನಾ ಮಾರಿ ನಾನಾ ಸ್ವರೂಪಗಳಲ್ಲಿ ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಿದೆ. ಈ ಮೂಲಕ ಮತ್ತೆ ಭಯದ ನಗಾರಿ ಹೊಡೆದುಕೊಳ್ಳುವಂತೆ ಮಾಡುತ್ತಿದೆ. ಕೆಲವೊಮ್ಮೆ ಬೇರ್ಯಾವ ಸುದ್ದಿಗಳಿಗೂ ದಿಕ್ಕಿಲ್ಲದಿದ್ದಾಗ ಮಾಧ್ಯಮ ಮಂದಿ ಕೊರೋನಾ ಹುಳ ಬಿಡುತ್ತಾರೆಂಬ ಆರೋಪವೂ ಸಾರ್ವಜನಿಕ ವಲಯದಲ್ಲಿದೆ. ಆದರೀಗ ದೆಹಲಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಏರುಗತಿ ಕಾಣುತ್ತಿರೋದು ಇಡೀ ದೇಶವನ್ನೇ ದಿಗಿಲಾಗಿಸಿಬಿಟ್ಟಿದೆ!</span></p>
<p style="text-align: justify;"><img loading="lazy" decoding="async" class="alignnone size-medium wp-image-13333" src="https://www.shodhanews.com/wp-content/uploads/2023/04/delhi-covid-800x450.jpg" alt="" width="800" height="450" srcset="https://www.shodhanews.com/wp-content/uploads/2023/04/delhi-covid-800x450.jpg 800w, https://www.shodhanews.com/wp-content/uploads/2023/04/delhi-covid-1024x576.jpg 1024w, https://www.shodhanews.com/wp-content/uploads/2023/04/delhi-covid-768x432.jpg 768w, https://www.shodhanews.com/wp-content/uploads/2023/04/delhi-covid-150x84.jpg 150w, https://www.shodhanews.com/wp-content/uploads/2023/04/delhi-covid-450x253.jpg 450w, https://www.shodhanews.com/wp-content/uploads/2023/04/delhi-covid-1200x675.jpg 1200w, https://www.shodhanews.com/wp-content/uploads/2023/04/delhi-covid.jpg 1280w" sizes="(max-width: 800px) 100vw, 800px" /><span style="font-size: 12pt;">ದೆಹಲಿಯಲ್ಲಿ ಆಗಾಗ ಕೊರೋನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಾ ಬಂದಿದ್ದಾವೆ. ಆದರೆ ಈಗ ಕಂಡು ಬಂದಿರುವಷ್ಟು ಪ್ರಮಾಣದ ಪೀಡಿತರ ಸಂಖ್ಯೆ ಲಾಕ್&#x200d;ಡೌನ್ ಮುಗಿದ ನಂತಗರದಲ್ಲಿ ಹಿಂದ್ಯಾವತ್ತೂ ಕಾಣಿಸಿರಲಿಲ್ಲ. ಈಗ್ಗೆ ತಿಂಗಳಿಂದೀಚೆಗೆ ಕೊರೋನಾ ಕಾಣಿಸಿಕೊಂಡಿತ್ತಾದರೂ, ಇತ್ತೀಚೆಗೆ ಒಂದೇ ದಿನದಲ್ಲಿ ದೆಹಲಿ ನಗರದಲ್ಲಿ ಸಾವಿದರ ಆರುನೂರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ. ಈ ಮೂಲಕ ಪಾಸಿಟಿವಿಟಿ ರೇಟ್ ಕೂಡಾ ಏಕಾಏಕಿ ಏರುಗತಿ ಕಂಡಿದೆ.</span></p>
<p style="text-align: justify;"><img loading="lazy" decoding="async" class="alignnone wp-image-13334" src="https://www.shodhanews.com/wp-content/uploads/2023/04/c.jpeg" alt="" width="1024" height="622" srcset="https://www.shodhanews.com/wp-content/uploads/2023/04/c.jpeg 288w, https://www.shodhanews.com/wp-content/uploads/2023/04/c-150x91.jpeg 150w" sizes="(max-width: 1024px) 100vw, 1024px" /><span style="font-size: 12pt;">ಹೇಳಿಕೇಳಿ ದೆಹಲಿ ಆಗಾಗ ಹಲವಾರು ಹವಾಮಾನ ವೈಪರೀತ್ಯಗಳಿಂದ ಕಂಗಾಲಾಗುವ ನಗರ. ಆದರೀಗ ಅಲ್ಲಿಮ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲ ಝಳವಿದೆ. ಇಂಥಾ ಹೊತ್ತಿನಲ್ಲಿ ನಾನಾ ಥರದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳೋದು ಮಾಮೂಲು. ಅದರಲ್ಲಿ ಜ್ವರವಂತೂ ತೀರಾ ಸಾಮಾನ್ಯ ಕಾಯಿಲೆಯಂತಾಗಿದೆ. ಆದರೆ ದೆಹಲಿ ಮಂದಿಯಲ್ಲಿ ಕಾಣಿಸಿಕೊಂಡ ಜ್ವರ ಅಷ್ಟ ಸಲೀಸಾಗಿ ಜಗ್ಗದೆ ವಾರಗಟ್ಟಲೆ ಳಿದುಕೊಂಇದೆ. ಅದರಲ್ಲನೇಕರನ್ನು ಅನುಮಾನದಿಂದ ತಪಾಸಣೆಗೊಳಪಡಿಸಿದಾಗ ಹೆಚ್ಚಿನ ಮಂದಿ ಕೊರೋನಾ ಬಾಧಿತರಾಗಿರೋದು ಜಾಹೀರಾಗಿದೆ. ಸದ್ಯಕ್ಕೆ ಕೇಜ್ರಿವಾಲ್ ಸರ್ಕಾರಕ್ಕೆ ಕೊರೋನಾ ಸವಾಲೆಸೆದಿದೆ. ಅದರ ಬೆನ್ನಲ್ಲಿಯೇ ರಾಷ್ಟ್ರ ರಾಜಧಾನಿಯಿಂದ ಈ ವೈರಸ್ಸು ಎಲ್ಲ ರಾಜ್ಯಗಳಿಗೂ ಹಬ್ಬಿಕೊಳ್ಳುವ ಭೀತ ವಾತಾವರಣ ಸೃಷ್ಟಿಯಾಗಿದೆ.</span></p>
<p style="text-align: justify;">
<p>The post <a href="https://www.shodhanews.com/corona-virus-hike-in-delhi-2023-21-04/">delhi corona virus: ನಡು ಬೇಸಗೆಯಲ್ಲಿ ಭುಗಿಲೆದ್ದಿತು ವೈರಸ್!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>state politics: ಯಡ್ಡಿಯದ್ದು ಅಚಲ ವಿಶ್ವಾಸ!</title>
		<link>https://www.shodhanews.com/ydiyurappa-bjp-2023-18-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 18 Apr 2023 16:57:49 +0000</pubDate>
				<category><![CDATA[ರಾಜ್ಯ]]></category>
		<guid isPermaLink="false">https://www.shodhanews.com/?p=13228</guid>

					<description><![CDATA[<p><img width="1600" height="899" src="https://www.shodhanews.com/wp-content/uploads/2023/04/04923987-bc58-4189-baf5-53cbcc56ed2d.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/04923987-bc58-4189-baf5-53cbcc56ed2d.jpeg 1600w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-800x450.jpeg 800w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-1024x575.jpeg 1024w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-768x432.jpeg 768w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-1536x863.jpeg 1536w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-150x84.jpeg 150w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-450x253.jpeg 450w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-1200x674.jpeg 1200w" sizes="(max-width: 1600px) 100vw, 1600px" />ಸದ್ಯದ ಮಟ್ಟಿಗೆ ಬಿಜೆಪಿ (bjp) ಎಂಬುದು ಅಕ್ಷರಶಃ ಮುರಿದ ಮನೆಯಂತಾಗಿದೆ. ಉತ್ತರದ ಬಿಜೆಪಿ ದೊರೆಗಳ ಸಾರಥ್ಯದಲ್ಲಿ ಅದೆಂಥಾದ್ದೋ ಕ್ರಾಂತಿ ಮಾಡಲು ಹೋಗಿ, ಬಿಜೆಪಿ ಬುಡದಲ್ಲೇ ಕ್ಷಣಕ್ಕೊಂದು ಬಾಂಬುಗಳು ಭಡಾರೆನ್ನಲಾರಂಭಿಸಿವೆ. ಹಾಗೆ ನೋಡಿದರೆ, ದಶಕಗಳ ಹಿಂದಿದ್ದ ಸ್ಥಿತಿಯತ್ತಲೇ ಬಿಜೆಪಿ (bjp) ಭಾರೀ ವೇಗದಿಂದ ಹಿಮ್ಮುಖ ಚಲನೆ ಮಾಡುತ್ತಿರುವಂತೆಯೂ ಭಾಸವಾಗುತ್ತಿದೆ. ಇಂಥಾ ಹೊತ್ತಿನಲ್ಲಿ ಮುರಿದ ಮನೆಯ ಮ್ಲಾನ ವದನದ ಹಿರೀಕನಂತೆ ಕಾಣಿಸುತ್ತಿರುವರು (yadiyurappa) ಯಡಿಯೂರಪ್ಪ. ತಾವೇ ಶ್ರಮ ಪಟ್ಟು ಬೆಳೆಸಿದ ಬಿಜೆಪಿ ತನ್ನ ಕಣ್ಣೆದುರೇ ಮುರುಟಿಕೊಳ್ಳುತ್ತಿರುವ ಧಾರುಣ ಕಂಡು ಮರುಗಲೂ [...]</p>
<p>The post <a href="https://www.shodhanews.com/ydiyurappa-bjp-2023-18-04/">state politics: ಯಡ್ಡಿಯದ್ದು ಅಚಲ ವಿಶ್ವಾಸ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1600" height="899" src="https://www.shodhanews.com/wp-content/uploads/2023/04/04923987-bc58-4189-baf5-53cbcc56ed2d.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/04923987-bc58-4189-baf5-53cbcc56ed2d.jpeg 1600w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-800x450.jpeg 800w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-1024x575.jpeg 1024w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-768x432.jpeg 768w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-1536x863.jpeg 1536w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-150x84.jpeg 150w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-450x253.jpeg 450w, https://www.shodhanews.com/wp-content/uploads/2023/04/04923987-bc58-4189-baf5-53cbcc56ed2d-1200x674.jpeg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong><span style="font-size: 18pt;">ಸ</span></strong>ದ್ಯದ ಮಟ್ಟಿಗೆ ಬಿಜೆಪಿ (bjp) ಎಂಬುದು ಅಕ್ಷರಶಃ ಮುರಿದ ಮನೆಯಂತಾಗಿದೆ. ಉತ್ತರದ ಬಿಜೆಪಿ ದೊರೆಗಳ ಸಾರಥ್ಯದಲ್ಲಿ ಅದೆಂಥಾದ್ದೋ ಕ್ರಾಂತಿ ಮಾಡಲು ಹೋಗಿ, ಬಿಜೆಪಿ ಬುಡದಲ್ಲೇ ಕ್ಷಣಕ್ಕೊಂದು ಬಾಂಬುಗಳು ಭಡಾರೆನ್ನಲಾರಂಭಿಸಿವೆ. ಹಾಗೆ ನೋಡಿದರೆ, ದಶಕಗಳ ಹಿಂದಿದ್ದ ಸ್ಥಿತಿಯತ್ತಲೇ ಬಿಜೆಪಿ (bjp) ಭಾರೀ ವೇಗದಿಂದ ಹಿಮ್ಮುಖ ಚಲನೆ ಮಾಡುತ್ತಿರುವಂತೆಯೂ ಭಾಸವಾಗುತ್ತಿದೆ. ಇಂಥಾ ಹೊತ್ತಿನಲ್ಲಿ ಮುರಿದ ಮನೆಯ ಮ್ಲಾನ ವದನದ ಹಿರೀಕನಂತೆ ಕಾಣಿಸುತ್ತಿರುವರು (yadiyurappa) ಯಡಿಯೂರಪ್ಪ. ತಾವೇ ಶ್ರಮ ಪಟ್ಟು ಬೆಳೆಸಿದ ಬಿಜೆಪಿ ತನ್ನ ಕಣ್ಣೆದುರೇ ಮುರುಟಿಕೊಳ್ಳುತ್ತಿರುವ ಧಾರುಣ ಕಂಡು ಮರುಗಲೂ ಆಗದೆ, ಸಂಭ್ರಮಿಸಲೂ ಆಗದೆ ಯಡ್ಡಿ (yadiyurappa) ವಿಲಗುಡುತ್ತಿದ್ದಾರೆ!</span></p>
<p style="text-align: justify;"><img loading="lazy" decoding="async" class="alignnone wp-image-13233" src="https://www.shodhanews.com/wp-content/uploads/2023/04/yeddyurappa-1477462082.jpg" alt="" width="1024" height="717" srcset="https://www.shodhanews.com/wp-content/uploads/2023/04/yeddyurappa-1477462082.jpg 628w, https://www.shodhanews.com/wp-content/uploads/2023/04/yeddyurappa-1477462082-150x105.jpg 150w, https://www.shodhanews.com/wp-content/uploads/2023/04/yeddyurappa-1477462082-450x315.jpg 450w" sizes="(max-width: 1024px) 100vw, 1024px" /><span style="font-size: 12pt;">ಕಳೆದ ಬಾರಿ ಆಪರೇಷನ್ನಿನ ಮೂಲಕವೇ ಮತ್ತೆ ಸಿಎಂ ಆಗೋ ಆಸೆಯನ್ನು ಪೂರೈಸಿಕೊಂಡಿದ್ದವರು ಯಡಿಯೂರಪ್ಪ. ಈ ಬಾರಿಯಾದರೂ ಕೊಂಚ ನಿರಾಳವಾಗಿ ಅಧಿಕಾರ ನಡೆಸಬೇಕೆಂಬ ಅವರ ಕನಸಿಗೆ ಬಹಳ ಬೇಗನೆ ತಣ್ಣೀರೆರಚಿದಂತಾಗಿತ್ತು. ಖುದ್ದು ಬಿಜೆಪಿಯಲ್ಲಿಯೇ ಅವರನ್ನು ಅಧಿಕಾರದಿಂದಿಳಿಸುವಂಥಾ ಕಸರತ್ತುಗಳು ಚಾಲನೆ ಪಡೆದುಕೊಂಡಿದ್ದವು. ಕಡೆಗೂ ವರ್ಷ ಬಾಕಿ ಇರುವಾಗಲೇ ಯಡಿಯೂರಪ್ಪ ಕಣ್ಣೀರುಗರೆಯುತ್ತಾ ಸಿಎಂ ಕುರ್ಚಿಯಿಂದ ಇಳಿದು ಹೋಗುವಂತಾಗಿತ್ತು. ಈ ಬಾರಿ ವಿಧಾನ ಸಭಾ ಚುನಾವಣೆಯ ಹೊಸ್ತಿಲಿನಲ್ಲಿಯೇ ಯಡ್ಡಿಗೆ ಪಕ್ಷದ ವರಿಷ್ಠರ ಕಡೆಯಿಂದಲೇ ಮತ್ತೊಂದು ಆಘಾತ ಎದುರಾಗಿತ್ತು. ಅದರ ಫಲವಾಗಿಯೇ ಅವರು ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಘೋಷಣಭೆ ಮಾಡುವಂತಾಗಿತ್ತು. ಈ ಬಾರಿಯೂ ಯಡ್ಡಿ ಮಕ್ಕಳನ್ನು ಬಲಿಪಶುವಾಗಿಸುವ ಹುನ್ನಾರಗಳೂ ಕೂಡಾ ನಡೆದಿದ್ದವು.</span></p>
<p style="text-align: justify;"><img loading="lazy" decoding="async" class="alignnone wp-image-13234" src="https://www.shodhanews.com/wp-content/uploads/2023/04/download-7.jpeg" alt="" width="1024" height="575" srcset="https://www.shodhanews.com/wp-content/uploads/2023/04/download-7.jpeg 299w, https://www.shodhanews.com/wp-content/uploads/2023/04/download-7-150x84.jpeg 150w" sizes="(max-width: 1024px) 100vw, 1024px" /><span style="font-size: 12pt;">ಈ ಎಲ್ಲ ವಿಚಾರದಲ್ಲಿ ಖುದ್ದು ಯಡ್ಡಿಗೆ ಸ್ವಪಕ್ಷೀಯರ ಮೇಲೆ ಅಸಾಧ್ಯ ಸಿಟ್ಟಿರುವುದು ಸತ್ಯ. ಆದರೆ ಅದನ್ನು ರೆಬೆಲ್ ಆಗಿ ತೋರ್ಪಡಿಸಿಕೊಳ್ಳಲು ಇಡಿ ಭಯವಿದೆ ಅನ್ನುವವರೂ ಇದ್ದಾರೆ. ಇದೀಗ ಸ್ವಂತ ಪಕ್ಷದವರ ಮೇಲೆಯೇ ಒಳಗೊಳಗೆ ಸಿಟ್ಟಿಟ್ಟುಕೊಂಡು ಕುದಿಯುತ್ತಿರುವ ಯಡ್ಡಿಗೆ, ತನ್ನಂತೆಯೇ ಸಿಟ್ಟಾಗಿ ಪಕ್ಷ ಬಿಟ್ಟು ನಡೆದವರ ವಿರುದ್ಧ ಮಾತಾಡುವ ಅನಿವಾರ್ಯತೆ ಎದುರಾಗಿ ಬಿಟ್ಟಿದೆ. ಆ ಕುದಿತವನ್ನು ಎದೆಯಲ್ಲಿಟ್ಟುಕೊಂಡೇ ಅವರು ಗಂಭೀರವಾಗಿ ಕಾಮಿಡಿ ಮಾಡುತ್ತಿದ್ದಾರೆ. ಈ ಮೂಲಕ ಗೊಂದಲದ ಗೂಡಾಗಿರುವ ಬಿಜೆಪಿ ಮತ್ತಷು ನಗೆಪಾಟಲಿಗೀಡಾಗುವಂತಾಗಿಬಿಟ್ಟಿದೆ!</span></p>
<p style="text-align: justify;"><img loading="lazy" decoding="async" class="alignnone wp-image-13235" src="https://www.shodhanews.com/wp-content/uploads/2023/04/jagadish-shettar-99513917.jpg" alt="" width="1024" height="768" srcset="https://www.shodhanews.com/wp-content/uploads/2023/04/jagadish-shettar-99513917.jpg 540w, https://www.shodhanews.com/wp-content/uploads/2023/04/jagadish-shettar-99513917-150x113.jpg 150w, https://www.shodhanews.com/wp-content/uploads/2023/04/jagadish-shettar-99513917-450x338.jpg 450w" sizes="(max-width: 1024px) 100vw, 1024px" /><span style="font-size: 12pt;">ಈ ಬಾರಿಯ ಪರಿಸ್ಥಿತಿ ನೋಡಿದರೆ, ಚುನಾವಣಾ ಪೂರ್ವದಲ್ಲಿಯೇ ಬಿಜೇಪಿಯ ಸೋಲು ನಿಚ್ಛಳವಾದಂತಾಗಿದೆ. ಆರಂಭಿಕ ಸಮೀಕ್ಷೆಗಳಲ್ಲಿ ಬಿಜೆಪಿ ಅರವತ್ತರ ಗಡಿ ತಲುಪುವ ಭವಿಷ್ಯ ವಾಣಿ ಕೇಳಿ ಬಂದಿತ್ತು. ಆದರೀಗ ಬಿಜೆಪಿಯ ಸೀಟುಗಳು ನಲವತ್ತರಾಚೆ ಹೊರಳಿಕೊಳ್ಳೋದೂ ಕಷ್ಟ ಎಂಬಥಾ ವಾತಾವರಣವಿದೆ. ಹೀಗಿರುವಾಗ ಯಡಿಯೂರಪ್ಪ ಈ ಬಾರಿ ಬಿಜೆಪಿ ಬಹುಮತ ಪಡೆಯೋದು ನೂರಾ ಒಂದು ಪರ್ಸೆಂಟ್ ಸತ್ಯ ಅಂದುಬಿಟ್ಟರೆ ಅದು ಕಾಮಿಡಿಯಂತೆ ಕೇಳಿಸದಿದ್ದೀತಾ? ಒಂದು ಕಾಲದಲ್ಲಿ ರೆಬೆಲ್ ಆಗಿ ಬಿಜೆಪಿ ತೊರೆದು ಕೆಜೆಪಿ ಕಟ್ಟಿ ಕರ್ನಾಟಕದಲ್ಲಿ ಭಾಜಪದ ಅಸಲೀ ಯೋಗ್ಯತೆಯನ್ನು ಜಾಹೀರು ಮಾಡಿದ್ದವರು ಯಡಿಯೂರಪ್ಪ. ಅಂಥಾ ಯಡ್ಡಿಯೀಗ ಪಕ್ಷ ತೊರೆದ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ವಿರುದ್ಧ ಸಿಡಿದು ಬೀಳುತ್ತಿರೋದು ಕೂಡಾ ಪಕ್ಕಾ ಕಾಮಿಡಿ ಅನ್ನಿಸುತ್ತಿದೆ. ನಿಜ, ಪಕ್ಷಾಂತರವೆಂಬುದು ತಪ್ಪೇ. ಆದರೆ ಈ ಬಿಜೆಪಿ ಮಂದಿ ಅದನ್ನೂ ಕೂಡಾ ಅನೈತಿಕ ಮಾರ್ಗದಲ್ಲಿ ಸಕ್ರಮ ಮಾಡಿದ್ದರು. ಕಾಂಗ್ರೆಸ್&#x200d;ನಲ್ಲಿ ನಾನಾ ಅಧಿಕಾರ ಅನುಭವಿಸಿದ್ದ ಎಸ್ ಎಂ ಕೃಷ್ಣರನ್ನೇ ಹೈ ಜಾಕ್ ಮಾಡಿಕೊಂಡಿದ್ದವರಿಗೆ ಜಗದೀಶ್ ಶೆಟ್ಟರ್ ನಡೆಯನ್ನು ಖಂಡಿಸುವ ಯಾವ ನೈತಿಕತೆ ಉಳಿದುಕೊಳ್ಳಲು ಸಾಧ್ಯ?</span></p>
<p>The post <a href="https://www.shodhanews.com/ydiyurappa-bjp-2023-18-04/">state politics: ಯಡ್ಡಿಯದ್ದು ಅಚಲ ವಿಶ್ವಾಸ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>bhavani revanna: ಕುಟುಂಬದ ಸೆರಗಲ್ಲೀಗ ಅಸಹನೆಯ ಕೆಂಡ!</title>
		<link>https://www.shodhanews.com/hassan-bhavani-revanna-2023-15-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 15 Apr 2023 10:38:13 +0000</pubDate>
				<category><![CDATA[ರಾಜ್ಯ]]></category>
		<category><![CDATA[#bhavanirevanna]]></category>
		<category><![CDATA[#devegowda]]></category>
		<category><![CDATA[#jds]]></category>
		<category><![CDATA[#jdsticket]]></category>
		<category><![CDATA[#kumaraswamy]]></category>
		<category><![CDATA[#revanna]]></category>
		<category><![CDATA[#shodhanews]]></category>
		<category><![CDATA[karnatakapolitics]]></category>
		<guid isPermaLink="false">https://www.shodhanews.com/?p=13065</guid>

					<description><![CDATA[<p><img width="1600" height="837" src="https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b.jpeg 1600w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-800x419.jpeg 800w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-1024x536.jpeg 1024w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-768x402.jpeg 768w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-1536x804.jpeg 1536w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-150x78.jpeg 150w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-450x235.jpeg 450w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-1200x628.jpeg 1200w" sizes="(max-width: 1600px) 100vw, 1600px" />ಬಹುತೇಕ ಎಲ್ಲ ಪಕ್ಷಗಳಲ್ಲೀಯೂ ಇದೀಗ ಟಿಕೆಟ್ ಹಂಚಿಕೆಯ ಬೇಗುದಿ ಮೇರೆ ಮೀರಿಕೊಂಡಿದೆ. ಬಿಜೆಪಿಯಂತೂ (bjp) ಸದ್ಯಕ್ಕೆ ಅಂಥಾ ಅಸಹನೆಗಳ ದಾವಾನಲವಾಗಿ ಬದಲಾಗಿ ಬಿಟ್ಟಿದೆ. ಸೂಕ್ಷ್ಮವಾಗಿ ಗಮನಿಸಿದರೆ, ಚುನಾವಣೆಯ ಸಂಧಿ ಕಾಲದಲ್ಲಿ ಮಾತ್ರವೇ ಎಚ್ಚೆತ್ತುಕೊಳ್ಳುವ ಜಾಯಮಾನದ ಜೆಡೆಎಸ್‍ನೊಳಗೂ (jds) ಈ ಬಾರಿ ಟಿಕೆಟ್‍ಗಾಗಿನ ಕೋಲಾಹಲ ಜೋರಾಗಿದೆ. ಬಹುಶಃ (devegowda) ದೇವೇಗೌಡರ ಕುಟುಂಬದ ಹೊರಗಿನ ಮಂದಿ ಹೀಗೆ ಟಿಕೆಟಿಗಾಗಿ ಮುಸುಕಿನ ಗುದ್ದಾಟ ನಡೆಸಿದ್ದರೆ ಅದಕ್ಕೆ ಈ ಪರಿಯಾಗಿ ಪ್ರಾಶಸ್ತ್ಯ ಸಿಗುತ್ತಿರಲಿಲ್ಲವೇನೋ&#8230; ಆದರೆ, ಅಲ್ಲೀಗ ಅಣ್ಣ ತಮ್ಮನ ನಡುವೆ, ಅತ್ತಿಗೆ ನಾದಿನಿಯರ [...]</p>
<p>The post <a href="https://www.shodhanews.com/hassan-bhavani-revanna-2023-15-04/">bhavani revanna: ಕುಟುಂಬದ ಸೆರಗಲ್ಲೀಗ ಅಸಹನೆಯ ಕೆಂಡ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1600" height="837" src="https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b.jpeg 1600w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-800x419.jpeg 800w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-1024x536.jpeg 1024w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-768x402.jpeg 768w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-1536x804.jpeg 1536w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-150x78.jpeg 150w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-450x235.jpeg 450w, https://www.shodhanews.com/wp-content/uploads/2023/04/ce00a83a-8805-4ebb-b327-aaa5cb43ad4b-1200x628.jpeg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong><span style="font-size: 18pt;">ಬ</span></strong>ಹುತೇಕ ಎಲ್ಲ ಪಕ್ಷಗಳಲ್ಲೀಯೂ ಇದೀಗ ಟಿಕೆಟ್ ಹಂಚಿಕೆಯ ಬೇಗುದಿ ಮೇರೆ ಮೀರಿಕೊಂಡಿದೆ. ಬಿಜೆಪಿಯಂತೂ (bjp) ಸದ್ಯಕ್ಕೆ ಅಂಥಾ ಅಸಹನೆಗಳ ದಾವಾನಲವಾಗಿ ಬದಲಾಗಿ ಬಿಟ್ಟಿದೆ. ಸೂಕ್ಷ್ಮವಾಗಿ ಗಮನಿಸಿದರೆ, ಚುನಾವಣೆಯ ಸಂಧಿ ಕಾಲದಲ್ಲಿ ಮಾತ್ರವೇ ಎಚ್ಚೆತ್ತುಕೊಳ್ಳುವ ಜಾಯಮಾನದ ಜೆಡೆಎಸ್&#x200d;ನೊಳಗೂ (jds) ಈ ಬಾರಿ ಟಿಕೆಟ್&#x200d;ಗಾಗಿನ ಕೋಲಾಹಲ ಜೋರಾಗಿದೆ. ಬಹುಶಃ (devegowda) ದೇವೇಗೌಡರ ಕುಟುಂಬದ ಹೊರಗಿನ ಮಂದಿ ಹೀಗೆ ಟಿಕೆಟಿಗಾಗಿ ಮುಸುಕಿನ ಗುದ್ದಾಟ ನಡೆಸಿದ್ದರೆ ಅದಕ್ಕೆ ಈ ಪರಿಯಾಗಿ ಪ್ರಾಶಸ್ತ್ಯ ಸಿಗುತ್ತಿರಲಿಲ್ಲವೇನೋ&#8230; ಆದರೆ, ಅಲ್ಲೀಗ ಅಣ್ಣ ತಮ್ಮನ ನಡುವೆ, ಅತ್ತಿಗೆ ನಾದಿನಿಯರ ನಡುವೆ ಕಾದಾಟ ಶುರುವಾಗಿದೆ!</span></p>
<p style="text-align: justify;"><img loading="lazy" decoding="async" class="alignnone size-medium wp-image-13074" src="https://www.shodhanews.com/wp-content/uploads/2023/04/bhavani-revanna-800x480.webp" alt="" width="800" height="480" srcset="https://www.shodhanews.com/wp-content/uploads/2023/04/bhavani-revanna-800x480.webp 800w, https://www.shodhanews.com/wp-content/uploads/2023/04/bhavani-revanna-768x461.webp 768w, https://www.shodhanews.com/wp-content/uploads/2023/04/bhavani-revanna-150x90.webp 150w, https://www.shodhanews.com/wp-content/uploads/2023/04/bhavani-revanna-450x270.webp 450w, https://www.shodhanews.com/wp-content/uploads/2023/04/bhavani-revanna.webp 1000w" sizes="(max-width: 800px) 100vw, 800px" /><span style="font-size: 12pt;">ಇದರ ಭಾಗವಾಗಿಯೇ ಭವಾನಿ ರೇವಣ್ಣ ಬಹು ಹಿಂದಿನಿಂದಲೇ ಜೋರು ಧ್ವನಿಯಲ್ಲಿ ಅಖಾಡಕ್ಕಿಳಿದಿದ್ದರು. ಹೀಗೆ ಅಣ್ಣ ತಮ್ಮ, ಅವರ ಹೆಂಡಿರು ಮಕ್ಕಳಿಗೆಲ್ಲ ಟಿಕೆಟು ಕೊಟ್ಟು ಕೊಟ್ಟೇ ಜೆಡಿಎಸ್ ಇದ್ದ ನೆಲೆಯನ್ನೂ ಕಳೆದುಕೊಂಡು ಬರುತ್ತಿದೆ. ಹಾಗೇನಾದರೂ ಈ ಬಾರಿ ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣಗೆ ಟಿಕೇಟು ಕೊಟ್ಟಿದ್ದರೆ, ಅದು ಜೆಡಿಎಸ್&#x200d;ಗೆ ಮತ್ತಷ್ಟು ಹಿನ್ನಡೆ ತಂದೊಡ್ಡುತ್ತಿತ್ತು. ವಿರೋಧಿ ಪಾಳೆಯಕ್ಕೆ ಆಡಿಕೊಳ್ಳಲೊಂದು ಅಸ್ತ್ರ ಖುದ್ದು ಜೇಡಿಎಸ್ ಕಡೆಯಿಂದಲೇ ಸಿದ್ಧವಾದಂತಾಗುತ್ತಿತ್ತು. ಈ ವಿಚಾರದಲಿ ಕುಮಾರಸ್ವಾಮಿ ಆರಂಭದಿಂದಲೇ ನಾಜೂಕಿನ ನಡೆ ಅನುಸರಿಸಿಕೊಂಡು ಬಂದಿದ್ದಾರೆ. ಕಡೆಯೂ ಆ ಜಾಣ ನಡೆಯ ಅಂತಿಮ ಫಲಿತಾಂಶ ಹೊರ ಬಂದು, ಅದನ್ನು ಕಂಡು ವಿರೋಧಿ ಪಡೆಯೇ ಅವಾಕ್ಕಾಗಿಬಿಟ್ಟಿದೆ!</span></p>
<p style="text-align: justify;"><img loading="lazy" decoding="async" class="alignnone wp-image-13075" src="https://www.shodhanews.com/wp-content/uploads/2023/04/kummi.jpeg" alt="" width="1024" height="573" srcset="https://www.shodhanews.com/wp-content/uploads/2023/04/kummi.jpeg 300w, https://www.shodhanews.com/wp-content/uploads/2023/04/kummi-150x84.jpeg 150w" sizes="(max-width: 1024px) 100vw, 1024px" /><span style="font-size: 12pt;">ಯಾಕೆಂದರೆ, ಹಾಸನದಲ್ಲಿ ದೇವೇಗೌಡರ ಕುಟುಂಬದಾಚೆಗೆ ಸ್ವರೂಪ್&#x200d;ಗೆ ಜೆಡಿಎಸ್ ಟಿಕೇಟ್ ಖಾತರಿಗೊಳಿಸಲಾಗಿದೆ. ಇನ್ನೇನು ಭವಾನಿಗೇ ಅಲ್ಲಿನ ಟಿಕೇಟು ಫಿಕ್ಸ್ ಅಂದುಕೊಂಡಿದ್ದವರಿಗೆಲ್ಲ ಅಚ್ಚರಿಯಾಗಿದೆ. ಆದರೆ, ಹಾಸನ ಕೈ ತಪ್ಪಿದರೂ, ಯಾವ ಕ್ಷೇತ್ರದಲ್ಲಾದರೂ ಟಿಕೇಟು ಸಿಗದಿದ್ದರೆ ಭವಾನಿ ಸುಮ್ಮನಿರುವಂತೆ ಕಾಣುತ್ತಿಲ್ಲ. ಆಕೆಯ ಪರವಾಗಿ ರೇವಣ್ಣ ಕೂಡಾ ಅನಿವಾರ್ಯವಾಗಿ ಬಂಡೇಳುವ ಸಾಧ್ಯತೆಗಳಿವೆ. ದೇವೇಗೌಡರ ಅಂತಃಪುರದ ಮೂಲಗಳ ಪ್ರಕಾರ, ಅದಕ್ಕೂ ಕೂಡಾ ಈಗಾಗಲೇ ಕಾರ್ಯ ತಂತ್ರ ರೆಡಿಯಾಗಿದೆ. ಒಂದುವೇಳೆ, ಭವಾನಿ ಕಣಕ್ಕಿಳಿಯುತ್ತೇನೆಂದು ರಚ್ಚೆ ಹಿಡಿದರೆ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಟಿಕೇಟು ಕೊಡಲು ತಯಾರಿ ನಡೆದಿದೆ. ಅಂತೂ ಟಿಕೆಟ್ ಭೂಮಿಕೆಯ ಕೌಟುಂಬಿಕ ಕಲಹವನ್ನು ಕುಮ್ಮಿ ಅತ್ಯಂತ ನಾಜೂಕಿನಿಂದಲೇ ಪರಿಹರಿಸಿದ್ದಾರೆ!</span></p>
<p>The post <a href="https://www.shodhanews.com/hassan-bhavani-revanna-2023-15-04/">bhavani revanna: ಕುಟುಂಬದ ಸೆರಗಲ್ಲೀಗ ಅಸಹನೆಯ ಕೆಂಡ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
	</channel>
</rss>
